Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಆಧುನಿಕ ರಾಮಾಯಣ: ವೇದಿಕೆಯಲ್ಲಿ ರಾಮನನ್ನೇ ಥಳಿಸಿದ ರಾವಣ!
ರಾಮಾಯಣ ನಾಟಕ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿ ನಡೆಯುತ್ತೆ, ರಾಮಾಯಣವು ಹಲವಾರು ಕವಿಗಳು ಹಲವಾರು ರೀತಿಯಲ್ಲಿ ಬರೆದಿದ್ದಾರೆ. ಆದರೆ ನಾವು ಒಪ್ಪಿಕೊಂಡಿರುವುದು ವಾಲ್ಮಿಕಿ ಮಹರ್ಷಿ ಬರೆದಿರುವ ರಾಮಾಯಣವನ್ನು. ಇಲ್ಲಿ ರಾಮನ ಪತ್ನಿ ಸೀತೆಯನ್ನು ರಾವಣ ಅಪಹರಿಸುವುದು ಒಂದು ತಿರುವು. ಇದೇ ರಾವಣನ ಹತ್ಯೆಗೂ ಕಾರಣವಾಗುವ ಅಂಶವಾಗುತ್ತದೆ.
ಈ ನಡುವೆ ರಾಮ ಲಕ್ಷ್ಮಣರು ಸೀತೆಯ ಹುಡುಕುವಾಗ ಏನೆಲ್ಲಾ ನಡೆಯಿತು ಎಂಬುದೇ ಸ್ವಾರಸ್ಯಕರ ವಿಚಾರಗಳು. ರಾಮಾಯಣ ಮಹಾಕಾವ್ಯದಲ್ಲಿ ರಾಮ ರಾವಣರ ಯುದ್ಧ ಅತ್ಯಂತ ರೋಚಕ ಘಟ್ಟ. ಹಾಗೆ ಈ ಯುದ್ಧವನ್ನು ಒಬ್ಬೊಬ್ಬರು ಒಂದೊಂದು ರೀತಿ ಬಣ್ಣಿಸುವುದು ಉಂಟು. ಆದರೆ ಕೊನೆಯಲ್ಲಿ ಗೆಲ್ಲುವು ರಾಮನೆ ಹೊರತು ರಾವಣನಲ್ಲ.

ಆದ್ರೆ ಇಲ್ಲೊಂದು ನಾಟಕದಲ್ಲಿ ರಾವಣನ ಬದಲಾಗಿ ರಾಮ ನೆಲಕ್ಕೆ ಬೀಳಬೇಕಾದ ಸ್ಥಿತಿ ಬಂದೊದಗಿದೆ. ಹೌದು ರಾಮಾಯಣ ನಾಟಕದ ನಡುವೆ ರಾವಣ ರಾಮನನ್ನೇ ಹೊಡೆದು ನೆಲಕ್ಕೆ ಉರುಳಿಸಿರುವುದು ಅಚ್ಚರಿ ಜೊತೆಗೆ ಕುತೂಹಲ ಮೂಡಿಸಿದೆ. ನಾಟಕದ ನಡುವೆ ರಾಮ ಪಾತ್ರದಾರಿಗೂ ರಾವಣ ಪಾತ್ರದಾರಿಗೂ ಗಲಾಟೆ ನಡೆದು ರಾವಣ ರಾಮನ ಮೇಲೆ ಸಿಟ್ಟಿಗೆದ್ದು ನೆಲಕ್ಕೆ ಉರುಳಿಸಿದ್ದಾರೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಮ್ರೋಹದಲ್ಲಿ, ಇಲ್ಲಿ ದಸರಾ ಹಿನ್ನೆಲೆ ರಾಮ್ಲೀಲಾ ನಾಟಕ ಪ್ರದರ್ಶನವಾಗುತ್ತಿತ್ತು. ಈ ನಾಟಕ ನೋಡಲು ನೂರಾರು ಮಂದಿ ನೆರೆದಿದ್ದರು. ನಾಟಕ ಎಂದಿನಂತೆಯೆ ನಡೆಯುತ್ತಿತ್ತು. ನಾಟಕ ನೋಡ ನೋಡುತ್ತಾ ಕೊನೆಯ ಘಟ್ಟ ತಲುಪಿತ್ತು, ರಾಮ ರಾವಣರ ನಡುವಿನ ಯುದ್ಧದ ಬಳಿಕ ನೆರೆದ ಪ್ರೇಕ್ಷಕರು ಮನೆ ಕಡೆ ತರಳುವ ಅವಸರದಲ್ಲಿದ್ದರು.
ಆದ್ರೆ ಅಚಾನಕ್ ಆಗಿ ವೇದಿಕೆ ಮೇಲೆ ಗಲಾಟೆ ಎದ್ದಿದೆ. ಅಲ್ಲಿ ರಾಮ-ರಾವಣ ಹಾಗೂ ಲಕ್ಷ್ಮಣರು ವೇದಿಕೆ ಮೇಲಿದ್ದು ರಾಮ ಹಾಗೂ ರಾವಣನ ನಡುವೆ ಯುದ್ಧದ ಸನ್ನಿವೇಶ ನಡೆಯುತ್ತಿದೆ. ಆದರೆ ರಾವಣ ಯಾವುದೋ ವಿಚಾರಕ್ಕೆ ರೊಚ್ಚಿಗೆದ್ದು ರಾಮನ ಮೇಲೆ ಎರಗಿದ್ದಾನೆ. ಎಲ್ಲರು ಏನಾಗುತ್ತಿದೆ ಎಂದು ನೋಡುವಾಗಲೇ ರಾಮನಿಗೆ ಥಳಿಸಿ ಕೆಳಗೆ ಬೀಳಿಸಿದ್ದಾನೆ.
ಈ ವಿಡಿಯೋವನ್ನು ಎಕ್ಸ್ನಲ್ಲಿ ಸಚಿನ್ ಗುಪ್ತಾ ಎಂಬುವರು ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ಬಿಲ್ಲು ಬಾಣ ಹಿಡಿದು ಹೋರಾಡುತ್ತಿದ್ದ ಭಗವಾನ್ ರಾಮ ಹಾಗೂ ರಾವಣನ ನಡುವೆ ನಿಜವಾಗಿಯೂ ಕಾಳಗ ನಡೆದಿದೆ ಎಂದು ವಿಡಿಯೋ ವಿವರಿಸುತ್ತಿದೆ. ಮೊದಲಿಗೆ ಎಲ್ಲರು ಇದೊಂದು ನೈಜ ರೀತಿ ನಟಿಸುತ್ತಿದ್ದಾರೆ ಎಂದುಕೊಂಡಿದ್ದಾರೆ, ಆದರೆ ರಾವಣ ಕೈ ಕೈ ಮಿಲಾಯಿಸಿ ರಾಮನನ್ನು ಕೆಳಗೆ ಬೀಳಿಸಿದಾಗ ಎಲ್ಲರಿಗೂ ಅಲ್ಲೇನೋ ನಡೆಯುತ್ತಿದೆ ಎಂಬುದು ಅರಿವಿಗೆ ಬಂದಿದೆ.
ಈ ವಿಡಿಯೋವನ್ನು ಬರೋಬ್ಬರಿ 12 ಸಾವಿರ ಮಂದಿ ವೀಕ್ಷಿಸಿದ್ದಾರೆ. ಹಾಗೆ ಸಾವಿರಾರು ಕಮೆಂಟ್ಗಳು ಬಂದಿವೆ. ಜನರು ತಾಳ್ಮೆ ಕಳೆದುಕೊಂಡಾಗ ರಾವಣರಾಗಿ ಬದಲಾಗುತ್ತಾರೆ. ಇಲ್ಲಿಯೂ ಆಗಿರುವುದು ಇದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇದು ನಿಜವಾದ ರಾಮಲೀಲಾ, ರಾಮ ಮೊದಲು ಸೋತರು ಆಮೇಲೆ ಗೆದ್ದಿದ್ದು ಆತನೇ ಎಂದು ಬರೆದುಕೊಂಡಿದ್ದಾರೆ.
ಈ ನಾಟಕ ಈ ಕಾಳಗದ ನಂತರ ಅರ್ಧಕ್ಕೆ ಕೊನೆಯಾಗಿದೆ ಎಂದು ತಿಳಿದುಬಂದಿದೆ. ಈ ಜಗಳದ ಬಳಿಕ ಪ್ರೇಕ್ಷಕರಲ್ಲಿ ಆಯೋಜಕರು ಕ್ಷಮೆಯಾಚಿಸಿದ್ದಾರೆ ಎಂದು ಸಹ ವರದಿಯಾಗಿದೆ.
ಹಾಗೆ ಪೌರಾಣಿಕ ನಾಟಕದ ವೇಳೆ ಪಾತ್ರದಾರಿಗಳು ಈ ರೀತಿ ನಡೆದುಕೊಳ್ಳಬಾರದಿತ್ತು, ಪಾತ್ರ ಮಾಡುವಾಗ ಆ ಪಾತ್ರಕ್ಕೆ ನ್ಯಾಯ ಒದಗಿಸಬೇಕು. ತಮ್ಮ ತಮ್ಮ ವೈಯಕ್ತಿಕ ವಿಚಾರಗಳನ್ನು ವೇದಿಕೆಗೆ ತರಬಾರದು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.



Click it and Unblock the Notifications











