Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ನಾಗರ ಪಂಚಮಿ 2024: ಆಗಸ್ಟ್ 9ಕ್ಕೆ ನಾಗನಿಗೆ ಪೂಜೆ ಸಲ್ಲಿಸಲು ಶುಭ ಮುಹೂರ್ತ ಯಾವಾಗ?
ಎಲ್ಲಾ ಹಬ್ಬಗಳಿಗೆ ಮುನ್ನುಡಿಯಾಗಿ ನಾಗರಪಂಚಮಿ ಹಬ್ಬ ಬರುತ್ತಿದೆ, ನಾಗರ ಪಂಚಮಿಯಿಂದ ಸಾಲು-ಸಾಲು ಹಬ್ಬಗಳು ಶುರುವಾಗುವುದು. ರಕ್ಷಾ ಬಂಧನ, ಗೌರಿ- ಗಣೇಶ ಹಬ್ಬ, ದಸರಾ, ದೀಪಾವಳಿ ಅಂತ ಸಾಲು ಸಾಲು ಹಬ್ಬಗಳಿವೆ, ಪ್ರತಿಮಾಸವೂ ಹಬ್ಬದ ಸಡಗರವೇ. ನಾಗರ ಪಂಚಮಿ ಹಬ್ಬ ಹೆಣ್ಮಕ್ಕಳಿಗೆ ತುಂಬಾನೇ ವಿಶೇಷವಾಗಿದೆ, ಈ ದಿನ ಹಾವಿನ ಮೂರ್ತಿ ಅಥವಾ ಹಾವಿನ ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿ ಹಬ್ಬವನ್ನು ಆಚರಿಸುತ್ತಾರೆ.
ನಾಗರ ಪಂಚಮಿ ಹಬ್ಬ ಯಾವಾಗ, ಪೂಜೆಗೆ ಶುಭ ಮುಹೂರ್ತ ಯಾವಾಗ ಎಂದು ನೋಡೋಣ:

ಹಿಂದೂ ಪಂಚಾಂಗ ಪ್ರಕಾರ ಈ ವರ್ಷ ನಾಗರ ಪಂಚಮಿಯನ್ನು ಆಗಸ್ಟ್ 9 ರಂದು ಆಚರಿಸಲಾಗುವುದು.
ನಾಗರ ಪಂಚಮಿ ಪೂಜಾ ಮುಹೂರ್ತ: ಆಗಸ್ಟ್ 9 ಬೆಳಗ್ಗೆ 06:07ರಿಂದ 8:38ರವರೆಗೆ.
ಪಂಚಮಿ ತಿಥಿ ಮುಕ್ತಾಯ: ಅಗಸ್ಟ್ 10 ಮುಂಜಾನೆ 03:14ಕ್ಕೆ
ನಾಗರ ಪಂಚಮಿಯಂದು ನಾಗನಿಗೆ ಪೂಜೆ
ಈ ಸಮಯದಲ್ಲಿ ಕೃಷಿ ಚಟುವಟಿಕೆ ನಡೆಯುವ ಸಮಯ, ಈ ಸಮಯದಲ್ಲಿ ಹಾವುಗಳು ಏನೂ ತೊಂದರೆ ಮಾಡದಿರಲಿ ಎಂದು ಪ್ರಾರ್ಥಿಸಿ ನಾಗರಪಂಚಮಿ ಹಬ್ಬವನ್ನು ಆಚರಿಸಲಾಗುವುದು.
ನಾಗರ ಪಂಚಮಿ ಹಬ್ಬವನ್ನು ಹೇಗೆ ಆಚರಿಸಲಾಗುವುದು?
ಈ ಸಮಯದಲ್ಲಿ ಮದುವೆ ಮಾಡಿಕೊಟ್ಟ ಹೆಣ್ಮಕ್ಕಳು ತವರಿಗೆ ಬಂದು ಈ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಈ ದಿನ ಹಿಟ್ಟಿನಿಂದ ಹಾವಿನ ಮೂರ್ತಿ ಮಾಡಿ ಅಥವಾ ಹುತ್ತಕ್ಕೆ ಹಾಲೆರೆದು ಬರ್ತಾರೆ. ಜೊತೆಗೆ ನೈವೇದ್ಯ ಕೂಡ ಅರ್ಪಿಸುತ್ತಾರೆ. ಈ ಹಬ್ಬವನ್ನು ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದೆಲ್ಲಡೆ ಆಚರಿಸುತ್ತಾರೆ.
ಅಣ್ಣ- ತಂಗಿಯ ಬಾಂಧವ್ಯ ಸಾರುವ ಹಬ್ಬ:
ಅಣ್ಣ ಹೋಗಿ ತಂಗಿಯನ್ನು ತವರಿಗೆ ಕರೆದುಕೊಂಡು ಬರುತ್ತಾನೆ, ಅವಳು ಖುಷಿಯಿಂದ ತವರಿಗೆ ಬಂದು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ನಂತರ ತವರಿಗೆ ಹರಿಸಿ, ಅರಿಶಿಣ ಕುಂಕುಮ ಪಡೆದು ತನ್ನ ಗಂಡನ ಮನೆಗೆ ಹಿಂತಿರುಗುತ್ತಾಳೆ.
ಕೆಲವರು ಹಿಟ್ಟಿನಿಂದ ನಾಗರಹಾವಿನ ಆಕಾರ ಮಾಡಿ ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಬಂದು ಹಬ್ಬವನ್ನು ಆಚರಿಸುತ್ತಾರೆ. ಹೀಗೆ ಪೂಜಿಸುವುದರಿಂದ ನಾಗದೋಷವಿದ್ದರೆ ನಿವಾರಣೆಯಾಗುವುದು ಎಂದು ಹೇಳಲಾಗುವುದು.
ಅವಾಹಿತ ಹೆಣ್ಮಕ್ಕಳು ಕಂಕಣ ಭಾಗ್ಯ ಕೋರಿ ನಾಗನನ್ನು ಆರಾಧಿಸುತ್ತಾರೆ
ಕಂಕಣ ಭಾಗ್ಯ ಕೂಡಿ ಬರದಿದ್ದರೆ ಈ ದಿನ ಹಾಲೆರೆದರೆ ಜಾತಕದಲ್ಲಿನ ದೋಷ ದೂರಾಗುವುದು, ಕಂಕಣ ಭಾಗ್ಯ ಕೂಡಿ ಬರುವುದು ಎಂದು ಹೇಳಲಾಗುವುದು.
ತಿಳಿಯದೆ ಹಾವಿಗೆ ನೋವು ಮಾಡಿದ್ದರೆ ಈ ದಿನ ಪರಿಹಾರ ಮಾಡುತ್ತಾರೆ
ಹಾವಿನ ದೋಷ ಒಳ್ಳೆಯದಲ್ಲ ಎಂದು ಹೇಳಲಾಗುವುದು, ಕೆಲವೊಮ್ಮೆ ತೋಟದಲ್ಲಿ ಕೆಲಸ ಕಾರ್ಯವನ್ನು ಮಾಡುವಾಗ ಗುದ್ದಲಿಯಿಂದ ಅಗೆಯುವಾಗ ಗೊತ್ತಿಲ್ಲದೆ ಹಾವಿಗೆ ನೋವಾಗಿದ್ದರೆ ಹಾವಿನ ಸಾಪ ತಗುಲುವುದು, ಆ ಶಾಪ ಪರಿಹಾರವಾಗುವುದು ಎಂದು ಹೇಳಲಾಗುವುದು.
ಈ ದಿನ ಭೂಮಿಯನ್ನು ಅಗೆಯಬಾರದು ಹೇಳಲಾಗುವುದು
ನಾಗರಪಂಚಮಿಯಂದು ಭೂಮಿಯನ್ನು ಅಗೆಯಬಾರದು ಎಂದು ಹೇಳಲಾಗುವುದು.



Click it and Unblock the Notifications











