Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಗ್ರಾಮದಲ್ಲಿ ನಾಯಿ, ಬೆಕ್ಕು ಸಾಕಲ್ಲ ಬದಲಿಗೆ ವಿಷ ಸರ್ಪಗಳೇ ಸಾಕು ಪ್ರಾಣಿಗಳು!
ನಾಯಿ, ಬೆಕ್ಕು, ಕುದುರೆ ಅಂತ ಸಾಕು ಪ್ರಾಣಿಗಳನ್ನು ನೋಡಿದ್ದೇವೆ, ಆದರೆ ಹಾವುಗಳನ್ನು ಸಾಕು ಪ್ರಾಣಿಯಂತೆ ಸಾಕುವವರನ್ನು ನೋಡಿದ್ದೀರಾ? ಕೆಲವರು ತಮ್ಮ ಮನೆಯಲ್ಲಿ ನೂರಾರು ಹಾವುಗಳನ್ನು ಸಾಕಿರುವುದು ಇದೆ, ಅದರೆ ಸಾಕು ಪ್ರಾಣಿಗಳಂತೆ ಊರಿಗೇ ಊರೇ ಹಾವುಗಳನ್ನು ಮನೆಯಲ್ಲಿ ಸಾಕುತ್ತಿರುವ ಗ್ರಾಮ ಮಹಾರಾಷ್ಟ್ರದಲ್ಲಿದೆ.

ಶೆತ್ಪಾಲ್ ಗ್ರಾಮದಲ್ಲಿ ವಿಷ ಶರ್ಪಗಳೇ ಪ್ರಮುಖ ಅತಿಥಿಗಳು
ಇಲ್ಲಿ ಹಾವುಗಳಿಗೆ ವಿಸೇಷ ಗೌರವ ನೀಡಲಾಗುವುದು, ನಾಗರ ಹಾವು ಮನೆಗೆ ಬಂದರೆ ಅದನ್ನು ಅದೃಷ್ಟವೆಂದು ಪರಿಗಣಿಸಲಾಗಿದೆ, ಹಾವುಗಳಿಗೆ ಇರಲೆಂದೇ ವ್ಯವಸ್ಥೆ ಮಾಡಲಾಗುವುದು. ಈ ಪದ್ಧತಿ ಈ ಗ್ರಾಮದಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ, ಈಗಲೂ ಪಾಲಿಸಲಾಗುತ್ತಿದೆ.
ಈ ಗ್ರಾಮದಲ್ಲಿ ಮತ್ತೊಂದು ವಿಶೇಷವೆಂದರೆ ಇಲ್ಲಿ ನಾಯಿ- ಬೆಕ್ಕುಗಳು ಕಾಣ ಸಿಗಲ್ಲ
ನೀವು ಯಾರಾದರೂ ಮನೆಗೆ ಹೋದರೆ ಅಲ್ಲಿ ನಾಯಿ ಬೊಗಳಿಕೊಂಡು ಬರಲ್ಲ, ಬೆಕ್ಕಿನ ಮ್ಯಾಂವ್.. ಮ್ಯಾವ್ ಕೇಳಿಸಲ್ಲ, ಬದಲಿಗೆ ಹಾವು ಮನೆಯೊಳಗಡೆ ಹಾಯಾಗಿ ಮಲಗಿರುತ್ತದೆ. ಹಾವು ಒಂದು ಕಡೆ ಮಲಗಿದ್ದರೆ ಮಕ್ಕಳು ಕೂಡ ಅಲ್ಲಿಯೇ ಆಡವಾಡುತ್ತಿರುತ್ತವೆ, ಅ ಹಾವುಗಳು ಮಕ್ಕಳಿಗೆ ಏನೂ ಮಾಡುವುದಿಲ್ಲ, ಮನೆಯಲ್ಲಿ ಒಬ್ಬ ಸದಸ್ಯನಂತೆ ಇರುತ್ತದೆ. ಈ ಗ್ರಾಮದಲ್ಲಿ ಇದುವರೆಗೆ ಯಾರು ಹಾವು ಕಚ್ಚಿ ಸತ್ತಿರುವ ಉದಾಹರಣೆಯೇ ಇಲ್ಲ, ಇಲ್ಲಿ ಹಾವು ಹಾಗೂ ಮನುಷ್ಯರ ನಡುವೆ ಒಳ್ಳೆಯ ಸಂಬಂಧವಿರುತ್ತದೆ. ಏಕೆ ಹಾವುಗಳು ಈ ಗ್ರಾಮದಲ್ಲಿ ಯಾರಿಗೂ ಹಾನಿ ಮಾಡಲ್ಲ ಎಂಬ ಕಾರನ ಮಾತ್ರ ನಿಗೂಢ.
ಹಾವನ್ನು ಶಿವನೆಂದೇ ಆರಾಧನೆ ಮಾಡುತ್ತಿರುವ ಗ್ರಾಮವದು
ನಮ್ಮ ಕಲ್ಪನೆಯಲ್ಲಿರುವ ಶಿವನಲ್ಲಿ ಕುತ್ತಿಗೆ ಸುತ್ತ ಹಾವು ಸುತ್ತಿರುತ್ತದೆ, ಹಾಗಾಗಿ ಈ ಗ್ರಾಮದಲ್ಲಿ ಹಾವಿನಲ್ಲಿಯೆ ಶಿವನನ್ನು ಕಾಣಲಾಗುವುದು. ಹಾಗಾಗಿ ಹಾವು ಕಂಡರೆ ಯಾವುದೇ ಭಯವಿರಲ್ಲ, ಅಲ್ಲದೆ ಇಲ್ಲಿ ಹಾವು ಪೂಜಿಸಲಾಗುವುದು.
ಆದರೆ ಹೊರಗಿನವರು ಜಾಗ್ರತೆ ಮಾಡಬೇಕು
ಹಾವುಗಳು ಈ ಊರಿನವರಿಗೆ ಏನೂ ಮಾಡುವುದಿಲ್ಲ, ಆದರೆ ಹೊರಗಿನವರಿಗೆ ಹಾವು ಬಳಿ ಹೋಗದಂತೆ ಸೂಚಿಸಲಾಗುವುದು. ಏಕೆಂದರೆ ಹಾವುಗಳು ಮನೆಯವರ ಜೊತೆ ಫ್ರೀ ಆಗಿ ಇದ್ದಂತೆ ಅಪರಿಚಿತರ ಜೊತೆ ಇರುವುದಿಲ್ಲ.
ಹಾವುಗಳನ್ನು ತುಂಬಾನೆ ಚೆನ್ನಾಗಿ ಆರೈಕೆ ಮಾಡುತ್ತಾರೆ
ಅವರು ತಮ್ಮ ಮನೆಯಲ್ಲಿ ಸಾಕಿರುವ ಹಾವಿಗೆ ಅದು ತಿನ್ನುವ ಆಹಾರ ನೀಡುತ್ತಾರೆ, ಅಲ್ಲದೆ ಕಾಯಿಲೆ ಬರದಂತೆ ಆರೈಕೆ ಮಾಡಲಾಗುವುದು.
ಹಾವುಗಳು ಇವರ ಜೊತೆ ತುಂಬಾ ಆರಾಮವಾಗಿ ಇರುತ್ತವೆ. ಅಲ್ಲಿಯೇ ಓಡಾಡಿಕೊಂಡು ಮನೆಯವರು ಕೈಯಲ್ಲಿ ಹಿಡಿದರೂ ಏನೂ ಮಾಡದೆ ಸುಮ್ಮನೆ ಅವರನ್ನು ಸುತ್ತಿಕೊಂಡು ಇರುತ್ತದೆ, ಅಲ್ಲದೆ ಇಲ್ಲಿ ಹಾವಿನ ವಿಷ ತೆಗೆದು ಸಾಕುವುದಿಲ್ಲ , ಬದಲಿಗೆ ವಿಷ ಸರ್ಪವನ್ನೇ ಸಾಕುತ್ತಾರೆ. ಇವುಗಳನ್ನು ಕೇಳಿದಾಗ ಎಷ್ಟೊಂದು ವಿಚಿತ್ರ ಅಲ್ವಾ? ಅನಿಸುವುದು, ಹೌದು ಈ ದೇಶದಲ್ಲಿ ಎಷ್ಟೋ ನಿಗೂಢಗಳಿವೆ, ವಿಸ್ಮಯಗಳಿವೆ, ವೈಜ್ಞಾನಿಕ ತರ್ಕಗಳಿಗೆ ನಿಲ್ಲದ ವಿಷಯಗಳಿವು, ಇಲ್ಲಿ ನಂಬಿಕೆಯೇ ಪ್ರಧಾನ.



Click it and Unblock the Notifications