Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೊದಲ ಮಂಗಳಗೌರಿ ವ್ರತ: ವೈವಾಹಿಕ ಬದುಕಿನ ಸಮಸ್ಯೆ ದೂರಾಗಲು ಈ ಪರಿಹಾರ ಒಳ್ಳೆಯದು
ಶ್ರಾವಣ ಮಾಸದಲ್ಲಿ ಸೋಮವಾರ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರೆ ಮಂಗಳವಾರ ಗೌರಿ ಮಾತೆಯನ್ನು ಪೂಜಿಸಲಾಗುವುದು. ಶ್ರಾವಣ ಮಾಸದ ಪ್ರತಿ ಮಂಗಳವಾರ ಮಹಿಳೆಯರು ಉಪವಾಸವಿದ್ದು ಈ ಮಂಗಳ ಗವರಿ ವ್ರತವನ್ನು ಆಚರಿಸುತ್ತಾರೆ.
ಮಂಗಳ ಗೌರಿ ವ್ರತವನ್ನು ಹೇಗೆ ಆಚರಿಸಬೇಕು, ಇದರ ಮಹತ್ವವೇನು? ವೈವಾಹಿಕ ಬದುಕಿನ ಸಮಸ್ಯೆ ಪರಿಹಾರಕ್ಕೆ, ಕಂಕಣ ಭಾಗ್ಯಕ್ಕೆ ಈ ವ್ರತ ಹೇಗೆ ಪರಿಣಾಮಕಾರಿ, ಈ ದಿನ ಪಠಿಸಬೇಕಾದ ಮಂತ್ರಗಳು ಇವುಗಳ ಬಗ್ಗೆ ಮಾಹಿತಿ ತಿಳಿಯೋಣ:

ಈ ಬಾರಿ ಮಂಗಳವಾರ ವ್ರತ 5 ವಾರ ಆಚರಿಸಬಹುದು
ಆಗಸ್ಟ್ 6
ಆಗಸ್ಟ್ 13
ಆಗಸ್ಟ್ 20
ಆಗಸ್ಟ್ 27
ಸೆಪ್ಟೆಂಬರ್ 3
ನವ ವಿವಾಹಿತರು ಈ ವ್ರತವನ್ನು ಆಚರಿಸುತ್ತಾರೆ
ಮಂಗಳ ಗೌರಿ ವ್ರತವನ್ನು ನವ ವಿವಾಹಿತರು ಆಚರಿಸುತ್ತಾರೆ. ಅಲ್ಲದೆ ಇದನ್ನು 5 ವರ್ಷದವರೆಗೆ ಆಚರಿಸುತ್ತಾರೆ. ತಾನು ಸೇರಿದ ಮನೆ ಚೆನ್ನಾಗಿರಬೇಕು, ಗಂಡನ ಆಯುಸ್ಸು-ಸಂಪತ್ತು ವೃದ್ಧಿಗೆ ಈ ವ್ರತವನ್ನು ಮಾಡುತ್ತಾರೆ, ಅಲ್ಲದೆ ಈ ವ್ರತವನ್ನು ಮಾಡುವುದರಿಂದ ಸಂತಾನ ಭಾಗ್ಯ ಲಭಿಸುವುದು ಎಂದು ಹೇಳಲಾಗುವುದು.
ಓಂ ಉಮಾಮಹೇಶ್ವರಾಭ್ಯಂ ನಮಃ' '
''ಓಂ ಪಾರ್ವತ್ಯೈ ನಮಃ''
ಓಂ ಗೌರ್ಯೇ ನಮಃ'' ''
ಓ ಸಾಂಬ ಶಿವಾಯ ನಮಃ''
''ಹೇ ಗೌರೀ ಶಂಕರಾರ್ಧಾಂಗೀ ಯಥಾ ತ್ವಂ ಶಂಕರ ಪ್ರಿಯಾ''
''ತಥಾ ಮಾಂ ಕುರೂ ಕಲ್ಯಾಣೀ, ಕಾಂತ ಕಾಂತಾಂ ಸುದುರ್ಲಭಾಂ''
''ಓಂ ಹ್ಲೀಂ ವಾಗ್ವಾದಿನೀ ಭಗವತೀ ಮಮಂ ಕಾರ್ಯ ಸಿದ್ಧಿ ಕುರೂ ಕುರೂ ಫಟ್ ಸ್ವಾಹಾ'
ಮಂಗಳ ಗೌರಿ ವ್ರತವನ್ನು ಹೇಗೆ ಆಚರಿಸಲಾಗುವುದು:
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕು
ನಂತರ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ನಂತರ ಒಂದು ಹಲಗೆಯನ್ನು ಇಟ್ಟು ಕೆಂಪು ಬಟ್ಟೆ ಹಾಸಿ, ನಂತರ ದೇವಿಯ ಫೋಟೋವನ್ನು ಇಡಿ, ಬಲಿಕ ಹೂವು, ಆಭರಣಗಳಿಂದ ಅಲಂಕರಿಸಿ.
ಈ ದಿನ ಹಿಟ್ಟಿನಿಂದ ದೀಪ ಮಾಡಿ ಅದರಲ್ಲಿ ತುಪ್ಪ ಹಾಕ ದೀಪವನ್ನು ಹಚ್ಚಲಾಗುವುದು.
ಒಂದು ತಟ್ಟೆಯಲ್ಲಿ 16 ವೀಳ್ಯೆದೆಲೆ, 16 ಬಳೆಗಳು, 16 ಲವಂಗ, ಏಲಕ್ಕಿ, 16 ಬಗೆಯ ಹಣ್ಣುಗಳು, ಡ್ರೈ ಫ್ರೂಟ್ಸ್, ನವ ಧಾನ್ಯಗಳನ್ನು ಇಡಬೇಕು.
ದೇವಿಗೆ ಪಾಯಸ ತಯಾರಿಸಿ ನೈವೇದ್ಯ ಅರ್ಪಿಸಿ
ನಂತರ ಗೌರಿಗೆ ಪೂಜೆ ಸಲ್ಲಿಸಿ, ಗೌರಿ ಮಾತೆಯ ಮಂತ್ರಗಳನ್ನು ಪಠಿಸಿ, ಹಾಡುಗಳನ್ನು ಹಾಡಿ ನಂತರ ಮುತ್ತೈದೆಯರಿಗೆ ತಾಂಬೂಲ ನೀಡಿ.
ಈ ರೀತಿ ಪ್ರತಿ ಮಂಗಳವಾರ ಆಚರಿಸಲಾಗುವುದು.
ಯಾರಿಗೆ ಮಂಗಳವಾರ ಈ ವ್ರತವನ್ನು ಮಾಡಲಾಗುವುದಿಲ್ಲವೋ ಅವರು ಶುಕ್ರವಾರ ವ್ರತವನ್ನ ಕೈಗೊಳ್ಳಬಹುದು.
ಶ್ರಾವಣ ಮಾಸದ ಸುಂದರಕಾಂಡ ಪಠಿಸಿ
ಈ ದಿನ ಹನುಮಂತನನ್ನು ಆರಾಧಿಸಿ, ಸುಂದರ ಕಾಂಡವನ್ನು ಪಠಿಸುವುದರಿಂದ ಮಂಗಳ ದೋಷವಿದ್ದರೆ ನಿವಾರಣೆಯಾಗುವುದು, ಅವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವುದು, ವಿವಾಹಿತರ ವೈವಾಹಿಕ ಬದುಕಿನ ಸಮಸ್ಯೆ ದೂರಾಗುವುದು.
ಈ ಮಂಗಳ ದೋಷವಿದ್ದರೆ ಏನಾಗುತ್ತದೆ?
ಮಂಗಳ ದೋಷವಿದ್ದರೆ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ , ಜಗಳ, ಹೊಂದಾಣಿಕೆಗೆ ಕಷ್ಟ ಈ ಎಲ್ಲಾ ಸಮಸ್ಯೆಗಳು ಉಂಟಾಗುವುದು, ಅಲ್ಲದೆ ತೇಜೋವಧೆ, ಆರ್ಥಿಕ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳು ಉಂಟಾಗುವುದು.
ಮಂಗಳ ಗವರಿ ವ್ರತದಂದು ದೇವಿಗೆ 16 ಅಲಂಕಾರಿಕ ವಸ್ತುಗಳನ್ನು ಅರ್ಪಿಸಬೇಕು, ಇದರಿಂದ ವೈವಾಹಿಕ ಬದುಕಿನ ಸಮಸ್ಯೆ ದೂರಾಗುವುದು.



Click it and Unblock the Notifications