Latest Updates
-
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ!
ಅಕ್ಟೋಬರ್ ಮಾಸದಲ್ಲಿರುವ ಬ್ಯಾಂಕ್ ರಜಾ ದಿನಗಳು ಹಾಗೂ ಹಬ್ಬ, ಹರಿದಿನಗಳ ಲಿಸ್ಟ್
ಅಕ್ಟೋಬರ್ ಮಾಸ ಪೂರ್ತಿ ಮಾಸ ಹಬ್ಬ, ವ್ರತ ಅಂತ ಸಡಗರದ ಮಾಸ. ಈ ತಿಂಗಳಿನಲ್ಲಿ ಒಂದಲ್ಲಾ ಒಂದು ಹಬ್ಬಗಳು, ವ್ರತಗಳು ಅಂತ ಅಕ್ಟೋಬರ್ 31ರವರೆಗೆ ತುಂಬಾನೇ ವಿಶೇಷವಾಗಿದೆ. ಮಕ್ಕಳಿಗೆ ದಸರಾ ರಜೆಯ ಸಮಯ ಕೂಡ ಹೌದು.
ಅಕ್ಟೋಬರ್ ಮಾಸದಲ್ಲಿ ಯಾವೆಲ್ಲಾ ದಿನ ಬ್ಯಾಂಕ್ ರಜೆಯಿದೆ, ಈ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:

ಅಕ್ಟೋಬರ್ ಮಾಸದಲ್ಲಿ ಬ್ಯಾಂಕ್ ರಜಾ ದಿನಗಳಿವು
ಅಕ್ಟೋಬರ್ 2,ಬುಧವಾರ: ಗಾಂಧಿ ಜಯಂತಿ
ಅಕ್ಟೋಬರ್ 12, ಶನಿವಾರ: ಎರಡನೇ ಶನಿವಾರ
ಅಕ್ಟೋಬರ್ 10, ಗುರುವಾರ: ಮಹಾಸಪ್ತಮಿ
ಅಕ್ಟೋಬರ್ 12: ಮಹ ನವಮಿ, ವಿಜಯ ದಶಮಿ
ಅಕ್ಟೋಬರ್ 26: ನಾಲ್ಕನೇ ಶನಿವಾರ
ಅಕ್ಟೋಬರ್ ಮಾಸದಲ್ಲಿ ಬರುವ ಹಬ್ಬಗಳು
ಅಕ್ಟೋಬರ್ 2: ಅಮವಾಸ್ಯೆ, ಸರ್ವ ಪಿತೃ ಅಮವಾಸ್ಯೆ, ಸೂರ್ಯಗ್ರಹಣ
ಅಕ್ಟೋಬರ್ 3 : ನವರಾತ್ರಿ ಶುರು
ಅಕ್ಟೋಬರ್ 9" ಸರಸ್ವತಿ ವಾಹನ, ಷಷ್ಠಿ
ಅಕ್ಟೋಬರ್ 10: ದುರ್ಗಾಪೂಜೆ, ಸರಸ್ವತಿ ಪೂಜೆ
ಅಕ್ಟೊಬರ್ 11: ದುರ್ಗಾಷ್ಟಮಿ
ಅಕ್ಟೋಬರ್ 12: ವಿಜಯ ದಶಮಿ, ಅಯುಧ ಪೂಜೆ
ಅಕ್ಟೋಬರ್ 13: ಪಾಪಾಂಕುಶ ಏಕಾದಶಿ
ಅಕ್ಟೋಬರ್ 17: ಪೂರ್ಣಿಮೆ, ವಾಲ್ಮೀಕಿ ಜಯಂತಿ
ಅಕ್ಟೋಬರ್ 20: ಸಂಕಷ್ಟಿ ಗಣೇಶ ಚತುರ್ಥಿ
ಅಕ್ಟೋಬರ್ 28: ರಾಮ ಏಕಾದಶಿ
ಅಕ್ಟೋಬರ್ 29: ಯಮ ದೀಪಂ
ಅಕ್ಟೋಬರ್ 31: ಲಕ್ಷ್ಮಿ ಪೂಜೆ
ಅಕ್ಟೋಬರ್ 31: ನರಕ ಚತುರ್ದಶಿ, ದೀಪಾವಳಿ
ನವರಾತ್ರಿ: ಅಕ್ಟೋಬರ್ 3ರಿಂದ ನವರಾತ್ರಿ ಶುರು, ಒಂಭತ್ತು ದಿನ ನವದುರ್ಗೆಯರನ್ನು ಆರಾಧನೆ ಮಾಡಲಾಗುವುದು
ದಸರಾ: ನವರಾತ್ರಿ 10ನೇ ದಿನ ಕರ್ನಾಟಕದಲ್ಲಿ ವಿಶ್ವಪ್ರಸಿದ್ಧ ದಸರಾ ಅಚರಣೆ, ನಾಡಹಬ್ಬ ದಸರಾವನ್ನು ನೋಡಲು ಲಕ್ಷಾಂತರ ಜನರು ಆಗಮಿಸುತ್ತಾರೆ. ನಮ್ಮ ಆಚರಣೆ, ನಂಬಿಕೆ, ಸಂಸ್ಕತಿ, ವೈಭೋಗ, ಪರಂಪರೆಯನ್ನು ಬಿಂಬಿಸುವ ಹಬ್ಬವಾಗಿ ದಸರಾ.
ಅಯುಧ ಪೂಜೆ : ಅಕ್ಟೋಬರ್ 12ಕ್ಕೆ ಆಯುಧ ಪೂಜೆಯನ್ನು ಆಚರಿಸಲಾಗುವುದು, ಈ ದಿನ ಅಯುಧಗಳಿಗೆ, ವಾಹನಗಳಿಗೆ ಪೂಜೆಯನ್ನು ಸಲ್ಲಿಸಿ ಬಹಳ ಸಡಗರ-ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುವುದು.
ಪಾಪಾಂಕುಶ ಏಕಾದಶಿ: ಶ್ರೀ ವಿಷ್ಣು ಭಕ್ತರು ಪಾಪಾಂಕುಶ ಏಕಾದಶಿಯನ್ನು ಉಪವಾಸವಿದ್ದು ಆಚರಿಸುತ್ತಾರೆ, ಪಾಪಾಂಕುಶ ಏಕಾದಶಿ ಆಚರಣೆಯಿಂದ ಎಲ್ಲಾ ಪಾಪಗಳಿಂದ ಮುಕ್ತರಾಗಿ ಮೋಕ್ಷವನ್ನು ಪಡೆಯಬಹುದು, ಅಲ್ಲದೆ ಕಷ್ಟಗಳು ದೂರಾಗಲಿದೆ.
ಯಮ ದೀಪ:ಧನತ್ರಯೊದಶಿಯಂದು ಈ ವಿಶ್ವದಲ್ಲಿ ತಮ ಆವರ್ತನಾ ಶಕ್ತಿ ಅಧಿಕವಿರುತ್ತದೆ, ಇದರಿಂದ ಅಕಾಲಿಕ ಮೃತ್ಯು ಸಂಭವಿಸಬಹುದು, ಯಮ ದೀಪಕ್ಕೆ ಆ ಕೆಟ್ಟ ಶಕ್ತಿಯನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆ, ಹೀಗಾಗಿ ಯಮನಿಗೆ ಗೋಧಿ ಹಿಟ್ಟಿನಿಂದ ಮಾಡಿದ ದೀಪದಲ್ಲಿ ಎಣ್ಣೆ ಹಾಕಿ ಹಚ್ಚಿಡಲಾಗುವುದು. ಇಂದು ಸಂಧ್ಯಾ ಹೊತ್ತಿನಲ್ಲಿ ಹಚ್ಚಿಡಿ.
ಲಕ್ಷ್ಮಿ ಪೂಜೆ: ಲಕ್ಷ್ಮಿ ಪೂಜೆಯಂದು ಸಂಜೆ ತುಪ್ಪದ ದೀಪ ಹಚ್ಚಿ ಲಕ್ಷ್ಮಿಯನ್ನು ಆರಾಧಿಸಲಾಗುವುದು. ಈ ದಿನ ಲಕ್ಷ್ಮಿ ಪೂಜೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ವೃದ್ದಿಸುವುದು ಎಂಬ ನಂಬಿಕೆ. ಮೊದಲಿಗೆ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ಲಕ್ಷ್ಮಿ ಪೂಜೆಯನ್ನು ಮಾಡಲಾಗುವುದು.
ದೀಪಾವಳಿ: ನವರಾತ್ರಿಯಂತೆಯೇ ಮತ್ತೊಂದು ಸಡಗರದ ಹಬ್ಬ ದೀಪಾವಳಿ. ಕತ್ತಲಿನಿಂದ ಬೆಳಕಿನಡಿಗೆ ಸಂದೇಶ ಸಾರುವ ಹಬ್ಬ, ದೀಪಗಳನ್ನು ಹಚ್ಚಿಟ್ಟಾಗ ಕತ್ತಲು ಕರಗುವಂತೆ ಬದುಕಿನಲ್ಲಿನ ಎಲ್ಲಾ ಕತ್ತಲು ದೂರಾಗಿ ಜೀವನದಲ್ಲಿ ಪ್ರಕಾಶ ಬರಲಿ ಎಂಬ ಆಶಯದಿಂದ ಈ ಹಬ್ಬವನ್ನು ಆಚರಿಸಲಾಗುವುದು.
ಹೀಗೆ ಈ ಅಕ್ಟೋಬರ್ ಮಾಸ ಸಡಗರದಿಂದ ಕೂಡಿದ ಮಾಸವಾಗಿದೆ. ಈ ಮಾಸದ ಒಂದೊಂದು ದಿನಕ್ಕೆ ಒಂದೊಂದು ವಿಶೇಷವಿದೆ, ಹಾಗಾಗಿ ಹೆಚ್ಚಿನ ಸಂಭ್ರಮದಿಂದ ಅಕ್ಟೋಬರ್ ಸ್ವಾಗತಿಸೋಣ.



Click it and Unblock the Notifications











