ಸತ್ಯೇಂದ್ರ ದಾಸ್ ದೇಹ ಸರಯೂ ನದಿಯಲ್ಲಿ ಜಲಸಮಾಧಿ..! ಯಾಕಾಗಿ ಈ ಸಂಪ್ರದಾಯ ಗೊತ್ತಾ?

ಅಯೋಧ್ಯೆ ಶ್ರೀರಾಮಮಂದಿರದ ಪ್ರಧಾನ ಅರ್ಚಕರಾಗಿದ್ದ ಆಚಾರ್ಯ ಸತ್ಯೇಂದ್ರ ದಾಸ್ ಅವರು ನಿಧನರಾಗಿರುವುದು ನಿಮಗೆಲ್ಲಾ ತಿಳಿದಿರಬಹುದು. ಬುಧವಾರ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. 30 ವರ್ಷಕ್ಕೂ ಹೆಚ್ಚು ಕಾಲ ರಾಮನಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದರು.

ಅಯೋಧ್ಯೆಯ ಈ ಜಾಗ ಸಮಸ್ಯೆ ಹುಟ್ಟಿಕೊಳ್ಳುವ ಮೊದಲೇ ಅವರು ರಾಮನಿಗೆ ಪೂಜೆ ಮಾಡುತ್ತಿದ್ದರು. ಅವರ ನಿಧನಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕೂಡ ಸಂತಾಪ ಸೂಚಿಸಿದ್ದರು. ನಿನ್ನೆ ಅವರ ಅಂತಿಮ ವಿಧಾನ ನಡೆಸಲಾಗಿದೆ. ಆದರೆ ಅವರ ಅಂತ್ಯಸಂಸ್ಕಾರ ಹಲವರಿಗೆ ಅಚ್ಚರಿ ತಂದಿದೆ. ಏಕೆಂದರೆ ಸಾಮಾನ್ಯವಾಗಿ ಅಗ್ನಿ ಸ್ಪರ್ಶ ಮಾಡದೆ ಅವರ ದೇಹವನ್ನು ಜಲ ಸಮಾಧಿ ಮಾಡಲಾಗಿದೆ.

Mortal Remains Of Satyendra Das Were Immersed In The Sacred Saryu River

ಸರಯು ನದಿಯಲ್ಲಿ ಅವರ ದೇಹವನ್ನು ಜಲ ಸಮಾಧಿ ಮಾಡಲಾಗಿದೆ. ಕೆಲವರಿಗೆ ಈ ಸಂಪ್ರದಾಯ ನೆರವೇರಿಸಿದ್ಯಾಕೆ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ನದಿಗೆ ದೇಹ ಎಸೆಯುವ ಪದ್ಧತೆ ಏಕಿದೆ ಎಂಬ ಗೊಂದಲಕ್ಕೆ ಬಿದ್ದಿದ್ದಾರೆ. ಹಲವರು ಇದನ್ನು ಪಶ್ನೆ ಮಾಡುತ್ತಿರುವುದು ಕೂಡ ನೋಡಿದ್ದೇವೆ. ಅದ್ರೆ ಈ ರೀತಿ ಜಲಸಮಾಧಿ ಹಿಂದಿನ ಸಂಪ್ರದಾಯ ಕುರಿತು ನಾವಿಂದು ತಿಳಿಸುತ್ತೇವೆ ನೋಡಿ.

ಹಿಂದೂ ಧರ್ಮದಲ್ಲಿ ಸಾಮಾನ್ಯ ಅಗ್ನಿ ಸ್ಪರ್ಶವೇ ಶ್ರೇಷ್ಠ ಎಂದು ನಂಬಲಾಗಿದೆ. ಆದರೆ ಸತ್ಯೇಂದ್ರ ದಾಸ್ ಅವರ ದೇಹವನ್ನು ಸರಾಯು ನದಿಯಲ್ಲಿ ಜಲ ಸಮಾಧಿ ಮಾಡಲಾಗಿದೆ. ನಿನ್ನ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರ ದೇಹವನ್ನು ಸಣ್ಣ ಬೋಟ್‌ನಲ್ಲಿ ತೆಗೆದುಕೊಂಡು ಹೋಗಿ ಜಲ ಸಮಾಧಿ ಮಾಡಿರುವ ವಿಡಿಯೋಗಳು ಹರಿದಾಡಿವೆ. ಸನಾತನ ಧರ್ಮದ ಆಚರಣೆಯಲ್ಲಿ ಈ ರೀತಿ ಜಲ ಸಮಾಧಿ ಅಪರೂಪದ ಪದ್ಧತಿಯಲ್ಲಿ ಒಂದಾಗಿದೆ.

ಪ್ರಾಚೀನ ಕಾಲದಲ್ಲಿ ಈ ಜಲಸಮಾಧಿ ಎಂಬ ಪದ್ಧತಿಯೇ ಉತ್ತುಂಗದಲ್ಲಿತ್ತು. ಮೃತರನ್ನು ನೀರಿನಲ್ಲಿ ತೇಲಿಬಿಡುವ ಪದ್ಧತಿ ವರ್ಷಗಳ ಮೊದಲೇ ನಡೆದುಬಂದಿತ್ತು. ವ್ಯಕ್ತಿಯೊಬ್ಬ ಮೃತಪಟ್ಟ ಬಳಿಕ ಆತನಿಗೆ ಮೋಕ್ಷ ಸಿಗಬೇಕಾದರ ಪಂಚಭೂತಗಳಲ್ಲಿ ಲೀನ ಮಾಡಬೇಕು ಎಂಬ ಮಾತಿದೆ. ಅದರಂತೆ ಅಗ್ನಿಯಲ್ಲಿ ಅಥವಾ ನೀರಿನ ಮೂಲದಲ್ಲಿ ದೇಹವನ್ನು ಸಮಾಧಿ ಮಾಡಲಾಗುತ್ತದೆ.

ಇನ್ನು ಜಲಸಮಾಧಿ ಮಾಡುವುದು ಬಹುಬೇಗ ಮೋಕ್ಷದ ದಾರಿಯಂತೆ. ಹೀಗಾಗಿ ಜಲಸಮಾಧಿ ಅಪರೂಪದ ವಿಧಾನವಾಗಿದೆ. ಸಾಧು ಸಂತರು, ತಪಸ್ವಿಗಳನ್ನು ಉಳಿದ ಸಾಮಾನ್ಯರಿಗಿಂತ ಭಿನ್ನ ಎಂದು ಪರಿಗಣಿಸಲಾಗಿದೆ. ಹೀಗಾಗಿ ಅವರ ದೇಹವನ್ನು ಸಲಸಮಾಧಿ ಮಾಡಲಾಗಿದೆ. ಮತ್ತೊಂದು ಕಡೆ ಸಾಧುಗಳ ದೇಹವು ದೈವಿಕ ಶಕ್ತಿ, ಧ್ಯಾನ, ತಪ್ಪಸ್ಸು ವಿಶೇಷ ಶಕ್ತಿಯಿಂದ ತುಂಬಿರುತ್ತದೆ ಹೀಗಾಗಿ ಅಗ್ನಿ ಸ್ಪರ್ಶದ ಬದಲಾಗಿ ಜಲಸಮಾಧಿ ಮಾಡಲಾಗುತ್ತದೆ.

ಧಾರ್ಮಿಕ ನಂಬಿಕೆಯ ಪ್ರಕಾರ ಗಂಗಾ, ನರ್ಮದಾ, ಸರಸ್ವತಿ, ಗೋದಾವರಿ, ಸರಾಯು ನದಿಯಲ್ಲಿ ಮೃತರ ದೇಹ ಬಿಡುವುದು ಮೋಕ್ಷಕ್ಕೆ ದಾರಿ ಎಂದು ನಂಬಲಾಗಿದೆ. ಆದರೆ ಈಗ ಯಾವುದೇ ನದಿಯಲ್ಲಿ ದೇಹ ಸಮರ್ಪಣೆ ಮಾಡುವಂತಿಲ್ಲ. ಹಾಗೆ ಪರಿಸರಕ್ಕೆ ಹಾನಿ ಇಲ್ಲದಂತೆ ದೇಹವನ್ನು ಮರಳಿ ಪಂಚಭೂತಗಳಿಗೆ ನೀಡಬೇಕು ಎಂಬ ನಿಯಮವೂ ಇದೆ. ಹೀಗಾಗಿ ಜಲಸಮಾಧಿ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಜಲಸಮಾಧಿಗೂ ಮುನ್ನ ನದಿ ತಟದಲ್ಲಿ ಅನೇಕ ಧಾರ್ಮಿಕ ಸಂಪ್ರದಾಯಗಳ ನೆರವೇರಿಸಿ ಬಳಿಕ ನದಿಯಲ್ಲಿ ಜಲಸಮಾಧಿ ಮಾಡಲಾಗುತ್ತದೆ.

ಜಲಸಮಾಧಿ ರಾಮಾಯಣಕ್ಕೂ ಇದೆ ನಂಟು

ಶ್ರೀರಾಮ ಇದೇ ಸರಯೂ ನದಿಯಲ್ಲಿ ತನ್ನ ದೇಹ ತ್ಯಾಗ ಮಾಡಿದ್ದಾನೆ ಎಂಬುದನ್ನು ರಾಮಾಯಣದಲ್ಲಿ ನಾವು ನೋಡಬಹುದು. ವಿಷ್ಣುವಿನ ಅವತಾರವಾಗಿದ್ದ ರಾಮ ಅಯೋಧ್ಯೆಯಲ್ಲಿ ಹರಿಯುವ ಸರಯು ನದಿಯಲ್ಲಿ ಮುಳುಗಿದ ಎಂಬುದನನ್ನು ವಿವರಿಸಲಾಗಿದೆ. ಭೂಮಿ ಮೇಲೆ ಬಂದ ಕಾರ್ಯ ಮುಗಿದಿದೆ ಎಂದು ಅರಿತ ರಾಮ ಕೊನೆಯದಾಗಿ ಅರಮನೆಯಿಂದ ಹೊರಡುತ್ತಾನೆ. ವೈಕುಂಠದ ದಾರಿಗಾಗಿ ಆತ ಹೊರಡುತ್ತಾನೆ.

ರಾಮನು ಹೊರಡಲು ಸಿದ್ಧವಾಗುತ್ತಿದ್ದಂತೆ ಸಹೋದರರಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರು ಅವನೊಂದಿಗೆ ಸೇರುತ್ತಾರೆ. ಸೀತೆ ಕೂಡ ರಾಮನ ಜೊತೆಗೆ ಹೊರಡುತ್ತಾಳೆ. ಆದರೆ ರಾಮನು ಸರಯೂ ನದಿಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾನೆ. ಅಲ್ಲಿಂದ ಆತ ನೇರ ವೈಕೂಂಠ ತಲುಪಿದ ಎಂಬ ನಂಬಿಕೆ ಇದೆ. ಹೀಗಾಗಿ ಜಲಸಮಾಧಿಗೆ ಪ್ರಾಮುಖ್ಯತೆ ನೀಡಲಾಗಿದೆ. ಈಗ ರಾಮನನ್ನು ದಶಕಗಳಿಂದ ಪೂಜೆ ಮಾಡಿಕೊಂಡು ಬಂದಿದ್ದ ಸತ್ಯೇಂದ್ರ ದಾಸ್ ಅವರ ದೇಹವನ್ನು ಕೂಡ ಇದೆ ಸರಯೂ ನದಿಯಲ್ಲಿ ಜಲಸಮಾಧಿ ಮಾಡಲಾಗಿದೆ.

English summary

Mortal Remains Of Satyendra Das Were Immersed In The Sacred Saryu River

His body was buried in the Sarayu River. Some people have also questioned why this tradition was performed. They are confused about the practice of throwing the body into the river. We have also seen many people questioning this.
Story first published: Friday, February 14, 2025, 14:33 [IST]
X
Desktop Bottom Promotion