Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Navratri 2025: ಈ 6 ಕೆಲಸ ಮಾಡಿದ್ರೆ ನಿಮ್ಮ ಪೂಜೆ ವ್ಯರ್ಥ! ಪಾಪ ಸುತ್ತಿಕೊಳ್ಳೋದು ಖಚಿತ
ನವರಾತ್ರಿ ಉಪವಾಸದಲ್ಲಿ ಈ 6 ತಪ್ಪುಗಳನ್ನು ಮಾಡಬೇಡಿ! ಈ ಕೆಲಸಗಳನ್ನು ಮಾಡಿದರೆ ದುರ್ಗಾ ಮಾತೆಯ ಕೋಪಕ್ಕೆ ಗುರಿಯಾಗುತ್ತೀರಾ! ದುರ್ಗಾ ದೇವಿಯ (Durga) ಕೃಪೆಗೆ ಪಾತ್ರರಾಗಲು, ಭಕ್ತರು ನವರಾತ್ರಿಯ (Navratri 2025) ಸಮಯದಲ್ಲಿ ಕೆಲವು ನಿರ್ದಿಷ್ಟ ನಿಯಮಗಳನ್ನು ಅನುಸರಿಸಬೇಕು. ಈ ಸಮಯದಲ್ಲಿ ಯಾವ 6 ಕೆಲಸಗಳಿಂದ ದೂರವಿರಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನಿಮ್ಮ ಭಕ್ತಿ ಮತ್ತು ಸಾಧನೆ ಯಶಸ್ವಿಯಾಗಲು ನವರಾತ್ರಿಯಲ್ಲಿ ಈ ಕೆಲಸಗಳಿಂದ ದೂರವಿರಬೇಕು.
ನವರಾತ್ರಿ ಹಬ್ಬವು ಭಕ್ತರಿಗೆ ಅತ್ಯಂತ ಪವಿತ್ರವಾದ ಸಮಯ. ಈ ಒಂಬತ್ತು ದಿನಗಳಲ್ಲಿ ದುರ್ಗಾ ದೇವಿಯ ಪೂಜೆ, ಉಪವಾಸ ವ್ರತ ಮತ್ತು ಸಾಧನೆಗೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಭಕ್ತರು ಸಂಪೂರ್ಣ ಶ್ರದ್ಧೆ ಮತ್ತು ಸರಿಯಾದ ನಿಯಮಗಳೊಂದಿಗೆ ಉಪವಾಸ ಮಾಡಿದರೆ, ದುರ್ಗಾ ದೇವಿಯ ಕೃಪೆ ಸದಾ ಅವರ ಮೇಲೆ ಇರುತ್ತದೆ ಎಂಬುದು ನಂಬಿಕೆ. ಆದರೆ, ಕೆಲವೊಮ್ಮೆ ಅಜಾಗರೂಕತೆಯಿಂದ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ. ಇದರಿಂದಾಗಿ ವ್ರತದ ಫಲ ಅಪೂರ್ಣವಾಗುತ್ತದೆ. ಜೊತೆಗೆ ಪೂಜೆಯ ಮಹತ್ವ ಕಡಿಮೆಯಾಗುತ್ತದೆ. ಹೀಗಾಗಿ, ನವರಾತ್ರಿಯಲ್ಲಿ ಯಾವ ಕೆಲಸಗಳಿಂದ ದೂರವಿರಬೇಕು (Avoid These Things During Navratri) ಎಂಬುದನ್ನು ತಿಳಿಯಿರಿ.

ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸಬೇಡಿ
ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆ ಬೇಡ. ನವರಾತ್ರಿಯಲ್ಲಿ ಸಾತ್ವಿಕ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಾಮಸಿಕ ಎಂದು ಪರಿಗಣಿಸಲಾಗುತ್ತದೆ. ಇದು ಮನಸ್ಸನ್ನು ಅಶಾಂತಗೊಳಿಸುತ್ತದೆ. ಉಪವಾಸ ವ್ರತದ ಪವಿತ್ರತೆಯನ್ನು ಕಾಪಾಡಿಕೊಳ್ಳಲು ಇವುಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ಜಗಳಗಳಿಂದ ದೂರವಿರಿ
ನಕಾರಾತ್ಮಕ ಮಾತುಗಳು ಮತ್ತು ಜಗಳಗಳಿಂದ ದೂರವಿರಿ. ಈ ಪವಿತ್ರ ದಿನಗಳಲ್ಲಿ ವಾತಾವರಣವನ್ನು ಶುದ್ಧವಾಗಿ ಮತ್ತು ಶಾಂತವಾಗಿ ಇಡುವುದು ಬಹಳ ಮುಖ್ಯ. ನಕಾರಾತ್ಮಕ ಮಾತುಗಳು ಅಥವಾ ಜಗಳವಾಡಲು ದೇವಿಯ ಕೃಪೆಯನ್ನು ಕಡಿಮೆ ಮಾಡಬಹುದು. ಹೀಗಾಗಿ, ಮನೆಯಲ್ಲಿ ಪ್ರೀತಿ, ಸಾಮರಸ್ಯ ಮತ್ತು ಶಾಂತಿಯ ವಾತಾವರಣ ಕಾಪಾಡುವುದು ಅತ್ಯಗತ್ಯ.
ಮಾಂಸ ಮತ್ತು ಮದ್ಯ ಸೇವನೆ ಬೇಡ
ಮಾಂಸ ಮತ್ತು ಮದ್ಯ ಸೇವನೆ ಬೇಡವೇ ಬೇಡ. ನವರಾತ್ರಿಯಲ್ಲಿ ದುರ್ಗಾ ದೇವಿಯನ್ನು ಪೂಜಿಸುವಾಗ ಮಾಂಸಾಹಾರ ಮತ್ತು ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದು ದೇಹ ಮತ್ತು ಮನಸ್ಸು ಎರಡನ್ನೂ ಅಪವಿತ್ರಗೊಳಿಸುತ್ತದೆ. ಈ ಸಮಯದಲ್ಲಿ ಭಕ್ತರು, ಸಾತ್ವಿಕ ಜೀವನಶೈಲಿಯನ್ನು ಅನುಸರಿಸುವ ಮೂಲಕ ದುರ್ಗಾ ದೇವಿಯನ್ನು ಆರಾಧಿಸಬೇಕು.
ಕೂದಲು, ಉಗುರು ಕತ್ತರಿಸಬಹುದಾ?
ಕೂದಲು ಅಥವಾ ಉಗುರುಗಳನ್ನು ಕತ್ತರಿಸುವುದನ್ನು ತಪ್ಪಿಸಿ. ನವರಾತ್ರಿಯಲ್ಲಿ ಕೂದಲು ಅಥವಾ ಉಗುರುಗಳನ್ನು ಕತ್ತರಿಸುವುದು ಅಶುಭ ಎಂದು ಪರಿಗಣಿಸಲಾಗುವುದು. ಹೀಗೆ ಮಾಡುವುದರಿಂದ ವ್ರತದ ಗೌರವಕ್ಕೆ ಧಕ್ಕೆಯಾಗಬಹುದು. ಮತ್ತು ಪೂಜೆಯ ಪರಿಣಾಮ ಕಡಿಮೆಯಾಗಬಹುದು. ಹೀಗಾಗಿ, ನವರಾತ್ರಿಯ ಉಪವಾಸದ ದಿನಗಳಲ್ಲಿ ಸರಳತೆ ಮತ್ತು ಪವಿತ್ರತೆ ಅನುಸರಿಸುವುದು ಅವಶ್ಯಕವಾಗಿದೆ.
ಸೂಜಿ-ದಾರ ಮುಟ್ಟಬೇಡಿ
ಹೊಲಿಗೆ ಮತ್ತು ಕಸೂತಿ ಮಾಡುವುದನ್ನು ತಪ್ಪಿಸಬೇಕು. ಸೂಜಿ-ದಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ನವರಾತ್ರಿಯ ಸಮಯದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಇದನ್ನು ಮಾಡುವುದರಿಂದ ಪೂಜೆಯ ಪುಣ್ಯವು ಕಡಿಮೆಯಾಗುತ್ತದೆ. ಇದನ್ನು ಸಂಪ್ರದಾಯಕ್ಕೆ ವಿರುದ್ಧ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಈ ದಿನಗಳಲ್ಲಿ ಹೊಲಿಗೆ ಮತ್ತು ಕಸೂತಿಯಿಂದ ದೂರವಿರಬೇಕು.
ಹೊಸ ಬಟ್ಟೆಗಳನ್ನು ಧರಿಸಬೇಡಿ
ನವರಾತ್ರಿಯಲ್ಲಿ ಹೊಸ ಬಟ್ಟೆಗಳನ್ನು ಧರಿಸುವ ಸಂಪ್ರದಾಯವಿಲ್ಲ. ಬದಲಾಗಿ, ನವಮಿ ದಿನದಂದು ದುರ್ಗಾ ದೇವಿಗೆ ಅರ್ಪಿಸಿದ ನಂತರವೇ ಅವುಗಳನ್ನು ಧರಿಸಲಾಗುತ್ತದೆ. ಮೊದಲು ಅವುಗಳನ್ನು ದುರ್ಗಾ ಮಾತೆಗೆ ಅರ್ಪಿಸಿ, ನಂತರ ಧರಿಸುವುದು ಶುಭ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ದುರ್ಗಾ ದೇವಿಯ ವಿಶೇಷ ಕೃಪೆ ದೊರೆಯುತ್ತದೆ.



Click it and Unblock the Notifications
