Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾರತೀಯರ ಕಣ್ಣು ಕೆಂಪಾಗಿಸಿದ ನೇಪಾಳದ ಹೊಸ ನೋಟು..! ಯಾಕೆ.?
ನಾವು ಭಾರತದ ರೂಪಾಯಿಯಲ್ಲಿ ಗಾಂಧೀಜಿಯ ಫೋಟೋ ನೋಡುತ್ತೇವೆ. ಜೊತೆಗೆ ಎಲ್ಲಾ ನೋಟಿನಲ್ಲೂ ಕೆಲವೊಂದು ವಿಶೇಷ ಚಿತ್ರಗಳ ಮುದ್ರಣ ನೋಡಬಹುದು. ಹಂಪಿಯ ಕಲ್ಲಿನ ರಥ ಸೇರಿದಂತೆ ಹಲವು ವಿಶೇಷ ಮುದ್ರಣಗಳು ನಮ್ಮ ಕಣ್ಣ ಮುಂದೆ ಬರುತ್ತವೆ.
ಆದರೆ ಪಕ್ಕದ ನೇಪಾಳ ಮುದ್ರಿಸಿರುವ ಆ ದೇಶದ ಹೊಸ 100 ರೂಪಾಯಿ ನೋಟು ಈಗ ಹೊಸ ಚರ್ಚೆ ಹುಟ್ಟುಹಾಕಿದೆ. ಹೌದು ಇತ್ತಿಚಿಗೆ ಹೊಸ ಮ್ಯಾಪ್ ಮುದ್ರಿಸಿ ವಿವಾದ ಹುಟ್ಟುಹಾಕಿದ್ದ ನೇಪಾಳ ಈಗ ತನ್ನ ಹೊಸ ನೋಟಿನಲ್ಲಿ ತನ್ನ ಹೊಸ ಮ್ಯಾಪ್ ಮುದ್ರಿಸಿದೆ. ಆದರೆ ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ನೇಪಾಳ ತನ್ನ ಹೊಸ 100 ರೂಪಾಯಿ ನೋಟು ಮುದ್ರಿಸಿದ್ದು ಈ ನೋಟು ಕಂಡ ಭಾರತೀಯರು ಈಗ ಕೆಂಡಕಾರುತ್ತಿದ್ದಾರೆ. ರಾಜತಾಂತ್ರಿಕವಾಗಿ ಭಾರತದೊಂದಿಗೆ ವಿವಾದಗಳ ಮಾಡಿಕೊಳ್ಳುತ್ತಲೇ ಬಂದಿದೆ. ಈಗ ಮುದ್ರಿಸಿರುವ ಹೊಸ ನೋಟಿನಲ್ಲಿ ಭಾರತದ ಕೆಲವು ಪ್ರದೇಶವನ್ನು ತನ್ನದೆಂದು ಘೊಷಿಸಿಕೊಂಡಿದೆ.
ಭಾರತ ಮತ್ತು ನೇಪಾಳದ ನಡುವೆ ವಿವಾದ ಎದ್ದಿರುವ ಲಿಪುಲೇಖ್, ಲಿಂಪಿಯಾಧುರಾ, ಕಾಲಾಪಾನಿ ಪ್ರದೇಶವನ್ನು ಸಹ ಸೇರಿಸಿಕೊಂಡು ಹೊಸ ನೋಟು ಮುದ್ರಿಸಿಕೊಂಡಿದೆ. ಈ ಪ್ರದೇಶಗಳು ತನ್ನದೆಂದು ಘೋಷಿಸಿಕೊಳ್ಳುವ ಮೊದಲ ಹೆಜ್ಜೆ ಇಟ್ಟಿದೆ. ಅಸಲಿಗೆ ಈ ಪ್ರದೇಶಗಳು ಮೊದಲು ಭಾರತದ ಒಳಗೆ ಇದ್ದವು ಆದರೆ ಇತ್ತೀಚಿಗೆ ಈ ಪ್ರದೇಶಗಳು ವಿವಾದ ಹುಟ್ಟಿಸಿವೆ.
ಭಾರತ ಹಾಗೂ ನೇಪಾಳ ಗಡಿರೇಖೆಯಲ್ಲಿ ಈ ಪ್ರದೇಶಗಳಿವೆ, ಅವುಗಳು ಮೊದಲ ಭಾರತದ ರೇಖೆಯೊಳಗಿದ್ದವು. ಆದರೆ ನೇಪಾಳ ಈ ಪ್ರದೇಶಗಳನ್ನು ತನ್ನದೆಂದು ಹೇಳುತ್ತಿದ್ದು, ಈಗ ಹೊಸ ನೋಟಿನಲ್ಲಿಯೂ ಸಹ ಈ ಪ್ರದೇಶಗಳ ಮುದ್ರಿಸಿಕೊಂಡಿದೆ.
ನೇಪಾಳದ ನಿರ್ಧಾರಕ್ಕೆ ಭಾರತವು ಈ ಸಂಬಂಧ ಪ್ರತಿಕ್ರಿಯೆ ಸಹ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಭಾರತದ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ. ನೇಪಾಳದ ಏಕಪಕ್ಷೀಯ ಕ್ರಮಗಳು ನೆಲದ ಮೇಲಿನ ಅಸ್ತಿತ್ವದಲ್ಲಿರುವ ವಾಸ್ತವಗಳನ್ನು ಬದಲಾಯಿಸುವುದಿಲ್ಲ ಅಥವಾ ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಗಡಿ ಚರ್ಚೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಐದು ಭಾರತೀಯ ರಾಜ್ಯಗಳಲ್ಲಿ 1,850 ಕಿ.ಮೀ.ಗೂ ಹೆಚ್ಚು ಉದ್ದದ ಗಡಿ ಹಂಚಿಕೊಂಡಿದೆ. ಆದರೆ ಈ ಪ್ರದೇಶದಲ್ಲಿ ಕೆಲವು ವಿವಾದಾತ್ಮಕ ವಿಚಾರಗಳು ಸಹ ಇನ್ನೂ ಜೀವಂತವಾಗಿದೆ.
ನೇಪಾಳದಲ್ಲಿ ಇತ್ತೀಚಿಗೆ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಅಲ್ಲಿನ ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಯಾಗೋದು ಇದೇ ಗಡಿ ರೇಖೆ ವಿಚಾರಗಳು, ಭಾರತದೊಂದಿಗಿನ ಈ ವಿವಾದಾತ್ಮಕ ಸ್ಥಳಗಳನ್ನು ನೇಪಾಳಕ್ಕೆ ಅಧಿಕೃತವಾಗಿ ಸೇರಿಸಲಾಗುವುದು ಅಂತಲೇ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸುತ್ತವೆ.
ಅದರಲ್ಲೂ ಇತ್ತೀಚಿಗೆ ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪೌಡೆಲ್ ಈಗ ಗಡಿ ಸಂಬಂಧಿಸಿದಂತೆ ಹೊಸ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಕಳೆದ 2022ರಲ್ಲಿ ಪ್ರಧಾನಿ ಮೋದಿ ನೇಪಾಳದ ಲುಂಬಿನಿಗೆ ಭೇಟಿ ನೀಡಿದ್ದರು, ಈ ಭೇಟಿ ವೇಳೆ ಹಲವು ರೀತಿಯ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿತ್ತು ಆದರೆ ಗಡಿ ಸಮಸ್ಯೆಗಳ ಕುರಿತಂತೆ ಯಾವ ವಿಚಾರವು ಚರ್ಚೆಯಾಗಿರಲಿಲ್ಲ. ಆದರೆ ಇತ್ತೀಚಿಗೆ ನೇಪಾಳ ಯತಿ ಹೆಸರನ್ನು ರಾಷ್ಟ್ರೀಯ ಚಿಹ್ನೆಯನ್ನಾಗಿ ನಾಮ ನಿರ್ದೇಶನ ಮಾಡಿತ್ತು. ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ಈ ಯೆತಿಯನ್ನು ರಾಷ್ಟ್ರೀಯ ಚಿಹ್ನೆಯಾಗಿ ನೇಪಾಳ ಬಳಸುವುದಾಗಿ ಘೋಷಿಸಿತ್ತು, ಈಗ ಭಾರತದ ಭೂ ಪ್ರದೇಶ ಸೇರಿಸಿಕೊಂಡು ಹೊಸ ನಕ್ಷೆ ತಯಾರಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.



Click it and Unblock the Notifications
