Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೈದ್ಯರು ಚೀಟಿಯಲ್ಲಿ ಇಷ್ಟಬಂದಂತೆ ಗೀಚುವಂತಿಲ್ಲ: ಹೈಕೋರ್ಟ್ ತೀರ್ಪು..ಯಾಕೆ ಗೊತ್ತಾ?
ನಿಮಗೆ ಓದಲು ಅತ್ಯಂತ ಕಷ್ಟಕರವಾದ ಅಕ್ಷರಗಳು ಯಾವುದು ಅಂದ್ರೆ ಥಟ್ ಅಂತ ನಾವು ಡಾಕ್ಟರ್ ಬರೆದುಕೊಡುವ ಚೀಟಿ ಅಂದುಬಿಡುತ್ತೇವೆ. ಯಾಕಂದ್ರೆ ಅವರು ಬರೆದಿರುವುದು ಮೆಡಿಕಲ್ ಸ್ಟೋರ್ ಸಿಬ್ಬಂದಿ ಬಿಟ್ಟು ಮತ್ಯಾರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರು ಗಡಿಬಿಡಿಯಲ್ಲಿ ಹಾಗೆ ಬರೆಯುತ್ತಾರೆ ಅಂದುಕೊಳ್ಳಬೇಡಿ, ಅವರ ಹ್ಯಾಂಡ್ ರೈಟಿಂಗ್ ಅದೇ ರೀತಿ ಇರುತ್ತದೆ.
ಡಾಕ್ಟರ್ ಬರೆದು ಕೊಡುವ ಚೀಟಿಯಲ್ಲಿರುವ ಔಷಧಿಗಳ ಹೆಸರು ನಮಗಂತೂ ತಿಳಿಯಲೂ ಸಾಧ್ಯವೇ ಇಲ್ಲ. ಆದ್ರೆ ನಿಮಗೆ ಗೊತ್ತಾ ಈ ರೀತಿ ವೈದ್ಯರು ಬರೆದಿದ್ದ ಚೀಟಿಯೇ ಒಬ್ಬ ಕೋರ್ಟ್ ಮೆಟ್ಟಿಲೇರುವಂತೆ ಮಾಡಿತ್ತು. ಆದ್ರೆ ಅದೇ ಕೋರ್ಟ್ ವೈದ್ಯರಿಗೆ ಕ್ಲಾಸ್ ತೆಗೆದುಕೊಂಡು ವೈದ್ಯರು ಇನ್ನುಮುಂದೆ ದೊಡ್ಡ ಅಕ್ಷರದಲ್ಲೇ ಚೀಟಿಗಳ ಬರೆಯಬೇಕು ಎಂಬ ತೀರ್ಪು ನೀಡಿದೆ.

ಹೌದು ಈ ರೀತಿಯ ವಿಚಿತ್ರ ಘಟನೆಯೊಂದು ನಡೆದಿದೆ. ವೈದ್ಯರ ಕೈಬರಹವೇ ಕೋರ್ಟ್ಗೆ ತಲೆನೋವಾಗಿ ಪರಿಣಮಿಸಿದ್ದಲ್ಲದೆ, ಅವರಿನ್ನು ದಪ್ಪ ಅಕ್ಷರದಲ್ಲಿ ಎಲ್ಲರಿಗೂ ಸ್ಪಷ್ಟವಾಗಿ ಓದಲು ಸಾಧ್ಯವಾಗುವ ರೀತಿ ಬರೆಯಬೇಕು ಎಂದು ತೀರ್ಪು ನೀಡಲಾಗಿದೆ. ಹಾಗಾದ್ರೆ ಈ ಘಟನೆ ನಡೆದಿದ್ದು ಎಲ್ಲಿ?, ಘಟನೆಗೆ ಕಾರಣವೇನು? ಅಸಲಿಗೆ ಇಲ್ಲಿ ನಡೆದಿದ್ದೇನು ಎಂಬ ಮಾಹಿತಿ ಇಲ್ಲಿದೆ ನೋಡಿ.
ಹಾವು ಕಡಿದು ಮೃತಪಟ್ಟಿದ್ದ ಪ್ರಕರಣವೊಂದರಲ್ಲಿ ಒಡಿಶಾ ಹೈಕೋರ್ಟ್ ಈ ರೀತಿಯ ತೀರ್ಪು ನೀಡಿದೆ. ವ್ಯಕ್ತಿಯೊಬ್ಬ ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಡಿತ ಮೃತಪಟ್ಟಿದ್ದ. ಬಳಿಕ ಆತನ ಪೋಸ್ಟ್ ಮಾಟರ್ಮ್ ಮುಗಿಸಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಮೃತನ ತಂದೆ ಪರಿಹಾರಕ್ಕಾಗಿ ತಹಶೀಲ್ದಾರ್ ಅವರ ಕಚೇರಿಗೆ ಅಲೆದಾಡಿದ್ದ. ಆದರೆ ತಹಶೀಲ್ದಾರ್ ಈ ಪರಿಹಾರ ಅರ್ಜಿಯನ್ನು ಕೆಲವು ಷರತ್ತು ಮತ್ತು ನಿಯಮಗಳಿಗೆ ಅನುಸಾರವಾಗಿ ತಿರಸ್ಕಾರ ಮಾಡಿದ್ದರು.
ಈ ಹಿನ್ನೆಲೆ ಮೃತನ ತಂದೆ ಹೈಕೋರ್ಟ್ನಲ್ಲಿ ತಹಶೀಲ್ದಾರ್ ವಿರುದ್ಧವೇ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಮೃತನ ಪೋಸ್ಟ್ಮಾಟರ್ಮ್ ವರದಿಯನ್ನು ಕೋರ್ಟ್ಗೆ ಸಲ್ಲಿಸಲಾಗಿತ್ತು. ಆದರೆ ವೈದ್ಯರು ಬರೆದಿದ್ದ ಪೋಸ್ಟ್ಮಾಟರ್ಮ್ ವರದಿ ಓದಲಾಗದೆ ಕೋರ್ಟ್ ಸಿಬ್ಬಂದಿ ತಬ್ಬಿಬ್ಬಾಗಿದ್ದರು. ಖುದ್ದು ಜಡ್ಜ್ ಸಹ ವೈದ್ಯರ ಕೈಬರಹದಲ್ಲಿ ಏನಿದೆ ಎಂಬುದನ್ನು ಸ್ಪಷ್ಟವಾಗಿ ಓದಲಾಗದೆ ತಡಬಡಾಯಿಸಿದ್ದಾರೆ. ಹೀಗಾಗಿ ವೈದ್ಯರು ಇನ್ನುಮುಂದೆ ಪೋಸ್ಟ್ ಮಾಟರ್ಮ್ ವರದಿಯನ್ನು ದಪ್ಪ ಅಕ್ಷರದಲ್ಲಿ ಎಲ್ಲಿರಿಗೂ ತಿಳಿಯುವಂತೆ ಬರೆಯುವುದು ಕಡ್ಡಾಯ ಎಂದು ತೀರ್ಪು ನೀಡಿದ್ದಾರೆ.
ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಸ್ ಕೆ ಪಾಣಿಗ್ರಾಹಿ, ಮರಣೋತ್ತರ ಪರೀಕ್ಷೆಯ ವರದಿಗಳನ್ನು ಬರೆಯುವಲ್ಲಿ ವೈದ್ಯರ ಸಾಂದರ್ಭಿಕ ವಿಧಾನವನ್ನು ಎತ್ತಿ ತೋರಿಸಿದರು, ಇದು ವೈದ್ಯಕೀಯ-ಕಾನೂನು ದಾಖಲೆಗಳ ಗ್ರಹಿಕೆಗೆ ಅಡ್ಡಿಯಾಗುತ್ತದೆ ಎಂದು ಹೇಳಿದರು.
"ಅನೇಕ ಪ್ರಕರಣಗಳಲ್ಲಿ, ಮರಣೋತ್ತರ ಪರೀಕ್ಷೆಯ ವರದಿಯನ್ನು ಬರೆಯುವಾಗ ಹೆಚ್ಚಿನ ವೈದ್ಯರು ತೋರುತ್ತಿರುವ ಸಾಂದರ್ಭಿಕ ವಿಧಾನವು ವೈದ್ಯಕೀಯ-ಕಾನೂನು ದಾಖಲೆಗಳ ಗ್ರಹಿಕೆಗೆ ಪರಿಣಾಮ ಬೀರುತ್ತಿದೆ. ನ್ಯಾಯಾಂಗ ವ್ಯವಸ್ಥೆಯು ಆ ಪತ್ರಗಳನ್ನು ಓದಲು ತುಂಬಾ ಕಷ್ಟಕರವಾಗಿದೆ ಮತ್ತು ಒಂದು ಖಚಿತ ತೀರ್ಮಾನಕ್ಕೆ ಬನ್ನಿ, ಈ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯಕೀಯ ಕೇಂದ್ರಗಳು, ಖಾಸಗಿ ಚಿಕಿತ್ಸಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ, ಸರಿಯಾದ ಕೈಬರಹದಲ್ಲಿ ಅಥವಾ ಟೈಪ್ನಲ್ಲಿ ಬರೆಯುವಂತೆ ನಿರ್ದೇಶಿಸಲಾಗಿದೆ. ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತೀರ್ಪು ನೀಡಿದ್ದಾರೆ.
ಆದರೆ ಈ ಪ್ರಕರಣ ಇಲ್ಲಿಗೆ ಮುಗಿಯಲಿಲ್ಲ. ಪೋಸ್ಟ್ ಮಾಟರ್ಮ್ ವರದಿಯಲ್ಲಿ ಏನಿದೆ ಎಂದು ಓದಲು ಖುದ್ದು ಆ ವರದಿ ಬರೆದಿದ್ದ ವೈದ್ಯರೇ ಕೋರ್ಟ್ಗೆ ಹಾಜರಾಗಬೇಕಾಯಿತು. ಬಳಿಕ ಅರ್ಜಿದಾರರಿಗೆ ಇನ್ನೊಂದು ತಿಂಗಳ ಒಳಗೆ ಹೊಸ ವರದಿಯನ್ನು ತಹಶೀಲ್ದಾರ್ ಕಚೇರಿಗೆ ನೀಡಿ ಪರಿಹಾರ ಪಡೆದುಕೊಳ್ಳಲು ಸೂಚಿಸಲಾಯಿತು.
7,000 ಮಂದಿಯ ಸಾಯಿಸಿದೆ ವೈದ್ಯರ ಬರಹ..!
ವೈದ್ಯರ ಬರಹ 7 ಸಾವಿರ ಮಂದಿಯ ಸಾವಿಗೆ ಕಾರಣವಾಗಿದೆ ಎಂದರೆ ನಂಬುತ್ತೀರಾ? ಹೌದು ಅಮೆರಿಕದಲ್ಲಿ ವೈದ್ಯರ ಕೆಟ್ಟ ಕೈಬರಹದಿಂದಾಗಿಯೇ ಪ್ರತಿ ವರ್ಷ 7 ಸಾವಿರ ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಆಸ್ಪತ್ರೆಯಲ್ಲಿ ರೋಗಿಗಳ ಹೆಚ್ಚಳ ಹಾಗೂ ಬಿಡುವಿಲ್ಲದ ಕೆಲಸದಿಂದಾಗಿ ವೈದ್ಯರ ಕೈಬರಹ ಇಷ್ಟೊಂದು ಕ್ಲಿಷ್ಟವಾಗಿದೆಯಂತೆ. ಇತ್ತೀಚಿಗೆ ಅಮೆರಿಕ ಸೇರಿ ಹಲವು ಕಡೆ ಎಲೆಕ್ಟ್ರಾನಿಕ್ ಪ್ರಿಸ್ಕ್ರಿಪ್ಷನ್ಗಳ ನೀಡಲು ಮುಂದಾಗಲಾಗಿದೆ.



Click it and Unblock the Notifications