Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಳೆ ಬರುವ ಸಮಯವನ್ನು 90ರಷ್ಟು ಸರಿಯಾಗಿ ಊಹಿಸುವ ಏಕೈಕ ಪ್ರಾಣಿ ಇದು!
ಪ್ರಾಣಿ ಪ್ರಪಂಚ ಮಾನವರಿಗಿಂತ ಎಷ್ಟು ವಿಭಿನ್ನ ಎಂಬುದನ್ನು ನೀವೆಲ್ಲಾ ತಿಳಿದಿರಬಹುದು. ಇನ್ನು ಹತ್ತಾರು ಕೌತುಕಗಳು ಪ್ರಾಣಿ ಪ್ರಪಂಚದಲ್ಲಿ ಅಡಗಿರುವುದು ನೋಡಬಹುದು. ಪ್ರಾಣಿಗಳ ವರ್ತನೆ ಹಾಗೆ ಪ್ರಾಣಿಗಳ ಪ್ರಪಂಚವು ನೀವು ಅಂದುಕೊಂಡಿದ್ದಕ್ಕಿಂತ ಬಹಳಷ್ಟು ಅಚ್ಚರಿಗಳನ್ನು ತನ್ನಲ್ಲಿಟ್ಟುಕೊಂಡಿರುವ ರಹಸ್ಯ ಪ್ರಪಂಚ ಎನ್ನಬಹುದು.
ಇನ್ನು ಪ್ರಾಣಿಗಳಲ್ಲಿಯೂ ಕೂಡ ಮಾನವರಂತೆ ಬುದ್ದಿವಂತಿಕೆಯಿಂದ ನಿರ್ಧಾರ, ಆಲೋಚನೆ ಮಾಡುವಂತಹ ಪ್ರಾಣಿಗಳು ಸಹ ಇವೆ. ಹಾಗೆ ಪ್ರಾಣಿಗಳು ಮಾನವರಿಗಿಂತ ವಿಭಿನ್ನವಾಗಿ ಆಲೋಚಿಸಲಿವೆ ಎಂಬುದು ಕೂಡ ತಿಳಿದುಬರಲಿದೆ. ಇನ್ನು ಪ್ರಾಣಿಗಳಿಗೆ ಭೂಕಂಪನ, ನೈಸರ್ಗಿಕ ವಿಕೋಪಗಳು ಉಂಟಾಗುವ ಮುನ್ನವೇ ತಿಳಿದುಬರಲಿದೆ ಎಂಬುದು ಸಹ ನಿರೂಪಿತಗೊಂಡಿದೆ.

ಹಾಗೆ ಪ್ರಾಣಿಗಳಲ್ಲಿ ಕೆಲವೊಂದು ವಿಶೇಷ ಗುಣಗಳಿವೆ. ಮಾನವರಿಗೆ ಅರಿಯದಂತಹ ಕೆಲವು ವಿಚಾರಗಳು ಮೊದಲೇ ತಿಳಿದುಬರುತ್ತದೆ. ನೈಸರ್ಗಿಕ ವಿಕೋಪಗಳು ಮೊದಲೇ ತಿಳಿಯುವಂತೆ, ಕೆಲವೊಂದು ವಿಚಾರದಲ್ಲಿ ಪ್ರಾಣಿಗಳು ನಮಗಿಂತ ಬುದ್ದಿವಂತಿಕೆ ತೋರಿಸುತ್ತವೆ. ಅದ್ರಲ್ಲೂ ನೈಸರ್ಗಿಕ ಕ್ರಿಯೆಗಳಲ್ಲಿ ಪ್ರಾಣಿಗಳ ಸ್ಮರಣ ಶಕ್ತಿ ಅಚ್ಚರಿ ಹುಟ್ಟಿಸುತ್ತವೆ.
ಇನ್ನು ಮಳೆಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ಹಲವು ವಿದ್ಯಮಾನಗಳ ಪರಿಗಣಿಸಿ ಊಹಿಸಲಾಗುತ್ತದೆ. ಆದ್ರೆ ಪ್ರಾಣಿಗಳು ತಮ್ಮ ಸ್ಮರಣ ಶಕ್ತಿಯಿಂದ ಹವಾಮಾನಗಳ ಕುರಿತು ಅರಿಯಲಿವೆ. ಇಂತಹ ವಿದ್ಯಮಾನದಲ್ಲಿ ಮಳೆ ಬರುವುದಕ್ಕೂ ಮುನ್ನವೇ ಶೇ.90 ರಷ್ಟು ನಿಖರವಾಗಿ ಈ ಪ್ರಾಣಿಯೊಂದು ಊಹಿಸಲಿದೆ.
ಅದ್ರಲ್ಲೂ ಆನೆಗಳು ಮಳೆಯಾಗುವ ಮೊದಲೇ ಸರಿಯಾಗಿ ಊಹಿಸಲಿವೆ. ಹೌದು ಸಮುದಾಯದಲ್ಲಿ ಬದುಕು ನಡೆಸುವ ಆನೆಗಳು ಬಹಳ ಬುದ್ದಿವಂತ ಜೀವಿಗಳು ಎಂಬುದನ್ನು ತಿಳಿದಿದ್ದೇವೆ. ಮಾನವರೊಂದಿಗೆ ಅತ್ಯಾಪ್ತ ಪ್ರಾಣಿಗಳು. ಅವು ತಮ್ಮ ಸ್ಮರಣ ಶಕ್ತಿಯಿಂದಾಗಿ ಕಿಲೋ ಮೀಟರ್ ದೂರ ನಡೆದು ಸಾಗುತ್ತವೆ. ಅವು ಒಮ್ಮೆ ಯಾವುದಾದರು ಆಹಾರ ಹುಡುಕಿ ಸವಿದಿದ್ದರೆ ಅದೇ ಜಾಗಕ್ಕೆ ಮತ್ತೆ ವರ್ಷಗಳ ಬಳಿಕ ಆಗಮಿಸುವಷ್ಟು ಬುದ್ದಿವಂತಿಕೆ ಹೊಂದಿರುತ್ತವೆ.
ಆದ್ರೆ ಈ ಆನೆಗಳು ಮಳೆ ಬರುವ ಮುನ್ನವೇ ಸರಿಯಾಗಿ ಸೂಚನೆ ತಿಳಿಸುತ್ತವೆ. ತಮ್ಮ ಇಂದ್ರೀಯ ಶಕ್ತಿಯನ್ನು ಬಳಸಿಕೊಂಡು ಅವು ಮಳೆಯ ಮುನ್ಸೂಚನೆಯನ್ನು ಸರಿಯಾಗಿ ಅವಲೋಕಿಸುತ್ತವೆ. ಅವು ನೀರಿನ ಮೂಲ ಹುಡುಕಲು ದಿನವೊಂದಕ್ಕೆ 20 ಕಿ.ಮೀ ವರೆಗೂ ಚಲಿಸುತ್ತವೆ. ಆದ್ರೆ ಮಳೆ ಬರುವ ಮುನ್ನವೇ ಅವು ಅರಿತುಕೊಳ್ಳುತ್ತವೆ.
ಅವುಗಳ ಸಂವೇದನಾ ಸಾಮರ್ಥ್ಯವು 300 ಕಿ.ಮೀ ದೂರದ ನೀರಿನ ಮೂಲಗಳನ್ನು ಸಹ ಅವು ಹುಡುಕುತ್ತವೆ. ಅದೇ ರೀತಿ ಮಳೆಯಾಗುವ ಪ್ರದೇಶಗಳನ್ನು ಸಹ ಅವು ಮೊದಲೇ ಅವಲೋಕಿಸುತ್ತವೆ. ಇದರಿಂದ ಯಾವ ಭಾಗದಲ್ಲಿ ಮಳೆಯಾಗುತ್ತದೆಯೋ ಆ ಕಡೆ ಪ್ರಯಾಣ ಬೆಳೆಸುತ್ತವೆ. ಬಹುತೇಕ ಅವು ಮಳೆಬೀಳುವವ ಸಮಯದಲ್ಲಿ ಪ್ರಯಾಣ ಬೆಳೆಸುವುದು ನೋಡಬಹುದು.
ಆನೆಗಳು ಬೇರೆ ಯಾವುದೇ ಪ್ರಾಣಿಗಳಿಗಿಂತ ದೊಡ್ಡ ಮೆದುಳನ್ನು ಹೊಂದಿವೆ - ಸುಮಾರು 4.8 ಕೆಜಿ. ಅವುಗಳ ಚರ್ಮವು ಸುಮಾರು 2.5 ಸೆಂ.ಮೀ ದಪ್ಪವಾಗಿದ್ದು, ನೈಸರ್ಗಿಕ ಸೂರ್ಯನ ರಕ್ಷಣೆಯಂತೆ ಕಾರ್ಯನಿರ್ವಹಿಸುತ್ತದೆ. ಆನೆಗಳು ಕನ್ನಡಿಯಲ್ಲಿ ತಮ್ಮದೇ ಆದ ಪ್ರತಿಬಿಂಬವನ್ನು ಸಹ ಗುರುತಿಸಬಲ್ಲವು. ಹಾಗೆ ಅವು ನೆಲದ ಮಣ್ಣು ತೆಗೆದು ನೀರು ಕುಡಿಯುವಷ್ಟು ಬುದ್ದಿವಂತಿಕೆ ಹೊಂದಿವೆ. ಹಾಗೆ ಆನೆಗಳು ಸಮುದಾಯದಲ್ಲಿ ಬದುಕುವುದರಿಂದ ಅವುಗಳ ಮಕ್ಕಳನ್ನು ಸಾಕು ಹೊಣೆಗಾರಿಕೆ ಹೊಂದಿರಲಿವೆ. ಇನ್ನು ತಮಗಿಂತ ಚಿಕ್ಕ ಪ್ರಾಣಿಗಳ ಕಂಡಾಗಲು ಅವು ಹೆದರಿಕೊಳ್ಳುತ್ತವೆ, ಆದ್ರೆ ಭೂಮಿ ಮೇಲಿನ ಬಲಶಾಲಿ ಪ್ರಾಣಿಗಳಲ್ಲಿ ಅವು ಮೊದಲ ಸ್ಥಾನದಲ್ಲಿವೆ.
ಭಾರತದಲ್ಲಿ ಸರಿಸುಮಾರು 22,446 ಆನೆಗಳು ವಾಸವಿದೆ ಎಂದು ತಿಳಿದುಬಂದಿದೆ. ಕರ್ನಾಟಕ, ಅಸ್ಸಾಂ, ತಮಿಳುನಾಡು ಪ್ರದೇಶವು ಶೇ.60ರಷ್ಟು ಆನೆ ಜನಸಂಖ್ಯೆ ಹೊಂದಿವೆ.



Click it and Unblock the Notifications
