Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸುಪ್ರೀಂಕೋರ್ಟ್ನಲ್ಲಿ ಅಂಚೆ ಚೀಟಿ ಬಿಡುಗಡೆ ವೇಳೆ ಮೋದಿ ನಡೆದುಕೊಂಡ ರೀತಿಗೆ ಭಾರೀ ಮೆಚ್ಚುಗೆ
ಸಮಾಜದ ಪರಿವರ್ತನೆಗೆ ಮುಂದಾಗುವ ಮುನ್ನ ಮೊದಲು ತಾನು ಬದಲಾಗಬೇಕು, ಆವಾಗ ಮಾತ್ರ ನಮ್ಮ ಯೋಚನೆಗಳು ಪರಿಣಾಮಕಾರಿಯಾಗಲು ಸಾಧ್ಯ, ಅದರಲ್ಲಿ ನಮ್ಮ ನಾಯಕರುಗಳು ಹೇಗೆ ಇರಬೇಕೆಂದರೆ ನಮಗೆ ಮಾದರಿಯಾಗಿರಬೇಕು, ಆವಾಗ ಅವರ ಮೇಲಿನ ನಂಬಿಕೆ, ಗೌರವ ಮತ್ತಷ್ಟು ಹೆಚ್ಚಾಗುವುದು, ಇಂದು ಮೋದಿ ನಡೆದುಕೊಂಡ ರೀತಿಯೂ ಅಷ್ಟೇ ಪಕ್ಷ ಬೇಧವಿಲ್ಲದೆ ಮೆಚ್ಚಿಕೊಳ್ಳಬೇಕಾಗಿದ್ದೇ...

ದೇಶಕ್ಕಾಗಿ ಮಾಡುವ ಒಳ್ಳೆಯ ಕಾರ್ಯಕ್ಕೆ ಅಲ್ಲಿ ಪಕ್ಷ ನೋಡಬಾರದು, ಅವರ ಕಾರ್ಯಗಳನ್ನಷ್ಟೇ ನೋಡಬೇಕು. ಸ್ವಚ್ಛಭಾರತ ಅಭಿಯಾನಕ್ಕೆ ಕರೆಕೊಟ್ಟವರು ಮೋದಿ, ಆದರೆ ಭಾರತ ಸ್ವಚ್ಛವಾಗಿ ಇದ್ದರೆ ಅದು ನಮ್ಮ ಸ್ವಾಸ್ಥ್ಯಕ್ಕೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು, ಅದರೆ ಇದಕ್ಕಾಗಿ ಒಬ್ಬರು ಮನಸ್ಸು ಮಾಡಿದರೆ ಸಾಲದು ಪ್ರತಿಯೊಬ್ಬ ಪ್ರಜೆಯೂ ಕರ್ತವ್ಯದಿಂದ ವರ್ತಿಸಬೇಕು, ಅಲ್ಲದೆ ಸಾಮಾನ್ಯ ಜನರು ನಮ್ಮ ಜನ ನಾಯಕರನ್ನು , ಸೆಲೆಬ್ರಿಟಿಗಳನ್ನು ನೋಡಿ ಅವರಂತೆ ಅನುಸರಿಸುತ್ತಾರೆ. ಮೋದಿಯವರು ಎಲ್ಲೇ ಹೋಗಲಿ ಸ್ವಚ್ಛಭಾರತದ ಕಡೆಗೆ ಗಮನಹರಿಸುತ್ತಾರೆ, ಇದೀಗ ಅವರೆಷ್ಟು ಮುತುವರ್ಜಿ ವಹಿಸುತ್ತಾರೆ ಎಂಬ ವೀಡಿಯೋ ವೈರಲ್ ಅಗುತ್ತಿದೆ, ಅಲ್ಲದೆ ಅವರ ನಡೆ ಪ್ರತಿಯೊಬ್ಬರಿಗೂ ಒಳ್ಳೆಯ ಪಾಠ ಎಂಬುವುದರಲ್ಲಿ ನೋ ಡೌಟ್.
Notice how PM Modi didn't throw the Ribbon.
— Ankur Singh (@iAnkurSingh) August 31, 2024
He put it in his Pocket.
He leads by example on how to make India a Swachh Bharat. pic.twitter.com/zqO73brfn7
ಸುಪ್ರೀಕೋರ್ಟ್ನಲ್ಲಿ ಅಂಜೆ ಚೀಟಿ ಬಿಡುಗಡೆಯ ಕಾರ್ಯಕ್ರಮವಿತ್ತು, ಅದರಲ್ಲಿ ಭಾಗವಹಿಸಿದ ಪ್ರಧಾನಿ ಹೊಸ ಅಂಚೆ ಚೀಟಿ ಬಿಡುಗಡೆ ಮಾಡಿದರು, ಆ ವೇಳೆ ಅವರಿಗೆ ರಿಬ್ಬನ್ ಸುತ್ತಿದ ಅಂಚೆ ಚೀಟಿ ಇರುವ ಪುಸ್ತಕಾನೀಡಲಾಯ್ತು, ಸಾಮಾನ್ಯವಾಗಿ ಈ ರೀತಿಯ ಬಿಡುಗಡೆಯ ಕಾರ್ಯದಲ್ಲಿ ರಿಬ್ಬನ್ ಕಟ್ಟಿರುತ್ತಾರೆ ಅಲ್ವಾ ಅದೇ ರೀತಿ, ಇಲ್ಲಿಯೂ ಕಟ್ಟಲಾಗಿತ್ತು, ಮೋದಿಯವರು ಆ ರಿಬ್ಬನ್ ಬಿಚ್ಚಿ ಮಡಚಲಾಂಭಿಸುತ್ತಾರೆ, ಅಲ್ಲಿದ್ದವರು ಅದನ್ನು ಗಮನಿಸುತ್ತಾ ಇರುತ್ತಾರೆ. ಮೋದಿ ಅದನ್ನು ಮಡಚಿ ಜೇನಿನಲ್ಲಿಟ್ಟು ನಂತರ ಅಂಚೆ ಚೀಟಿ ಬುಡುಗಡೆ ಮಾಡುತ್ತಾರೆ. ಅವರು ಆ ರಿಬ್ಬನ್ ಕೆಳಗಡೆ ಹಾಕಲಿಲ್ಲ, ಯಾರ ಕೈಗೂ ನೀಡಲಿಲ್ಲ, ಬದಲಿಗೆ ಮಡಚಿ ಜೇನಿನಲ್ಲಿಟ್ಟ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತದೆ. ನಾವು ಹೇಳುವುದು ಮಾತ್ರವಲ್ಲ ಅದರಂತೆ ನಡೆಯಬೇಕು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ
ಮೋದಿ ಕಸ ಗುಡಿಸಿದಾಗ ಟೀಕೆ ಹೇಳಿದ್ದರು
ಸ್ವಚ್ಛ ಭಾರತ ಅಭಿಯಾನದಲ್ಲಿ ಮೋದಿ ಕಸ ಗುಡಿಸಿದಾಗ ಅದನ್ನು ಪ್ರಚಾರ ಮಾಡಲು ಮಾಡಿರುವ ಗಿಮಿಕ್ಕು ಎಂದು ಟೀಕೆ ಮಾಡಿದ್ದರು, ಆದರೆ ಮೋದಿ ಸ್ವಚ್ಛ ಭಾರತ ಅಭಿಯಾನವನ್ನು ಮನಸ್ಸಿನಿಂದ ಮಾಡುತ್ತಿದ್ದಾರೆ ಎಂಬುವುದು ಅವರ ಈ ವರ್ತನೆಗಳು ಸಾಬೀತು ಪಡಿಸುತ್ತದೆ. ದೆಶದ ಪ್ರಧಾನಿಯೇ ಕಸ ಅಂತ ಬಿಸಾಡದೆ ಜೇಬನಿನಲ್ಲಿ ಇಡುವಾಗ ಇದನ್ನು ನೋಡಿ ಅನುಸರಿಸುವವರು ಲಕ್ಷಾಂತರ ಮಂದಿ ಇರುತ್ತಾರೆ, ಹಾಗಾಗಿ ನಾಯಕಗಳು ತಾವು ನುಡಿದಂತೆ ನಡೆದರೆ
ಅದನ್ನು ಜನ ಸಾಮಾನ್ಯರು ಅನುಸರಿಸುತ್ತಾರೆ.
ನಾವು ಕಸ ಎಸೆದ ಮಾತ್ರಕ್ಕೆ ಕಸದ ರಾಶಿಯಾಗುತ್ತಾ ಎಂದು ಯೋಚಿಸಬೇಡಿ
ಹನಿ ಹನಿ ಕೂಡಿದರೆ ಹಳ್ಳ ಎಂದು ಹೇಳುವಂತೆ ನೀವು ಒಂದು ಕಸ ಎಸೆದರೆ ಅದೇ ರೀತಿ ಸಾವಿರ ಜನ ಎಸೆದರೆ ಕಸದ ರಾಶಿಯೇ ಆಗುತ್ತದೆ ಅಲ್ವಾ? ನಾವು ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸಿಕ್ಕಿ ಸಿಕ್ಕಿದ್ದಲ್ಲಿ ಕಸವನ್ನು ಎಸೆಯಬೇಡಿ, ಸ್ವಚ್ಛಭಾರತ ಅಭಿಯಾನಕ್ಕೆ ಕೈ ಜೋಡಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.



Click it and Unblock the Notifications









