Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಂದೆಯ ಚಿತೆಗೆ ಮದ್ಯ, ಬೀಡಿ, ಪಾನ್ ಹಾಕಿ ಅಂತ್ಯಸಂಸ್ಕಾರ..!! ವಿಚಿತ್ರ ಕಥೆ ಕೇಳಿ..!
ಮರಣ ಹೊಂದಿದವರು ಅಂತ್ಯಸಂಸ್ಕಾರದ ವೇಳೆ ಗಂಧ, ತುಪ್ಪ ಅಷ್ಟೇ ಏಕೆ, ವಿಭೂತಿ, ಅವರ ಐಷಾರಾಮಿ ವಸ್ತುಗಳನ್ನ ಬಳಸಿ ಅವರ ಸಂಸ್ಕಾರ ನೆರವೇರಿಸುವುದು ಸಾಮಾನ್ಯ. ಹಿಂದೂ ಸಂಪ್ರದಾಯದಲ್ಲಿ ಮೃತರನ್ನು ಚಿತೆ ಮೇಲೆ ಮಲಗಿಸಿ ಹಲಸು, ಮಾವು, ಗಂಧದ ಕಟ್ಟಿಗಗಳ ಬಳಸಿ ಸುಡುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ.
ಆದರೆ ಇತ್ತೀಚಿಗೆ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿವೆ. ಆದರೆ ಇಲ್ಲೊಬ್ಬ ತನ್ನ ತಂದೆಯ ಚಿತೆಯನ್ನು ವಿಚಿತ್ರ ವಸ್ತುಗಳಿಂದ ತುಂಬಿಸಿ ಸುದ್ದಿಯಾಗಿದ್ದಾನೆ. ಆತ ತನ್ನ ತಂದೆ ಮೃತಪಟ್ಟ ಬಳಿಕ ವಾರಣಾಸಿಯ ಮಣಿಕರ್ಣಿಕಾ ಘಾಟ್ನಲ್ಲಿ ಅಂತ್ಯಸಂಸ್ಕಾರ ಮಾಡಲು ತಂದಿದ್ದ, ಆದರೆ ಆತ ತಂದೆಯ ಚಿತೆಯನ್ನ ಮದ್ಯ, ಬೀಡಿ, ಪಾನ್ ಮಸಾಲಾಗಳ ಹಾಕಿ ಅಂತ್ಯಸಂಸ್ಕಾರ ಮಾಡಿ ಸುದ್ದಿಯಾಗಿದ್ದಾನೆ.
ಹಾಗಾದರೆ ಆತ ತಂದೆಯ ಚಿತೆಗೆ ಇದನ್ನೆಲ್ಲಾ ಹಾಕಿದ್ದು ಏಕೆ? ಆತನ ಕೊನೆ ಆಸೆ ಏನಾಗಿತ್ತು, ಯಾರು ಆ ವ್ಯಕ್ತಿ ಆತ ಚಿತೆಗೆ ಏನೆಲ್ಲಾ ಹಾಕಿದ್ದ ಎಂಬುದನ್ನು ನೋಡಿ.

ವಾರಣಾಸಿಯ ಮಣಿಕರ್ಣಿಕಾ ಘಾಟ್ನಲ್ಲಿ ತನ್ನ ತಂದೆಯ ಅಂತ್ಯಕ್ರಿಯೆಯ ಚಿತೆಗೆ ಮದ್ಯ, ಬೀಡಿ ಮತ್ತು ಬನಾರಸಿ ಪಾನ್ ಹಾಕಿದ್ದಾನೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಲಕ್ಷಣ ರೀತಿಯ ಅಂತ್ಯಸಂಸ್ಕಾರಕ್ಕೆ ಆತ ಕಾರಣ ನೀಡಿದ್ದಾನೆ. ತನ್ನ ತಂದೆ ಬದುಕಿದ್ದಾಗ ಅವರ ಯಾವ ಆಸೆಯನ್ನೂ ತೀರಿಸಲಾಗಲಿಲ್ಲ ಹಾಗಾಗಿ ಅವರು ಮೃತಪಟ್ಟ ಬಳಿಕ ಅವರ ಇಷ್ಟದ ವಸ್ತುಗಳನ್ನು ಅವರಿಗೆ ಅರ್ಪಿಸಿದ್ದೇನೆ ಎಂದಿದ್ದಾನೆ.
ವಿಡಿಯೋದಲ್ಲಿ ಆತ ತಂದೆಯ ಚಿತೆಯ ಮುಂದೆ ನಿಂತು ಮದ್ಯ, ಪಾನ್ ಮಸಾಲಾ, ಬೀಡಿಗಳನ್ನು ಅರ್ಪಿಸುತ್ತಿದ್ದಾನೆ. ಅವರು ಬದುಕಿದ್ದಾಗ ಅವರು ಈ ವಸ್ತಗಳನ್ನು ಇಷ್ಟಪಡುತ್ತಿದ್ದರು. ಹೀಗಾಗಿ ಅವರ ಯಾವುದೇ ಆಸೆಗಳು ಈಡೇರದೆ ಹಾಗೆಯೇ ಉಳಿಯದಿರಲಿ ಎಂದು ಈ ರೀತಿ ಮಾಡಿರುವುದಾಗಿ ಹೇಳಿದ್ದಾನೆ.
ಹಿಂದೂ ಸಂಪ್ರದಾಯ ಹೇಳೋದೆ ಬೇರೆ..!
ಹಿಂದೂ ಸಂಪ್ರದಾಯದ ಪ್ರಕಾರ ಮೃತನ ಚಿತೆಗೆ ಆತನ ಇಷ್ಟದ ವಸ್ತುಗಳನ್ನು ಅರ್ಪಿಸುವ ರೂಢಿ ಬೆಳೆದು ಬಂದಿದೆ. ಆದರೆ ಸತ್ತವರ ಚಿತೆಗೆ ಅರ್ಪಿಸಿರುವ ವಸ್ತುವನ್ನು ಅವರ ಪಿಂಡ ಪ್ರಧಾನ ಕಾರ್ಯದಲ್ಲೂ ಅರ್ಪಿಸಬೇಕು ಎನ್ನುವ ಸಂಪ್ರದಾಯವಿದೆ. ಅಲ್ಲದೆ ವರ್ಷಕ್ಕೊಮ್ಮೆ ಅವರ ತಿಥಿಯಂದು ಇದೇ ವಸ್ತುಗಳನ್ನು ಮತ್ತೆ ಅರ್ಪಿಸಬೇಕು ಎಂಬ ಮಾತಿದೆ.
ಚಿತೆಗೆ ಯಾವ ವಸ್ತು ಅರ್ಪಿಸಬಾರದು
ಯಾರನ್ನಾದರು ಚಿತೆಯಲ್ಲಿ ಮಲಗಿಸಿದ್ದ ವೇಳೆ ದೇವರ ಪ್ರಸಾದ ಅಥವಾ ತೀರ್ಥವನ್ನು ಸಿಂಪಡಿಸಬಾರದಂತೆ. ಇದರ ಜೊತೆ ದೇವರ ಫೋಟೋ, ದೇವರಿಗೆ ಅರ್ಪಿಸಿರುವ ಹಾರ, ಬಿಲ್ಪತ್ರೆಗಳನ್ನು ಚಿತೆಗೆ ಅರ್ಪಿಸಬಾರದು.
ಸೂರ್ಯಾಸ್ತದ ಬಳಿಕ ಅಂತ್ಯಸಂಸ್ಕಾರ ಮಾಡಬಾರದು
ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಮಾಡಬಾರದಂತೆ. ಸೂರ್ಯಾಸ್ತದ ನಂತರ ಯಾರಾದರೂ ಮರಣ ಹೊಂದಿದರೆ ಅವರ ಅಂತ್ಯ ಸಂಸ್ಕಾರವನ್ನು ಮರುದಿನ ಸೂರ್ಯಾಸ್ತವಾಗುವ ಮುನ್ನ ಮಾಡಲಾಗುತ್ತದೆ. ಆದರೆ, ಸೂರ್ಯಾಸ್ತದ ನಂತರ ಮಾಡಲಾಗುವುದಿಲ್ಲ. ಸೂರ್ಯಾಸ್ತದ ನಂತರ ಯಾವುದೇ ಮರಣ ಹೊಂದಿದ ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ಮಾಡಿದರೆ, ಇಹಲೋಕವನ್ನು ತ್ಯಜಿಸಿದ ಆ ವ್ಯಕ್ತಿಯ ಆತ್ಮವು ಪರಲೋಕದಲ್ಲಿ ಶಾಂತಿ ಸಿಗದೇ ಬಳಲಬೇಕಾಗುತ್ತದೆ. ಮರಣ ಹೊಂದಿದ ವ್ಯಕ್ತಿಯು ಮುಂದಿನ ಜನ್ಮದಲ್ಲಿ ಅಂಗವಿಕಲನಾಗಿ ಹುಟ್ಟಬೇಕಾಗುತ್ತದೆ. ಆದ್ದರಿಂದ ಸೂರ್ಯಾಸ್ತದ ನಂತರ ಶವ ಸಂಸ್ಕಾರ ಮಾಡುವುದನ್ನು ಸೂಕ್ತವಲ್ಲವೆಂದು ಪರಿಗಣಿಸಲಾಗಿದೆ.



Click it and Unblock the Notifications