Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೆಂಪು ಬಣ್ಣಕ್ಕೆ ತಿರುಗಿದ ಮೇಘಾಲಯದ ಅತ್ಯಂತ ಸ್ವಚ್ಛ ನದಿ; ಕಾರಣ ಕೇಳಿ 15 ಲಕ್ಷ ದಂಡ ವಸೂಲಿ!
ನೀವು ಭಾರತದಲ್ಲಿ ಯಾವುದಾದರು ಬೇರೆ ರಾಜ್ಯಕ್ಕೆ ಪ್ರವಾಸ ತೆರಳುವ ಆಲೋಚನೆಯನ್ನು ಹಾಕಿಕೊಂಡರೆ ಬಹುತೇಕರ ಮೊದಲ ಆಯ್ಕೆ ಈಶಾನ್ಯ ಭಾಗದ ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳುವುದು ನೋಡಬಹದು. ಅದ್ರಲ್ಲೂ ಅಸ್ಸಾಂ, ಸಿಕ್ಕಿಂ, ಮೇಘಾಲಯವು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾದ ಪ್ರದೇಶಗಳು. ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ನೀವು ತಿಂಗಳಿಗೂ ಹೆಚ್ಚು ಕಾಲ ಅಲ್ಲಿಯೇ ಪ್ರವಾಸ ಮಾಡುವಿರಿ.
ಇನ್ನು ಅಲ್ಲಿನ ಹವಾಮಾನ ಕೂಡ ಇದಕ್ಕೆ ಪೂರಕವಾಗಿರಲಿದೆ. ನಿಮ್ಮ ಕಣ್ಣುಗಳು ಎಷ್ಟು ದೂರ ನೋಡಿದರು ಬರೀ ಹಸಿರು ಮಾತ್ರ ಕಾಣಿಸಲಿದೆ. ಹಾಗೆ ಅಲ್ಲಿನ ಪರಿಸರ ನಿಮ್ಮಲ್ಲಿ ಹೊಸತನ ತರಲಿದೆ. ಇನ್ನು ಈ ಪ್ರದೇಶಕ್ಕೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಸಿರು ಕಣಿವೆಗಳು, ಎತ್ತರದ ಬೆಟ್ಟ, ಪರ್ವತಗಳು, ನದಿ, ಸರೋವರಗಳು ಈಗ ಪ್ರವಾಸಿಗರಿಂದ ತುಂಬಿರಲಿದೆ.

ಇಂತಹ ಅದ್ಭುತ ಸೌಂದರ್ಯ ತನ್ನಲ್ಲಿಟ್ಟುಕೊಂಡಿರುವ ಮೇಘಾಲಯದ ಹಲವು ವಿಡಿಯೋಗಳು ಸಾಮಾಜಿಕ ಜಾಲಾಣದಲ್ಲಿ ನೋಡಬಹುದು. ಅದ್ರಲ್ಲೂ ಏಷ್ಯಾದ ಅತ್ಯಂತ ಸ್ವಚ್ಛ ನದಿ ಅಥವಾ ಕ್ಲೀನ್ ವಾಟರ್ ಹೊಂದಿರುವ ನದಿ ಎಂಬ ಹೆಗ್ಗಳಿಕೆ ಪಡೆದ ಉಮ್ಗೋಟ್ ನದಿ ಸಹ ಇಲ್ಲಿಯೇ ಹರಿಯುತ್ತದೆ. ಇಲ್ಲಿನ ಡಾಕಿ ಪ್ರದೇಶದಲ್ಲಿ ಹರಿಯುವ ನದಿ ನೀರು ಅತ್ಯಂತ ಸ್ವಚ್ಛವಾಗಿದೆ. ಗಾಜಿನಂತೆ ಹೊಳೆಯುವ ನೀರು ಹೊಂದಿರುವ ನದಿ ಇದು.
ಆದ್ರೆ ಈಗ ಈ ನದಿ ನೀರು ಸಂಪೂರ್ಣ ಹಾಳಾಗಿದೆ. ಅದ್ರಲ್ಲೂ ಪ್ರವಾಹದ ನೀರಿನಂತೆ ಬಣ್ಣ ಬದಲಾಗಿದ್ದು, ಪ್ರವಾಸಿಗರು ಸೇರಿ ಅಲ್ಲಿನ ಸ್ಥಳೀಯರಿಗೆ ಅಚ್ಚರಿ ತರಿಸಿದೆ. ಮೇಘಾಲಯದ ಪ್ರವಾಸಿಗರಿಗೆ ಇದು ಪ್ರಮುಖ ಕೇಂದ್ರ ಸ್ಥಾನ ಎನಿಸಿತ್ತು ಆದರೆ ಈಗ ನೀರು ಕೆಂಪು ಬಣ್ಣಕ್ಕೆ ತಿರುಗಿಸುರುವುದು ಹೊಸ ಆತಂಕದ ಜೊತೆಗೆ ನಿರಾಸೆ ಕೂಡ ತರಿಸುತ್ತಿದೆ.
ನದಿ ನೀರು ಈ ಬಣ್ಣಕ್ಕೆ ತಿರುಗಿದ್ದು ಏಕೆ?
ಈ ನದಿ ನೀರು ಎಷ್ಟು ತಿಳಿಯಾಗಿತ್ತು ಅಂದರೆ ನದಿಯ ತಳದಲ್ಲಿ ಏನಿದೆ ಎಂಬುದನ್ನು ಮೇಲಿನಿಂದಲೇ ನೋಡಬಹುದಿತ್ತು. ಅಷ್ಟು ಸ್ವಚ್ಛವಾಗಿತ್ತು. ಆದ್ರೆ ಈಗ ಕೆಂಪು ಬಣ್ಣದ ಕೆಸರು ನೀರಾಗಿ ಬದಲಾಗಿದೆ. ಪ್ರವಾಹದಲ್ಲಿ ನೀವು ನೋಡುವ ನೀರಿನ ಬಣ್ಣಕ್ಕೆ ಬದಲಾಗಿದೆ. ಈ ಕುರಿತು ಇನ್ಸ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು ಪ್ರವಾಸಿಗರು ನೋಡುಗರು ಇದನ್ನು ಕಂಡು ಶಾಕ್ಗೆ ಒಳಗಾಗಿದ್ದಾರೆ.
ಆದರೆ ಈ ನದಿ ನೀರು ತನ್ನ ಬಣ್ಣಬದಲಾಯಿಸಲು ಒಂದು ಮಾನವ ನಿರ್ಮಿತ ಕಾರಣವಿದೆ. ಅದೇ ರಸ್ತೆ ಕಾಮಗಾರಿ. ಈ ನದಿ ದಟ್ಟ ಕಾಡುಗಳ ನಡುವೆ ಹಾದು ಹೋಗುತ್ತದೆ. ಪ್ರವಾಸಿಗರು ಇಲ್ಲಿಗೆ ತಲುಪಬೇಕಾದರೆ ಹರಸಹಸಪಡಬೇಕಿದೆ. ಈ ನಡುವೆ ಅಲ್ಲಿನ ಸರ್ಕಾರವು ಅನುದಾನಿತ ಶಿಲ್ಲಾಂಗ್-ಡಾವ್ಕಿ ರಸ್ತೆ ಕಾಮಗಾರಿಗಳು ಸೇರಿದಂತೆ ಹಲವು ರೀತಿಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದು ನದಿ ನೀರಿನ ಬಣ್ಣ ಬದಲಾವಣೆಗೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ಕಾರ್ಯಗತಗೊಳಿಸಿದ 90 ಕಿಮೀ ಯೋಜನೆಯು, ಉತ್ಖನನ ಮಾಡಿದ ಮಣ್ಣು ಮತ್ತು ತ್ಯಾಜ್ಯವನ್ನು ನದಿ ಮತ್ತು ಅದರ ಉಪನದಿಗಳಿಗೆ ಸುರಿದಿರುವುದು ಇದಕ್ಕೆ ಕಾರಣವಾಗಿದೆ. ಮೇಘಾಲಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (MSPCB) ನಡೆಸಿದ ಪರಿಶೀಲನೆಯಲ್ಲಿ ಯೋಜನಾ ಕಾರಿಡಾರ್ ಉದ್ದಕ್ಕೂ ಪರಿಸರ ನಿಯಮಗಳ ಬಹು ಉಲ್ಲಂಘನೆ ಕಂಡುಬಂದಿದೆ. ಹೀಗಾಗಿ ಪ್ರಾಧಿಕಾರಕ್ಕೆ 15 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸದ್ಯ ನೀರಿನ ಬಣ್ಣ ಬದಲಾಯಿಸಿದ ಹಿನ್ನೆಲೆ ಅಲ್ಲಿನ ಸ್ಥಳೀಯರಿಗೆ ದೊಡ್ಡ ಆಘಾತ ತರಿಸಿದೆ. ಸದ್ಯ ಪ್ರವಾಸಿಗರಿಂದ ತುಂಬಿದ ಸ್ಥಳ ಈಗ ನದಿ ನೀರು ನೊಡಿ ನಿರಾಸೆಯಿಂದ ಮರಳುವಂತಾಗಿದೆ.



Click it and Unblock the Notifications