Latest Updates
-
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ!
ಮಹಾ ಶಿವರಾತ್ರಿ 2024: ಈ ವಸ್ತು ಶಿವನಿಗೆ ಅರ್ಪಿಸಿದರೆ ಇಷ್ಟಾರ್ಥ ಸಿದ್ಧಿ..!
ಹಿಂದೂ ಧರ್ಮದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿಯನ್ನು ಎಲ್ಲಾ ಕಡೆಗಳಲ್ಲೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಮಂಗಳಕರ ದಿನದಲ್ಲಿ ಶಿವನ ಮೆಚ್ಚಿಸಲು ಉಪವಾಸ, ವಿಶೇಷ ಪೂಜೆ, ಜಾಗರಣೆ ಮಾಡಲಾಗುತ್ತದೆ. ಹೀಗಾಗಿ ಪರಮಶಿವನ ಪೂಜೆಗೆ ಈ ದಿನ ಬಹಳ ಉತ್ತಮ ಎಂದು ಪರಿಗಣಿಸಲಾಗಿದೆ.
ಈ ವರ್ಷದ ಮಹಾ ಶಿವರಾತ್ರಿಯನ್ನು 8 ಮಾರ್ಚ್ 2024 ರಂದು ಆಚರಿಸಲಾಗುತ್ತದೆ. ಈ ಹಬ್ಬದಂದು ಶಿವನಿಗೆ ಯಾವ ಆಹಾರ ನೈವೇದ್ಯ ಅಥವಾ ಅರ್ಪಿಸಿದರೆ ಇಷ್ಟಾರ್ಥ ನೆರವೇರಲಿದೆ ಎಂಬುದನ್ನು ನಾವಿಂದು ನೋಡೋಣ. ಹಾಗೂ ಆ ಆಹಾರದ ಆರೋಗ್ಯದ ಅಂಶವೇನು ಎಂಬುದನ್ನು ತಿಳಿದುಕೊಳ್ಳೋಣ.

1. ಬೇಲ್/ಬೇಲದ ಹಣ್ಣು (ವುಡ್ ಆಪಲ್)
ಭಗವಾನ್ ಶಿವನಿಗೆ ಬೇಲದ ಹಣ್ಣುಗಳು ತುಂಬಾ ಇಷ್ಟ ಎಂದು ನಂಬಲಾಗಿದೆ. ಬೇಲ್ ಮರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಹಣ್ಣನ್ನು ಮತ್ತು ಎಲೆಯನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಮತ್ತು ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕಾರಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ ಮತ್ತು ಮಲಬದ್ಧತೆ ಮತ್ತು ಅತಿಸಾರದಂತಹ ವಿವಿಧ ಜೀರ್ಣಕಾರಿ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಈ ಎಲ್ಲಾ ಕಾರಣದಿಂದಾಗಿಯೂ ಈ ಹಣ್ಣಿನ ಬಳಕೆ ಹೆಚ್ಚಾಗಿದೆ.
2. ಹಾಲು
ಹಾಲನ್ನು ಶಿವನ ಅಚ್ಚುಮೆಚ್ಚಿನ ನೈವೇದ್ಯವೆಂದು ಪರಿಗಣಿಸಲಾಗಿದೆ. ಪೂಜೆಯ ಸಮಯದಲ್ಲಿ ಇದನ್ನು ಹೆಚ್ಚಾಗಿ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಹಾಲಿನ ಅಭಿಷೇಕ ಮಾಡುವುದರಿಂದ ಶಿವ ಸಂಪನ್ನನಾಗುತ್ತಾನೆ ಎಂದು ನಂಬಲಾಗಿದೆ.
3. ಜೇನು ತುಪ್ಪ
ಜೇನುತುಪ್ಪವು ಶಿವನಿಗೆ ಮತ್ತೊಂದು ನೆಚ್ಚಿನ ನೈವೇದ್ಯವಾಗಿದೆ. ಅವನಿಗೆ ಸಮರ್ಪಿತವಾದ ವಿವಿಧ ಆಚರಣೆಗಳು ಮತ್ತು ಸಮಾರಂಭಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಜೊತೆಗೆ ಶಿವನ ತೀರ್ಥದಲ್ಲಿ ಹಾಲು ಮತ್ತು ಜೇನು ತುಪ್ಪ ಮಿಶ್ರಣವಿರುತ್ತದೆ.
4. ಮೊಸರು
ಮೊಸರನ್ನು ಹಿಂದೂ ಧರ್ಮದಲ್ಲಿ ದೈವಿಕ ಆಹಾರವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ಶಿವನಿಗೆ ಅರ್ಪಿಸಲಾಗುತ್ತದೆ. ಇದನ್ನು ವಿವಿಧ ಆಚರಣೆಗಳು ಮತ್ತು ಸಮಾರಂಭಗಳಲ್ಲಿಯೂ ಬಳಸಲಾಗುತ್ತದೆ. ಶಿವ ಲಿಂಗಕ್ಕೆ ಮೊಸರಿನ ಅಭಿಷೇಕ ಮಾಡುವುದು ಶಿವನ ಆರ್ಶೀವಾದ ಪಡೆಯಲು ಇರುವ ಮಾರ್ಗವಾಗಿದೆ.
5. ಪಾಯಸ
ಶಿವರಾತ್ರಿಯಂದು ಶಿವನಿಗೆ ಯಾವುದಾದರು ಪಾಯಸ ಮಾಡಿ ನೈವೇದ್ಯ ಮಾಡಬೇಕಂತೆ. ಪಾಯಸದಲ್ಲಿ ಹಾಲು, ಒಣದ್ರಾಕ್ಷಿ, ಗೋಡಂಬಿಯಂತಹ ಒಣ ಹಣ್ಣುಗಳು ಇದ್ದರೆ ಶಿವನಿಗೆ ಪ್ರೀತಿಯಂತೆ. ಹೀಗಾಗಿ ಶಿವರಾತ್ರಿಯಂದು ಪ್ರಸಾದದಲ್ಲಿ ಪಾಯಸವನ್ನೂ ಸೇರಿಸಿ.
6. ಪಂಚಾಮೃತ
ಶಿವನ ಆರಾಧನೆಯಲ್ಲಿ ಪಂಚಾಮೃತ ಇಲ್ಲದಿದ್ದರೆ ಆ ಪೂಜೆ ಪೂರ್ಣವಾವುದೇ ಇಲ್ಲ. ಪಂಚಾಮೃತ ಎಂದರೆ ಹಸುವಿನ ಹಾಲು, ತುಪ್ಪ, ಸಕ್ಕರೆ, ಮೊಸರು ಹಾಗೂ ಜೇನುತುಪ್ಪ. ಈ ಎಲ್ಲಾ ಅಂಶಗಳನ್ನು ಬೆರೆಸಿ ತೀರ್ಥ ಮಾಡಬಹುದು, ಇಲ್ಲವೆ ಎಲ್ಲವನ್ನೂ ಬೇರೆ ಬೇರೆಯಾಗಿ ನೈವೇದ್ಯ ಮಾಡಬಹುದು.
7. ಭೂ ಚಕ್ರ ಗಡ್ಡೆ ಅಥವಾ ಕಂಡ್ಮೂಲ್
ಭೂ ಚಕ್ರ ಗಡ್ಡೆ ಎಂದು ಕರೆಯಲ್ಪಡುವ ರಾಮ ಕಂಡ್ಮೂಲ್ ಸಹ ಶಿವನಿಗೆ ಪ್ರಿಯವಾದ ಆಹಾರವಂತೆ. ಆದರೆ ಈ ಫಲ ಸಿಗುವುದು ಬಲು ಅಪರೂಪವಾಗಿದ್ದು, ಕಾಡುಗಳಲ್ಲಿ ಮಾತ್ರ ದೊರೆಯುತ್ತದೆ. ಕೆಲವು ಬಾರಿ ಮಾರುಕಟ್ಟೆಗೂ ಬರಬಹುದು. ಇದರಲ್ಲಿ ಮಾಡಿದ ಯಾವುದಾದರು ಖಾದ್ಯ ಶಿವನಿಗೆ ಅರ್ಪಿಸಿದರೆ ನಿಮ್ಮ ಇಷ್ಟಾರ್ಥ ಇಡೇರುವುದು ಎನ್ನಲಾಗಿದೆ.
8. ಹಣ್ಣುಗಳಿಂದ ಮಾಡಿದ ಮಾಲ್ಪುವಾ
ಭಂಗಿ ಪುಡಿ ಮಿಶ್ರಿತ ಹಾಗೂ ಒಣ ಹಣ್ಣುಗಳಿಂದ ಮಾಡಲಾದ ಮಾಲ್ಪುವಾ ಸಿಹಿ ತಿಂಡಿಯು ಶಿವನಿಗೆ ಅತ್ಯಂತ ಪ್ರಿಯವಾದ ಆಹಾರವಾಗಿದೆ ಎಂದು ನಂಬಲಾಗಿದೆ. ಹೀಗಾಗಿ ಶಿವರಾತ್ರಿಯಂದು ಈ ಸಿಹಿ ತಿಂಡಿ ಮಾಡಿ ಶಿವನಿಗೆ ಅರ್ಪಿಸಿದರೆ ನಿಮ್ಮ ಪ್ರಾರ್ಥನೆಗೆ ಫಲ ಸಿಗುವುದು ಖಚಿತ.



Click it and Unblock the Notifications