ಮಕರ ಸಂಕ್ರಾಂತಿ: ಬೆಂಗಳೂರಿನ ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸದ ಸೂರ್ಯರಶ್ಮಿ, ಅಶುಭದ ಸೂಚನೆಯೇ?

ಮಕರ ಸಂಕ್ರಾಂತಿ ಹಬ್ಬವನ್ನು ಎಲ್ಲೆಡೆ ಸಡಗರ-ಸಂಭ್ರಮದಿಂದ ಆಚರಿಸಲಾಗಿದೆ, ಶಬರಿಮಲೆಯಲ್ಲಿ ಭಕ್ತರು ಮಕರವಿಳಕ್ಕು ಕಣ್ತುಂಬಿಕೊಂಡು ಧನ್ಯರಾಗಿದ್ದಾರೆ, ಆದರೆ ಬೆಂಗಳೂರಿನ ಬಸವನಗುರಿಯಲ್ಲಿರುವ ಪ್ರಸಿದ್ಧ ಗವಿಗಂಗಾಧೇಶ್ವರ ದೇವಾಲಯಕ್ಕೆ ಬಂದ ಭಕ್ತರಿಗೆ ನಿರಾಸೆ ಉಂಟಾಗಿದೆ,ವಿಸ್ಮಯದ ಘಟನೆಯನ್ನು ಕಣ್ತುಂಬಿಕೊಳ್ಳಲು ಬಂದವರು ಆ ಅಪೂರ್ವ ಘಟನೆಯನ್ನು ನೋಡಲು ಸಾಧ್ಯವಾಗದೇ ಇರುವುದಕ್ಕೆ ಬೇಸರದಿಂದ ಮರಳಿದ್ದಾರೆ.

Makara Sankranti 2025

ಪ್ರತಿ ವರ್ಷವೂ ಮಕರ ಸಂಕ್ರಾಂತಿಯಂದು ಈ ದೇವಾಲಯದಲ್ಲಿ ನಡೆಯುವ ಪವಾಡ ಈ ವರ್ಷ ಕಂಡು ಬಂದಿಲ್ಲ
ಮಕರ ಸಂಕ್ರಾಂತಿ ಧಾರ್ಮಿಕ ಕಾರಣದಿಂದ ತುಂಬಾನೇ ಮಹತ್ವದ ದಿನ, ಈ ದಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಇಂದು ಬೆಂಗಳೂರಿನ ಗವಿಗಂಗಾಧರ ದೇವಾಲಯದಲ್ಲಿ ಸಾಕಷ್ಟು ಭಕ್ತರು ಬಂದು ಪೂಜೆ ಸಲ್ಲಿಸಿ ಈ ದೇವಾಲಯದಲ್ಲಿ ಪ್ರತಿವರ್ಷ ನಡೆಯುವ ಚಮತ್ಕಾರ ನೋಡಲು ಕಾಯುತ್ತಿದ್ದರು. ಈ ದೇವಾಲಯದ ವಿಶೇಷತೆಯೆಂದರೆ ಮಕರ ಸಂಕ್ರಾಂತಿ ದಿನ ದಕ್ಷಿಣ ಥದಿಂದ ಉತ್ತರ ಪಥಕ್ಕೆ ಸಾಗುವ ಸೂರ್ಯನ ಕಿರಣಗಳು ದೇವರ ವಿಗ್ರಹದ ಮೇಲೆ ಬೀಳುತ್ತದೆ. ಸಂಜೆ ಹೊತ್ತು 5. 14ರಿಂದ 5-17ರ ನಡುವೆ ಸೂರ್ಯುನ ರಶ್ಮಿ ಗರ್ಭಗುಡಿಯಲ್ಲಿರುವ ಗಂಗಾಧರನ ಸ್ಪರ್ಶಿಸುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅಲ್ಲಿ ನೆರೆದ ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಎಲ್ಇಡಿ ಸ್ಕ್ರೀನ್‌ ಕೂಡ ಅಳವಡಿಸಲಾಗಿತ್ತು, ಆದರೆ ಈ ವರ್ಷ ಅಂಥ ಅಪೂರ್ಣ ದೃಶ್ಯ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ.

ಈ ವರ್ಷ ಸೂರ್ಯರಶ್ಮಿ ದೇವಾಲಯದ ಗರ್ಭಗುಡಿ ಪ್ರವೇಶಿಸದಿರಲು ಕಾರಣವೇನು?
ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಇತ್ತು, ಮೋಡವಿದ್ದ ಕಾರಣ ಸೂರ್ಯಕಿರಣ ಗಂಗಾಧೇಶ್ವರನ ಮೇಲೆ ಬೀಳಲು ಸಾಧ್ಯವಾಗಿಲ್ಲ, ಮಕರ ಸಂಕ್ರಾಂತಿಯಿದ ಉತ್ತರಾಯಣ ಶುರು, ಇದೇ ಸಮಯದಲ್ಲಿ ಸೂರ್ಯನ ಬೆಳಕು ಬೀಳುತ್ತೆ, ಆದರೆ ಅಕಾಲಿಕ ಮೋಡ ಮುಸುಕಿದ ವಾತಾವರಣ ಕಾರಣ ಈ ವರ್ಷ ಸೂರ್ಯ ಕಿರಣಗಳ ಪ್ರಭೆ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ.

ಈ ರೀತಿಯಾಗಿರುವುದು ತುಂಬಾ ಅಪರೂಪ
ಇತಿಹಾಸದಲ್ಲಿ ಇದುವರೆಗೆ ಮೂರು ಬಾರಿ ಈ ರೀತಿ ಆಗಿದೆ ಎಂದು ಹೇಳಲಾಗುತ್ತದೆ. ಕೆಲವರು ಸೂರ್ಯ ರಶ್ಮಿ ಗೋಚರಿಸದೆ ಇರುವುದನ್ನು ಕೆಲವರು ನಂಬಿಕೆಯ ಪ್ರಕಾರ ವಿಶ್ಲೇಷಣೆ ಮಾಡುತ್ತಿದ್ದಾರೆ. ಇದು ಶುಭ ಸೂಚನೆಯಲ್ಲ, ಸೂರ್ಯನ ರಶ್ಮಿ ಬೀಳದೆ ಇರುವುದು ಮುಂಬರುವ ಅನರ್ಥಗಳ ಸೂಚನೆ ಎಂದು ಕೂಡ ಹೇಳುತ್ತಿದ್ದಾರೆ.

ಪ್ರಕೃತಿಯ ವಿಸ್ಮಯಗಳಿಗೂ ಧಾರ್ಮಿಕ ನಂಬಿಕೆಗಳಿಗೂ ಸಂಬಂಧವಿರುವುದನ್ನು ನೋಡಿದ್ದೇವೆ
ಧಾರ್ಮಿಕ ನಂಬಿಕೆಯು ಯಾವ ದಿನ ಗ್ರಹಣ ಉಂಟಾಗುತ್ತದೆ ಎಂದು ನಿಖರವಾಗಿ ಹೇಳುತ್ತದೆ, ಆ ದಿನ ವಿಜ್ಞಾನದಲ್ಲಿ ಹೇಳಲಾದ ದಿನಕ್ಕಿಂತ ಭಿನ್ನವಾಗಿರಲ್ಲ. ಇನ್ನು ಪ್ರಕೃತಿಯಲ್ಲಿ ನಡೆಯುವ ಕೆಲವೊಂದು ಘಟನೆಗಳು ವಿಜ್ಞಾನದ ವಿಶ್ಲೇಷಣೆಗೆ ನಿಲುಕುವಂಥದ್ದಲ್ಲ. ಹಲವು ದೇವಾಲಯಗಳಲ್ಲಿ ಹಲವು ಪವಾಡಗಳು ನಡೆಯುತ್ತದೆ, ಅವುಗಳೆನ್ನೆಲ್ಲಾ ವೈಜ್ಞಾನಿಕವಾಗಿ ತರ್ಕಿಸಲು ಹೋದರೆ ಅಲ್ಲಿ ಉತ್ತರ ಸಿಗಲ್ಲ, ಕೆಲವೊಂದು ವಿಷಯಗಳಷ್ಟೇ ವಿಜ್ಞಾನದ ತರ್ಕಕ್ಕೆ ನಿಲುಕುವಂಥದ್ದು, ಸೂರ್ಯನ ರಶ್ಮಿ ಹೀಗೆ ಗರ್ಭಗುಡಿ ಪ್ರವೇಶ ಮಾಡುವುದು ದೇವರ ಪವಾಡವೇ ಸರಿ.

English summary

Makara Sankranti 2025: sun Rays Did not Touch Gavi Gangadhareshwara Temple This Year

Makara Sankranti 2025: Every year miracle missed this year in Gavi Gangadhareshwara Temple
Story first published: Tuesday, January 14, 2025, 21:30 [IST]
X
Desktop Bottom Promotion