Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಧುನಿಕ ರಾಮಾಯಣ: ವೇದಿಕೆಯಲ್ಲಿ ರಾಮನನ್ನೇ ಥಳಿಸಿದ ರಾವಣ!
ರಾಮಾಯಣ ನಾಟಕ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿ ನಡೆಯುತ್ತೆ, ರಾಮಾಯಣವು ಹಲವಾರು ಕವಿಗಳು ಹಲವಾರು ರೀತಿಯಲ್ಲಿ ಬರೆದಿದ್ದಾರೆ. ಆದರೆ ನಾವು ಒಪ್ಪಿಕೊಂಡಿರುವುದು ವಾಲ್ಮಿಕಿ ಮಹರ್ಷಿ ಬರೆದಿರುವ ರಾಮಾಯಣವನ್ನು. ಇಲ್ಲಿ ರಾಮನ ಪತ್ನಿ ಸೀತೆಯನ್ನು ರಾವಣ ಅಪಹರಿಸುವುದು ಒಂದು ತಿರುವು. ಇದೇ ರಾವಣನ ಹತ್ಯೆಗೂ ಕಾರಣವಾಗುವ ಅಂಶವಾಗುತ್ತದೆ.
ಈ ನಡುವೆ ರಾಮ ಲಕ್ಷ್ಮಣರು ಸೀತೆಯ ಹುಡುಕುವಾಗ ಏನೆಲ್ಲಾ ನಡೆಯಿತು ಎಂಬುದೇ ಸ್ವಾರಸ್ಯಕರ ವಿಚಾರಗಳು. ರಾಮಾಯಣ ಮಹಾಕಾವ್ಯದಲ್ಲಿ ರಾಮ ರಾವಣರ ಯುದ್ಧ ಅತ್ಯಂತ ರೋಚಕ ಘಟ್ಟ. ಹಾಗೆ ಈ ಯುದ್ಧವನ್ನು ಒಬ್ಬೊಬ್ಬರು ಒಂದೊಂದು ರೀತಿ ಬಣ್ಣಿಸುವುದು ಉಂಟು. ಆದರೆ ಕೊನೆಯಲ್ಲಿ ಗೆಲ್ಲುವು ರಾಮನೆ ಹೊರತು ರಾವಣನಲ್ಲ.

ಆದ್ರೆ ಇಲ್ಲೊಂದು ನಾಟಕದಲ್ಲಿ ರಾವಣನ ಬದಲಾಗಿ ರಾಮ ನೆಲಕ್ಕೆ ಬೀಳಬೇಕಾದ ಸ್ಥಿತಿ ಬಂದೊದಗಿದೆ. ಹೌದು ರಾಮಾಯಣ ನಾಟಕದ ನಡುವೆ ರಾವಣ ರಾಮನನ್ನೇ ಹೊಡೆದು ನೆಲಕ್ಕೆ ಉರುಳಿಸಿರುವುದು ಅಚ್ಚರಿ ಜೊತೆಗೆ ಕುತೂಹಲ ಮೂಡಿಸಿದೆ. ನಾಟಕದ ನಡುವೆ ರಾಮ ಪಾತ್ರದಾರಿಗೂ ರಾವಣ ಪಾತ್ರದಾರಿಗೂ ಗಲಾಟೆ ನಡೆದು ರಾವಣ ರಾಮನ ಮೇಲೆ ಸಿಟ್ಟಿಗೆದ್ದು ನೆಲಕ್ಕೆ ಉರುಳಿಸಿದ್ದಾರೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಮ್ರೋಹದಲ್ಲಿ, ಇಲ್ಲಿ ದಸರಾ ಹಿನ್ನೆಲೆ ರಾಮ್ಲೀಲಾ ನಾಟಕ ಪ್ರದರ್ಶನವಾಗುತ್ತಿತ್ತು. ಈ ನಾಟಕ ನೋಡಲು ನೂರಾರು ಮಂದಿ ನೆರೆದಿದ್ದರು. ನಾಟಕ ಎಂದಿನಂತೆಯೆ ನಡೆಯುತ್ತಿತ್ತು. ನಾಟಕ ನೋಡ ನೋಡುತ್ತಾ ಕೊನೆಯ ಘಟ್ಟ ತಲುಪಿತ್ತು, ರಾಮ ರಾವಣರ ನಡುವಿನ ಯುದ್ಧದ ಬಳಿಕ ನೆರೆದ ಪ್ರೇಕ್ಷಕರು ಮನೆ ಕಡೆ ತರಳುವ ಅವಸರದಲ್ಲಿದ್ದರು.
ಆದ್ರೆ ಅಚಾನಕ್ ಆಗಿ ವೇದಿಕೆ ಮೇಲೆ ಗಲಾಟೆ ಎದ್ದಿದೆ. ಅಲ್ಲಿ ರಾಮ-ರಾವಣ ಹಾಗೂ ಲಕ್ಷ್ಮಣರು ವೇದಿಕೆ ಮೇಲಿದ್ದು ರಾಮ ಹಾಗೂ ರಾವಣನ ನಡುವೆ ಯುದ್ಧದ ಸನ್ನಿವೇಶ ನಡೆಯುತ್ತಿದೆ. ಆದರೆ ರಾವಣ ಯಾವುದೋ ವಿಚಾರಕ್ಕೆ ರೊಚ್ಚಿಗೆದ್ದು ರಾಮನ ಮೇಲೆ ಎರಗಿದ್ದಾನೆ. ಎಲ್ಲರು ಏನಾಗುತ್ತಿದೆ ಎಂದು ನೋಡುವಾಗಲೇ ರಾಮನಿಗೆ ಥಳಿಸಿ ಕೆಳಗೆ ಬೀಳಿಸಿದ್ದಾನೆ.
ಈ ವಿಡಿಯೋವನ್ನು ಎಕ್ಸ್ನಲ್ಲಿ ಸಚಿನ್ ಗುಪ್ತಾ ಎಂಬುವರು ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ಬಿಲ್ಲು ಬಾಣ ಹಿಡಿದು ಹೋರಾಡುತ್ತಿದ್ದ ಭಗವಾನ್ ರಾಮ ಹಾಗೂ ರಾವಣನ ನಡುವೆ ನಿಜವಾಗಿಯೂ ಕಾಳಗ ನಡೆದಿದೆ ಎಂದು ವಿಡಿಯೋ ವಿವರಿಸುತ್ತಿದೆ. ಮೊದಲಿಗೆ ಎಲ್ಲರು ಇದೊಂದು ನೈಜ ರೀತಿ ನಟಿಸುತ್ತಿದ್ದಾರೆ ಎಂದುಕೊಂಡಿದ್ದಾರೆ, ಆದರೆ ರಾವಣ ಕೈ ಕೈ ಮಿಲಾಯಿಸಿ ರಾಮನನ್ನು ಕೆಳಗೆ ಬೀಳಿಸಿದಾಗ ಎಲ್ಲರಿಗೂ ಅಲ್ಲೇನೋ ನಡೆಯುತ್ತಿದೆ ಎಂಬುದು ಅರಿವಿಗೆ ಬಂದಿದೆ.
ಈ ವಿಡಿಯೋವನ್ನು ಬರೋಬ್ಬರಿ 12 ಸಾವಿರ ಮಂದಿ ವೀಕ್ಷಿಸಿದ್ದಾರೆ. ಹಾಗೆ ಸಾವಿರಾರು ಕಮೆಂಟ್ಗಳು ಬಂದಿವೆ. ಜನರು ತಾಳ್ಮೆ ಕಳೆದುಕೊಂಡಾಗ ರಾವಣರಾಗಿ ಬದಲಾಗುತ್ತಾರೆ. ಇಲ್ಲಿಯೂ ಆಗಿರುವುದು ಇದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇದು ನಿಜವಾದ ರಾಮಲೀಲಾ, ರಾಮ ಮೊದಲು ಸೋತರು ಆಮೇಲೆ ಗೆದ್ದಿದ್ದು ಆತನೇ ಎಂದು ಬರೆದುಕೊಂಡಿದ್ದಾರೆ.
ಈ ನಾಟಕ ಈ ಕಾಳಗದ ನಂತರ ಅರ್ಧಕ್ಕೆ ಕೊನೆಯಾಗಿದೆ ಎಂದು ತಿಳಿದುಬಂದಿದೆ. ಈ ಜಗಳದ ಬಳಿಕ ಪ್ರೇಕ್ಷಕರಲ್ಲಿ ಆಯೋಜಕರು ಕ್ಷಮೆಯಾಚಿಸಿದ್ದಾರೆ ಎಂದು ಸಹ ವರದಿಯಾಗಿದೆ.
ಹಾಗೆ ಪೌರಾಣಿಕ ನಾಟಕದ ವೇಳೆ ಪಾತ್ರದಾರಿಗಳು ಈ ರೀತಿ ನಡೆದುಕೊಳ್ಳಬಾರದಿತ್ತು, ಪಾತ್ರ ಮಾಡುವಾಗ ಆ ಪಾತ್ರಕ್ಕೆ ನ್ಯಾಯ ಒದಗಿಸಬೇಕು. ತಮ್ಮ ತಮ್ಮ ವೈಯಕ್ತಿಕ ವಿಚಾರಗಳನ್ನು ವೇದಿಕೆಗೆ ತರಬಾರದು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.



Click it and Unblock the Notifications