Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಪದ್ಮಿನಿ ಏಕಾದಶಿ 2023: ನಿಮ್ಮ ರಾಶಿಗೆ ಅನುಸಾರವಾಗಿ ಈ ಪೂಜೆ ಸಲ್ಲಿಸಿದರೆ ಶುಭ ಫಲ!
ಜುಲೈ 29 ರಂದು ಪದ್ಮಿಣಿ ಏಕಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಪದ್ಮಿನಿ ಏಕಾದಶಿ ಪ್ರತಿ ಮೂರು ವರ್ಷಗಳಿಗೊಮ್ಮೆ ಬರುತ್ತಿದ್ದು, ಈ ದಿನವು ಶ್ರೀ ಹರಿವಿಷ್ಣುವಿನ ಆರಾಧನೆಯ ವಿಶೇಷ ಸಂದರ್ಭವಾಗಿದೆ. ಈ ಸಂದರ್ಭದಲ್ಲಿ ವಿಷ್ಣುವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅದ್ರಲ್ಲೂ ನಮ್ಮ ರಾಶಿಗೆ ಅನುಸಾರವಾಗಿ ವಿಷ್ಣುವಿಗೆ ಪೂಜೆಯನ್ನು ಸಲ್ಲಿಸಿದ್ರೆ ಪುಣ್ಯ ಪ್ರಾಪ್ತಿಯಾಗುತ್ತೆ ಎನ್ನುವ ನಂಬಿಕೆಯಿದೆ. ಅಷ್ಟಕ್ಕು ನಮ್ಮ ರಾಶಿಗೆ ಅನುಸಾರವಾಗಿ ವಿಷ್ಣುವಿಗೆ ಯಾವ ರೀತಿ ಪೂಜೆಯನ್ನು ಸಲ್ಲಿಸಬೇಕೆಂದು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರು ಆರ್ಥಿಕ ಮತ್ತು ಮಾನಸಿಕ ಒತ್ತಡದಿಂದ ತೊಂದರೆಗೊಳಗಾಗಿದ್ದರೆ ಈ ಪದ್ಮಿನಿ ಏಕಾದಶಿಯಂದು ನಾರಾಯಣ ಕವಚವನ್ನು ಪಠಿಸಿ. ಇದು ಸಂಪತ್ತಿನ ಮೊತ್ತವನ್ನು ಹೆಚ್ಚು ಮಾಡಲು ಸಹಕರಿಸುತ್ತದೆ. ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.

ವೃಷಭ ರಾಶಿ
ವೃಷಭ ರಾಶಿಯವರ ದಾಂಪತ್ಯ ಜೀವನ ಸುಖಕರವಾಗಿಲ್ಲದಿದ್ದರೆ ಪದ್ಮಿನಿ ಏಕಾದಶಿಯಂದು ಪತಿ-ಪತ್ನಿಯರು ಒಟ್ಟಾಗಿ ಬಾಳೆಗಿಡಕ್ಕೆ ಏಳು ಬಾರಿ ಪ್ರದಕ್ಷಿಣೆ ಹಾಕಬೇಕು. ಅಲ್ಲದೆ ಅರಿಶಿನವನ್ನು ನೀರಿನಲ್ಲಿ ಬೆರೆಸಿ ಮರಕ್ಕೆ ಅರ್ಪಿಸಿ. ಇದು ದಾಂಪತ್ಯ ಜೀವನದಲ್ಲಿ ಮಧುರತೆಯನ್ನು ಹೆಚ್ಚು ಮಾಡುತ್ತದೆ.
ಮಿಥುನ ರಾಶಿ
ಪದ್ಮಿನಿ ಏಕಾದಶಿಯಂದು ಮಿಥುನ ರಾಶಿಯವರು ವಿಶೇಷ ಪೂಜೆ ಮಾಡಿದ್ರೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ. ಮಿಥುನ ರಾಶಿಯ ಜನರು ಈ ದಿನದಂದು ವಿಷ್ಣುವಿನ ಪೂಜೆಯ ಸಂದರ್ಭದಲ್ಲಿ ಅಮಲವನ್ನು ಖಂಡಿತವಾಗಿ ಅರ್ಪಿಸಬೇಕು. ಇದರಿಂದ ನಿಮ್ಮ ಮೇಲೆ ಮಾತೆ ಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತಂತೆ.
ಕರ್ಕಾಟಕ ರಾಶಿ
ಪದ್ಮಿನಿ ಏಕಾದಶಿಯ ದಿನದಂದು ಕರ್ಕಾಟಕ ರಾಶಿಯವರು ಮನೆಯಲ್ಲಿ ದಕ್ಷಿಣಾವರ್ತಿ ಶಂಖವನ್ನು ಸ್ಥಾಪಿಸಬೇಕು. ನಂಬಿಕೆಯ ಪ್ರಕಾರ ಅದನ್ನು ಪೂಜಿಸಿದರೆ, ಯಾವತ್ತೂ ಹಣದ ಕೊರತೆ ಆಗುವುದಿಲ್ಲ ಎಂಬ ನಂಬಿಕೆ ಇದೆ. ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತಂತೆ.
ಸಿಂಹ ರಾಶಿ
ಪದ್ಮಿನಿ ಏಕಾದಶಿಯ ದಿನದಂದು ಸಿಂಹ ರಾಶಿಯವರು ದಾನ ಮಾಡಿದರೆ ಆ ದಾನದ ಫಲವಾಗಿ ನೀವು ಜೀವಂತವಾಗಿರೋವಾಗ ಎಲ್ಲಾ ರೀತಿಯ ಸಂತೋಷವನ್ನು ಪಡೆಯಲು ಸಾಧ್ಯವಾಗುತ್ತಂತೆ. ಮತ್ತು ಮರಣದ ನಂತರ ನೀವು ಸ್ವರ್ಗದಲ್ಲಿ ಸ್ಥಾನ ಪಡೆಯುತ್ತೀರಂತೆ. ಸಿಂಹ ರಾಶಿಯವರು ಪದ್ಮಿನಿ ಏಕಾದಶಿ ದಿನ ಹಸುವನ್ನು ದಾನ ಮಾಡಿದರೆ ಒಳ್ಳೆಯದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗಬೇಕಾದರೆ ಪದ್ಮಿನಿ ಏಕಾದಶಿಯಂದು ಅನಾಥಾಶ್ರಮದಲ್ಲಿರುವ ಬಡ ಮಕ್ಕಳಿಗೆ ಅನ್ನ ಹಾಗೂ ವಸ್ತ್ರದಾನವನ್ನು ಮಾಡಿ. ಇದರಿಂದ ಪ್ರಗತಿಯ ಹಾದಿ ಸುಲಭವಾಗುತ್ತದೆ. ಹಾಗೂ ನಿಮ್ಮ ದಾನವು ನಿಸ್ವಾರ್ಥವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ತುಲಾ ರಾಶಿ
ತುಲಾ ರಾಶಿಯವರು ಪದ್ಮಿನಿ ಏಕಾದಶಿಯಂದು ಗಜೇಂದ್ರ ಮೋಕ್ಷವನ್ನು ಪಠಿಸಬೇಕು. ಇದು ಪಿತೃದೋಷವನ್ನು ತೊಡೆದು ಹಾಕುತ್ತದೆ. ಮತ್ತು ನಿಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಪದ್ಮಿನಿ ಏಕಾದಶಿಯಂದು ಮಕ್ಕಳ ಪ್ರಗತಿಗಾಗಿ ವಿಷ್ಣುವಿಗೆ ತುಳಸಿ ಮಾಲೆಯನ್ನು ಅರ್ಪಿಸಬೇಕು. ಮತ್ತು ಓಂ ಅಚ್ಯುತಾಯ ನಮಃ ಮಂತ್ರವನ್ನು 108 ಬಾರಿ ಜಪಿಸಬೇಕು.
ಧನು ರಾಶಿ
ಧನು ರಾಶಿಯವರಿಗೆ ಕಾನೂನು ವಿಷಯಗಳಿಗೆ ಅಡ್ಡಿಯುಂಟಾಗುತ್ತಿದ್ದರೆ, ಹಾಗೂ ನಿಮ್ಮ ಶತ್ರುಗಳಿಂದ ನಿಮಗೆ ಪದೇ ಪದೇ ತೊಂದರೆ ಉಂಟಾಗುತ್ತಿದ್ದರೆ ನೀವು ಪದ್ಮಿನಿ ಏಕಾದಶಿಯ ದಿನ ಈ ರೀತ ಪರಿಹಾರ ಮಾಡಬಹುದು. ಪದ್ಮಿನಿ ಏಕಾದಶಿಯಂದು ಶ್ರೀ ಹರಿಗೆ 11 ಅರಿಶಿನ ಮತ್ತು ಪೀತಾಂಬರವನ್ನು ಅರ್ಪಿಸಿ. ಶುಭ ಕಾರ್ಯಗಳಿಗೆ ಹೋಗುವ ಮೊದಲು ಪೂಜೆಯಲ್ಲಿ ನಿಮ್ಮೊಂದಿಗೆ ಅರಿಶಿನದ ಉಂಡೆಯನ್ನು ತೆಗೆದುಕೊಳ್ಳಿ. ಯಾವುದೇ ಅಡೆತಡೆಯಿಲ್ಲದೆ ನೀವು ಅಂದುಕೊಂಡ ಕಾರ್ಯಗಳು ಪೂರ್ಣಗೊಳ್ಳುತ್ತವೆ.
ಮಕರ ರಾಶಿ
ಮಕರ ರಾಶಿಯವರು ಆರೋಗ್ಯ ಮತ್ತು ಸಂಪತ್ತನ್ನು ಪಡೆಯಲು ಪದ್ಮಿನಿ ಏಕಾದಶಿಯಂದು ವಿಷ್ಣು ಚಾಲೀಸವನ್ನು ಪಠಿಸಬೇಕು.
ಕುಂಭ ರಾಶಿ
ಉದ್ಯೋಗದ ಹುಡುಕಾಟದಲ್ಲಿ ನೀವು ಪದೇ ಪದೇ ವಿಫಲರಾಗುತ್ತಿದ್ದರೆ ಪದ್ಮಿನಿ ಏಕಾದಶಿಯಂದು ಪರಿಹಾರ ಕಂಡುಕೊಳ್ಳಬಹುದು. ಕುಂಭ ರಾಶಿಯವರು ಪದ್ಮಿನಿ ಏಕಾದಶಿಯಂದು ಹವನ ಮಾಡಬೇಕು ಮತ್ತು ಅದರಲ್ಲಿ ವಿಷ್ಣು ಸಹಸ್ತ್ರನಾಮಗಳನ್ನು ಪಠಿಸಬೇಕು. ಬ್ರಾಹ್ಮಣರಿಗೆ ದಾನ ಮಾಡೋದ್ರಿಂದ ಯಶಸ್ಸು ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆಯಿದೆ.
ಮೀನ ರಾಶಿ
ಮೀನ ರಾಶಿಯವರು ಪದ್ಮಿನಿ ಏಕಾದಶಿಯ ದಿನದಂದು ವೈಜಯಂತಿ ಹೂವನ್ನು ಅರ್ಪಿಸಬೇಕು.ಇದು ಅಖಂಡ ಸೌಭಾಗ್ಯದ ವರವನ್ನು ನೀಡುತ್ತದೆ. ಮತ್ತು ನಿಮ್ಮ ಮಕ್ಕಳ ಬಾಳಿನಲ್ಲಿ ಸಂತೋಷ ಹೆಚ್ಚಾಗುತ್ತದೆ.



Click it and Unblock the Notifications

