Latest Updates
-
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು!
Mahashivratri 2026: ಎಐ ರಚಿಸಿರುವ ಶಿವನ ಅತ್ಯದ್ಭುತ ಫೋಟೋಗಳು ಇಲ್ಲಿವೆ!
ಶಿವನಿಗೆ ಅರ್ಪಿತವಾದ ಇಂದು ದಿನ ಮಹಾಶಿವರಾತ್ರಿಯನ್ನು ಫೆ.15ರಂದು ಆಚರಿಸಲಾಗುತ್ತದೆ. ಈ ಹಬ್ಬದಂದು ಶಿವನ ಆರ್ಶೀವಾದ ಪಡೆಯಲು ಸಮರ್ಪಿಸಲಾಗಿದೆ. ಶಿವರಾತ್ರಿ ಎಂದರೆ ಪವಿತ್ರ ರಾತ್ರಿ, ಈ ದಿನ ಶಿವನಿಗೆ ವಿಶೇಷ ಪೂಜೆ, ಭಜನೆ, ಆರಾಧನೆ, ಉಪವಾಸ ಮಾಡುವುದು ನೋಡಬಹುದು. ಈ ದಿನ ಶಿವನ ನೆನೆರೆ ಅವರ ಕಷ್ಟಗಳು ನಿವಾರಣೆಯಾಗಿ ಪಾಪಗಳು ಕರಗಿ ಸುಖ ಜೀವನವನ್ನು ಅನುಭವಿಸುತ್ತಾರೆ ಎಂದು ನಂಬಲಾಗಿದೆ.

ಭಕ್ತರು ಇಂದು ಶಿವನ ನಾಮ, ಜಪಮಂತ್ರಗಳನ್ನು ಸ್ಮರಣೆ ಮಾಡುತ್ತಾ ಶಿವನ ಆಶೀರ್ವಾದಕ್ಕೆ ಪಾತ್ರರಾಗಲು ಬಯಸುತ್ತಾರೆ. ಮಹಾಶಿವರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಸಮೇತ ಭೂಲೋಕಕ್ಕೆ ಬಂದು ಸಂಚಾರ ಮಾಡುತ್ತಾರೆ.

ಈ ದಿನದಂದು ಯಾರು ನಿಷ್ಕಲ್ಮಷ ಮನಸ್ಸಿನಿಂದ, ಶಿವನಾಮ ಸ್ಮರಣೆ ಮಾಡಿ ಪೂಜಿಸುತ್ತಾರೋ ಅವರ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ನಂಬಿ ಬರುವ ಭಕ್ತರನ್ನು ಶಿವನು ಕಾಪಾಡುತ್ತಾನೆ. ಹಾಗೆ ಆತನ ಪಾರ್ಥನೆಯಿಂದ ನಿಮ್ಮ ನೋವು, ಕಷ್ಟಗಳು ನಿವಾರಣೆಯಾಗಲಿದೆ.

ಶಿವನ ಆಶೀರ್ವಾದವನ್ನು ಪಡೆಯಲು ಶಿವನ ಭಕ್ತರು ಈ ದಿನದಂದು ಉಪವಾಸ ಮಾಡುತ್ತಾರೆ. ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ ಮತ್ತು ಶಿವನ ಮಂತ್ರಗಳು, ಶಿವ ಪುರಾಣ ಇತ್ಯಾದಿಗಳನ್ನು ಪಠಿಸುತ್ತಾರೆ.

ಮಹಾ ಶಿವರಾತ್ರಿಯ ದಿನದಂದು ಹಾಲನ್ನು ಖರೀದಿಸಿ ಶಿವಲಿಂಗಕ್ಕೆ ಅಭಿಷೇಕಕ್ಕಾಗಿ ನೀಡುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಹೀಗಾಗಿ ಈ ದಿನದಂದು ಬಹುತೇಕ ಎಲ್ಲಾ ದೇವಾಲಯದಲ್ಲಿ ಹಾಲಿನ ಅಭಿಷೇಕ ಮಾಡುವುದು ನೋಡಬಹುದು.

ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿದಾಗ ಜಾತಕದಲ್ಲಿ ಚಂದ್ರ ಬಲಹೀನನಾಗಿದ್ದರೆ ಬಲಿಷ್ಠನಾಗುತ್ತಾನೆ ಎಂದು ಹೇಳಲಾಗುತ್ತದೆ. ಸದ್ಯ ಶಿವನ ಆಶೀರ್ವಾದ ಪಡೆಯಲು ಈ ಪರಿಹರ ಮಾಡಲಾಗುತ್ತದೆ.
ಶಿವನ ಅಭಿಷೇಕಕ್ಕೆ ಸಕ್ಕರೆ, ಜೇನುತುಪ್ಪ, ಬಿಲ್ವ ಪತ್ರೆ, ಶ್ರೀಗಂಧ ಇತ್ಯಾದಿಗಳನ್ನು ನೀಡುವುದು ಶಿವನ ಕೃಪೆಗೆ ಪಾತ್ರರಾಗಬಹುದು. ಹಾಗೆ ಬಡವರಿಗೆ ಬಟ್ಟೆ, ಮೊಸರು, ಸಿರಿಧಾನ್ಯಗಳ ದಾನ ಮಾಡುವುದು ಕೂಡ ಶಿವನಿಗೆ ಸಂತಸ ಮೂಡಿಸಲಿದೆ.

ಮಹಾ ಶಿವರಾತ್ರಿಯ ಸಮಯದಲ್ಲಿ ನಂಬಿಕೆಗಳ ಪ್ರಕಾರ ಎಳ್ಳನ್ನು ಯಾರಿಗಾದರೂ ದಾನ ಮಾಡಿದರೆ ಕಷ್ಟದ ವಿಷಯಗಳು ಯಶಸ್ವಿಯಾಗಿ ಕೊನೆಗೊಳ್ಳುತ್ತವೆ.

ಶಿವನು ಎಂದಿಗೂ ತನ್ನ ಭಕ್ತರಲ್ಲಿ ಕಟ್ಟುನಿಟ್ಟಿನ ವ್ರತವನ್ನು ಕೈಗೊಳ್ಳುವಂತೆ ಬಯಸುವುದಿಲ್ಲ. ಅಂತೆಯೇ ಶ್ರದ್ಧೆ ಭಕ್ತಿಯಿಂದ ಶಿವನನ್ನು ಪೂಜಿಸುವುದು ಅತ್ಯವಶ್ಯಕವಾಗಿದೆ. ಹೀಗಾಗಿ ರಾತ್ರಿಯಿಂದ ಪೂಜೆ ಆರಂಭಿಸುವವರು ಶ್ರದ್ಧಾ ಭಕ್ತಿಯಿಂದ ಬೆಳಗ್ಗೆಯ ವರೆಗೂ ಉಪವಾಸ ಮಾಡುತ್ತಾರೆ.

ಒಂದು ದಿನ ಇಡೀ ಉಪವಾಸವಿದ್ದು ಮರುದಿನವೇ ವ್ರತವನ್ನು ಸಮಾಪ್ತಿ ಗೊಳಿಸಲಾಗುತ್ತದೆ. ಈ ಸಮಯದಲ್ಲಿ ಶಿವನಿಗೆ ಪ್ರಿಯವಾದ ಪ್ರಸಾದ ಮಾಡಿ ಸವಿಯಲಾಗುತ್ತದೆ.



Click it and Unblock the Notifications
