Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶವವೆಂದು ಹೊರತೆಗೆಯಲು ಬಂದರೆ ನೀರಿನಿಂದ ಎದ್ದು ಬಂದ ವ್ಯಕ್ತಿ..! ಪೊಲೀಸರು ಶಾಕ್!
ಕೆಲವೊಮ್ಮೆ ಆನ್ಲೈನ್ನಲ್ಲಿ ಎಂತೆಂತಹ ವಿಚಿತ್ರ ವಿಡಿಯೋಗಳು ಹರಿದಾಡುತ್ತವೆ ಅಂದ್ರೆ ನಾವು ನೋಡಿ ಶಾಕ್ ಆಗುತ್ತೇವೆ. ಅದೇ ರೀತಿ ಇಲ್ಲೊಂದು ವಿಡಿಯೋ ಸಹ ನೋಡುಗರಲ್ಲಿ ಅಚ್ಚರಿ ಜೊತೆ ಒಂದಿಷ್ಟು ನಗು ತರಿಸಿದೆ. ಆನ್ಲೈನ್ನಲ್ಲಿ ಈ ವಿಡಿಯೋ ನೋಡಿದ ಮಂದಿ ಶಾಕ್ ಜೊತೆಗೆ ಇಂತಹ ವಿಡಿಯೋ ಈವರೆಗೂ ನೋಡಿಲ್ಲ ಎನ್ನುತ್ತಿದ್ದಾರೆ.
ವಿಡಿಯೋವೊಂದರಲ್ಲಿ ಪೊಲೀಸರು ಹೊಳೆಯ ದಡದಲ್ಲಿ ಬಿದ್ದಿರುವ ವ್ಯಕ್ತಿಯನ್ನು ಶವವೆಂದು ಹೊರ ತೆಗೆಯಲು ಬಂದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಹೊಳೆಯಲ್ಲಿ ಮಲಗಿದ್ದ ವ್ಯಕ್ತಿ ಎದ್ದು ಬಂದಿರುವುದು ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ತೆಲಂಗಾಣದ ಕೊಳದಲ್ಲಿ ತೇಲುತ್ತಿರುವ ವ್ಯಕ್ತಿಯನ್ನು ಸ್ಥಳೀಯರು ಪತ್ತೆ ಹಚ್ಚಿದ್ದರು.

ಈ ಹೊಳೆಯಲ್ಲಿ ತೇಲುತ್ತಿರುವುದ ಕಂಡು ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು 108 ಆಂಬುಲೆನ್ಸ್ಗೆ ಕರೆ ಮಾಡಿ ಸ್ಥಳಕ್ಕೆ ಬರಲು ಸೂಚಿಸಿದ್ದಾರೆ. ಹನುಮಕೊಂಡದ ರೆಡ್ಡಿಪುರಂ ಕೋವೆಲಕುಂಟ್ಲಾ ಬಳಿಯ ಹೊಳೆಯಲ್ಲಿ ಈ ಘಟನೆ ನಡೆದಿದೆ.
ಕಲ್ಲು ಕ್ವಾರಿ ಕೆಲಸಗಾರನಾಗಿದ್ದ ಈ ವ್ಯಕ್ತಿ ಸುಮಾರು 5 ಗಂಟೆಗಳ ಕಾಲ ನೀರಿನಲ್ಲಿ ಮಲಗಿರುವುದು ಕಂಡುಬಂದಿದೆ. ಇದನ್ನು ನೋಡಿಯೇ ಜನರು ಪೊಲೀಸರಿಗೆ ಶವ ತೇಲುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬಂದು ಶವ ಮೇಲೆ ಎತ್ತುವಾಗ ಆತ ಎಚ್ಚರಗೊಂಡಿದ್ದಾನೆ. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದಾರೆ.
ಆತ ಬಿಸಿಲಿನಲ್ಲಿ ಮದ್ಯಪಾನ ಮಾಡಿ ಹೊಳೆಯ ದಡದಲ್ಲಿ ಗಾಢ ನಿದ್ರೆಗೆ ಜಾರಿದ್ದಾನೆ, ಆದರೆ ಸತತ 5 ಗಂಟೆಗಳ ಕಾಲ ನೋಡಿದ್ದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳದಲ್ಲಿ ಜನಸಮೂಹ ಜಮಾಯಿಸುತ್ತಿದ್ದಂತೆ ಪೊಲೀಸರು "ದೇಹ"ವನ್ನು ಕೈಯಿಂದ ಹಿಡಿದುಕೊಂಡು ಸೂಕ್ಷ್ಮವಾಗಿ ದಡಕ್ಕೆ ಎಳೆಯಲು ಪ್ರಾರಂಭಿಸಿದರು. ಥಟ್ಟನೆ ಎಚ್ಚರಗೊಂಡ ಆತ ಪೊಲೀಸ್ ಕಡೆ ತಿರುಗಿ ನಾನು ಬದುಕಿರುವುದಾಗಿ ಹೇಳುತ್ತಿದ್ದಾನೆ.
ಶವವೆಂದು ಮೇಲೆ ಎತ್ತಲು ಬಂದ ಪೊಲೀಸರು ಇದ್ದಕ್ಕಿದ್ದಂತೆ ಎಚ್ಚರಗೊಂಡ ವ್ಯಕ್ತಿ ಕಂಡು ಶಾಕ್ ಆಗಿದ್ದಾರೆ. ಅಚ್ಚರಿ ಎಂದರೆ ಆತ ಕಲ್ಲು ಕ್ವಾರಿಯ ನೌಕರನಾಗಿದ್ದು, ಮದ್ಯಪಾನ ಮಾಡಿ ಬೇಸಿಗೆಯ ಬಿಸಿ ತಾಳಲಾಗದೆ ಹೊಳೆಯ ಬದಿಯಲ್ಲಿ ಮಲಗಿರುವುದಾಗಿ ಹೇಳಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವಿಡಿಯೋ ನೋಡಿದ ಮಂದಿ ನಗುವಿನಲ್ಲಿ ಮುಳುಗಿದ್ದಾರೆ. ಪೊಲೀಸರೇ ಈ ವಿಚಿತ್ರ ಘಟನೆಯಿಂದ ನಗೆ ಕಡಲಲ್ಲಿ ತೇಲಿದ್ದಾರೆ. ಅಲ್ಲಿದ್ದವರು ಸಹ ಅಚ್ಚರಿಯಲ್ಲಿ ನಗುವಿನಲ್ಲಿ ತೇಲಿದ್ದಾರೆ.
ಜೊತೆಗೆ ವಿಡಿಯೋ ನೋಡಿದ ನೆಟ್ಟಿಗರು ಸಹ ಇಂತಹ ವಿಡಿಯೋ ಎಂದಿಗೂ ನೋಡಿಲ್ಲ ಎನ್ನುತ್ತಿದ್ದಾರೆ. ನಾವು ಇದು ನಿಜವಾಗಲು ಶವದ ವಿಡಿಯೋ ಎಂದುಕೊಂಡಿದ್ದವು. ಆದರೆ ಕೊನೆಯಲ್ಲಿ ಟ್ವಿಸ್ಟ್ ಕಂಡು ಅಚ್ಚರಿ ಹೊರಹಾಕಿದ್ದಾರೆ. ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಆತ ನೆಲ್ಲೂರು ಜಿಲ್ಲೆಯ ಕವಲಿ ಪ್ರದೇಶದ ಸ್ಥಳೀಯರೆಂದು ಗುರುತಿಸಲಾಗಿದೆ. ಆತ ಆಯಾಸವನ್ನು ನಿವಾರಿಸಲು ನೀರಿನಲ್ಲಿ ನಿದ್ದೆ ಮಾಡಲು ಮುಂದಾಗಿದ್ದನಂತೆ. ಆತನ ಪ್ರಕಾರ ನಿತ್ಯ 12 ಗಂಟೆ ಕೆಲಸ ಮಾಡುತ್ತಾನಂತೆ. ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಮುಂದಾಗಿರುವುದಾಗಿ ಹೇಳಿದ್ದಾನೆ. ಜೊತೆಗೆ ಮನೆಗೆ ಹೋಗಲು ಹಣ ನೀಡಿ ಎಂದು ಪೊಲೀಸರನ್ನೇ ಕೇಳಿದ ಆತ 50 ರೂಪಾಯಿ ಪಡೆದು ಅಲ್ಲಿಂದ ತೆರಳಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ಈ ವಿಡಿಯೋ ನೋಡಿದ ಮಂದಿ ಬಿದ್ದು ಬಿದ್ದು ನಗುತ್ತಿದ್ದಾರೆ. ಆತನ ನಿದ್ರೆ ಹಾಳು ಮಾಡಿದ್ದೀರಿ ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ.



Click it and Unblock the Notifications


