Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಶತ್ರು ಗ್ರಹಗಳಾದ ಮಂಗಳ-ಕೇತು ಸಂಯೋಗ, ಆದ್ರೂ ಈ 3 ರಾಶಿಯವರಿಗೆ ಅದೃಷ್ಟದ ಸಮಯ
ಜ್ಯೋತಿಷ್ಯದ ಪ್ರಕಾರ ಮಂಗಳ ಮತ್ತು ಕೇತು ಗ್ರಹಗಳ ಸಂಯೋಜನೆ ತುಂಬಾನೇ ಅಪರೂಪದ ಘಟನೆಯಾಗಿದೆ. ಮಂಗಳ ಮತ್ತು ಕೇತು ಶತ್ರು ಗ್ರಹವಾಗಿದೆ. ಮಂಗಳ ಜೀವನ, ಸಂಬಂಧ, ಐಶ್ವರ್ಯಗಳ ಮೇಲೆ ಪ್ರಭಾವ ಬೀರುವ ಗ್ರಹವಾದರೆ ಕೇತು ಅವುಗಳಿಂದ ನಮ್ಮನ್ನು ದೂರ ಮಾಡುವ ಗ್ರಹವಾಗಿದೆ. ಕೇತು ತುಲಾ ರಾಶಿಯಲ್ಲಿ ಇದೆ, ಮಂಗಳ ಕೂಡ ತುಲಾ ರಾಶಿಯಲ್ಲಿ ಇರಲಿದೆ. ಈ ಗ್ರಹಗಳ ಪರಸ್ಪರ ವಿರುದ್ಧ ಗ್ರಹಗಳಾದರೂ ಇವುಗಳ ಸಂಯೋಗ ಈ 3 ರಾಶಿಯವರಿಗೆ ಅದೃಷ್ಟಕರವಾಗಿದೆ ನೋಡಿ:

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಸಂಚಾರ ತುಂಬಾನೇ ಒಳ್ಳೆಯದಿದೆ. ಇದು ನಿಮ್ಮ ಅದೃಷ್ಟದ ಮೇಲೆ ಪ್ರಭಾವ ಬೀರಲಿದೆ. ನೀವು ಇದ್ದಕ್ಕಿದ್ದಂತೆ ಹಣ ಗಳಿಸಬಹುದು. ಆರ್ಥಿಕ ಸ್ಥಿತಿಯಲ್ಲಿ ಮತ್ತಷ್ಟು ಸುಧಾರಣೆಯಾಗಲಿದೆ. ನಿಮ್ಮ ಸಂವಹನ ಕೌಶಲ್ಯ ನಿಮಗೆ ಲಾಭ ತರಲಿದೆ. ನಿಮ್ಮ ಮಾತು ಇತರರನ್ನು ಆಕರ್ಷಿಸಬಹುದು. ಈ ತಿಂಗಳು ನಿಮಗೆ ತುಮಬಾನೇ ಚೆನ್ನಾಗಿರಲಿದೆ. ಮಾರ್ಕೆಟಿಂಗ್, ಶಿಕ್ಷಣ, ಕ್ರಿಯಾತ್ಮಕ ವೃತ್ತಿಯಲ್ಲಿದ್ದರೆ ಪ್ರಗತಿಯನ್ನು ಕಾಣಬಹುದು.
ತುಲಾ ರಾಶಿ
ಮಂಗಳ-ಕೇತು ಸಂಯೋಗ ನಿಮಗೆ ತುಂಬಾನೇ ಒಳ್ಳೆಯದಿದೆ. ನಿಮ್ಮ ವ್ಯಕ್ತಿತ್ವ ಹೆಚ್ಚಾಗಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಬದಲಾವಣೆಯನ್ನು ಕಾಣುವಿರಿ. ನಿಮಗೆ ಹೊಸ ಉದ್ಯೋಗ ಅವಕಾಶಗಳು ದೊರೆಯಲಿದೆ. ಹೊಸ ಆಸ್ತಿ ಅಥವಾ ಕಾರು ಖರೀದಿಸಬಹುದು.
ಕುಂಭ ರಾಶಿ
ಮಂಗಳ ಮತ್ತು ಕೇತು ಸಂಚಾರ ಕುಂಭ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ನಿಮ್ಮ 9ನೇ ಮನೆಯಲ್ಲಿ ಸಂಯೋಗವಾಗಲಿದೆ. ನೀವು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಪ್ರಗತಿ ಉಂಟಾಗಲಿದೆ. ನಿಮ್ಮ ಆಸಕ್ತಿಯ ವಿಷಯದಲ್ಲಿ ವೃತ್ತಿ ಬದುಕು ಪ್ರಾರಂಭಿಸಲು ಈ ಅವಧಿ ಉತ್ತಮವಾಗಿದೆ. ಧಾರ್ಮಿಕ ಒಲವು ಹೆಚ್ಚಾಗುವುದು. ಕುಟುಣಬ ಜೀವನ ಚೆನ್ನಾಗಿರಲಿದೆ.
ಮಂಗಳ-ಕೇತು ಸಂಯೋಜನೆಯಾದಾಗ ಈ ಪರಿಹಾರ ಮಾಡಿದರೆ ಒಳ್ಳೆಯದು
* ಮಂಗಳ-ಕೇತು ಸಂಯೋಗ ಹೆಚ್ಚಿನ ರಾಶಿಯವರಿಗೆ ತೊಂದರೆ ಉಂಟು ಮಾಡುತ್ತದೆ. ನೀವು ಓಂ ಬ್ಭ್ರೀಂ ಭ್ರೂಂ ಸ್ವಾ ರಾಹವೇ ನಮಃ ಮಂತ್ರ ಪಠಿಸಿ.
* ಶಿವನ ಆರಾಧನೆ ಮಾಡಿ.
* ಕಡು ನೀಲಿ, ಕಪ್ಪು ಬಟ್ಟೆ, ಕಪ್ಪು ಕಂಬಳಿ ಈ ಬಗೆಯ ವಸ್ತುಗಳನ್ನು ಬಡವರಿಗೆ ದಾನ ಮಾಡಿ.
* ಬೆಳ್ಳಿಯ ಚೈನ್ ಧರಿಸುವುದು ಒಳ್ಳೆಯದು.
* ಕಪ್ಪು ಬೀದಿ ನಾಯಿಗೆ ಆಹಾರ ಹಾಕಿ
* ಪ್ರತಿದಿನ ಶಿವನ ಮಂತ್ರ ಪಠಿಸಿ.
ಇದರ ಪ್ರಯೋಜನಗಳು
* ಇದರಿಂದ ಕಷ್ಟಗಳು ಕಡಿಮೆಯಾಗುವುದು.
* ಆರ್ಥಿಕ ತೊಂದರೆ ದೂರಾಗುವುದು
* ಋಣಾತ್ಮಕ ಪ್ರಭಾವದಿಂದ ರಕ್ಷಣೆ ದೊರೆಯುತ್ತದೆ.
* ಏನಾದರೂ ಸಮಸ್ಯೆಯಿದ್ದರೆ ಅದಕ್ಕೆ ಪರಿಹಾರ ಸಿಗಲಿದೆ.
* ಮನಸ್ಸಿಗೆ ನೆಮ್ಮದಿ ಸಿಗಲಿದೆ.
* ಗುರುವಾರ ಉಪವಾಸ ಮಾಡಿ.



Click it and Unblock the Notifications