Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕೆಂಪು ಬಣ್ಣಕ್ಕೆ ತಿರುಗಿದ ಮೇಘಾಲಯದ ಅತ್ಯಂತ ಸ್ವಚ್ಛ ನದಿ; ಕಾರಣ ಕೇಳಿ 15 ಲಕ್ಷ ದಂಡ ವಸೂಲಿ!
ನೀವು ಭಾರತದಲ್ಲಿ ಯಾವುದಾದರು ಬೇರೆ ರಾಜ್ಯಕ್ಕೆ ಪ್ರವಾಸ ತೆರಳುವ ಆಲೋಚನೆಯನ್ನು ಹಾಕಿಕೊಂಡರೆ ಬಹುತೇಕರ ಮೊದಲ ಆಯ್ಕೆ ಈಶಾನ್ಯ ಭಾಗದ ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳುವುದು ನೋಡಬಹದು. ಅದ್ರಲ್ಲೂ ಅಸ್ಸಾಂ, ಸಿಕ್ಕಿಂ, ಮೇಘಾಲಯವು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾದ ಪ್ರದೇಶಗಳು. ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ನೀವು ತಿಂಗಳಿಗೂ ಹೆಚ್ಚು ಕಾಲ ಅಲ್ಲಿಯೇ ಪ್ರವಾಸ ಮಾಡುವಿರಿ.
ಇನ್ನು ಅಲ್ಲಿನ ಹವಾಮಾನ ಕೂಡ ಇದಕ್ಕೆ ಪೂರಕವಾಗಿರಲಿದೆ. ನಿಮ್ಮ ಕಣ್ಣುಗಳು ಎಷ್ಟು ದೂರ ನೋಡಿದರು ಬರೀ ಹಸಿರು ಮಾತ್ರ ಕಾಣಿಸಲಿದೆ. ಹಾಗೆ ಅಲ್ಲಿನ ಪರಿಸರ ನಿಮ್ಮಲ್ಲಿ ಹೊಸತನ ತರಲಿದೆ. ಇನ್ನು ಈ ಪ್ರದೇಶಕ್ಕೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಸಿರು ಕಣಿವೆಗಳು, ಎತ್ತರದ ಬೆಟ್ಟ, ಪರ್ವತಗಳು, ನದಿ, ಸರೋವರಗಳು ಈಗ ಪ್ರವಾಸಿಗರಿಂದ ತುಂಬಿರಲಿದೆ.

ಇಂತಹ ಅದ್ಭುತ ಸೌಂದರ್ಯ ತನ್ನಲ್ಲಿಟ್ಟುಕೊಂಡಿರುವ ಮೇಘಾಲಯದ ಹಲವು ವಿಡಿಯೋಗಳು ಸಾಮಾಜಿಕ ಜಾಲಾಣದಲ್ಲಿ ನೋಡಬಹುದು. ಅದ್ರಲ್ಲೂ ಏಷ್ಯಾದ ಅತ್ಯಂತ ಸ್ವಚ್ಛ ನದಿ ಅಥವಾ ಕ್ಲೀನ್ ವಾಟರ್ ಹೊಂದಿರುವ ನದಿ ಎಂಬ ಹೆಗ್ಗಳಿಕೆ ಪಡೆದ ಉಮ್ಗೋಟ್ ನದಿ ಸಹ ಇಲ್ಲಿಯೇ ಹರಿಯುತ್ತದೆ. ಇಲ್ಲಿನ ಡಾಕಿ ಪ್ರದೇಶದಲ್ಲಿ ಹರಿಯುವ ನದಿ ನೀರು ಅತ್ಯಂತ ಸ್ವಚ್ಛವಾಗಿದೆ. ಗಾಜಿನಂತೆ ಹೊಳೆಯುವ ನೀರು ಹೊಂದಿರುವ ನದಿ ಇದು.
ಆದ್ರೆ ಈಗ ಈ ನದಿ ನೀರು ಸಂಪೂರ್ಣ ಹಾಳಾಗಿದೆ. ಅದ್ರಲ್ಲೂ ಪ್ರವಾಹದ ನೀರಿನಂತೆ ಬಣ್ಣ ಬದಲಾಗಿದ್ದು, ಪ್ರವಾಸಿಗರು ಸೇರಿ ಅಲ್ಲಿನ ಸ್ಥಳೀಯರಿಗೆ ಅಚ್ಚರಿ ತರಿಸಿದೆ. ಮೇಘಾಲಯದ ಪ್ರವಾಸಿಗರಿಗೆ ಇದು ಪ್ರಮುಖ ಕೇಂದ್ರ ಸ್ಥಾನ ಎನಿಸಿತ್ತು ಆದರೆ ಈಗ ನೀರು ಕೆಂಪು ಬಣ್ಣಕ್ಕೆ ತಿರುಗಿಸುರುವುದು ಹೊಸ ಆತಂಕದ ಜೊತೆಗೆ ನಿರಾಸೆ ಕೂಡ ತರಿಸುತ್ತಿದೆ.
ನದಿ ನೀರು ಈ ಬಣ್ಣಕ್ಕೆ ತಿರುಗಿದ್ದು ಏಕೆ?
ಈ ನದಿ ನೀರು ಎಷ್ಟು ತಿಳಿಯಾಗಿತ್ತು ಅಂದರೆ ನದಿಯ ತಳದಲ್ಲಿ ಏನಿದೆ ಎಂಬುದನ್ನು ಮೇಲಿನಿಂದಲೇ ನೋಡಬಹುದಿತ್ತು. ಅಷ್ಟು ಸ್ವಚ್ಛವಾಗಿತ್ತು. ಆದ್ರೆ ಈಗ ಕೆಂಪು ಬಣ್ಣದ ಕೆಸರು ನೀರಾಗಿ ಬದಲಾಗಿದೆ. ಪ್ರವಾಹದಲ್ಲಿ ನೀವು ನೋಡುವ ನೀರಿನ ಬಣ್ಣಕ್ಕೆ ಬದಲಾಗಿದೆ. ಈ ಕುರಿತು ಇನ್ಸ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು ಪ್ರವಾಸಿಗರು ನೋಡುಗರು ಇದನ್ನು ಕಂಡು ಶಾಕ್ಗೆ ಒಳಗಾಗಿದ್ದಾರೆ.
ಆದರೆ ಈ ನದಿ ನೀರು ತನ್ನ ಬಣ್ಣಬದಲಾಯಿಸಲು ಒಂದು ಮಾನವ ನಿರ್ಮಿತ ಕಾರಣವಿದೆ. ಅದೇ ರಸ್ತೆ ಕಾಮಗಾರಿ. ಈ ನದಿ ದಟ್ಟ ಕಾಡುಗಳ ನಡುವೆ ಹಾದು ಹೋಗುತ್ತದೆ. ಪ್ರವಾಸಿಗರು ಇಲ್ಲಿಗೆ ತಲುಪಬೇಕಾದರೆ ಹರಸಹಸಪಡಬೇಕಿದೆ. ಈ ನಡುವೆ ಅಲ್ಲಿನ ಸರ್ಕಾರವು ಅನುದಾನಿತ ಶಿಲ್ಲಾಂಗ್-ಡಾವ್ಕಿ ರಸ್ತೆ ಕಾಮಗಾರಿಗಳು ಸೇರಿದಂತೆ ಹಲವು ರೀತಿಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದು ನದಿ ನೀರಿನ ಬಣ್ಣ ಬದಲಾವಣೆಗೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ಕಾರ್ಯಗತಗೊಳಿಸಿದ 90 ಕಿಮೀ ಯೋಜನೆಯು, ಉತ್ಖನನ ಮಾಡಿದ ಮಣ್ಣು ಮತ್ತು ತ್ಯಾಜ್ಯವನ್ನು ನದಿ ಮತ್ತು ಅದರ ಉಪನದಿಗಳಿಗೆ ಸುರಿದಿರುವುದು ಇದಕ್ಕೆ ಕಾರಣವಾಗಿದೆ. ಮೇಘಾಲಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (MSPCB) ನಡೆಸಿದ ಪರಿಶೀಲನೆಯಲ್ಲಿ ಯೋಜನಾ ಕಾರಿಡಾರ್ ಉದ್ದಕ್ಕೂ ಪರಿಸರ ನಿಯಮಗಳ ಬಹು ಉಲ್ಲಂಘನೆ ಕಂಡುಬಂದಿದೆ. ಹೀಗಾಗಿ ಪ್ರಾಧಿಕಾರಕ್ಕೆ 15 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸದ್ಯ ನೀರಿನ ಬಣ್ಣ ಬದಲಾಯಿಸಿದ ಹಿನ್ನೆಲೆ ಅಲ್ಲಿನ ಸ್ಥಳೀಯರಿಗೆ ದೊಡ್ಡ ಆಘಾತ ತರಿಸಿದೆ. ಸದ್ಯ ಪ್ರವಾಸಿಗರಿಂದ ತುಂಬಿದ ಸ್ಥಳ ಈಗ ನದಿ ನೀರು ನೊಡಿ ನಿರಾಸೆಯಿಂದ ಮರಳುವಂತಾಗಿದೆ.



Click it and Unblock the Notifications