Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೂನ್ 18ಕ್ಕೆ ನಿರ್ಜಲ ಏಕಾದಶಿ ಉಪವಾಸ: ಎಲ್ಲಾ ಏಕಾದಶಿಗಿಂತ ಅತ್ಯಂತ ಕಠಿಣ ಏಕಾದಶಿಯಿದು, ಏಕೆ?
ವರ್ಷದಲ್ಲಿ 24 ಏಕಾದಶಿ ಆಚರಿಸುತ್ತೇವೆ, ಆ 24 ಏಕಾದಶಿಯಲ್ಲಿ ನಿರ್ಜಲ ಏಕಾದಶಿ ಅತ್ಯಂತ ಪ್ರಮುಖ ಏಕಾದಶಿಯಾಗಿದೆ. ನಿರ್ಜಲ ಏಕಾದಶಿ ಆಚರಣೆ ಮಾಡುವುದರಿಂದ ನಮಗೆ ಎಲ್ಲಾ ಏಕಾದಶಿ ಆಚರಣೆ ಮಾಡಿದಷ್ಟು ಪುಣ್ಯದ ಫಲ ಸಿಗುವುದು. ಈ ಏಕಾದಶಿಯ ವಿಶೇಷವೆಂದರೆ ಒಂದು ಹನಿ ನೀರು ಕೂಡ ಬಾಯಿಗೆ ಹಾಕಿಕೊಳ್ಳದೆ ಕಠಿಣ ಉಪವಾಸ ವ್ರತ ಮಾಡಬೇಕು.

ನಿರ್ಜಲ ಏಕಾದಶಿ ಉಪವಾಸ ನಿಯಮ ಜೂನ್ 18ಕ್ಕೆ ಆಚರಿಸಲಾಗುವುದು
ಈ ಸಾಲಿನಲ್ಲಿ ಏಕಾದಶಿ ತಿಥಿ ಜೂನ್ 17 ಬೆಳಗ್ಗೆ 04:43ರಿಂದ ಪ್ರಾರಂಭವಾಗಿ ಜೂನ್ 18 ಬೆಳಗ್ಗೆ 06:24ಕ್ಕೆ ಮುಕ್ತಾಯವಾಗುವುದು. ಏಕಾದಶಿ ಉಪವಾಸ ಜೂನ್ 18ಕ್ಕೆ ಮಾಡಲಾಗುವುದು.
ಏಕಾದಶಿ ತಿಥಿ ಮುಕ್ತಾಯ: ಜೂನ್ 19, ಬೆಳಗ್ಗೆ7:28ಕ್ಕೆ
ನಿರ್ಜಲ ಏಕಾದಶಿ ತಿಥಿಯ ಮಹತ್ವ
ನಿರ್ಜಲ ಏಕಾದಶಿಯನ್ನು ಯಾರು ಶ್ರದ್ಧಾ, ಭಕ್ತಿಯಿಂದ ಆಚರಿಸುತ್ತಾರೋ ಅವರು ಸಕಲ ಪಾಪಗಳಿಂದ ಮುಕ್ತರಾಗುತ್ತಾರೆ. ಈ ದಿ ಶ್ರೀವಿಷ್ಣುವಿನ ಪೂಜಿಸುವುದರಿಂದ ನಮ್ಮ ಜೀವನದಲ್ಲಿನ ಸಲಕ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು. ವೃತ್ತಿ ಬದುಕು, ಕೌಟುಂಬಿಕ ಬದುಕು, ವ್ಯವಹಾರದಲ್ಲಿರುವ ಸಮಸ್ಯೆಗಳು ದೂರಾಗುವುದು .
ಇದನ್ನು ಆಚರಣೆ ಮಾಡುವುದರಿಂದ 24 ಏಕಾದಶಿಯ ಫಲ ಇದೊಂದು ವ್ರತದಿಂದ ಸಿಗಲಿದೆ
ಎಲ್ಲರಿಗೆ ಈ ಉಪವಾಸ ಮಾಡಲು ಸಾಧ್ಯವಿಲ್ಲ
ಏಕೆಂದರೆ ಈ ಏಕಾದಶಿಯಂದು ಒಂದು ತೊಟ್ಟು ನೀರು ಕೂಡ 24 ಗಂಟೆ ಅವಧಿಯಲ್ಲಿ ಸೇವಿಸುವಂತಿಲ್ಲ, ಆದ್ದರಿಂದ ಎಲ್ಲರಿಗೆ ಈ ಏಕಾದಶಿ ಮಾಡಲು ಸಾಧ್ಯವಾಗಲ್ಲ, ಆರೋಗ್ಯ ಚೆನ್ನಾಗಿರಬೇಕು, ಮನೋಬಲವಿರಬೇಕು ಅಂಥವರು ಈ ಏಕಾದಶಿ ವ್ರತ ಕೈಗೊಳ್ಳಬಹುದು.
ನಿರ್ಜಲ ಏಕಾದಶಿಯಂದ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಪೂಜಿಸಬೇಕು. ಶ್ರೀವಿಷ್ಣುವಿಗೆ ಹೂ, ಹಣ್ಣುಗಳು, ಧೂಪದ್ರವ್ಯ, ನೈವೇದ್ಯ, ತುಳಸಿ, ವೀಳ್ಯೆದೆಲೆ ಅರ್ಪಿಸಿ ಪೂಜೆ ಅಲ್ಲಿಸಲಾಗುವುದು.
ನಿರ್ಜಲ ಏಕಾದಶಿ ಪೂಜಾ ನಿಯಮವೇನು?
ಬೆಳಗ್ಗೆ ಎದ್ದು ಸ್ನಾನ ಮಾಡಿ (ನದಿ ಸಮೀಪವಿದ್ದರೆ ನದಿಯಲ್ಲಿ ಸ್ನಾನ ಮಾಡಿ, ಇಲ್ಲಾಂದ್ರೆ ಸ್ನಾನದ ನೀರಿಗೆ ಸ್ವಲ್ಪ ಗಂಗಾಜಲ ಸೇರಿಸಿ)
ಸ್ನಾನದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ.
ತುಪ್ಪದ ದೀಪ ಹಚ್ಚಿ ಶ್ರೀ ವಿಷ್ಣುವಿನ ಫೋಟೋ ಮುಂದೆ ಇಟ್ಟು ವಿಷ್ಣು ಮಂತ್ರಗಳನ್ನು ಪಠಿಸುತ್ತಾ ಪೂಜಿಸಬೇಕು.
ದೇವರಿಗೆ ಶ್ರೀಗಂಧ, ಅರಿಶಿನ, ಕುಂಕುಮ, ಅಕ್ಷತೆ, ಅಡಿಕೆ, ತೆಂಗಿನಕಾಯಿ ಸಹಿತ ವೀಳ್ಯದೆಲೆ ಮತ್ತು ಬಾಳೆಹಣ್ಣುಗಳು ಅಥವಾ ಇತರ ಹಣ್ಣುಗಳು ಮತ್ತು ದಕ್ಷಿಣೆ ಇಟ್ಟು ತಾಂಬೂಲವನ್ನು ಅರ್ಪಿಸಿ.
ನೈವೇದ್ಯದಲ್ಲಿ ತುಳಸಿ ಹಾಕಿ ಅರ್ಪಿಸಿ.
ಈ ದಿನದಂದು ಬಡವರಿಗೆ ದಾನ ಮಾಡಿದರೆ ಹೆಚ್ಚಿನ ಪುಣ್ಯ ಫಲ ಸಿಗಲಿದೆ.
ನಿರ್ಜಲ ಏಕಾದಶಿ ಉಪವಾಸದ ಕಥೆ!
ನಿರ್ಜಲ ಏಕಾದಶಿಯನ್ನು ಪಾಂಡವ ಭೀಮ ಏಕಾದಶಿ ಅಥವಾ ಪಾಂಡವ ನಿರ್ಜಲ ಏಕಾದಶಿ ಎಂದೂ ಕರೆಯಲಾಗುತ್ತದೆ. ಭೋಜನಪ್ರಿಯನಾದ ಭೀಮನು ಎಲ್ಲಾ ಏಕಾದಶಿ ಉಪವಾಸಗಳನ್ನು ಆಚರಿಸಲು ಬಯಸಿದನು, ಆದರೆ ಅವನಿಗೆ ತನ್ನ ಹಸಿವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಭೀಮನು ಪರಿಹಾರಕ್ಕಾಗಿ ಪಾಂಡವರ ಅಜ್ಜ ಋಷಿ ವ್ಯಾಸರನ್ನು ಸಂಪರ್ಕಿಸುತ್ತಾನೆ, ಅವರು ಭೀಮನಿಗೆ ಈ ವ್ರತದ ಬಗ್ಗೆ ಹೇಳುತ್ತಾರೆ. ಈ ನಿರ್ಜಲ ಏಕಾದಶಿ ಒಂದು ಮಾಡಿದರೆ ಉಳಿದ 23 ಏಕಾದಶಿಯ ಪುಣ್ಯ ಸಿಗಲಿದೆ ಎಂದು ತಿಳಿಸುತ್ತಾನೆ, ಅದರಂತೆ ಭೀಮನು ಈ ಏಕಾದಶಿ ಆಚರಿಸಿದ ಎಂದು ಪೌರಾಣಿಕ ಉಲ್ಲೇಖವಿದೆ.
ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ
ಓಂ ನಮೋ ಭಗವತೇ ವಾಸುದೇವಾಯ
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ವಿಷ್ಣು ಪ್ರಚೋದಯಾತ್



Click it and Unblock the Notifications