Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Onam 2025: ಓಣಂ ಯಾವಾಗ? ಏಕೆ ಆಚರಿಸುತ್ತಾರೆ? ಇಲ್ಲಿದೆ ರಾಜ ಮಹಾಬಲಿಯ ಕಥೆ
'ಓಣಂ' ದೇವರ ನಾಡು ಎಂದೇ ಕೆರೆಯಲ್ಪಡುವ ಕೇರಳದ ಅತಿದೊಡ್ಡ ಸುಗ್ಗಿಯ ಹಬ್ಬ. ಕೇರಳದ ಹಿಂದೂಗಳು ಮತ್ತು ಪ್ರಪಂಚದಾದ್ಯಂತದ ಮಲಯಾಳಿ ಸಮುದಾಯದವರು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಈ ಹಬ್ಬವನ್ನು ಅಸುರ ರಾಜ ಮಹಾಬಲಿಗೆ ಸಮರ್ಪಿಸಲಾಗಿದೆ. ಪ್ರತಿ ವರ್ಷವೂ ಭಕ್ತಿ, ಪುರಾಣ ಮತ್ತು ಬಣ್ಣಗಳ ಈ 10 ದಿನಗಳ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಕೊನೆಯ ದಿನವಾದ ತಿರುವೋಣಂ ಅನ್ನು ವಿಶೇಷ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಓಣಂ ಹಬ್ಬದ (Onam 2025) ಆಚರಣೆ, ಇತಿಹಾಸ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.
ಓಣಂ ಕೇವಲ ಒಂದು ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿದ್ದು, ಮಲಯಾಳಿಗಳನ್ನು ಒಟ್ಟುಗೂಡಿಸುವುದರ ಜೊತೆಗೆ ಮಾನ್ಸೂನ್ ಅಂತ್ಯ ಮತ್ತು ಸುಗ್ಗಿಯ ಹಂಗಾಮಿನ ಪ್ರಾರಂಭವನ್ನು ಸೂಚಿಸುತ್ತದೆ. ಅಲಂಕೃತ ಕಾರ್ಪೆಟ್ಗಳು, ದೋಣಿ ಸ್ಪರ್ಧೆಗಳು ಮತ್ತು ಐಷಾರಾಮಿ ಹಬ್ಬಗಳಿಂದ ಓಣಂ ಕೇರಳದ ದಂತಕಥೆಯಾದ ಮಹಾಬಲಿ ರಾಜನಿಗೆ ಗೌರವ ಸಲ್ಲಿಸುವ ಒಂದು ವಿಧಾನವಾಗಿದೆ. ಈ ಹಬ್ಬ ಪ್ರಪಂಚದಾದ್ಯಂತ ನೆಲೆಸಿರುವ ಮಲಯಾಳಿಗಳನ್ನು ಒಟ್ಟುಗೂಡಿಸುತ್ತದೆ. ಕೇರಳದಲ್ಲಿ ಪುಕ್ಕಳಂ, ವಲ್ಲಂಕಾಳಿ, ಪುಲಿಕಲಿ ಸೇರಿದಂತೆ ಹಲವು ಸಾಂಪ್ರದಾಯಿಕ ಆಚರಣೆಗಳು ಈ ಹಬ್ಬದ ಪ್ರಮುಖ ಆಕರ್ಷಣೆಗಳಾಗಿವೆ. ಈ ಹಬ್ಬದ ದಿನಾಂಕ (Onam 2025 Dates) ಮತ್ತು ಸಮಯ ಇಲ್ಲಿದೆ.

ಈ ವರ್ಷ ಓಣಂ ಯಾವಾಗ?
ಈ ವರ್ಷ (2025) ಓಣಂ ಆಚರಣೆಗಳು ಇದೇ ಆಗಸ್ಟ್ 26 ರಂದು ಮಂಗಳವಾರ ಪ್ರಾರಂಭವಾಗಲಿವೆ. ಸೆಪ್ಟೆಂಬರ್ 05, 2025 ರಂದು ಶುಕ್ರವಾರ ಕೊನೆಗೊಳ್ಳುತ್ತವೆ. ಅತ್ಯಂತ ವಿಶೇಷ ಮತ್ತು ಆಚರಿಸಲಾಗುವ ದಿನವು ಸೆಪ್ಟೆಂಬರ್ 05 ರಂದು ಬರುತ್ತದೆ. ದೃಕ್ ಪಂಚಾಂಗದ ಪ್ರಕಾರ, ತಿರುವೋಣಂ ನಕ್ಷತ್ರವು ಸೆಪ್ಟೆಂಬರ್ 4 ರಂದು ರಾತ್ರಿ 11.44ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 5 ರಂದು ರಾತ್ರಿ 11.38 ಕ್ಕೆ ಮುಕ್ತಾಯಗೊಳ್ಳುತ್ತದೆ.
10 ದಿನಗಳ ಕಾಲ ಓಣಂ ಹಬ್ಬ
• ಮೊದಲ ದಿನ: ಅಥಂ - ಆಗಸ್ಟ್ 26
• ಎರಡನೇ ದಿನ: ಚಿಥಿರಾ - ಆಗಸ್ಟ್ 27
• ಮೂರನೇ ದಿನ: ಚೋಧಿ ಪೂಕ್ಕಳಮ್ - ಆಗಸ್ಟ್ 28
• ನಾಲ್ಕನೇ ದಿನ: ವಿಶಾಖಂ - ಆಗಸ್ಟ್ 29
• ಐದನೇ ದಿನ: ಅನಿಜಂ - ಆಗಸ್ಟ್ 31
• ಆರನೇ ದಿನ: ತ್ರಿಕೇಟಾ - ಸೆಪ್ಟೆಂಬರ್ 1
• ಏಳನೇ ದಿನ: ಮೂಲಂ - ಸೆಪ್ಟೆಂಬರ್ 2
• ಎಂಟನೇ ದಿನ: ಪೂರದಂ - ಸೆಪ್ಟೆಂಬರ್ 3
• ಒಂಬತ್ತನೇ ದಿನ: ಉತಿರಾದಂ - ಸೆಪ್ಟೆಂಬರ್ 4
• 10ನೇ ದಿನ: ತಿರುವೋಣಂ - ಸೆಪ್ಟೆಂಬರ್ 5
ಓಣಂ ಹಬ್ಬವು ಅಥಂ ನಕ್ಷತ್ರದ ಗೋಚರಿಸುವಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಅಥಂನಿಂದ ತಿರುವೋಣಂ ವರೆಗೆ ಪ್ರತಿ ದಿನವೂ ಅಪಾರ ಮಹತ್ವವನ್ನು ಹೊಂದಿದೆ. 10ನೇ ಹಾಗೂ ಕೊನೆಯ ದಿನ ಅದ್ಧೂರಿ ಆಚರಣೆಗೆ ಕಾರಣವಾಗುತ್ತದೆ. ಓಣಂ ಕೇರಳದಲ್ಲಿ ವ್ಯಾಪಕವಾಗಿ ಆಚರಿಸಲಾಗಿದ್ದು, ಹಿಂದೂ ಪುರಾಣಗಳಲ್ಲಿ ಆಳವಾಗಿ ಬೇರೂರಿದೆ. ಇದನ್ನು ರಾಜ ಮಹಾಬಲಿಗೆ ಸಮರ್ಪಿಸಲಾಗಿದೆ.
ಪ್ರಜೆಗಳ ಮೇಲೆ ಅಪಾರ ಪ್ರೀತಿ
ಪೌರಾಣಿಕ ಕಥೆಗಳ ಪ್ರಕಾರ, ರಾಜ ಮಹಾಬಲಿ ಅವರನ್ನು 'ಮಾವೇಲಿ' ಎಂದೂ ಕರೆಯಲಾಗುತ್ತದೆ. ರಾಜ ಮಹಾಬಲಿ ಭೂಲೋಕವನ್ನು ಆಳುತ್ತಿದ್ದನು. ಅಸುರನಾಗಿದ್ದರೂ, ಅವನು ತನ್ನ ಪ್ರಜೆಗಳ ಮೇಲೆ ಅಪಾರ ಪ್ರೀತಿ ಮತ್ತು ದಯೆಯನ್ನು ಹೊಂದಿದ್ದನು. ಅವನ ಆಳ್ವಿಕೆಯಲ್ಲಿ ಪ್ರಜೆಗಳು ಸಂತೋಷದಿಂದ ಮತ್ತು ಸಮೃದ್ಧಿಯಿಂದ ಬಾಳುತ್ತಿದ್ದರು. ಮಹಾಬಲಿಯು ತನ್ನ ಪರಾಕ್ರಮದಿಂದ ಮೂರು ಲೋಕಗಳನ್ನು ವಶಪಡಿಸಿಕೊಂಡಾಗ, ಇಂದ್ರನು ದೇವಲೋಕವನ್ನು ಮರಳಿ ಪಡೆಯಲು ವಿಷ್ಣುವಿನ ಸಹಾಯವನ್ನು ಕೋರಿದನು.
ಮಹಾಬಲಿ ವಿಷ್ಣುವಿನ ಮಹಾನ್ ಭಕ್ತನಾಗಿದ್ದರಿಂದ ವಿಷ್ಣುವಿಗೆ ಪಕ್ಷಪಾತ ಮಾಡುವುದು ಕಷ್ಟಕರವಾಯಿತು. ಆದರೂ, ದೇವಲೋಕವನ್ನು ಇಂದ್ರನಿಗೆ ಮರಳಿಸುವ ಸಲುವಾಗಿ, ವಿಷ್ಣು ವಾಮನ ಅವತಾರವನ್ನು ತಾಳಿ ಮಹಾಬಲಿಯನ್ನು ಭೇಟಿಯಾಗಿ, ಮೂರು ಹೆಜ್ಜೆ ಗಾತ್ರದ ಜಮೀನನ್ನು ಕೇಳಿದನು. ಮಹಾಬಲಿಯು ಇದನ್ನು ಒಪ್ಪಿದಾಗ, ವಾಮನನ ಗಾತ್ರ ಹಿಗ್ಗಲಾರಂಭಿಸಿತು. ವಿಷ್ಣು ಎರಡು ಹೆಜ್ಜೆಗಳಲ್ಲಿ ಮಹಾಬಲಿ ಆಕ್ರಮಿಸಿಕೊಂಡಿದ್ದ ಎಲ್ಲಾ ಪ್ರದೇಶವನ್ನು ಆವರಿಸಿಕೊಂಡನು. ಮೂರನೇ ಹೆಜ್ಜೆಗೆ ಜಾಗವಿಲ್ಲದಿದ್ದಾಗ, ಮಹಾಬಲಿಯು ತನ್ನ ತಲೆಯ ಮೇಲೆ ಹೆಜ್ಜೆಯಿಡಲು ಕೋರಿದನು. ವಾಮನನು ಮಹಾಬಲಿಯ ತಲೆಯ ಮೇಲೆ ಕಾಲಿಡುತ್ತಿದ್ದಂತೆ, ಮಹಾಬಲಿ ಪಾತಾಳ ಲೋಕಕ್ಕೆ ತಳ್ಳಲ್ಪಟ್ಟನು.
ಭೂಮಿಗೆ ಕೃತಜ್ಞತೆ ಸಲ್ಲಿಸುವ ಸುಗ್ಗಿ ಹಬ್ಬ
ಮಹಾಬಲಿಯ ನಿಷ್ಠೆಗೆ ಮೆಚ್ಚಿದ ವಿಷ್ಣು, ವರ್ಷಕ್ಕೊಮ್ಮೆ ತನ್ನ ಪ್ರಜೆಗಳನ್ನು ಭೇಟಿಯಾಗಲು ಭೂಮಿಗೆ ಬರುವ ವರವನ್ನು ನೀಡಿದನು. ಮಹಾಬಲಿ ರಾಜ ಭೂಮಿಗೆ ಬರುವ ಈ ಶುಭ ದಿನವನ್ನು ಕೇರಳದಲ್ಲಿ ಓಣಂ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ರೈತರು ಉತ್ತಮ ಬೆಳೆ ಮತ್ತು ಇಳುವರಿಗಾಗಿ ಭೂಮಿಗೆ ಕೃತಜ್ಞತೆ ಸಲ್ಲಿಸುವ ಸುಗ್ಗಿಯ ಹಬ್ಬವೂ ಹೌದು. ಓಣಂ ಹಬ್ಬವು 10 ದಿನಗಳ ಕಾಲ ನಡೆಯುತ್ತದೆ.
ವಿಜೃಂಭಣೆಯಿಂದ ತಿರುವೋಣಂ ಆಚರಣೆ
ತಿರುವೋಣಂ ದಿನದಂದು ಹಲವು ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಲಾಗುತ್ತದೆ. ಜನರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ಮನೆಯನ್ನು ಹೂಗಳಿಂದ ಅಲಂಕರಿಸಿ, ವಿವಿಧ ಬಗೆಯ ರುಚಿಕರ ಭಕ್ಷ್ಯಗಳನ್ನು ತಯಾರಿಸಿ ಮಹಾಬಲಿಯನ್ನು ಮನೆಗೆ ಸ್ವಾಗತಿಸುತ್ತಾರೆ.
• ವಲ್ಲಂ ಕಳಿ - ದೋಣಿ ಸ್ಪರ್ಧೆಗಳು
• ಪುಲಿಕಳಿ - ಹುಲಿ ನೃತ್ಯಗಳು
• ಪೂಕ್ಕಳಂ - ಹೂವಿನ ರಂಗೋಲಿ
• ಓಣತಪ್ಪಂ - ಪೂಜೆ
• ಓಣಂ ಕಳಿ
• ಟಗ್ ಆಫ್ ವಾರ್
• ತುಂಬಿ ತುಳ್ಳಲ್ - ಮಹಿಳಾ ನೃತ್ಯ
• ಕುಮ್ಮಟ್ಟಿಕಳಿ - ಮುಖವಾಡ ನೃತ್ಯ
• ಓಣತಳ್ಳು - ಮಾರ್ಷಲ್ ಆರ್ಟ್ಸ್
• ಓಣವಿಲ್ಲು - ಸಂಗೀತ
• ಕಾಜ್ಚ್ಛಾಕುಲ - ಬಾಳೆಹಣ್ಣಿನ ಅರ್ಪಣೆಗಳು
• ಓಣಪೊಟ್ಟನ್ - ವೇಷಭೂಷಣಗಳು
• ಅತ್ತಾಚಮಯಂ - ಜಾನಪದ ಹಾಡುಗಳು ಮತ್ತು ನೃತ್ಯ
• ಓಣಸಾದ್ಯಾ - ಅದ್ಧೂರಿ ಭೋಜನ
ಒಟ್ಟಾರೆಯಾಗಿ, ಕೇರಳದಲ್ಲಿ ಓಣಂ ಹಬ್ಬಕ್ಕೆ ರಜೆ ಇರುತ್ತದೆ. ಉತ್ತರಾಡಂ, ತಿರುವೋಣಂ, ಅವಿಟ್ಟಂ ಮತ್ತು ಚಾಥಯಂ ಎಂಬ ನಾಲ್ಕು ಪ್ರಮುಖ ದಿನಗಳಂದು ಅಧಿಕೃತ ರಜಾದಿನಗಳನ್ನು ಘೋಷಿಸಲಾಗುತ್ತದೆ. ಇವುಗಳಲ್ಲಿ ತಿರುವೋಣಂ ಅತ್ಯಂತ ಮಹತ್ವದ ದಿನವಾಗಿದೆ. ಈ ಹಬ್ಬವು ಆಚರಣೆಗಳು, ಸಂಪ್ರದಾಯಗಳು ಮತ್ತು ಸಂತೋಷದ ಪ್ರತೀಕವಾಗಿದೆ.



Click it and Unblock the Notifications












