Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ದೆಹಲಿಯಲ್ಲಿ ಹೊಸ ರೀತಿ ಲಾಕ್ಡೌನ್..! ಇಂದಿನಿಂದ ಈ ಕೆಲಸಗಳು ಬಂದ್..!
ದೆಹಲಿಯಲ್ಲಿ ಮಾಲಿನ್ಯ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದು ನಿಮಗೆ ತಿಳಿದರಬಹುದು. ದೀಪಾವಳಿಯ ಬಳಿಕ ಅಲ್ಲಿ ಗ್ಯಾಸ್ ಚೇಂಬರ್ನಂತೆ ಗಾಳಿ ಬದಲಾಗಿದೆ. ಉಸಿರಾಡುವುದು ಜೀವಕ್ಕೆ ಅಪಾಯ ತರುವಷ್ಟು ಮಟ್ಟಕ್ಕೆ ವಿಷಕಾರಿಯಾಗಿ ಬದಲಾಗಿದೆ. ಹಾಗೆ ಈಗ ಮನೆಯಿಂದ ಹೊರಬರುವ ಮೊದಲು ಮಾಸ್ಕ್ ಧರಿಸಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ದೆಹಲಿಯ ಮಾಲಿನ್ಯ ಕಡಿಮೆ ಮಾಡಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಹೀಗಾಗಿ ಕಮಿಟಿಗಳು, ಸಭೆಗಳು ಹೀಗೆ ಹತ್ತಾರು ಕ್ರಿಯಾ ಸಮಿತಿಯ ಸಭೆಯ ಬಳಿಕ ಒಂದಿಷ್ಟು ಕ್ರಮಕ್ಕೆ ಮುಂದಾಗಲಾಗಿದೆ. ಹೀಗಾಗಿ ಇಂದಿನಿಂದಲೇ ಕೆಲವೊಂದು ನಿಯಮಗಳ ಜಾರಿ ಮಾಡಲಾಗುತ್ತಿದೆ. ಕೇಂದ್ರದ ವಾಯು ಗುಣಮಟ್ಟ ಸಮಿತಿಯು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP)ನ 3ನೇ ಹಂತವನ್ನು ಜಾರಿ ಮಾಡಲು ಮುಂದಾಗಿದೆ.

ಇಂದು ಬೆಳಗ್ಗೆ 8 ಗಂಟೆಯಿಂದ ದೆಹಲಿ ಈ GRAP ಹಂತ-3 ಅನ್ನು ಅನುಸರಿಬೇಕಾಗುತ್ತದೆ. ಹಾಗಾದ್ರೆ ಏನಿದು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ 3ನೇ ಹಂತ? ಯಾವೆಲ್ಲಾ ನಿಯಮ ಇರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ನಿಯಮಗಳು ಒಂದು ರೀತಿ ನಮಗೆ ಕೋವಿಡ್ ಸಮಯದ ಲಾಕ್ಡೌನ್ ಅನ್ನು ನೆನಪಿಸುವಂತಿದೆ. ಕೆಲವೊಂದು ನಿಯಮಗಳು ಕೋವಿಡ್ ಲಾಕ್ಡೌನ್ ಸಮಯದಲ್ಲೂ ಕೂಡ ಜಾರಿಯಲ್ಲಿದ್ದವು ಎಂಬುದು ಕೂಡ ನೆನಪಿಗೆ ಬರುತ್ತದೆ. ಹಾಗಾದ್ರೆ ಏನಿದು ನಿಯಮಗಳು ಲಾಕ್ಡೌನ್ ನೆನಪಿಸುವುದು ಏಕೆ ಎಂಬುದನ್ನು ನಾವಿಲ್ಲಿ ತಿಳಿಯೋಣ.
ಯಾವೆಲ್ಲಾ ಕೆಲಸಗಳಿಗೆ ನಿಷೇಧ
- ದೆಹಲಿಯಲ್ಲಿ ಈಗಾಗಲೇ ದಟ್ಟ ಮಂಜು ಬೀಳಲು ಆರಂಭಿಸಿರುವುದರಿಂದ ಧೂಳು ಹೆಚ್ಚಳಕ್ಕೆ ಕಾರಣವಾಗುವಂತಹ ಕೆಲಸಗಳಿಗೆ ಬ್ರೇಕ್ ಹಾಕಲು ಮುಂದಾಗಲಾಗಿದೆ. ಹೀಗಾಗಿ ನೆಲವನ್ನು ಕೊರೆಯುವಂತಹ, ಶಂಕುಸ್ಥಾಪನೆ, ಕಟ್ಟಡ ಕೆಡುಗುವುದು ಸೇರಿ ಕಟ್ಟಡ ರಿಪೇರಿ ಕೆಲಸ ಮಾಡುವಂತಿಲ್ಲ.
- ತೆರೆದ ಚರಂಡಿ ಕಾಮಗಾರಿ, ನೀರಿನ ಮಾರ್ಗ, ಒಳಚರಂಡಿ, ವಿದ್ಯುತ್ ಕೇಬಲ್ ಅಳವಡಿಕೆ, ಇಟ್ಟಿಗೆ ಕೆಲಸ, ಕಲ್ಲಿನ ಕೆಲಸಗಳು, ಡ್ರಿಲ್ಲಿಂಗ್ ಕೆಲಸ ನಿಷೇಧ.
- ಆರ್ಎಂಸಿ ಬ್ಯಾಚಿಂಗ್ ಪ್ಲಾಂಟ್ನ ಕಾರ್ಯಾಚರಣೆ
- ವೆಲ್ಡಿಂಗ್ ಮತ್ತು ಗ್ಯಾಸ್-ಕಟಿಂಗ್, ಗ್ಲಾಸ್ ವರ್ಕಿಂಗ್, ಸಿಮೆಂಟ್ ಆಧಾರಿತ ಕೆಲಸಗಳ ಮಾಡುವಂತಿಲ್ಲ.
- ಗೋಡೆಗಳ ಪ್ಲಾಸ್ಟರ್ / ಲೇಪನಗಳು, ದುರಸ್ತಿ, ಬಣ್ಣ, ವಾರ್ನಿಷಿಂಗ್, ವಾಷಿಂಗ್, ಧೂಳು ಹೊಡೆಯುವುದು ಇತ್ಯಾದಿ ಕೆಲಸಕ್ಕೆ ತಡೆ.
- ವಾಟರ್ ಪ್ರೂಫಿಂಗ್, ರಸ್ತೆ ನಿರ್ಮಾಣ, ಕಲ್ಲು ಪುಡಿ ಮಾಡುವುದು, ದೊಡ್ಡ ಕಾರ್ಖಾನೆಗಳಲ್ಲಿ ಹಾರು ಬೂದಿ ಉಗುಳುವ ಕೆಲಸ ನಡೆಸುವಂತಿಲ್ಲ.
- ತ್ಯಾಜ್ಯ ಸುಡುವುದು, ಕಲ್ಲು ಕ್ರಷರ್ಗಳು, ಗಣಿಗಾರಿಕೆ,
- ಬೃಹತ್ ವಾಹನಗಳ ಓಟಾಟ ಆಯಾ ಸ್ಥಳೀಯ ಆಡಳಿತದ ತೀರ್ಮಾನಕ್ಕೆ ಬಿಡಲಾಗಿದೆ.
- ರಾಜ್ಯ ಸರ್ಕಾರಗಳು ಎನ್ಸಿಆರ್ನಲ್ಲಿ ಮತ್ತು ಜಿಎನ್ಸಿಟಿಡಿ ಐದನೇ ತರಗತಿಯವರೆಗಿನ ಮಕ್ಕಳಿಗೆ ದೈಹಿಕ ತರಗತಿಗಳನ್ನು ನಿಲ್ಲಿಸುವ ಮತ್ತು ಆನ್ಲೈನ್ ತರಗತಿಗಳನ್ನು ನಡೆಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಯಾವೆಲ್ಲಾ ಕೆಲಸಕ್ಕೆ ಅನುಮತಿ
- ರೈಲ್ವೆ ಸೇವೆಗಳು ಮತ್ತು ನಿಲ್ದಾಣಗಳ ಅಭಿವೃದ್ಧಿ ಕಾರ್ಯ
- ಮೆಟ್ರೂ ರೈಲು
- ನಗರ ಸಾರಿಗೆ ಬಸ್ಗಳು
- ಆಸ್ಪತ್ರೆಗಳ ಕಾರ್ಯಾಚರಣೆ
- ಅಗತ್ಯ ವೈದ್ಯಕೀಯ ಸೇವಾ ಬೃಹತ್ ವಾಹನಗಳ ಓಡಾಟಗಳು
- ಸರಕು ಸಾಗಣೆ



Click it and Unblock the Notifications