Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಈ ಗ್ರಾಮದಲ್ಲಿ ನಾಯಿ, ಬೆಕ್ಕು ಸಾಕಲ್ಲ ಬದಲಿಗೆ ವಿಷ ಸರ್ಪಗಳೇ ಸಾಕು ಪ್ರಾಣಿಗಳು!
ನಾಯಿ, ಬೆಕ್ಕು, ಕುದುರೆ ಅಂತ ಸಾಕು ಪ್ರಾಣಿಗಳನ್ನು ನೋಡಿದ್ದೇವೆ, ಆದರೆ ಹಾವುಗಳನ್ನು ಸಾಕು ಪ್ರಾಣಿಯಂತೆ ಸಾಕುವವರನ್ನು ನೋಡಿದ್ದೀರಾ? ಕೆಲವರು ತಮ್ಮ ಮನೆಯಲ್ಲಿ ನೂರಾರು ಹಾವುಗಳನ್ನು ಸಾಕಿರುವುದು ಇದೆ, ಅದರೆ ಸಾಕು ಪ್ರಾಣಿಗಳಂತೆ ಊರಿಗೇ ಊರೇ ಹಾವುಗಳನ್ನು ಮನೆಯಲ್ಲಿ ಸಾಕುತ್ತಿರುವ ಗ್ರಾಮ ಮಹಾರಾಷ್ಟ್ರದಲ್ಲಿದೆ.

ಶೆತ್ಪಾಲ್ ಗ್ರಾಮದಲ್ಲಿ ವಿಷ ಶರ್ಪಗಳೇ ಪ್ರಮುಖ ಅತಿಥಿಗಳು
ಇಲ್ಲಿ ಹಾವುಗಳಿಗೆ ವಿಸೇಷ ಗೌರವ ನೀಡಲಾಗುವುದು, ನಾಗರ ಹಾವು ಮನೆಗೆ ಬಂದರೆ ಅದನ್ನು ಅದೃಷ್ಟವೆಂದು ಪರಿಗಣಿಸಲಾಗಿದೆ, ಹಾವುಗಳಿಗೆ ಇರಲೆಂದೇ ವ್ಯವಸ್ಥೆ ಮಾಡಲಾಗುವುದು. ಈ ಪದ್ಧತಿ ಈ ಗ್ರಾಮದಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ, ಈಗಲೂ ಪಾಲಿಸಲಾಗುತ್ತಿದೆ.
ಈ ಗ್ರಾಮದಲ್ಲಿ ಮತ್ತೊಂದು ವಿಶೇಷವೆಂದರೆ ಇಲ್ಲಿ ನಾಯಿ- ಬೆಕ್ಕುಗಳು ಕಾಣ ಸಿಗಲ್ಲ
ನೀವು ಯಾರಾದರೂ ಮನೆಗೆ ಹೋದರೆ ಅಲ್ಲಿ ನಾಯಿ ಬೊಗಳಿಕೊಂಡು ಬರಲ್ಲ, ಬೆಕ್ಕಿನ ಮ್ಯಾಂವ್.. ಮ್ಯಾವ್ ಕೇಳಿಸಲ್ಲ, ಬದಲಿಗೆ ಹಾವು ಮನೆಯೊಳಗಡೆ ಹಾಯಾಗಿ ಮಲಗಿರುತ್ತದೆ. ಹಾವು ಒಂದು ಕಡೆ ಮಲಗಿದ್ದರೆ ಮಕ್ಕಳು ಕೂಡ ಅಲ್ಲಿಯೇ ಆಡವಾಡುತ್ತಿರುತ್ತವೆ, ಅ ಹಾವುಗಳು ಮಕ್ಕಳಿಗೆ ಏನೂ ಮಾಡುವುದಿಲ್ಲ, ಮನೆಯಲ್ಲಿ ಒಬ್ಬ ಸದಸ್ಯನಂತೆ ಇರುತ್ತದೆ. ಈ ಗ್ರಾಮದಲ್ಲಿ ಇದುವರೆಗೆ ಯಾರು ಹಾವು ಕಚ್ಚಿ ಸತ್ತಿರುವ ಉದಾಹರಣೆಯೇ ಇಲ್ಲ, ಇಲ್ಲಿ ಹಾವು ಹಾಗೂ ಮನುಷ್ಯರ ನಡುವೆ ಒಳ್ಳೆಯ ಸಂಬಂಧವಿರುತ್ತದೆ. ಏಕೆ ಹಾವುಗಳು ಈ ಗ್ರಾಮದಲ್ಲಿ ಯಾರಿಗೂ ಹಾನಿ ಮಾಡಲ್ಲ ಎಂಬ ಕಾರನ ಮಾತ್ರ ನಿಗೂಢ.
ಹಾವನ್ನು ಶಿವನೆಂದೇ ಆರಾಧನೆ ಮಾಡುತ್ತಿರುವ ಗ್ರಾಮವದು
ನಮ್ಮ ಕಲ್ಪನೆಯಲ್ಲಿರುವ ಶಿವನಲ್ಲಿ ಕುತ್ತಿಗೆ ಸುತ್ತ ಹಾವು ಸುತ್ತಿರುತ್ತದೆ, ಹಾಗಾಗಿ ಈ ಗ್ರಾಮದಲ್ಲಿ ಹಾವಿನಲ್ಲಿಯೆ ಶಿವನನ್ನು ಕಾಣಲಾಗುವುದು. ಹಾಗಾಗಿ ಹಾವು ಕಂಡರೆ ಯಾವುದೇ ಭಯವಿರಲ್ಲ, ಅಲ್ಲದೆ ಇಲ್ಲಿ ಹಾವು ಪೂಜಿಸಲಾಗುವುದು.
ಆದರೆ ಹೊರಗಿನವರು ಜಾಗ್ರತೆ ಮಾಡಬೇಕು
ಹಾವುಗಳು ಈ ಊರಿನವರಿಗೆ ಏನೂ ಮಾಡುವುದಿಲ್ಲ, ಆದರೆ ಹೊರಗಿನವರಿಗೆ ಹಾವು ಬಳಿ ಹೋಗದಂತೆ ಸೂಚಿಸಲಾಗುವುದು. ಏಕೆಂದರೆ ಹಾವುಗಳು ಮನೆಯವರ ಜೊತೆ ಫ್ರೀ ಆಗಿ ಇದ್ದಂತೆ ಅಪರಿಚಿತರ ಜೊತೆ ಇರುವುದಿಲ್ಲ.
ಹಾವುಗಳನ್ನು ತುಂಬಾನೆ ಚೆನ್ನಾಗಿ ಆರೈಕೆ ಮಾಡುತ್ತಾರೆ
ಅವರು ತಮ್ಮ ಮನೆಯಲ್ಲಿ ಸಾಕಿರುವ ಹಾವಿಗೆ ಅದು ತಿನ್ನುವ ಆಹಾರ ನೀಡುತ್ತಾರೆ, ಅಲ್ಲದೆ ಕಾಯಿಲೆ ಬರದಂತೆ ಆರೈಕೆ ಮಾಡಲಾಗುವುದು.
ಹಾವುಗಳು ಇವರ ಜೊತೆ ತುಂಬಾ ಆರಾಮವಾಗಿ ಇರುತ್ತವೆ. ಅಲ್ಲಿಯೇ ಓಡಾಡಿಕೊಂಡು ಮನೆಯವರು ಕೈಯಲ್ಲಿ ಹಿಡಿದರೂ ಏನೂ ಮಾಡದೆ ಸುಮ್ಮನೆ ಅವರನ್ನು ಸುತ್ತಿಕೊಂಡು ಇರುತ್ತದೆ, ಅಲ್ಲದೆ ಇಲ್ಲಿ ಹಾವಿನ ವಿಷ ತೆಗೆದು ಸಾಕುವುದಿಲ್ಲ , ಬದಲಿಗೆ ವಿಷ ಸರ್ಪವನ್ನೇ ಸಾಕುತ್ತಾರೆ. ಇವುಗಳನ್ನು ಕೇಳಿದಾಗ ಎಷ್ಟೊಂದು ವಿಚಿತ್ರ ಅಲ್ವಾ? ಅನಿಸುವುದು, ಹೌದು ಈ ದೇಶದಲ್ಲಿ ಎಷ್ಟೋ ನಿಗೂಢಗಳಿವೆ, ವಿಸ್ಮಯಗಳಿವೆ, ವೈಜ್ಞಾನಿಕ ತರ್ಕಗಳಿಗೆ ನಿಲ್ಲದ ವಿಷಯಗಳಿವು, ಇಲ್ಲಿ ನಂಬಿಕೆಯೇ ಪ್ರಧಾನ.



Click it and Unblock the Notifications