Latest Updates
-
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ
ಜನವರಿ 29ಕ್ಕೆ ಮೌನಿ ಅಮವಾಸ್ಯೆ: ಈ ದಿನ ಏನು ಮಾಡಬೇಕು, ಧಾರ್ಮಿಕ ನಿಯಮಗಳೇನಿದೆ?
ಜನವರಿ 29ಕ್ಕೆ ಮೌನಿ ಅಮವಾಸ್ಯೆ, ಧಾರ್ಮಿಕ ದೃಷ್ಟಿಯಿಂದ ಈ ದಿನ ತುಂಬಾನೇ ಮಹತ್ವವಾದ ದಿನ. ಈ ದಿನ ಕುಂಭಸ್ನಾನಕ್ಕೆ ತುಂಬಾನೇ ಮಹತ್ವವಿದೆ, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂದು ಕುಂಭಮೇಳಕ್ಕೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮೌನಿ ಅಮವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ.

ಮೌನಿ ಅಮವಾಸ್ಯೆಯಂದು ಸೂರ್ಯ ಮತ್ತು ಚಂದ್ರ ಮಕರ ರಾಶಿಯಲ್ಲಿರುತ್ತದೆ, ಹಾಗಾಗಿ ಈ ದಿನದಂದು ಧನಾತ್ಮಕ ಶಕ್ತಿ ಅಧಿಕವಿರುತ್ತದೆ ಎಂದು ಧಾರ್ಮಿಕ ಶಾಸ್ತ್ರ ಹೇಳುತ್ತದೆ. ಈ ಕಾರಣದಿಂದಲೇ ಈ ದಿನಕ್ಕೆ ಯೋಗಿಗಳು, ಅಘೋರಿಗಳು, ಸಂನ್ಯಾಸಿಗಳು, ನಾಗಾ ಸಾಧುಗಳು ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ. ಈ ದಿನದಂದು ವಿಶೇಷ ಪೂಜೆಗಳನ್ನು ಮಾಡಲಾಗುವುದು. ಈ ದಿನದಂದು ಮಹಾಕುಂಭದ ಅಮೃತ ಸ್ನಾನ ನಡೆಯಲಿದೆ. ಈ ದಿನ ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ.
ಮೌನಿ ಅಮವಾಸ್ಯೆಯಂದುಏನು ಮಾಡಿದರೆ ಒಳಿತಾಗುತ್ತದೆ? ಏನು ಮಾಡಬಾರದು ಎಂಬ ಕೆಲ ಧಾರ್ಮಿಕ ನಿಯಮಗಳಿವೆ, ಅವುಗಳ ಬಗ್ಗೆ ನೋಡುವುದಾದರೆ:
ಏನು ಮಾಡಬೇಕು?
ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಶ್ರೀ ವಿಷ್ಣುವನ್ನು ಪೂಜಿಸಬೇಕು
ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯವೆಂದು ಭಾವಿಸಲಾಗದೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ಮನೆಯಲ್ಲಿ ಸ್ನಾನ ನೀರಿಗೆ ಸ್ವಲ್ಪ ಗಂಗಾಜಲ ಸೇರಿಸಿ ಸ್ನಾನ ಮಾಡಬೇಕು.
ಈ ದಿನ ಉಪವಾಸವಿದ್ದು ಪೂಜೆ ಕಾರ್ಯಗಳನ್ನು ಮಾಡಬೇಕು.
ಮೌನಿ ಅಮವಾಸ್ಯೆಯಂದು ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ.ಈ ದಿನ ಬಡವರಿಗೆ ಆಹಾರ ವಸ್ತುಗಳನ್ನು ದಾನ ಮಾಡಿ, ವಸ್ತ್ರಗಳನ್ನು ದಾನ ಮಾಡಿ.
ಈ ದಿನ ಪಿತೃತರ್ಪಣಕ್ಕೆ ಕೂಡ ಸೂಕ್ತವಾದ ದಿನವಾಗಿದೆ. ಪಿತೃತರ್ಪಣ ಮಾಡುವುದರಿಂದ ಪಿತೃದೋಷವಿದ್ದರೆ ಅದು ನಿವಾರಣೆಯಾಗುತ್ತದೆ.
ಮೌನಿ ಅಮವಾಸ್ಯೆಗೆ ಏನು ಮಾಡಬಾರದು?
ಈ ದಿನ ಮೀನು, ಮಾಂಸ, ಮದ್ಯ ಇವುಗಳಿಂದ ದೂರವಿರಬೇಕು
ಹಿರಿಯರನ್ನು ಅಗೌರವದಿಂದ ಕಾಣಬೇಡಿ
ಕಾಗೆ, ನಾಯಿ ಈ ಬಗೆಯ ಪ್ರಾಣಿಗಳನ್ನು ನೋಯಿಸಬೇಡಿ, ಇದರಿಂದಪಿತೃದೋಷ ಉಂಟಾಗುವುದು
ಮನೆಯನ್ನು ಗಲೀಜಾಗಿ ಇಡಬಾರದು, ಇವೆಲ್ಲಾ ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮನೆಗೆ ಒಳ್ಳೆಯದಲ್ಲ.



Click it and Unblock the Notifications