Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ದೆಹಲಿಯಲ್ಲಿ ಹೊಸ ರೀತಿ ಲಾಕ್ಡೌನ್..! ಇಂದಿನಿಂದ ಈ ಕೆಲಸಗಳು ಬಂದ್..!
ದೆಹಲಿಯಲ್ಲಿ ಮಾಲಿನ್ಯ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದು ನಿಮಗೆ ತಿಳಿದರಬಹುದು. ದೀಪಾವಳಿಯ ಬಳಿಕ ಅಲ್ಲಿ ಗ್ಯಾಸ್ ಚೇಂಬರ್ನಂತೆ ಗಾಳಿ ಬದಲಾಗಿದೆ. ಉಸಿರಾಡುವುದು ಜೀವಕ್ಕೆ ಅಪಾಯ ತರುವಷ್ಟು ಮಟ್ಟಕ್ಕೆ ವಿಷಕಾರಿಯಾಗಿ ಬದಲಾಗಿದೆ. ಹಾಗೆ ಈಗ ಮನೆಯಿಂದ ಹೊರಬರುವ ಮೊದಲು ಮಾಸ್ಕ್ ಧರಿಸಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ದೆಹಲಿಯ ಮಾಲಿನ್ಯ ಕಡಿಮೆ ಮಾಡಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಹೀಗಾಗಿ ಕಮಿಟಿಗಳು, ಸಭೆಗಳು ಹೀಗೆ ಹತ್ತಾರು ಕ್ರಿಯಾ ಸಮಿತಿಯ ಸಭೆಯ ಬಳಿಕ ಒಂದಿಷ್ಟು ಕ್ರಮಕ್ಕೆ ಮುಂದಾಗಲಾಗಿದೆ. ಹೀಗಾಗಿ ಇಂದಿನಿಂದಲೇ ಕೆಲವೊಂದು ನಿಯಮಗಳ ಜಾರಿ ಮಾಡಲಾಗುತ್ತಿದೆ. ಕೇಂದ್ರದ ವಾಯು ಗುಣಮಟ್ಟ ಸಮಿತಿಯು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP)ನ 3ನೇ ಹಂತವನ್ನು ಜಾರಿ ಮಾಡಲು ಮುಂದಾಗಿದೆ.

ಇಂದು ಬೆಳಗ್ಗೆ 8 ಗಂಟೆಯಿಂದ ದೆಹಲಿ ಈ GRAP ಹಂತ-3 ಅನ್ನು ಅನುಸರಿಬೇಕಾಗುತ್ತದೆ. ಹಾಗಾದ್ರೆ ಏನಿದು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ 3ನೇ ಹಂತ? ಯಾವೆಲ್ಲಾ ನಿಯಮ ಇರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ನಿಯಮಗಳು ಒಂದು ರೀತಿ ನಮಗೆ ಕೋವಿಡ್ ಸಮಯದ ಲಾಕ್ಡೌನ್ ಅನ್ನು ನೆನಪಿಸುವಂತಿದೆ. ಕೆಲವೊಂದು ನಿಯಮಗಳು ಕೋವಿಡ್ ಲಾಕ್ಡೌನ್ ಸಮಯದಲ್ಲೂ ಕೂಡ ಜಾರಿಯಲ್ಲಿದ್ದವು ಎಂಬುದು ಕೂಡ ನೆನಪಿಗೆ ಬರುತ್ತದೆ. ಹಾಗಾದ್ರೆ ಏನಿದು ನಿಯಮಗಳು ಲಾಕ್ಡೌನ್ ನೆನಪಿಸುವುದು ಏಕೆ ಎಂಬುದನ್ನು ನಾವಿಲ್ಲಿ ತಿಳಿಯೋಣ.
ಯಾವೆಲ್ಲಾ ಕೆಲಸಗಳಿಗೆ ನಿಷೇಧ
- ದೆಹಲಿಯಲ್ಲಿ ಈಗಾಗಲೇ ದಟ್ಟ ಮಂಜು ಬೀಳಲು ಆರಂಭಿಸಿರುವುದರಿಂದ ಧೂಳು ಹೆಚ್ಚಳಕ್ಕೆ ಕಾರಣವಾಗುವಂತಹ ಕೆಲಸಗಳಿಗೆ ಬ್ರೇಕ್ ಹಾಕಲು ಮುಂದಾಗಲಾಗಿದೆ. ಹೀಗಾಗಿ ನೆಲವನ್ನು ಕೊರೆಯುವಂತಹ, ಶಂಕುಸ್ಥಾಪನೆ, ಕಟ್ಟಡ ಕೆಡುಗುವುದು ಸೇರಿ ಕಟ್ಟಡ ರಿಪೇರಿ ಕೆಲಸ ಮಾಡುವಂತಿಲ್ಲ.
- ತೆರೆದ ಚರಂಡಿ ಕಾಮಗಾರಿ, ನೀರಿನ ಮಾರ್ಗ, ಒಳಚರಂಡಿ, ವಿದ್ಯುತ್ ಕೇಬಲ್ ಅಳವಡಿಕೆ, ಇಟ್ಟಿಗೆ ಕೆಲಸ, ಕಲ್ಲಿನ ಕೆಲಸಗಳು, ಡ್ರಿಲ್ಲಿಂಗ್ ಕೆಲಸ ನಿಷೇಧ.
- ಆರ್ಎಂಸಿ ಬ್ಯಾಚಿಂಗ್ ಪ್ಲಾಂಟ್ನ ಕಾರ್ಯಾಚರಣೆ
- ವೆಲ್ಡಿಂಗ್ ಮತ್ತು ಗ್ಯಾಸ್-ಕಟಿಂಗ್, ಗ್ಲಾಸ್ ವರ್ಕಿಂಗ್, ಸಿಮೆಂಟ್ ಆಧಾರಿತ ಕೆಲಸಗಳ ಮಾಡುವಂತಿಲ್ಲ.
- ಗೋಡೆಗಳ ಪ್ಲಾಸ್ಟರ್ / ಲೇಪನಗಳು, ದುರಸ್ತಿ, ಬಣ್ಣ, ವಾರ್ನಿಷಿಂಗ್, ವಾಷಿಂಗ್, ಧೂಳು ಹೊಡೆಯುವುದು ಇತ್ಯಾದಿ ಕೆಲಸಕ್ಕೆ ತಡೆ.
- ವಾಟರ್ ಪ್ರೂಫಿಂಗ್, ರಸ್ತೆ ನಿರ್ಮಾಣ, ಕಲ್ಲು ಪುಡಿ ಮಾಡುವುದು, ದೊಡ್ಡ ಕಾರ್ಖಾನೆಗಳಲ್ಲಿ ಹಾರು ಬೂದಿ ಉಗುಳುವ ಕೆಲಸ ನಡೆಸುವಂತಿಲ್ಲ.
- ತ್ಯಾಜ್ಯ ಸುಡುವುದು, ಕಲ್ಲು ಕ್ರಷರ್ಗಳು, ಗಣಿಗಾರಿಕೆ,
- ಬೃಹತ್ ವಾಹನಗಳ ಓಟಾಟ ಆಯಾ ಸ್ಥಳೀಯ ಆಡಳಿತದ ತೀರ್ಮಾನಕ್ಕೆ ಬಿಡಲಾಗಿದೆ.
- ರಾಜ್ಯ ಸರ್ಕಾರಗಳು ಎನ್ಸಿಆರ್ನಲ್ಲಿ ಮತ್ತು ಜಿಎನ್ಸಿಟಿಡಿ ಐದನೇ ತರಗತಿಯವರೆಗಿನ ಮಕ್ಕಳಿಗೆ ದೈಹಿಕ ತರಗತಿಗಳನ್ನು ನಿಲ್ಲಿಸುವ ಮತ್ತು ಆನ್ಲೈನ್ ತರಗತಿಗಳನ್ನು ನಡೆಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಯಾವೆಲ್ಲಾ ಕೆಲಸಕ್ಕೆ ಅನುಮತಿ
- ರೈಲ್ವೆ ಸೇವೆಗಳು ಮತ್ತು ನಿಲ್ದಾಣಗಳ ಅಭಿವೃದ್ಧಿ ಕಾರ್ಯ
- ಮೆಟ್ರೂ ರೈಲು
- ನಗರ ಸಾರಿಗೆ ಬಸ್ಗಳು
- ಆಸ್ಪತ್ರೆಗಳ ಕಾರ್ಯಾಚರಣೆ
- ಅಗತ್ಯ ವೈದ್ಯಕೀಯ ಸೇವಾ ಬೃಹತ್ ವಾಹನಗಳ ಓಡಾಟಗಳು
- ಸರಕು ಸಾಗಣೆ



Click it and Unblock the Notifications