Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಮಹಾ ಶಿವರಾತ್ರಿ 2024: ಈ ವಸ್ತು ಶಿವನಿಗೆ ಅರ್ಪಿಸಿದರೆ ಇಷ್ಟಾರ್ಥ ಸಿದ್ಧಿ..!
ಹಿಂದೂ ಧರ್ಮದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿಯನ್ನು ಎಲ್ಲಾ ಕಡೆಗಳಲ್ಲೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಮಂಗಳಕರ ದಿನದಲ್ಲಿ ಶಿವನ ಮೆಚ್ಚಿಸಲು ಉಪವಾಸ, ವಿಶೇಷ ಪೂಜೆ, ಜಾಗರಣೆ ಮಾಡಲಾಗುತ್ತದೆ. ಹೀಗಾಗಿ ಪರಮಶಿವನ ಪೂಜೆಗೆ ಈ ದಿನ ಬಹಳ ಉತ್ತಮ ಎಂದು ಪರಿಗಣಿಸಲಾಗಿದೆ.
ಈ ವರ್ಷದ ಮಹಾ ಶಿವರಾತ್ರಿಯನ್ನು 8 ಮಾರ್ಚ್ 2024 ರಂದು ಆಚರಿಸಲಾಗುತ್ತದೆ. ಈ ಹಬ್ಬದಂದು ಶಿವನಿಗೆ ಯಾವ ಆಹಾರ ನೈವೇದ್ಯ ಅಥವಾ ಅರ್ಪಿಸಿದರೆ ಇಷ್ಟಾರ್ಥ ನೆರವೇರಲಿದೆ ಎಂಬುದನ್ನು ನಾವಿಂದು ನೋಡೋಣ. ಹಾಗೂ ಆ ಆಹಾರದ ಆರೋಗ್ಯದ ಅಂಶವೇನು ಎಂಬುದನ್ನು ತಿಳಿದುಕೊಳ್ಳೋಣ.

1. ಬೇಲ್/ಬೇಲದ ಹಣ್ಣು (ವುಡ್ ಆಪಲ್)
ಭಗವಾನ್ ಶಿವನಿಗೆ ಬೇಲದ ಹಣ್ಣುಗಳು ತುಂಬಾ ಇಷ್ಟ ಎಂದು ನಂಬಲಾಗಿದೆ. ಬೇಲ್ ಮರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಹಣ್ಣನ್ನು ಮತ್ತು ಎಲೆಯನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಮತ್ತು ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕಾರಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ ಮತ್ತು ಮಲಬದ್ಧತೆ ಮತ್ತು ಅತಿಸಾರದಂತಹ ವಿವಿಧ ಜೀರ್ಣಕಾರಿ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಈ ಎಲ್ಲಾ ಕಾರಣದಿಂದಾಗಿಯೂ ಈ ಹಣ್ಣಿನ ಬಳಕೆ ಹೆಚ್ಚಾಗಿದೆ.
2. ಹಾಲು
ಹಾಲನ್ನು ಶಿವನ ಅಚ್ಚುಮೆಚ್ಚಿನ ನೈವೇದ್ಯವೆಂದು ಪರಿಗಣಿಸಲಾಗಿದೆ. ಪೂಜೆಯ ಸಮಯದಲ್ಲಿ ಇದನ್ನು ಹೆಚ್ಚಾಗಿ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಹಾಲಿನ ಅಭಿಷೇಕ ಮಾಡುವುದರಿಂದ ಶಿವ ಸಂಪನ್ನನಾಗುತ್ತಾನೆ ಎಂದು ನಂಬಲಾಗಿದೆ.
3. ಜೇನು ತುಪ್ಪ
ಜೇನುತುಪ್ಪವು ಶಿವನಿಗೆ ಮತ್ತೊಂದು ನೆಚ್ಚಿನ ನೈವೇದ್ಯವಾಗಿದೆ. ಅವನಿಗೆ ಸಮರ್ಪಿತವಾದ ವಿವಿಧ ಆಚರಣೆಗಳು ಮತ್ತು ಸಮಾರಂಭಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಜೊತೆಗೆ ಶಿವನ ತೀರ್ಥದಲ್ಲಿ ಹಾಲು ಮತ್ತು ಜೇನು ತುಪ್ಪ ಮಿಶ್ರಣವಿರುತ್ತದೆ.
4. ಮೊಸರು
ಮೊಸರನ್ನು ಹಿಂದೂ ಧರ್ಮದಲ್ಲಿ ದೈವಿಕ ಆಹಾರವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ಶಿವನಿಗೆ ಅರ್ಪಿಸಲಾಗುತ್ತದೆ. ಇದನ್ನು ವಿವಿಧ ಆಚರಣೆಗಳು ಮತ್ತು ಸಮಾರಂಭಗಳಲ್ಲಿಯೂ ಬಳಸಲಾಗುತ್ತದೆ. ಶಿವ ಲಿಂಗಕ್ಕೆ ಮೊಸರಿನ ಅಭಿಷೇಕ ಮಾಡುವುದು ಶಿವನ ಆರ್ಶೀವಾದ ಪಡೆಯಲು ಇರುವ ಮಾರ್ಗವಾಗಿದೆ.
5. ಪಾಯಸ
ಶಿವರಾತ್ರಿಯಂದು ಶಿವನಿಗೆ ಯಾವುದಾದರು ಪಾಯಸ ಮಾಡಿ ನೈವೇದ್ಯ ಮಾಡಬೇಕಂತೆ. ಪಾಯಸದಲ್ಲಿ ಹಾಲು, ಒಣದ್ರಾಕ್ಷಿ, ಗೋಡಂಬಿಯಂತಹ ಒಣ ಹಣ್ಣುಗಳು ಇದ್ದರೆ ಶಿವನಿಗೆ ಪ್ರೀತಿಯಂತೆ. ಹೀಗಾಗಿ ಶಿವರಾತ್ರಿಯಂದು ಪ್ರಸಾದದಲ್ಲಿ ಪಾಯಸವನ್ನೂ ಸೇರಿಸಿ.
6. ಪಂಚಾಮೃತ
ಶಿವನ ಆರಾಧನೆಯಲ್ಲಿ ಪಂಚಾಮೃತ ಇಲ್ಲದಿದ್ದರೆ ಆ ಪೂಜೆ ಪೂರ್ಣವಾವುದೇ ಇಲ್ಲ. ಪಂಚಾಮೃತ ಎಂದರೆ ಹಸುವಿನ ಹಾಲು, ತುಪ್ಪ, ಸಕ್ಕರೆ, ಮೊಸರು ಹಾಗೂ ಜೇನುತುಪ್ಪ. ಈ ಎಲ್ಲಾ ಅಂಶಗಳನ್ನು ಬೆರೆಸಿ ತೀರ್ಥ ಮಾಡಬಹುದು, ಇಲ್ಲವೆ ಎಲ್ಲವನ್ನೂ ಬೇರೆ ಬೇರೆಯಾಗಿ ನೈವೇದ್ಯ ಮಾಡಬಹುದು.
7. ಭೂ ಚಕ್ರ ಗಡ್ಡೆ ಅಥವಾ ಕಂಡ್ಮೂಲ್
ಭೂ ಚಕ್ರ ಗಡ್ಡೆ ಎಂದು ಕರೆಯಲ್ಪಡುವ ರಾಮ ಕಂಡ್ಮೂಲ್ ಸಹ ಶಿವನಿಗೆ ಪ್ರಿಯವಾದ ಆಹಾರವಂತೆ. ಆದರೆ ಈ ಫಲ ಸಿಗುವುದು ಬಲು ಅಪರೂಪವಾಗಿದ್ದು, ಕಾಡುಗಳಲ್ಲಿ ಮಾತ್ರ ದೊರೆಯುತ್ತದೆ. ಕೆಲವು ಬಾರಿ ಮಾರುಕಟ್ಟೆಗೂ ಬರಬಹುದು. ಇದರಲ್ಲಿ ಮಾಡಿದ ಯಾವುದಾದರು ಖಾದ್ಯ ಶಿವನಿಗೆ ಅರ್ಪಿಸಿದರೆ ನಿಮ್ಮ ಇಷ್ಟಾರ್ಥ ಇಡೇರುವುದು ಎನ್ನಲಾಗಿದೆ.
8. ಹಣ್ಣುಗಳಿಂದ ಮಾಡಿದ ಮಾಲ್ಪುವಾ
ಭಂಗಿ ಪುಡಿ ಮಿಶ್ರಿತ ಹಾಗೂ ಒಣ ಹಣ್ಣುಗಳಿಂದ ಮಾಡಲಾದ ಮಾಲ್ಪುವಾ ಸಿಹಿ ತಿಂಡಿಯು ಶಿವನಿಗೆ ಅತ್ಯಂತ ಪ್ರಿಯವಾದ ಆಹಾರವಾಗಿದೆ ಎಂದು ನಂಬಲಾಗಿದೆ. ಹೀಗಾಗಿ ಶಿವರಾತ್ರಿಯಂದು ಈ ಸಿಹಿ ತಿಂಡಿ ಮಾಡಿ ಶಿವನಿಗೆ ಅರ್ಪಿಸಿದರೆ ನಿಮ್ಮ ಪ್ರಾರ್ಥನೆಗೆ ಫಲ ಸಿಗುವುದು ಖಚಿತ.



Click it and Unblock the Notifications