Latest Updates
-
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು?
ಸೆ. 24ಕ್ಕೆ ಶತ್ರು ರಾಶಿಯಲ್ಲಿ ಮಂಗಳ ಅಸ್ತಂಗತ: 3 ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕು
ವೈದಿಕ ಗ್ರಂಥಗಳಲ್ಲಿ ಮಂಗಳ ಗ್ರಹ ನಮ್ಮ ಕ್ರಿಯೆಗೆ ಸಂಬಂಧಿಸಿದ ಗ್ರಹವೆಂದು ಹೇಳಲಾಗಿದೆ. ಮಂಗಳ ಗ್ರಹದ ಆಶೀರ್ವಾದವಿಲ್ಲದೆ ಯಾವುದೇ ವ್ಯಕ್ತಿಯು ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಲಾಗುವುದು. ಜಾತಕದಲ್ಲಿ ಮಂಗಳ ಬಲವಾದ ಸ್ಥಾನದಲ್ಲಿದ್ದರೆ ಆ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ ತುಂಬಾನೇ ಚೆನ್ನಾಗಿರುತ್ತಾನೆ. ಅದೇ ದುರ್ಬಲ ಸ್ಥಾನದಲ್ಲಿದ್ದರೆ ವೃತ್ತಿ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಈ ಸೆಪ್ಟೆಂಬರ್ 24 ಕ್ಕೆ ಮಂಗಳ ಕನ್ಯಾರಾಶಿಯಲ್ಲಿ ಅಸ್ತಮಿಸಲಿದೆ. ಕನ್ಯಾ ರಾಶಿಯನ್ನು ಮಂಗಳದ ಶತ್ರು ರಾಶಿ ಎಂದು ಹೇಳಲಾಗುವುದು. ಕನ್ಯಾ ರಾಶಿಯಲ್ಲಿ ಅಸ್ತಮಿಸಿದಾಗ ಈ 3 ರಾಶಿಯವರಿಗೆ ತುಂಬಾನೇ ಸವಾಲುಗಳು ಎದುರಾಗುವುದು.

ವೃಷಭ ರಾಶಿ
ಮಂಗಳ ಕನ್ಯಾ ರಾಶಿಯಲ್ಲಿ ಅಸ್ತವಾದಾಗ ವೃಷಭ ರಾಶಿಯವರಿಗೆ ಕೆಲವು ಸವಾಲುಗಳು ಎದುರಾಗುವುದು. ನಿಮ್ಮ ಪ್ರಸ್ತುತ ಉದ್ಯೋಗದಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಉದ್ಯೋಗದಲ್ಲಿ ಹಲವು ಸವಾಲುಗಳು ಎದುರಾಗುವುದು. ಕೆಲಸದ ವಿಷಯಕ್ಕೆ ನಿಮ್ಮ ಹಾಗೂ ಮೇಲಾಧಿಕಾರ ನಡುವೆ ತರ್ಕ ಉಂಟಾಗಬಹುದು. ಈ ಅವಧಿಯಲ್ಲಿ ತಾಳ್ಮೆ ತುಂಬಾನೇ ಕಡಿಮೆ ಇರಲಿದೆ. ಪ್ರಯಾಣದಲ್ಲಿ ಅಜಾಗರೂಕತೆಯಿಂದ ಆರ್ಥಿಕ ನಷ್ಟ ಉಂಟಾಗಬಹುದು. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು.
ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.
ಸಿಂಹ ರಾಶಿ
ಮಂಗಳ ಗ್ರಹ ಅಸ್ತವಾದಾಗ ಹಣಕಾಸಿನ ತೊಂದರೆಗಳು ಎದುರಾಗುವುದು. ನಿಮ್ಮ ಆದಾಯದಲ್ಲಿ ಇಳಿಕೆಯಾಗುವುದು, ಆದರೆ ಖರ್ಚುಗಳು ಅಧಿಕವಿರಲಿದೆ. ಸಂಗಾತಿಯ ಜೊತೆಗೆ ಅನೇಕ ಸಮಸ್ಯೆಗಳು ಎದುರಾಗಬಹುದು. ಮಾನಸಿಕ ಒತ್ತಡ ಅಧಿಕವಾಗಿರಲಿದೆ, ಆರೋಗ್ಯ ಸಮಸ್ಯೆಗಳು ಕಂಡು ಬರುವುದು. ಕಣ್ಣುಗಳಲ್ಲಿ ಸಮಸ್ಯೆ ಕಂಡು ಬರುವುದು. ಕೆಲಸದಲ್ಲಿ ನಿರಾಸಕ್ತಿ ಕಂಡು ಬರುವುದು. ಕೆಲಸದಲ್ಲಿ ಸಮಸ್ಯೆಗಳು ಉಂಟಾಗುವುದು.
ಪರಿಹಾರ: ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ, ಆದಿತ್ಯ ಹೃದಯ ಸ್ತೋತ್ರ ಪ್ರತಿದಿನ ಪಠಿಸಿ
ಮೀನ ರಾಶಿ
ಮಂಗಳ ಮೀನ ರಾಶಿಯಲ್ಲಿ ಅಸ್ತವಾದಾಗ ಮೀನ ರಾಶಿಯವರಿಗೆ ಈ ಅವಧಿ ಅನುಕೂಲಕರವಲ್ಲ. ವ್ಯಾಪಾರಸ್ಥರು ತೀವ್ರ ಸ್ಪರ್ಧೆಯನ್ನು ಎದುರಿಸಬಹುದು. ನೀವು ಆರ್ಥಿಕ ನಷ್ಟವನ್ನು ಸಹ ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ಹಣಕಾಸಿನ ವಿಚಾರದಲ್ಲಿಯೂ ಈ ವಾರ ಅನುಕೂಲಕರವಲ್ಲ. ಸಂಗಾತಿಯ ಜೊತೆಯೂ ಕೆಲ ಸಮಸ್ಯೆಗಳು ಉಂಟಾಗಬಹುದು.
ಪರಿಹಾರ: ಪ್ರತಿದಿನ 27 ಬಾರಿ "ಓಂ ಮಂಗಳಾಯ ನಮಃ" ಎಂದು ಜಪಿಸಿ.
ಮಂಗಳ ದುರ್ಬಲ ಸ್ಥಾನದಲ್ಲಿದ್ದಾಗ ಈ ಸಮಸ್ಯೆಗಳು ಉಂಟಾಗುವುದು
* ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವುದು
* ಮಾನಸಿಕವಾಗಿ ತುಂಬಾನೇ ದುರ್ಬಲವಾಗಿರುತ್ತದೆ, ಏನೂ ದುಗುಡ-ದುಃಖಗಳ ಉಂಟಾಗುವುದು.
* ಮಹಿಳೆಯರಲ್ಲಿ ಮುಟ್ಟಿಗೆ ಸಂಬಂಧಿಸಿದ ಸಮಸ್ಯೆ ಕಂಡು ಬರುವುದು
* ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುವುದು.
* ದೈಹಿಕವಾಗಿ ನೋವುಗಳು ಕಂಡು ಬರುವುದು.
ಪರಿಹಾರವೇನು?
* ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ, ಮಂಗಳವಾರ, ಶನಿವಾರ ಹನುಮಂತನಿಗೆ ಪೂಜೆ ಸಲ್ಲಿಸಿ.'
* ಮಂಗಳ ಯಂತ್ರ ಸ್ಥಾಪಿಸಿ ಪೂಜಿಸಿ
* ಕೋಪವನ್ನು ನಿಯಂತ್ರಣದಲ್ಲಿಡಿ
* ರಕ್ತದಾನ ಮಾಡಿ
* ಮಂಗಳವಾರ ಮಂಗಳಗಳಿಗೆ ಬೆಲ್ಲವನ್ನು ಅರ್ಪಿಸಿ.



Click it and Unblock the Notifications