Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಜನವರಿ 29ಕ್ಕೆ ಮೌನಿ ಅಮವಾಸ್ಯೆ: ಈ ದಿನ ಏನು ಮಾಡಬೇಕು, ಧಾರ್ಮಿಕ ನಿಯಮಗಳೇನಿದೆ?
ಜನವರಿ 29ಕ್ಕೆ ಮೌನಿ ಅಮವಾಸ್ಯೆ, ಧಾರ್ಮಿಕ ದೃಷ್ಟಿಯಿಂದ ಈ ದಿನ ತುಂಬಾನೇ ಮಹತ್ವವಾದ ದಿನ. ಈ ದಿನ ಕುಂಭಸ್ನಾನಕ್ಕೆ ತುಂಬಾನೇ ಮಹತ್ವವಿದೆ, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂದು ಕುಂಭಮೇಳಕ್ಕೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮೌನಿ ಅಮವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ.

ಮೌನಿ ಅಮವಾಸ್ಯೆಯಂದು ಸೂರ್ಯ ಮತ್ತು ಚಂದ್ರ ಮಕರ ರಾಶಿಯಲ್ಲಿರುತ್ತದೆ, ಹಾಗಾಗಿ ಈ ದಿನದಂದು ಧನಾತ್ಮಕ ಶಕ್ತಿ ಅಧಿಕವಿರುತ್ತದೆ ಎಂದು ಧಾರ್ಮಿಕ ಶಾಸ್ತ್ರ ಹೇಳುತ್ತದೆ. ಈ ಕಾರಣದಿಂದಲೇ ಈ ದಿನಕ್ಕೆ ಯೋಗಿಗಳು, ಅಘೋರಿಗಳು, ಸಂನ್ಯಾಸಿಗಳು, ನಾಗಾ ಸಾಧುಗಳು ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ. ಈ ದಿನದಂದು ವಿಶೇಷ ಪೂಜೆಗಳನ್ನು ಮಾಡಲಾಗುವುದು. ಈ ದಿನದಂದು ಮಹಾಕುಂಭದ ಅಮೃತ ಸ್ನಾನ ನಡೆಯಲಿದೆ. ಈ ದಿನ ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ.
ಮೌನಿ ಅಮವಾಸ್ಯೆಯಂದುಏನು ಮಾಡಿದರೆ ಒಳಿತಾಗುತ್ತದೆ? ಏನು ಮಾಡಬಾರದು ಎಂಬ ಕೆಲ ಧಾರ್ಮಿಕ ನಿಯಮಗಳಿವೆ, ಅವುಗಳ ಬಗ್ಗೆ ನೋಡುವುದಾದರೆ:
ಏನು ಮಾಡಬೇಕು?
ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಶ್ರೀ ವಿಷ್ಣುವನ್ನು ಪೂಜಿಸಬೇಕು
ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯವೆಂದು ಭಾವಿಸಲಾಗದೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ಮನೆಯಲ್ಲಿ ಸ್ನಾನ ನೀರಿಗೆ ಸ್ವಲ್ಪ ಗಂಗಾಜಲ ಸೇರಿಸಿ ಸ್ನಾನ ಮಾಡಬೇಕು.
ಈ ದಿನ ಉಪವಾಸವಿದ್ದು ಪೂಜೆ ಕಾರ್ಯಗಳನ್ನು ಮಾಡಬೇಕು.
ಮೌನಿ ಅಮವಾಸ್ಯೆಯಂದು ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ.ಈ ದಿನ ಬಡವರಿಗೆ ಆಹಾರ ವಸ್ತುಗಳನ್ನು ದಾನ ಮಾಡಿ, ವಸ್ತ್ರಗಳನ್ನು ದಾನ ಮಾಡಿ.
ಈ ದಿನ ಪಿತೃತರ್ಪಣಕ್ಕೆ ಕೂಡ ಸೂಕ್ತವಾದ ದಿನವಾಗಿದೆ. ಪಿತೃತರ್ಪಣ ಮಾಡುವುದರಿಂದ ಪಿತೃದೋಷವಿದ್ದರೆ ಅದು ನಿವಾರಣೆಯಾಗುತ್ತದೆ.
ಮೌನಿ ಅಮವಾಸ್ಯೆಗೆ ಏನು ಮಾಡಬಾರದು?
ಈ ದಿನ ಮೀನು, ಮಾಂಸ, ಮದ್ಯ ಇವುಗಳಿಂದ ದೂರವಿರಬೇಕು
ಹಿರಿಯರನ್ನು ಅಗೌರವದಿಂದ ಕಾಣಬೇಡಿ
ಕಾಗೆ, ನಾಯಿ ಈ ಬಗೆಯ ಪ್ರಾಣಿಗಳನ್ನು ನೋಯಿಸಬೇಡಿ, ಇದರಿಂದಪಿತೃದೋಷ ಉಂಟಾಗುವುದು
ಮನೆಯನ್ನು ಗಲೀಜಾಗಿ ಇಡಬಾರದು, ಇವೆಲ್ಲಾ ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮನೆಗೆ ಒಳ್ಳೆಯದಲ್ಲ.



Click it and Unblock the Notifications
