Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಮಂಗಳ ಗೌರಿ ವ್ರತ 2023: ಮಂಗಳ ದೋಷಕ್ಕೆ ಪರಿಹಾರ ಕಂಡುಕೊಳ್ಳೋದು ಹೇಗೆ?
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಇಷ್ಟೇ ಅಲ್ಲದೇ, ಶ್ರಾವಣ ಮಾಸದಲ್ಲಿ ಅನೇಕ ಉಪವಾಸಗಳು ಮತ್ತು ಹಬ್ಬಗಳನ್ನು ಸಹ ಆಚರಿಸಲಾಗುತ್ತದೆ. ಶಿವಭಕ್ತರು ಶ್ರಾವಣ ಸೋಮವಾರದಂದು ಉಪವಾಸವನ್ನು ಆಚರಿಸುತ್ತಾರೆ. ಮತ್ತು ದೇವಸ್ಥಾನಕ್ಕೆ ಹೋಗಿ ಜಲಾಭಿಷೇಕ ಮಾಡುತ್ತಾರೆ. ಇದ್ರ ಜೊತೆಗೆ ಈ ತಿಂಗಳ ಮಂಗಳವಾರಗಳನ್ನು ಸಹ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

ಶ್ರಾವಣ ಸೋಮವಾರದಂದು ಶಿವನನ್ನು ಹೇಗೆ ಪೂಜಿಸಲಾಗುತ್ತದೆಯೋ ಅದೇ ರೀತಿ ಈ ತಿಂಗಳ ಎಲ್ಲಾ ಮಂಗಳವಾರಗಳು ಮಂಗಳ ಗೌರಿಗೆ ಮೀಸಲಾಗಿವೆ. ಈ ದಿನ ವಿವಾಹಿತ ಮಹಿಳೆಯರು ಅಖಂಡ ಸೌಭಾಗ್ಯವನ್ನು ಪಡೆಯಲು ಉಪವಾಸವನ್ನು ಮಾಡುತ್ತಾರೆ. ಇಷ್ಟೇ ಅಲ್ಲದೇ, ಮದುವೆ ವಿಳಂಬವಾಗುತ್ತಿರುವವರು ಅಥವಾ ಯಾರ ಜಾತಕದಲ್ಲಿ ಮಂಗಳ ದೋಷ ಇರುತ್ತದೆಯೋ ಅವರು ಮಂಗಳ ಗೌರಿ ವ್ರತವನ್ನು ಕೈಗೊಂಡರೆ ಒಳ್ಳೆಯದಾಗುತ್ತಂತೆ. ಅಷ್ಟಕ್ಕೂ ಮಂಗಳ ಗೌರಿ ವ್ರತದಂದು ಮಂಗಳ ದೋಷ ನಿವಾರಣೆಗೆ ಏನು ಪರಿಹಾರ ಕೈಗೊಳ್ಳಬೇಕು ಅನ್ನೋದನ್ನು ತಿಳಿಯೋಣ.
ಪೂಜಾ ಕ್ರಮ ಹೇಗಿರಬೇಕು?
ಮಂಗಳಗೌರಿ ವ್ರತದ ದಿನದಂದು ಬೆಳಿಗ್ಗೆ ಸ್ನಾನದ ನಂತರ ಮಾತೆ ಮಂಗಳ ಗೌರಿಯನ್ನು ಪೂಜಿಸಿ. ಮಂಗಳ ಗೌರಿಗೆ 16 ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ. ಅದರ ನಂತರ ಮಂಗಳ ಗೌರಿ ವ್ರತದ ಕಥೆಯನ್ನು ಕೇಳಿ. ಹೀಗೆ ಮಾಡುವುದರಿಂದ ಮಂಗಳಗೌರಿಯ ಆಶೀರ್ವಾದ ಲಭಿಸುತ್ತದೆ. ಮತ್ತು ನಿಮ್ಮ ಪತಿಯ ಆಯುಷ್ಯವು ದೀರ್ಘವಾಗಿರುತ್ತದೆ.
ವೈವಾಹಿಕ ತೊಡಕುಗಳಿದ್ದರೆ ಹೀಗೆ ಮಾಡಿ!
ಶ್ರಾವನ ಮಾಸದಲ್ಲಿ ಮಂಗಳಗೌರಿ ವ್ರತದ ದಿನದಂದು ಮಾತೆ ಮಂಗಳಗೌರಿಯನ್ನು ಕ್ರಮಬದ್ಧವಾಗಿ ಪೂಜಿಸಿ. ಅದರ ನಂತರ ಶ್ರೀ ಮಂಗಳ ಗೌರಿ ಮಂತ್ರವನ್ನು "ಓಂ ಗೌರಿ ಶಂಕರಾಯ ನಮಃ" ಎಂದು ಪಠಿಸಿ. ಇದರಿಂದ ಮಂಗಳಗೌರಿಯ ಆಶೀರ್ವಾದ ದೊರೆಯುತ್ತದೆ. ಹಾಗೂ ಮದುವೆಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
ವ್ಯಕ್ತಿಯ ಜಾತಕದಲ್ಲಿ ಮಂಗಳದೋಷವಿದ್ದರೆ ಮದುವೆ ವಿಳಂಬವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಂಗಳದೋಷವನ್ನು ತೊಡೆದುಹಾಕಲು ಶ್ರಾವಣ ಮಂಗಳವಾರದಂದು ರಾಮಚರಿತಮಾನಸದ ಸುಂದರಕಾಂಡವನ್ನು ಪಠಿಸಿ. ಇದರಿಂದ ನಿಮಗೆ ಆಂಜನೇಯನ ಆಶೀರ್ವಾದ ದೊರೆಯುತ್ತದೆ. ಹಾಗೂ ಮಂಗಳ ದೋಷವು ನಿವಾರಣೆಯಾಗುತ್ತದೆ. ವಿವಾಹದ ಮಾತುಕತೆಯಾಗುವ ಸಾಧ್ಯತೆಯೂ ಹೆಚ್ಚಾಗಿದೆ.
ನಿಮ್ಮ ಜಾತಕದಲ್ಲಿ ತೊಂದರೆಯಿದ್ದು, ನಿಮ್ಮೆಲ್ಲಾ ಶುಭ ಕಾರ್ಯಗಳಿಗೆ ಅಡ್ಡಿ-ಆತಂಕ ಉಂಟಾಗುತ್ತಿದ್ದರೆ ಶ್ರಾವಣ ಮಾಸದ ಮಂಗಳವಾರದಂದು ಮಂಗಳಗೌರಿ ಮತ್ತು ಆಂಜನೇಯನನ್ನು ಪೂಜಿಸಿ. ಇವರ ಜೊತೆಗೆ ಮಾತೆ ಮಂಗಳ ಗೌರಿ ಮತ್ತು ಆಂಜನೇಯನಿಗೆ ಸಿಂಧೂರವನ್ನು ಅರ್ಪಿಸಿ. ನಂತರ ಆ ಸಿಂಧೂರವನ್ನು ಅವರ ಪಾದಗಳಿಗೆ ಹಚ್ರಿ. ನಂತರ ನೀವು ಸಿಂಧೂರವನ್ನು ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಮಂಗಳದೋಷಕ್ಕೆ ಪರಿಹಾರ ಸಿಗುತ್ತದೆ.
ಸೂಚನೆ : ಈ ಮಾಹಿತಿ ಇಂಟರ್ನೆಟ್ ಆಧಾರಿತವಾಗಿದ್ದು ಬೋಲ್ಡ್ ಸ್ಕೈ ಕನ್ನಡ ಇದಕ್ಕೆ ಯಾವುದೇ ರೀತಿ ಜವಾಬ್ದಾರಿಯಾಗಿ ಇರೋದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರ ಸಲಹೆ ಪಡೆಯಿರಿ



Click it and Unblock the Notifications