Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Mahagauri Mantra In Kannada: ನವರಾತ್ರಿಯ 9ನೇ ದಿನ ಮಹಾಗೌರಿ ಪೂಜೆ, ಮಂತ್ರ ಇಲ್ಲಿದೆ
ನವರಾತ್ರಿಯ ಸಂಭ್ರಮದಲ್ಲಿ 8 ದಿನವನ್ನು ಅತ್ಯಂತ ವಿಶೇಷ ಎಂದು ಪರಿಗಣಿಸಲಾಗುತ್ತದೆ. 9 ದಿನಗಳ ಆಚರಣೆಯಲ್ಲಿ 8ನೇ ದಿನ ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಈ ದಿನದಂದು ಮಾ ದುರ್ಗಾ ಮಾತೆಯ ಎಂಟನೇ ರೂಪವಾದ ಮಾ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಆಕೆಯ ಮೈಬಣ್ಣವು ಸಂಪೂರ್ಣವಾಗಿ ಸುಂದರವಾಗಿರುತ್ತದೆ. ಆಕೆಯನ್ನು ಶಂಖ, ಚಂದ್ರನೊಂದಿಗೆ ಹೋಲಿಸಲಾಗುತ್ತದೆ.
ದುರ್ಗೆ ಒಂದೊಂದು ದಿನ ಒಂದೊಂದು ಅವತಾರದಲ್ಲಿ ಭೂಮಿಗೆ ಬರುತ್ತಾಳೆ. ಹಾಗೆ ಭಕ್ತರ ಬೇಡಿಕೆಗಳನ್ನು ಆಕೆ ಇಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ 8ನೇ ದಿನದಂದು ದುರ್ಗೆ ಮಹಾಗೌರಿಗೆ ಸಮರ್ಪಿತವಾದ ದಿನವಾಗಿದೆ. ದುರ್ಗೆಯ ಮಹಾಗೌರಿಯ ಅವತಾರದಲ್ಲಿ 8ನೇ ದಿನ ಭೂಮಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ.

ಮಹಾಗೌರಿಯು 16ನೇ ವಯಸ್ಸಿನವರಾಗಿರುವರು. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುಗ ಹಿಡಿದಿರುತ್ತಾಳೆ. ಆಕೆ ಬಿಳಿ ಬಟ್ಟೆ ಧರಿಸಿರುವರು ಮತ್ತು ಆಕೆಯ ಮುಖವು ತಂಪಾಗಿರುವ ಚಂದ್ರನಂತೆ ಹೊಳೆಯುತ್ತಿರುತ್ತದೆ.
ದುರ್ಗೆಯ ಈ 9 ಅವತಾರಗಳ ಪೈಕಿ ಮಹಾಗೌರಿ ಅವತಾರಕ್ಕೆ ತನ್ನದೇ ಮಹತ್ವವಿದೆ. ಆಕೆ ಬಿಳಿ ವಸ್ತ್ರದ ಹಾಲಿನಂತ ಮೈಬಣ್ಣ ಹೊಂದಿರುವ ಗೌರಿ. ಹಾಗೆ ಆಕೆ ದುಷ್ಟರನ್ನು ಸಂಹಾರ ಮಾಡುವ ಮುನ್ನ ಆಕೆ ಪ್ರಶಾಂತವಾಗಿ ಧ್ಯಾನಕ್ಕೆ ಕುಳಿತುಕೊಳ್ಳುವ ಅವತಾರ ಎಂಬ ವಾದವೂ ಇದೆ.
ಮಹಾಗೌರಿಯ ಕಥೆ ಏನು?
ದುರ್ಗೆ ಭೂಲೋಕದಲ್ಲಿ ಜನ್ಮ ಪಡೆದಳಂತೆ ಆದರೆ ಅದರಿಂದ ಮುಕ್ತಿ ಪಡೆಯಬೇಕಾದರೆ ಆಕೆ ಶಿವನನ್ನು ಮದುವೆಯಾಗಬೇಕಾಯಿತು. ಹೀಗಾಗಿ ನಾರದ ಮುನಿಗಳ ಸಲಹೆಯಂತೆ ದೇವಿಯು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡಿದಳು. ವರ್ಷಗಳ ಕಾಲ ತಪಸ್ಸು ಮಾಡಿದ್ದರಿಂದ ಆಕೆಯ ದೇಗದ ತುಂಬೆಲ್ಲಾ ಗಿಡ ಬಳಿ ಹಬ್ಬಿದವು, ಮಣ್ಣು ಆಕೆಯನ್ನು ತುಂಬಿಕೊಂಡಿತ್ತು. ಆಕೆ ಆಹಾರ ಹಾಗೂ ನೀರನ್ನು ಬಿಟ್ಟು ಸಂಪೂರ್ಣವಾಗಿ ತಪಸ್ಸಿನಲ್ಲಿ ತೊಡಗಿಕೊಳ್ಳುವರು. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗಿತ್ತು. ಆಕೆಯ ತಪಸ್ಸಿನಿಂದ ಸಂತಸಗೊಂಡ ಶಿವನು ಪ್ರತ್ಯಕ್ಷನಾದನು. ಹಾಗೆ ಆಕೆಯ ಬೇಡಿಕೆ ಈಡೇರಿಸಿದನು.
ನಂತರ ಆಕೆಯ ದೇಹದ ಕೊಳೆಯನ್ನು ತೊಳೆಯಲು ಗಂಗೆಯಲ್ಲಿ ಕೇಳಿಕೊಂಡನಂತೆ, ನಂತರ ಮಹಾಗೌರಿಯು ಎಂದಿನಂತೆ ಬಿಳಿಯಾಗಿ ಹೊಳಪು ಬಂದಿತ್ತು. ಮಹಾಗೌರಿ ದೇವಿಯು ರಾಹುವಿನ ಅಧಿಪತಿ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುವಳು ಎಂಬ ನಂಬಿಕೆ ಇದೆ.
ಮಹಾಗೌರಿ ದೇವಿಯ ಮಂತ್ರಗಳು
ಓಂ ದೇವಿ ಮಹಾಗೌರೈ ನಮಃ
ಓಂ ದೇವಿ ಮಹಾಗೌರೈ ನಮಃ ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ
ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ
ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ
ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ
ಶ್ವೇತೇ ವೃಷೇಷಾಮಾರೂಢ ಶ್ವೇತಾಂಬರಧರ ಶುಚಿಃ
ಮಹಾಗೌರಿ ಶುಭಂ ದದ್ಯನ್ ಮಹಾದೇವ್ ಪ್ರಮೋದದ



Click it and Unblock the Notifications











