Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಶವವೆಂದು ಹೊರತೆಗೆಯಲು ಬಂದರೆ ನೀರಿನಿಂದ ಎದ್ದು ಬಂದ ವ್ಯಕ್ತಿ..! ಪೊಲೀಸರು ಶಾಕ್!
ಕೆಲವೊಮ್ಮೆ ಆನ್ಲೈನ್ನಲ್ಲಿ ಎಂತೆಂತಹ ವಿಚಿತ್ರ ವಿಡಿಯೋಗಳು ಹರಿದಾಡುತ್ತವೆ ಅಂದ್ರೆ ನಾವು ನೋಡಿ ಶಾಕ್ ಆಗುತ್ತೇವೆ. ಅದೇ ರೀತಿ ಇಲ್ಲೊಂದು ವಿಡಿಯೋ ಸಹ ನೋಡುಗರಲ್ಲಿ ಅಚ್ಚರಿ ಜೊತೆ ಒಂದಿಷ್ಟು ನಗು ತರಿಸಿದೆ. ಆನ್ಲೈನ್ನಲ್ಲಿ ಈ ವಿಡಿಯೋ ನೋಡಿದ ಮಂದಿ ಶಾಕ್ ಜೊತೆಗೆ ಇಂತಹ ವಿಡಿಯೋ ಈವರೆಗೂ ನೋಡಿಲ್ಲ ಎನ್ನುತ್ತಿದ್ದಾರೆ.
ವಿಡಿಯೋವೊಂದರಲ್ಲಿ ಪೊಲೀಸರು ಹೊಳೆಯ ದಡದಲ್ಲಿ ಬಿದ್ದಿರುವ ವ್ಯಕ್ತಿಯನ್ನು ಶವವೆಂದು ಹೊರ ತೆಗೆಯಲು ಬಂದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಹೊಳೆಯಲ್ಲಿ ಮಲಗಿದ್ದ ವ್ಯಕ್ತಿ ಎದ್ದು ಬಂದಿರುವುದು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ತೆಲಂಗಾಣದ ಕೊಳದಲ್ಲಿ ತೇಲುತ್ತಿರುವ ವ್ಯಕ್ತಿಯನ್ನು ಸ್ಥಳೀಯರು ಪತ್ತೆ ಹಚ್ಚಿದ್ದರು.

ಈ ಹೊಳೆಯಲ್ಲಿ ತೇಲುತ್ತಿರುವುದ ಕಂಡು ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು 108 ಆಂಬುಲೆನ್ಸ್ಗೆ ಕರೆ ಮಾಡಿ ಸ್ಥಳಕ್ಕೆ ಬರಲು ಸೂಚಿಸಿದ್ದಾರೆ. ಹನುಮಕೊಂಡದ ರೆಡ್ಡಿಪುರಂ ಕೋವೆಲಕುಂಟ್ಲಾ ಬಳಿಯ ಹೊಳೆಯಲ್ಲಿ ಈ ಘಟನೆ ನಡೆದಿದೆ.
ಕಲ್ಲು ಕ್ವಾರಿ ಕೆಲಸಗಾರನಾಗಿದ್ದ ಈ ವ್ಯಕ್ತಿ ಸುಮಾರು 5 ಗಂಟೆಗಳ ಕಾಲ ನೀರಿನಲ್ಲಿ ಮಲಗಿರುವುದು ಕಂಡುಬಂದಿದೆ. ಇದನ್ನು ನೋಡಿಯೇ ಜನರು ಪೊಲೀಸರಿಗೆ ಶವ ತೇಲುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬಂದು ಶವ ಮೇಲೆ ಎತ್ತುವಾಗ ಆತ ಎಚ್ಚರಗೊಂಡಿದ್ದಾನೆ. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದಾರೆ.
ಆತ ಬಿಸಿಲಿನಲ್ಲಿ ಮದ್ಯಪಾನ ಮಾಡಿ ಹೊಳೆಯ ದಡದಲ್ಲಿ ಗಾಢ ನಿದ್ರೆಗೆ ಜಾರಿದ್ದಾನೆ, ಆದರೆ ಸತತ 5 ಗಂಟೆಗಳ ಕಾಲ ನೋಡಿದ್ದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳದಲ್ಲಿ ಜನಸಮೂಹ ಜಮಾಯಿಸುತ್ತಿದ್ದಂತೆ ಪೊಲೀಸರು "ದೇಹ"ವನ್ನು ಕೈಯಿಂದ ಹಿಡಿದುಕೊಂಡು ಸೂಕ್ಷ್ಮವಾಗಿ ದಡಕ್ಕೆ ಎಳೆಯಲು ಪ್ರಾರಂಭಿಸಿದರು. ಥಟ್ಟನೆ ಎಚ್ಚರಗೊಂಡ ಆತ ಪೊಲೀಸ್ ಕಡೆ ತಿರುಗಿ ನಾನು ಬದುಕಿರುವುದಾಗಿ ಹೇಳುತ್ತಿದ್ದಾನೆ.
ಶವವೆಂದು ಮೇಲೆ ಎತ್ತಲು ಬಂದ ಪೊಲೀಸರು ಇದ್ದಕ್ಕಿದ್ದಂತೆ ಎಚ್ಚರಗೊಂಡ ವ್ಯಕ್ತಿ ಕಂಡು ಶಾಕ್ ಆಗಿದ್ದಾರೆ. ಅಚ್ಚರಿ ಎಂದರೆ ಆತ ಕಲ್ಲು ಕ್ವಾರಿಯ ನೌಕರನಾಗಿದ್ದು, ಮದ್ಯಪಾನ ಮಾಡಿ ಬೇಸಿಗೆಯ ಬಿಸಿ ತಾಳಲಾಗದೆ ಹೊಳೆಯ ಬದಿಯಲ್ಲಿ ಮಲಗಿರುವುದಾಗಿ ಹೇಳಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವಿಡಿಯೋ ನೋಡಿದ ಮಂದಿ ನಗುವಿನಲ್ಲಿ ಮುಳುಗಿದ್ದಾರೆ. ಪೊಲೀಸರೇ ಈ ವಿಚಿತ್ರ ಘಟನೆಯಿಂದ ನಗೆ ಕಡಲಲ್ಲಿ ತೇಲಿದ್ದಾರೆ. ಅಲ್ಲಿದ್ದವರು ಸಹ ಅಚ್ಚರಿಯಲ್ಲಿ ನಗುವಿನಲ್ಲಿ ತೇಲಿದ್ದಾರೆ.
ಜೊತೆಗೆ ವಿಡಿಯೋ ನೋಡಿದ ನೆಟ್ಟಿಗರು ಸಹ ಇಂತಹ ವಿಡಿಯೋ ಎಂದಿಗೂ ನೋಡಿಲ್ಲ ಎನ್ನುತ್ತಿದ್ದಾರೆ. ನಾವು ಇದು ನಿಜವಾಗಲು ಶವದ ವಿಡಿಯೋ ಎಂದುಕೊಂಡಿದ್ದವು. ಆದರೆ ಕೊನೆಯಲ್ಲಿ ಟ್ವಿಸ್ಟ್ ಕಂಡು ಅಚ್ಚರಿ ಹೊರಹಾಕಿದ್ದಾರೆ. ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಆತ ನೆಲ್ಲೂರು ಜಿಲ್ಲೆಯ ಕವಲಿ ಪ್ರದೇಶದ ಸ್ಥಳೀಯರೆಂದು ಗುರುತಿಸಲಾಗಿದೆ. ಆತ ಆಯಾಸವನ್ನು ನಿವಾರಿಸಲು ನೀರಿನಲ್ಲಿ ನಿದ್ದೆ ಮಾಡಲು ಮುಂದಾಗಿದ್ದನಂತೆ. ಆತನ ಪ್ರಕಾರ ನಿತ್ಯ 12 ಗಂಟೆ ಕೆಲಸ ಮಾಡುತ್ತಾನಂತೆ. ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಮುಂದಾಗಿರುವುದಾಗಿ ಹೇಳಿದ್ದಾನೆ. ಜೊತೆಗೆ ಮನೆಗೆ ಹೋಗಲು ಹಣ ನೀಡಿ ಎಂದು ಪೊಲೀಸರನ್ನೇ ಕೇಳಿದ ಆತ 50 ರೂಪಾಯಿ ಪಡೆದು ಅಲ್ಲಿಂದ ತೆರಳಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ಈ ವಿಡಿಯೋ ನೋಡಿದ ಮಂದಿ ಬಿದ್ದು ಬಿದ್ದು ನಗುತ್ತಿದ್ದಾರೆ. ಆತನ ನಿದ್ರೆ ಹಾಳು ಮಾಡಿದ್ದೀರಿ ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ.



Click it and Unblock the Notifications
