Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮಹಾ ಶಿವರಾತ್ರಿ 2024: ಈ ವಸ್ತು ಶಿವನಿಗೆ ಅರ್ಪಿಸಿದರೆ ಇಷ್ಟಾರ್ಥ ಸಿದ್ಧಿ..!
ಹಿಂದೂ ಧರ್ಮದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿಯನ್ನು ಎಲ್ಲಾ ಕಡೆಗಳಲ್ಲೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಮಂಗಳಕರ ದಿನದಲ್ಲಿ ಶಿವನ ಮೆಚ್ಚಿಸಲು ಉಪವಾಸ, ವಿಶೇಷ ಪೂಜೆ, ಜಾಗರಣೆ ಮಾಡಲಾಗುತ್ತದೆ. ಹೀಗಾಗಿ ಪರಮಶಿವನ ಪೂಜೆಗೆ ಈ ದಿನ ಬಹಳ ಉತ್ತಮ ಎಂದು ಪರಿಗಣಿಸಲಾಗಿದೆ.
ಈ ವರ್ಷದ ಮಹಾ ಶಿವರಾತ್ರಿಯನ್ನು 8 ಮಾರ್ಚ್ 2024 ರಂದು ಆಚರಿಸಲಾಗುತ್ತದೆ. ಈ ಹಬ್ಬದಂದು ಶಿವನಿಗೆ ಯಾವ ಆಹಾರ ನೈವೇದ್ಯ ಅಥವಾ ಅರ್ಪಿಸಿದರೆ ಇಷ್ಟಾರ್ಥ ನೆರವೇರಲಿದೆ ಎಂಬುದನ್ನು ನಾವಿಂದು ನೋಡೋಣ. ಹಾಗೂ ಆ ಆಹಾರದ ಆರೋಗ್ಯದ ಅಂಶವೇನು ಎಂಬುದನ್ನು ತಿಳಿದುಕೊಳ್ಳೋಣ.

1. ಬೇಲ್/ಬೇಲದ ಹಣ್ಣು (ವುಡ್ ಆಪಲ್)
ಭಗವಾನ್ ಶಿವನಿಗೆ ಬೇಲದ ಹಣ್ಣುಗಳು ತುಂಬಾ ಇಷ್ಟ ಎಂದು ನಂಬಲಾಗಿದೆ. ಬೇಲ್ ಮರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಹಣ್ಣನ್ನು ಮತ್ತು ಎಲೆಯನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಮತ್ತು ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕಾರಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ ಮತ್ತು ಮಲಬದ್ಧತೆ ಮತ್ತು ಅತಿಸಾರದಂತಹ ವಿವಿಧ ಜೀರ್ಣಕಾರಿ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಈ ಎಲ್ಲಾ ಕಾರಣದಿಂದಾಗಿಯೂ ಈ ಹಣ್ಣಿನ ಬಳಕೆ ಹೆಚ್ಚಾಗಿದೆ.
2. ಹಾಲು
ಹಾಲನ್ನು ಶಿವನ ಅಚ್ಚುಮೆಚ್ಚಿನ ನೈವೇದ್ಯವೆಂದು ಪರಿಗಣಿಸಲಾಗಿದೆ. ಪೂಜೆಯ ಸಮಯದಲ್ಲಿ ಇದನ್ನು ಹೆಚ್ಚಾಗಿ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಹಾಲಿನ ಅಭಿಷೇಕ ಮಾಡುವುದರಿಂದ ಶಿವ ಸಂಪನ್ನನಾಗುತ್ತಾನೆ ಎಂದು ನಂಬಲಾಗಿದೆ.
3. ಜೇನು ತುಪ್ಪ
ಜೇನುತುಪ್ಪವು ಶಿವನಿಗೆ ಮತ್ತೊಂದು ನೆಚ್ಚಿನ ನೈವೇದ್ಯವಾಗಿದೆ. ಅವನಿಗೆ ಸಮರ್ಪಿತವಾದ ವಿವಿಧ ಆಚರಣೆಗಳು ಮತ್ತು ಸಮಾರಂಭಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಜೊತೆಗೆ ಶಿವನ ತೀರ್ಥದಲ್ಲಿ ಹಾಲು ಮತ್ತು ಜೇನು ತುಪ್ಪ ಮಿಶ್ರಣವಿರುತ್ತದೆ.
4. ಮೊಸರು
ಮೊಸರನ್ನು ಹಿಂದೂ ಧರ್ಮದಲ್ಲಿ ದೈವಿಕ ಆಹಾರವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ಶಿವನಿಗೆ ಅರ್ಪಿಸಲಾಗುತ್ತದೆ. ಇದನ್ನು ವಿವಿಧ ಆಚರಣೆಗಳು ಮತ್ತು ಸಮಾರಂಭಗಳಲ್ಲಿಯೂ ಬಳಸಲಾಗುತ್ತದೆ. ಶಿವ ಲಿಂಗಕ್ಕೆ ಮೊಸರಿನ ಅಭಿಷೇಕ ಮಾಡುವುದು ಶಿವನ ಆರ್ಶೀವಾದ ಪಡೆಯಲು ಇರುವ ಮಾರ್ಗವಾಗಿದೆ.
5. ಪಾಯಸ
ಶಿವರಾತ್ರಿಯಂದು ಶಿವನಿಗೆ ಯಾವುದಾದರು ಪಾಯಸ ಮಾಡಿ ನೈವೇದ್ಯ ಮಾಡಬೇಕಂತೆ. ಪಾಯಸದಲ್ಲಿ ಹಾಲು, ಒಣದ್ರಾಕ್ಷಿ, ಗೋಡಂಬಿಯಂತಹ ಒಣ ಹಣ್ಣುಗಳು ಇದ್ದರೆ ಶಿವನಿಗೆ ಪ್ರೀತಿಯಂತೆ. ಹೀಗಾಗಿ ಶಿವರಾತ್ರಿಯಂದು ಪ್ರಸಾದದಲ್ಲಿ ಪಾಯಸವನ್ನೂ ಸೇರಿಸಿ.
6. ಪಂಚಾಮೃತ
ಶಿವನ ಆರಾಧನೆಯಲ್ಲಿ ಪಂಚಾಮೃತ ಇಲ್ಲದಿದ್ದರೆ ಆ ಪೂಜೆ ಪೂರ್ಣವಾವುದೇ ಇಲ್ಲ. ಪಂಚಾಮೃತ ಎಂದರೆ ಹಸುವಿನ ಹಾಲು, ತುಪ್ಪ, ಸಕ್ಕರೆ, ಮೊಸರು ಹಾಗೂ ಜೇನುತುಪ್ಪ. ಈ ಎಲ್ಲಾ ಅಂಶಗಳನ್ನು ಬೆರೆಸಿ ತೀರ್ಥ ಮಾಡಬಹುದು, ಇಲ್ಲವೆ ಎಲ್ಲವನ್ನೂ ಬೇರೆ ಬೇರೆಯಾಗಿ ನೈವೇದ್ಯ ಮಾಡಬಹುದು.
7. ಭೂ ಚಕ್ರ ಗಡ್ಡೆ ಅಥವಾ ಕಂಡ್ಮೂಲ್
ಭೂ ಚಕ್ರ ಗಡ್ಡೆ ಎಂದು ಕರೆಯಲ್ಪಡುವ ರಾಮ ಕಂಡ್ಮೂಲ್ ಸಹ ಶಿವನಿಗೆ ಪ್ರಿಯವಾದ ಆಹಾರವಂತೆ. ಆದರೆ ಈ ಫಲ ಸಿಗುವುದು ಬಲು ಅಪರೂಪವಾಗಿದ್ದು, ಕಾಡುಗಳಲ್ಲಿ ಮಾತ್ರ ದೊರೆಯುತ್ತದೆ. ಕೆಲವು ಬಾರಿ ಮಾರುಕಟ್ಟೆಗೂ ಬರಬಹುದು. ಇದರಲ್ಲಿ ಮಾಡಿದ ಯಾವುದಾದರು ಖಾದ್ಯ ಶಿವನಿಗೆ ಅರ್ಪಿಸಿದರೆ ನಿಮ್ಮ ಇಷ್ಟಾರ್ಥ ಇಡೇರುವುದು ಎನ್ನಲಾಗಿದೆ.
8. ಹಣ್ಣುಗಳಿಂದ ಮಾಡಿದ ಮಾಲ್ಪುವಾ
ಭಂಗಿ ಪುಡಿ ಮಿಶ್ರಿತ ಹಾಗೂ ಒಣ ಹಣ್ಣುಗಳಿಂದ ಮಾಡಲಾದ ಮಾಲ್ಪುವಾ ಸಿಹಿ ತಿಂಡಿಯು ಶಿವನಿಗೆ ಅತ್ಯಂತ ಪ್ರಿಯವಾದ ಆಹಾರವಾಗಿದೆ ಎಂದು ನಂಬಲಾಗಿದೆ. ಹೀಗಾಗಿ ಶಿವರಾತ್ರಿಯಂದು ಈ ಸಿಹಿ ತಿಂಡಿ ಮಾಡಿ ಶಿವನಿಗೆ ಅರ್ಪಿಸಿದರೆ ನಿಮ್ಮ ಪ್ರಾರ್ಥನೆಗೆ ಫಲ ಸಿಗುವುದು ಖಚಿತ.



Click it and Unblock the Notifications