Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಮಹಾಶಿವರಾತ್ರಿ: ಶಿವಪೂಜೆಗೆ ಬಿಲ್ವೆಪತ್ರೆ ಹೇಗೆ ಮತ್ತು ಎಷ್ಟು ಅರ್ಪಿಸಬೇಕು?
ಗಣಪತಿಯನ್ನು ಪೂಜಿಸುವಾಗ ಗರಿಕೆ ಅರ್ಪಿಸುವುದು ಶ್ರೇಷ್ಠ ಅದರಂತೆಯೇ ಶಿವ ಪೂಜೆಯಲ್ಲಿ ಬಿಲ್ವಪತ್ರೆ ಇರಲೇಬೇಕು, ಎಲ್ಲಾ ಶಿವ ದೇವಾಲಯಗಳಲ್ಲಿ ಬಿಲ್ವಪತ್ರೆ ಗಿಡವನ್ನು ನೆಟ್ಟು ಬೆಳೆಸಲಾಗುವುದು. ಬಿಲ್ವಪತ್ರೆಯನ್ನು ಬಳಸುವುದಕ್ಕೂ ಕೆಲವೊಂದು ನಿಯಮವಿದೆ, ಶಿವ ಪೂಜೆಯಲ್ಲಿ ಅರ್ಪಿಸುವ ಬಿಲ್ವಪತ್ರೆ ಹೇಗಿರಬೇಕು? ಹೇಗೆ ಅರ್ಪಿಸಬೇಕು ಎಂದು ನೋಡೋಣ ಬನ್ನಿ:

ಶಿವ ಪೂಜೆಗೆ ಬಿಲ್ವೆ ಪತ್ರೆ ಎಲೆ ಹೇಗೆ ಆಯ್ಕೆ ಮಾಡಬೇಕು?
ನೀವು ಶಿವನ ಪೂಜೆಗೆ ಬಿಲ್ವೆಪತ್ರೆ ಎಲೆ ಕುಯ್ದು ತರುವಾಗ ಎಲ್ಲಾ ಎಲೆ ತರುವಂತಿಲ್ಲ, ಆ ಎಲೆಯ ಮೇಲೆ ಯಾವುದೇ ಬಿಳಿ ಚುಕ್ಕಿ ಇರಬಾರದು, ಇನ್ನು ಎಲೆ ಕೂತು ರಂಧ್ರ ಮಾಡಬಾರದು. ಅಲ್ಲದೆ ಒಂದೊಂದೇ ಎಲೆ ಕೀಳಬಾರದು, ನೀವು ಬಿಲ್ವೆಪತ್ರೆ ಎಲೆ ಆಯ್ಕೆ ಮಾಡುವಾಗ ಆ ದಂಟಿನಲ್ಲಿ ಮೂರು ಎಲೆ ಜೊತೆಯಾಗಿ ಇರಬೇಕು. ಎಲೆ ಹರಿದು ಹೋಗಿದ್ದರೆ ಅಂಥ ಎಲೆ ಬಳಸಬಾರದು.
ಏಕೆ ಮೂರು ಎಲೆ ಜೊತೆಗಿರುವಂತೆ ನಾವು ಎಲೆಗಳನ್ನು ಕೀಳಬೇಕು?
ಬಿಲ್ವೆಪತ್ರೆ ಮೂರು ಎಲೆ ಶಿವನ ಮೂರನೇ ಕಣ್ಣಿನ ಮಹತ್ವ ಹೇಳುತ್ತದೆ, ಶಿವ ಮೂರನೇ ಕಣ್ಣು ಬಿಟ್ಟರೆ ಈ ಜಗತ್ತು ಸುಟ್ಟು ಭಸ್ಮವಾಗುತ್ತದೆ ಎಂದು ಎಂದು ಹೇಳಲಾಗುವುದು, ಮೂರನೇ ಕಣ್ಣು ಜ್ಞಾನದ ಸಂಕೇತ ಕೂಡ ಹೌದು. ದೇವ-ಅಸುರರ ನಡುವೆ ಯುದ್ಧ ನಡೆದಾಗ ಶಿವನು ಮಾರಕ ಆಯುಧಗಳನ್ನು ತಮ್ಮ ದೇಹದೊಳಗೆ ಹೀರಿಕೊಳ್ಳುತ್ತಾನೆ, ಅದುವೇ ಮೂರನೇ ಕಣ್ಣು ಎಂದು ಹೇಳಲಾಗುವುದು.
ಮೂರು ಎಲೆಗಳನ್ನು ಈ ಅರ್ಥಗಳನ್ನೂ ಕೂಡ ಸೂಚಿಸುತ್ತದೆ
ಮೂರು ಎಲೆಗಳನ್ನು ಏಕೆ ಅರ್ಪಿಸಬೇಕು ಎಂಬುವುದನ್ನು ಹೀಗೆ ಕೂಡ ವಿಶ್ಲೇಷಲಾಗುವುದು
ಈ ಮೂರು ಎಲೆಗಳು ತಾಮಸ ಅಂದರೆ ದೇಹ
ರಜಸ ಅಂದರೆ ಭಾವನೆ
ಸಾತ್ವಿಕ ಅಂದರೆ ಬುದ್ಧಿ ಇದನ್ನು ಸೂಚಿಸುತ್ತದೆ ಎಂದು ಹೇಳಲಾಗುವುದು.
ಈ ಮೂರು ಎಲೆ ಅರ್ಪಿಸುವ ಮೂಲಕ ನಾವು ಕಾಯ, ವಾಚ, ಮನಸ್ಸಾ ದೇವರಿಗೆ ನಮ್ಮನ್ನು ನಾವು ಅರ್ಪಿಸಿಕೊಂಡಿದ್ದೇವೆ ಎಂಬುವುದನ್ನು ಸೂಚಿಸುತ್ತದೆ.
ಪೌರಾಣಿಕ ನಂಬಿಕ ಪ್ರಕಾರ
ಬಿಲ್ವೆಪತ್ರೆ ಎಲೆಯಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ,ವಿಷ್ಣು, ಶಿವ ನೆಲೆಸಿದ್ದಾರೆ ಎಂದು ಹೇಳಲಾಗುವುದು.
ಬಿಲ್ವೆಪತ್ರೆ ಎಲೆಯನ್ನು ಶಿವಲಿಂಗಕ್ಕೆ ಹೇಗೆ ಅರ್ಪಿಸಬೇಕು?
ನೀವು ಶಿವಲಿಂಗಕ್ಕೆ ಬಿಲ್ವೆಪತ್ರೆ ಎಲೆಯನ್ನು ಅರ್ಪಿಸುವಾಗ ಹಾಗೆಯೇ ಅರ್ಪಿಸಬೇಡಿ, ಅದರ ತೊಟ್ಟು ನಮ್ಮ ಕಡೆ ಎಲೆಯ ತುದಿ ಶಿವಲಿಂಗದ ಕಡೆ ಇರುವಂತೆ ಅರ್ಪಿಸಬೇಕು, ಹೀಗೆ ಅರ್ಪಿಸುವುದರಿಂದ ಎಲೆತಟ್ಟುವಿನ ಮೂಲಕ ಶಿವತತ್ತ್ವ ಆ ಪರಿಸರದಲ್ಲಿ ಹರಡುವುದು ಎಂದು ಹೇಳಲಾಗುವುದು.
ಶಿವರಾತ್ರಿಯ ದಿನದಂದು ಬಿಲ್ವೆಪತ್ರೆ ಎಲೆ ಕೀಳಬೇಡಿ
ಸೋಮವಾರದ ದಿನ, ಶಿವರಾತ್ರಿಯ ದಿನ ಬಿಲ್ವೆಪತ್ರೆ ಎಲೆ ಕೀಳಬೇಡಿ, ಒಮ್ಮೆ ಶಿವಲಿಂಗಕ್ಕೆ ಅರ್ಪಿಸಿದ ಬಿಲ್ವೆಪತ್ರೆ ಎಲೆಯನ್ನು ಮತ್ತೊಮ್ಮೆ ಬಳಸಬಾರದು. ಬಿಲ್ವೆಪತ್ರೆ ಎಲೆಯನ್ನು ಕೀಳುವಾಗ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ನಂತರ ಕೀಳಿ. ಸ್ಕಂದ ಪುರಾಣದಲ್ಲಿ ಬಿಲ್ವೆ ಪತ್ರೆ ಮರದಲ್ಲಿ ಪಾರ್ವತಿ ನೆಲೆಸಿದ್ದಾಳೆ ಎಂದು ಹೇಳಲಾಗುವುದು.
ಬಿಲ್ವೆಪತ್ರೆ ಎಲೆ ಅರ್ಪಿಸದೆ ಪೂಜೆ ಶಿವ ಪೂಜೆ ಮಾಡಿದರೆ ಅದು ಸಂಪೂರ್ಣವಾಗ ಉವುದಿಲ್ಲ, ಹಾಗಾಗಿ ಶಿವಪೂಜೆಯಲ್ಲಿ ಬಿಲ್ವೆಪತ್ರೆ ಎಲೆ ಇರಲೇಬೇಕು.
ಮೂಲತೋಭವರೂಪಾಯ ಮಧ್ಯತೋ ಮೃದುರೂಪಿಣಿ
ಅಗ್ರತಃ ಶಿವರೂಪಾಯ ಪತ್ರ್ನೆವೇರ್ದಸ್ವರೂಪಿಣಿ
ಸ್ಕಂದೇ ವೇದಾಂತರೂಪೆಯ ತರುರಾಜಯಃ ತೆ ನಮಃ
ಸರ್ವಕಾಮಪ್ರದಾಮ್ ಬಿಲ್ವಮ್ ದಾರಿದ್ರ್ಯ ಪ್ರಣಾಶನಂ ಬಿಲ್ವಾತ್ಪಾತ್ರಂ ನಾಸ್ಪಿ ಯೇನ ತುಷ್ಯತಿ ಶಂಕರ
ಈ ಮಂತ್ರ ಪಠಣೆ ಮೂಲಕ ಬಿಲ್ವೆಪತ್ರೆ ಎಲೆಯನ್ನು ಅರ್ಪಿಸಲಾಗುವುದು.
ಬಿಲ್ವೆಪತ್ರೆ ಎಲೆಯನ್ನು ಮನೆಯ ಸಮೀಪ ಬೆಳೆಯಲ್ಲ
ಈ ಬಿಲ್ವೆಪತ್ರೆ ಎಲೆಯನ್ನು ಮನೆಯ ಸಮೀಪವಾಗಲಿ, ತೋಟದಲ್ಲಿ ಆಗ್ಲಿ ಬೆಳಯಲ್ಲ,ಈ ಮರದ ನೆರಳು ಮನೆಗೆ ಬೀಳಬಾರದು ಅಂತಾರೆ. ದೇವಾಲಯದಲ್ಲಿ ಬೆಳೆಯುತ್ತಾರೆ, ರಸ್ತೆಗಳಲ್ಲಿಯೂ ಕಾಣಬಹುದು.
ಬಿಲ್ವೆಪತ್ರೆ ಎಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಎಲೆಯಾಗಿದೆ.



Click it and Unblock the Notifications
