Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ಮೊದಲ ಮಂಗಳಗೌರಿ ವ್ರತ: ವೈವಾಹಿಕ ಬದುಕಿನ ಸಮಸ್ಯೆ ದೂರಾಗಲು ಈ ಪರಿಹಾರ ಒಳ್ಳೆಯದು
ಶ್ರಾವಣ ಮಾಸದಲ್ಲಿ ಸೋಮವಾರ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರೆ ಮಂಗಳವಾರ ಗೌರಿ ಮಾತೆಯನ್ನು ಪೂಜಿಸಲಾಗುವುದು. ಶ್ರಾವಣ ಮಾಸದ ಪ್ರತಿ ಮಂಗಳವಾರ ಮಹಿಳೆಯರು ಉಪವಾಸವಿದ್ದು ಈ ಮಂಗಳ ಗವರಿ ವ್ರತವನ್ನು ಆಚರಿಸುತ್ತಾರೆ.
ಮಂಗಳ ಗೌರಿ ವ್ರತವನ್ನು ಹೇಗೆ ಆಚರಿಸಬೇಕು, ಇದರ ಮಹತ್ವವೇನು? ವೈವಾಹಿಕ ಬದುಕಿನ ಸಮಸ್ಯೆ ಪರಿಹಾರಕ್ಕೆ, ಕಂಕಣ ಭಾಗ್ಯಕ್ಕೆ ಈ ವ್ರತ ಹೇಗೆ ಪರಿಣಾಮಕಾರಿ, ಈ ದಿನ ಪಠಿಸಬೇಕಾದ ಮಂತ್ರಗಳು ಇವುಗಳ ಬಗ್ಗೆ ಮಾಹಿತಿ ತಿಳಿಯೋಣ:

ಈ ಬಾರಿ ಮಂಗಳವಾರ ವ್ರತ 5 ವಾರ ಆಚರಿಸಬಹುದು
ಆಗಸ್ಟ್ 6
ಆಗಸ್ಟ್ 13
ಆಗಸ್ಟ್ 20
ಆಗಸ್ಟ್ 27
ಸೆಪ್ಟೆಂಬರ್ 3
ನವ ವಿವಾಹಿತರು ಈ ವ್ರತವನ್ನು ಆಚರಿಸುತ್ತಾರೆ
ಮಂಗಳ ಗೌರಿ ವ್ರತವನ್ನು ನವ ವಿವಾಹಿತರು ಆಚರಿಸುತ್ತಾರೆ. ಅಲ್ಲದೆ ಇದನ್ನು 5 ವರ್ಷದವರೆಗೆ ಆಚರಿಸುತ್ತಾರೆ. ತಾನು ಸೇರಿದ ಮನೆ ಚೆನ್ನಾಗಿರಬೇಕು, ಗಂಡನ ಆಯುಸ್ಸು-ಸಂಪತ್ತು ವೃದ್ಧಿಗೆ ಈ ವ್ರತವನ್ನು ಮಾಡುತ್ತಾರೆ, ಅಲ್ಲದೆ ಈ ವ್ರತವನ್ನು ಮಾಡುವುದರಿಂದ ಸಂತಾನ ಭಾಗ್ಯ ಲಭಿಸುವುದು ಎಂದು ಹೇಳಲಾಗುವುದು.
ಓಂ ಉಮಾಮಹೇಶ್ವರಾಭ್ಯಂ ನಮಃ' '
''ಓಂ ಪಾರ್ವತ್ಯೈ ನಮಃ''
ಓಂ ಗೌರ್ಯೇ ನಮಃ'' ''
ಓ ಸಾಂಬ ಶಿವಾಯ ನಮಃ''
''ಹೇ ಗೌರೀ ಶಂಕರಾರ್ಧಾಂಗೀ ಯಥಾ ತ್ವಂ ಶಂಕರ ಪ್ರಿಯಾ''
''ತಥಾ ಮಾಂ ಕುರೂ ಕಲ್ಯಾಣೀ, ಕಾಂತ ಕಾಂತಾಂ ಸುದುರ್ಲಭಾಂ''
''ಓಂ ಹ್ಲೀಂ ವಾಗ್ವಾದಿನೀ ಭಗವತೀ ಮಮಂ ಕಾರ್ಯ ಸಿದ್ಧಿ ಕುರೂ ಕುರೂ ಫಟ್ ಸ್ವಾಹಾ'
ಮಂಗಳ ಗೌರಿ ವ್ರತವನ್ನು ಹೇಗೆ ಆಚರಿಸಲಾಗುವುದು:
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕು
ನಂತರ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ, ದೇವರ ಕೋಣೆಯನ್ನು ಸ್ವಚ್ಛಗೊಳಿಸಿ, ನಂತರ ಒಂದು ಹಲಗೆಯನ್ನು ಇಟ್ಟು ಕೆಂಪು ಬಟ್ಟೆ ಹಾಸಿ, ನಂತರ ದೇವಿಯ ಫೋಟೋವನ್ನು ಇಡಿ, ಬಲಿಕ ಹೂವು, ಆಭರಣಗಳಿಂದ ಅಲಂಕರಿಸಿ.
ಈ ದಿನ ಹಿಟ್ಟಿನಿಂದ ದೀಪ ಮಾಡಿ ಅದರಲ್ಲಿ ತುಪ್ಪ ಹಾಕ ದೀಪವನ್ನು ಹಚ್ಚಲಾಗುವುದು.
ಒಂದು ತಟ್ಟೆಯಲ್ಲಿ 16 ವೀಳ್ಯೆದೆಲೆ, 16 ಬಳೆಗಳು, 16 ಲವಂಗ, ಏಲಕ್ಕಿ, 16 ಬಗೆಯ ಹಣ್ಣುಗಳು, ಡ್ರೈ ಫ್ರೂಟ್ಸ್, ನವ ಧಾನ್ಯಗಳನ್ನು ಇಡಬೇಕು.
ದೇವಿಗೆ ಪಾಯಸ ತಯಾರಿಸಿ ನೈವೇದ್ಯ ಅರ್ಪಿಸಿ
ನಂತರ ಗೌರಿಗೆ ಪೂಜೆ ಸಲ್ಲಿಸಿ, ಗೌರಿ ಮಾತೆಯ ಮಂತ್ರಗಳನ್ನು ಪಠಿಸಿ, ಹಾಡುಗಳನ್ನು ಹಾಡಿ ನಂತರ ಮುತ್ತೈದೆಯರಿಗೆ ತಾಂಬೂಲ ನೀಡಿ.
ಈ ರೀತಿ ಪ್ರತಿ ಮಂಗಳವಾರ ಆಚರಿಸಲಾಗುವುದು.
ಯಾರಿಗೆ ಮಂಗಳವಾರ ಈ ವ್ರತವನ್ನು ಮಾಡಲಾಗುವುದಿಲ್ಲವೋ ಅವರು ಶುಕ್ರವಾರ ವ್ರತವನ್ನ ಕೈಗೊಳ್ಳಬಹುದು.
ಶ್ರಾವಣ ಮಾಸದ ಸುಂದರಕಾಂಡ ಪಠಿಸಿ
ಈ ದಿನ ಹನುಮಂತನನ್ನು ಆರಾಧಿಸಿ, ಸುಂದರ ಕಾಂಡವನ್ನು ಪಠಿಸುವುದರಿಂದ ಮಂಗಳ ದೋಷವಿದ್ದರೆ ನಿವಾರಣೆಯಾಗುವುದು, ಅವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವುದು, ವಿವಾಹಿತರ ವೈವಾಹಿಕ ಬದುಕಿನ ಸಮಸ್ಯೆ ದೂರಾಗುವುದು.
ಈ ಮಂಗಳ ದೋಷವಿದ್ದರೆ ಏನಾಗುತ್ತದೆ?
ಮಂಗಳ ದೋಷವಿದ್ದರೆ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ , ಜಗಳ, ಹೊಂದಾಣಿಕೆಗೆ ಕಷ್ಟ ಈ ಎಲ್ಲಾ ಸಮಸ್ಯೆಗಳು ಉಂಟಾಗುವುದು, ಅಲ್ಲದೆ ತೇಜೋವಧೆ, ಆರ್ಥಿಕ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳು ಉಂಟಾಗುವುದು.
ಮಂಗಳ ಗವರಿ ವ್ರತದಂದು ದೇವಿಗೆ 16 ಅಲಂಕಾರಿಕ ವಸ್ತುಗಳನ್ನು ಅರ್ಪಿಸಬೇಕು, ಇದರಿಂದ ವೈವಾಹಿಕ ಬದುಕಿನ ಸಮಸ್ಯೆ ದೂರಾಗುವುದು.



Click it and Unblock the Notifications