Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಜೂನ್ 18ಕ್ಕೆ ನಿರ್ಜಲ ಏಕಾದಶಿ ಉಪವಾಸ: ಎಲ್ಲಾ ಏಕಾದಶಿಗಿಂತ ಅತ್ಯಂತ ಕಠಿಣ ಏಕಾದಶಿಯಿದು, ಏಕೆ?
ವರ್ಷದಲ್ಲಿ 24 ಏಕಾದಶಿ ಆಚರಿಸುತ್ತೇವೆ, ಆ 24 ಏಕಾದಶಿಯಲ್ಲಿ ನಿರ್ಜಲ ಏಕಾದಶಿ ಅತ್ಯಂತ ಪ್ರಮುಖ ಏಕಾದಶಿಯಾಗಿದೆ. ನಿರ್ಜಲ ಏಕಾದಶಿ ಆಚರಣೆ ಮಾಡುವುದರಿಂದ ನಮಗೆ ಎಲ್ಲಾ ಏಕಾದಶಿ ಆಚರಣೆ ಮಾಡಿದಷ್ಟು ಪುಣ್ಯದ ಫಲ ಸಿಗುವುದು. ಈ ಏಕಾದಶಿಯ ವಿಶೇಷವೆಂದರೆ ಒಂದು ಹನಿ ನೀರು ಕೂಡ ಬಾಯಿಗೆ ಹಾಕಿಕೊಳ್ಳದೆ ಕಠಿಣ ಉಪವಾಸ ವ್ರತ ಮಾಡಬೇಕು.

ನಿರ್ಜಲ ಏಕಾದಶಿ ಉಪವಾಸ ನಿಯಮ ಜೂನ್ 18ಕ್ಕೆ ಆಚರಿಸಲಾಗುವುದು
ಈ ಸಾಲಿನಲ್ಲಿ ಏಕಾದಶಿ ತಿಥಿ ಜೂನ್ 17 ಬೆಳಗ್ಗೆ 04:43ರಿಂದ ಪ್ರಾರಂಭವಾಗಿ ಜೂನ್ 18 ಬೆಳಗ್ಗೆ 06:24ಕ್ಕೆ ಮುಕ್ತಾಯವಾಗುವುದು. ಏಕಾದಶಿ ಉಪವಾಸ ಜೂನ್ 18ಕ್ಕೆ ಮಾಡಲಾಗುವುದು.
ಏಕಾದಶಿ ತಿಥಿ ಮುಕ್ತಾಯ: ಜೂನ್ 19, ಬೆಳಗ್ಗೆ7:28ಕ್ಕೆ
ನಿರ್ಜಲ ಏಕಾದಶಿ ತಿಥಿಯ ಮಹತ್ವ
ನಿರ್ಜಲ ಏಕಾದಶಿಯನ್ನು ಯಾರು ಶ್ರದ್ಧಾ, ಭಕ್ತಿಯಿಂದ ಆಚರಿಸುತ್ತಾರೋ ಅವರು ಸಕಲ ಪಾಪಗಳಿಂದ ಮುಕ್ತರಾಗುತ್ತಾರೆ. ಈ ದಿ ಶ್ರೀವಿಷ್ಣುವಿನ ಪೂಜಿಸುವುದರಿಂದ ನಮ್ಮ ಜೀವನದಲ್ಲಿನ ಸಲಕ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ವೃತ್ತಿ ಬದುಕು, ಕೌಟುಂಬಿಕ ಬದುಕು, ವ್ಯವಹಾರದಲ್ಲಿರುವ ಸಮಸ್ಯೆಗಳು ದೂರಾಗುವುದು .
ಇದನ್ನು ಆಚರಣೆ ಮಾಡುವುದರಿಂದ 24 ಏಕಾದಶಿಯ ಫಲ ಇದೊಂದು ವ್ರತದಿಂದ ಸಿಗಲಿದೆ
ಎಲ್ಲರಿಗೆ ಈ ಉಪವಾಸ ಮಾಡಲು ಸಾಧ್ಯವಿಲ್ಲ
ಏಕೆಂದರೆ ಈ ಏಕಾದಶಿಯಂದು ಒಂದು ತೊಟ್ಟು ನೀರು ಕೂಡ 24 ಗಂಟೆ ಅವಧಿಯಲ್ಲಿ ಸೇವಿಸುವಂತಿಲ್ಲ, ಆದ್ದರಿಂದ ಎಲ್ಲರಿಗೆ ಈ ಏಕಾದಶಿ ಮಾಡಲು ಸಾಧ್ಯವಾಗಲ್ಲ, ಆರೋಗ್ಯ ಚೆನ್ನಾಗಿರಬೇಕು, ಮನೋಬಲವಿರಬೇಕು ಅಂಥವರು ಈ ಏಕಾದಶಿ ವ್ರತ ಕೈಗೊಳ್ಳಬಹುದು.
ನಿರ್ಜಲ ಏಕಾದಶಿಯಂದ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಪೂಜಿಸಬೇಕು. ಶ್ರೀವಿಷ್ಣುವಿಗೆ ಹೂ, ಹಣ್ಣುಗಳು, ಧೂಪದ್ರವ್ಯ, ನೈವೇದ್ಯ, ತುಳಸಿ, ವೀಳ್ಯೆದೆಲೆ ಅರ್ಪಿಸಿ ಪೂಜೆ ಅಲ್ಲಿಸಲಾಗುವುದು.
ನಿರ್ಜಲ ಏಕಾದಶಿ ಪೂಜಾ ನಿಯಮವೇನು?
ಬೆಳಗ್ಗೆ ಎದ್ದು ಸ್ನಾನ ಮಾಡಿ (ನದಿ ಸಮೀಪವಿದ್ದರೆ ನದಿಯಲ್ಲಿ ಸ್ನಾನ ಮಾಡಿ, ಇಲ್ಲಾಂದ್ರೆ ಸ್ನಾನದ ನೀರಿಗೆ ಸ್ವಲ್ಪ ಗಂಗಾಜಲ ಸೇರಿಸಿ)
ಸ್ನಾನದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ.
ತುಪ್ಪದ ದೀಪ ಹಚ್ಚಿ ಶ್ರೀ ವಿಷ್ಣುವಿನ ಫೋಟೋ ಮುಂದೆ ಇಟ್ಟು ವಿಷ್ಣು ಮಂತ್ರಗಳನ್ನು ಪಠಿಸುತ್ತಾ ಪೂಜಿಸಬೇಕು.
ದೇವರಿಗೆ ಶ್ರೀಗಂಧ, ಅರಿಶಿನ, ಕುಂಕುಮ, ಅಕ್ಷತೆ, ಅಡಿಕೆ, ತೆಂಗಿನಕಾಯಿ ಸಹಿತ ವೀಳ್ಯದೆಲೆ ಮತ್ತು ಬಾಳೆಹಣ್ಣುಗಳು ಅಥವಾ ಇತರ ಹಣ್ಣುಗಳು ಮತ್ತು ದಕ್ಷಿಣೆ ಇಟ್ಟು ತಾಂಬೂಲವನ್ನು ಅರ್ಪಿಸಿ.
ನೈವೇದ್ಯದಲ್ಲಿ ತುಳಸಿ ಹಾಕಿ ಅರ್ಪಿಸಿ.
ಈ ದಿನದಂದು ಬಡವರಿಗೆ ದಾನ ಮಾಡಿದರೆ ಹೆಚ್ಚಿನ ಪುಣ್ಯ ಫಲ ಸಿಗಲಿದೆ.
ನಿರ್ಜಲ ಏಕಾದಶಿ ಉಪವಾಸದ ಕಥೆ!
ನಿರ್ಜಲ ಏಕಾದಶಿಯನ್ನು ಪಾಂಡವ ಭೀಮ ಏಕಾದಶಿ ಅಥವಾ ಪಾಂಡವ ನಿರ್ಜಲ ಏಕಾದಶಿ ಎಂದೂ ಕರೆಯಲಾಗುತ್ತದೆ. ಭೋಜನಪ್ರಿಯನಾದ ಭೀಮನು ಎಲ್ಲಾ ಏಕಾದಶಿ ಉಪವಾಸಗಳನ್ನು ಆಚರಿಸಲು ಬಯಸಿದನು, ಆದರೆ ಅವನಿಗೆ ತನ್ನ ಹಸಿವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಭೀಮನು ಪರಿಹಾರಕ್ಕಾಗಿ ಪಾಂಡವರ ಅಜ್ಜ ಋಷಿ ವ್ಯಾಸರನ್ನು ಸಂಪರ್ಕಿಸುತ್ತಾನೆ, ಅವರು ಭೀಮನಿಗೆ ಈ ವ್ರತದ ಬಗ್ಗೆ ಹೇಳುತ್ತಾರೆ. ಈ ನಿರ್ಜಲ ಏಕಾದಶಿ ಒಂದು ಮಾಡಿದರೆ ಉಳಿದ 23 ಏಕಾದಶಿಯ ಪುಣ್ಯ ಸಿಗಲಿದೆ ಎಂದು ತಿಳಿಸುತ್ತಾನೆ, ಅದರಂತೆ ಭೀಮನು ಈ ಏಕಾದಶಿ ಆಚರಿಸಿದ ಎಂದು ಪೌರಾಣಿಕ ಉಲ್ಲೇಖವಿದೆ.
ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ
ಓಂ ನಮೋ ಭಗವತೇ ವಾಸುದೇವಾಯ
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ವಿಷ್ಣು ಪ್ರಚೋದಯಾತ್



Click it and Unblock the Notifications