Latest Updates
-
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು!
ಮಹಾಶಿವರಾತ್ರಿ: ಶಿವಪೂಜೆಗೆ ಬಿಲ್ವೆಪತ್ರೆ ಹೇಗೆ ಮತ್ತು ಎಷ್ಟು ಅರ್ಪಿಸಬೇಕು?
ಗಣಪತಿಯನ್ನು ಪೂಜಿಸುವಾಗ ಗರಿಕೆ ಅರ್ಪಿಸುವುದು ಶ್ರೇಷ್ಠ ಅದರಂತೆಯೇ ಶಿವ ಪೂಜೆಯಲ್ಲಿ ಬಿಲ್ವಪತ್ರೆ ಇರಲೇಬೇಕು, ಎಲ್ಲಾ ಶಿವ ದೇವಾಲಯಗಳಲ್ಲಿ ಬಿಲ್ವಪತ್ರೆ ಗಿಡವನ್ನು ನೆಟ್ಟು ಬೆಳೆಸಲಾಗುವುದು. ಬಿಲ್ವಪತ್ರೆಯನ್ನು ಬಳಸುವುದಕ್ಕೂ ಕೆಲವೊಂದು ನಿಯಮವಿದೆ, ಶಿವ ಪೂಜೆಯಲ್ಲಿ ಅರ್ಪಿಸುವ ಬಿಲ್ವಪತ್ರೆ ಹೇಗಿರಬೇಕು? ಹೇಗೆ ಅರ್ಪಿಸಬೇಕು ಎಂದು ನೋಡೋಣ ಬನ್ನಿ:

ಶಿವ ಪೂಜೆಗೆ ಬಿಲ್ವೆ ಪತ್ರೆ ಎಲೆ ಹೇಗೆ ಆಯ್ಕೆ ಮಾಡಬೇಕು?
ನೀವು ಶಿವನ ಪೂಜೆಗೆ ಬಿಲ್ವೆಪತ್ರೆ ಎಲೆ ಕುಯ್ದು ತರುವಾಗ ಎಲ್ಲಾ ಎಲೆ ತರುವಂತಿಲ್ಲ, ಆ ಎಲೆಯ ಮೇಲೆ ಯಾವುದೇ ಬಿಳಿ ಚುಕ್ಕಿ ಇರಬಾರದು, ಇನ್ನು ಎಲೆ ಕೂತು ರಂಧ್ರ ಮಾಡಬಾರದು. ಅಲ್ಲದೆ ಒಂದೊಂದೇ ಎಲೆ ಕೀಳಬಾರದು, ನೀವು ಬಿಲ್ವೆಪತ್ರೆ ಎಲೆ ಆಯ್ಕೆ ಮಾಡುವಾಗ ಆ ದಂಟಿನಲ್ಲಿ ಮೂರು ಎಲೆ ಜೊತೆಯಾಗಿ ಇರಬೇಕು. ಎಲೆ ಹರಿದು ಹೋಗಿದ್ದರೆ ಅಂಥ ಎಲೆ ಬಳಸಬಾರದು.
ಏಕೆ ಮೂರು ಎಲೆ ಜೊತೆಗಿರುವಂತೆ ನಾವು ಎಲೆಗಳನ್ನು ಕೀಳಬೇಕು?
ಬಿಲ್ವೆಪತ್ರೆ ಮೂರು ಎಲೆ ಶಿವನ ಮೂರನೇ ಕಣ್ಣಿನ ಮಹತ್ವ ಹೇಳುತ್ತದೆ, ಶಿವ ಮೂರನೇ ಕಣ್ಣು ಬಿಟ್ಟರೆ ಈ ಜಗತ್ತು ಸುಟ್ಟು ಭಸ್ಮವಾಗುತ್ತದೆ ಎಂದು ಎಂದು ಹೇಳಲಾಗುವುದು, ಮೂರನೇ ಕಣ್ಣು ಜ್ಞಾನದ ಸಂಕೇತ ಕೂಡ ಹೌದು. ದೇವ-ಅಸುರರ ನಡುವೆ ಯುದ್ಧ ನಡೆದಾಗ ಶಿವನು ಮಾರಕ ಆಯುಧಗಳನ್ನು ತಮ್ಮ ದೇಹದೊಳಗೆ ಹೀರಿಕೊಳ್ಳುತ್ತಾನೆ, ಅದುವೇ ಮೂರನೇ ಕಣ್ಣು ಎಂದು ಹೇಳಲಾಗುವುದು.
ಮೂರು ಎಲೆಗಳನ್ನು ಈ ಅರ್ಥಗಳನ್ನೂ ಕೂಡ ಸೂಚಿಸುತ್ತದೆ
ಮೂರು ಎಲೆಗಳನ್ನು ಏಕೆ ಅರ್ಪಿಸಬೇಕು ಎಂಬುವುದನ್ನು ಹೀಗೆ ಕೂಡ ವಿಶ್ಲೇಷಲಾಗುವುದು
ಈ ಮೂರು ಎಲೆಗಳು ತಾಮಸ ಅಂದರೆ ದೇಹ
ರಜಸ ಅಂದರೆ ಭಾವನೆ
ಸಾತ್ವಿಕ ಅಂದರೆ ಬುದ್ಧಿ ಇದನ್ನು ಸೂಚಿಸುತ್ತದೆ ಎಂದು ಹೇಳಲಾಗುವುದು.
ಈ ಮೂರು ಎಲೆ ಅರ್ಪಿಸುವ ಮೂಲಕ ನಾವು ಕಾಯ, ವಾಚ, ಮನಸ್ಸಾ ದೇವರಿಗೆ ನಮ್ಮನ್ನು ನಾವು ಅರ್ಪಿಸಿಕೊಂಡಿದ್ದೇವೆ ಎಂಬುವುದನ್ನು ಸೂಚಿಸುತ್ತದೆ.
ಪೌರಾಣಿಕ ನಂಬಿಕ ಪ್ರಕಾರ
ಬಿಲ್ವೆಪತ್ರೆ ಎಲೆಯಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ,ವಿಷ್ಣು, ಶಿವ ನೆಲೆಸಿದ್ದಾರೆ ಎಂದು ಹೇಳಲಾಗುವುದು.
ಬಿಲ್ವೆಪತ್ರೆ ಎಲೆಯನ್ನು ಶಿವಲಿಂಗಕ್ಕೆ ಹೇಗೆ ಅರ್ಪಿಸಬೇಕು?
ನೀವು ಶಿವಲಿಂಗಕ್ಕೆ ಬಿಲ್ವೆಪತ್ರೆ ಎಲೆಯನ್ನು ಅರ್ಪಿಸುವಾಗ ಹಾಗೆಯೇ ಅರ್ಪಿಸಬೇಡಿ, ಅದರ ತೊಟ್ಟು ನಮ್ಮ ಕಡೆ ಎಲೆಯ ತುದಿ ಶಿವಲಿಂಗದ ಕಡೆ ಇರುವಂತೆ ಅರ್ಪಿಸಬೇಕು, ಹೀಗೆ ಅರ್ಪಿಸುವುದರಿಂದ ಎಲೆತಟ್ಟುವಿನ ಮೂಲಕ ಶಿವತತ್ತ್ವ ಆ ಪರಿಸರದಲ್ಲಿ ಹರಡುವುದು ಎಂದು ಹೇಳಲಾಗುವುದು.
ಶಿವರಾತ್ರಿಯ ದಿನದಂದು ಬಿಲ್ವೆಪತ್ರೆ ಎಲೆ ಕೀಳಬೇಡಿ
ಸೋಮವಾರದ ದಿನ, ಶಿವರಾತ್ರಿಯ ದಿನ ಬಿಲ್ವೆಪತ್ರೆ ಎಲೆ ಕೀಳಬೇಡಿ, ಒಮ್ಮೆ ಶಿವಲಿಂಗಕ್ಕೆ ಅರ್ಪಿಸಿದ ಬಿಲ್ವೆಪತ್ರೆ ಎಲೆಯನ್ನು ಮತ್ತೊಮ್ಮೆ ಬಳಸಬಾರದು. ಬಿಲ್ವೆಪತ್ರೆ ಎಲೆಯನ್ನು ಕೀಳುವಾಗ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ನಂತರ ಕೀಳಿ. ಸ್ಕಂದ ಪುರಾಣದಲ್ಲಿ ಬಿಲ್ವೆ ಪತ್ರೆ ಮರದಲ್ಲಿ ಪಾರ್ವತಿ ನೆಲೆಸಿದ್ದಾಳೆ ಎಂದು ಹೇಳಲಾಗುವುದು.
ಬಿಲ್ವೆಪತ್ರೆ ಎಲೆ ಅರ್ಪಿಸದೆ ಪೂಜೆ ಶಿವ ಪೂಜೆ ಮಾಡಿದರೆ ಅದು ಸಂಪೂರ್ಣವಾಗ ಉವುದಿಲ್ಲ, ಹಾಗಾಗಿ ಶಿವಪೂಜೆಯಲ್ಲಿ ಬಿಲ್ವೆಪತ್ರೆ ಎಲೆ ಇರಲೇಬೇಕು.
ಮೂಲತೋಭವರೂಪಾಯ ಮಧ್ಯತೋ ಮೃದುರೂಪಿಣಿ
ಅಗ್ರತಃ ಶಿವರೂಪಾಯ ಪತ್ರ್ನೆವೇರ್ದಸ್ವರೂಪಿಣಿ
ಸ್ಕಂದೇ ವೇದಾಂತರೂಪೆಯ ತರುರಾಜಯಃ ತೆ ನಮಃ
ಸರ್ವಕಾಮಪ್ರದಾಮ್ ಬಿಲ್ವಮ್ ದಾರಿದ್ರ್ಯ ಪ್ರಣಾಶನಂ ಬಿಲ್ವಾತ್ಪಾತ್ರಂ ನಾಸ್ಪಿ ಯೇನ ತುಷ್ಯತಿ ಶಂಕರ
ಈ ಮಂತ್ರ ಪಠಣೆ ಮೂಲಕ ಬಿಲ್ವೆಪತ್ರೆ ಎಲೆಯನ್ನು ಅರ್ಪಿಸಲಾಗುವುದು.
ಬಿಲ್ವೆಪತ್ರೆ ಎಲೆಯನ್ನು ಮನೆಯ ಸಮೀಪ ಬೆಳೆಯಲ್ಲ
ಈ ಬಿಲ್ವೆಪತ್ರೆ ಎಲೆಯನ್ನು ಮನೆಯ ಸಮೀಪವಾಗಲಿ, ತೋಟದಲ್ಲಿ ಆಗ್ಲಿ ಬೆಳಯಲ್ಲ,ಈ ಮರದ ನೆರಳು ಮನೆಗೆ ಬೀಳಬಾರದು ಅಂತಾರೆ. ದೇವಾಲಯದಲ್ಲಿ ಬೆಳೆಯುತ್ತಾರೆ, ರಸ್ತೆಗಳಲ್ಲಿಯೂ ಕಾಣಬಹುದು.
ಬಿಲ್ವೆಪತ್ರೆ ಎಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಎಲೆಯಾಗಿದೆ.



Click it and Unblock the Notifications