Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪದ್ಮಿಣಿ ಏಕಾದಶಿ 2023 : ದಿನಾಂಕ, ಶುಭ ಮುಹೂರ್ತ ಹಾಗೂ ಪೂಜಾ ವಿಧಿ ಹೇಗಿರಬೇಕು?
ಆಷಾಢ ಮಾಸ ಜುಲೈ 18 ರಂದು ಪ್ರಾರಂಭವಾಗಿದೆ. ಆಷಾಢ ಮಾಸ ಹಿಂದೂಗಳಿಗೆ ಪವಿತ್ರ ಮಾಸ. ಈ ತಿಂಗಳಿನಲ್ಲಿ ಪೂಜೆ-ಪುನಸ್ಕಾರಗಳನ್ನು ಭಕ್ತಿಯಿಂದ ಮಾಡಿದರೆ ಇಷ್ಟಾರ್ಥ ಸಿದ್ಧಿಯಾಗುತ್ತೆ ಎನ್ನುವ ನಂಬಿಕೆ ಕೂಡ ಇದೆ. ಆಷಾಢ ಮಾಸದಲ್ಲಿ ಶುಕ್ಲ ಪಕ್ಷದ ಏಕಾದಶಿಯನ್ನು ಪದ್ಮಿನಿ ಏಕಾದಶಿ, ಪುರುಷೋತ್ತಮಿ ಏಕಾದಶಿ ಅಥವಾ ಸುಮಾದ್ರಾ ಏಕಾದಶಿ ಎಂದೂ ಕರೆಯಲಾಗುತ್ತದೆ.
ಕಳೆದ 3 ವರ್ಷಗಳಲ್ಲಿ ಈ ಏಕಾದಶಿ ಬಹಳ ವಿಶೇಷವಾಗಿದೆ. ಏಕೆಂದರೆ ಆಷಾಢ ಮಾಸ ಮತ್ತು ಏಕಾದಶಿ ಎರಡೂ ಕೂಡ ಭಗವಾನ್ ವಿಷ್ಣುವಿಗೆ ಪ್ರಿಯವಾಗಿವೆ. ಈ ವ್ರತವನ್ನು ಆಚರಿಸುವುದರಿಂದ ವರ್ಷವಿಡೀ ಇದರ ಪುಣ್ಯದ ಫಲ ಇರುತ್ತೆ ಎಂದು ನಂಬಲಾಗಿದೆ. ಅಷ್ಟಕ್ಕು ಪದ್ಮಿಣಿ ಏಕಾದಶಿ ಯಾವಾಗ? ಶುಭ ಮುಹೂರ್ತ, ಪೂಜಾ ವಿಧಾನ ಹಾಗೂ ಮಹತ್ವ ಬಗ್ಗೆ ತಿಳಿದುಕೊಳ್ಳೋಣ.

ಪದ್ಮಿನಿ ಏಕಾದಶಿ 2023 : ದಿನಾಂಕ ಮತ್ತು ಶುಭ ಮುಹೂರ್ತ
ಪಂಚಾಂಗದ ಪ್ರಕಾರ ಪದ್ಮಿನಿ ಏಕಾದಶಿಯ ಉಪವಾಸವನ್ನು ಜುಲೈ 29 ರಂದು ಮಾಡಲಾಗುತ್ತದೆ. ಈ ದಿನ ಉಪವಾಸವನ್ನು ಮಾಡುವುದರಿಂದ ನಮ್ಮ ಪಾಪಗಳೆಲ್ಲಾ ಪರಿಹಾರವಾಗುತ್ತದೆ. ಈ ಉಪವಾಸದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಇತರ ತಿಂಗಳುಗಳಿಗೆ ಹೋಲಿಸಿದರೆ ಆಷಾಢ ಮಾಸದಲ್ಲಿ ವಿಷ್ಣುವನ್ನು ಪೂಜಿಸುವುದರಿಂದ 10 ಪಟ್ಟು ಫಲ ಸಿಗುತ್ತಂತೆ.
ಪದ್ಮಿನಿ ಏಕಾದಶಿ 2023 ಮುಹೂರ್ತ :
ಪಂಚಾಂಗದ ಪ್ರಕಾರ ಆಷಾಢಮಾಸದ ಶುಕ್ಲ ಪಕ್ಷದ ಪದ್ಮಿನಿ ಏಕಾದಶಿಯು ಜುಲೈ 28ರಂದು 02.51 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಮರುದಿನ ಜುಲೈ 29 ರಂದು 01.05ಕ್ಕೆ ಕೊನೆಗೊಳ್ಳುತ್ತದೆ.
ಪೂಜೆ ಸಮಯ - ಬೆಳಗ್ಗೆ 07.22 - ಬೆಳಗ್ಗೆ 09.04ರವರೆಗೆ
ಪದ್ಮಿನಿ ಏಕಾದಶಿ ವ್ರತ ಪಾರಣ ಸಮಯ - ಬೆಳಗ್ಗೆ 05.41 - ಬೆಳಗ್ಗೆ 08.24 ರವರೆಗೆ (30 ಜುಲೈ 2023)
ಪದ್ಮಿನಿ ಏಕಾದಶಿ ಮಹತ್ವ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಷಾಢ ಮಾಸದ ಏಕಾದಶಿಯಂದು ಉಪವಾಸ ಮಾಡುವ ವ್ಯಕ್ತಿಯು ಎಲ್ಲಾ ರೀತಿಯ ಭೋಗಗಳನ್ನು ಅನುಭವಿಸುವ ಮೂಲಕ ಭಗವಾನ್ ವಿಷ್ಣುವಿನ ಆಶೀರ್ವಾದಕ್ಕೆ ಪಾತ್ರನಾಗುತ್ತಾನಂತೆ. ಈ ವ್ರತಕ್ಕಿಂತ ಶ್ರೇಷ್ಠವಾದ ಯಜ್ಞ, ತಪಸ್ಸು ಅಥವಾ ದಾನವಿಲ್ಲ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ಪೂಜಾ ವಿಧಿ-ವಿಧಾನಗಳನ್ನು ಅನುಸರಿಸುವಾಗ ಯಾವುದೇ ರೀತಿ ತಪ್ಪಾಗದಂತೆ ಜಾಗೃತೆ ವಹಿಸಿ. ಭಕ್ತಿಯಿಂದ ಹಾಗೂ ಶ್ರದ್ಧೆಯಿಂದ ಪದ್ಮಿಣಿ ಏಕಾದಶಿಯ ವ್ರತ ಮಾಡಿದರೆ ವಿಷ್ಣುವು ಸಂತುಷ್ಟಗೊಳ್ಳುತ್ತಾನಂತೆ.
ಪದ್ಮಿನಿ ಏಕಾದಶಿ ಪೂಜಾ ವಿಧಿ ಹೇಗಿರಬೇಕು?
- ಏಕಾದಶಿಯ ದಿನ ಸೂರ್ಯೋದಯಕ್ಕೆ ಮುನ್ನವೇ ಎದ್ದು ತೀರ್ಥ ಸ್ನಾನ ಮಾಡಬೇಕು
- ನೀರಿನಲ್ಲಿ ಸ್ವಲ್ಪ ಎಳ್ಳು ಸೇರಿಸಿ ಸ್ನಾನ ಮಾಡಿ
- ವಿಷ್ಣುವಿಗೆ ಕೇಸರಿ ಮಿಶ್ರಿತ ನೀರಿನಿಂದ ಅಭಿಷೇಕ ಮಾಡಿ
- ಭಜನೆ ಅಥವಾ ದೇವರ ಮಂತ್ರಗಳನ್ನು ಪಠಿಸಬೇಕು ಮತ್ತು ಕಥೆಯನ್ನು ಕೇಳಬೇಕು
- ವಿಷ್ಣು ಸಹಸ್ತ್ರನಾಮವನ್ನು ಪಠಿಸಿ ಮತ್ತು ಬ್ರಾಹ್ಮಣರಿಗೆ ದಾನ ಮಾಡಿ
ಪದ್ಮಿನಿ ಏಕಾದಶಿಯ ದಿನ ಈ ಪದ್ಧತಿಗಳನ್ನು ತಪ್ಪದೇ ಅನುಸರಿಸಿ. ಇದರಿಂದ ನಿಮ್ಮ ಬದುಕಿನಲ್ಲಿ ಎಲ್ಲವೂ ಒಳ್ಳೆಯದೇ ಆಗಲಿದೆ.



Click it and Unblock the Notifications
