Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಹಾಕುಂಭಮೇಳ: ಕೋಟಿ ಸಂಬಳದ ಕೆಲಸ ಬಿಟ್ಟು ಆಧ್ಯಾತ್ಮದ ಕಡೆ ಒಲವು ತೋರಿದ ಯೋಗಿಯ ಹಳೆಯ ಫೋಟೋಗಳು ವೈರಲ್
ಮಹಾಕುಂಭಮೇಳ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿದೆ, ಈ ಕುಂಭಮೇಳಕ್ಕೆ ದೇಶ ವಿದೇಶಗಳಿಂದ ಜನರು ಬರ್ತಾ ಇದ್ದಾರೆ, ನಾಗಾ ಸಾಧುಗಳು, ಅಘೋರಿಗಳು, ಸಂನ್ಯಾಸಿಗಳು ಕುಂಭಮೇಳದ ಪ್ರಮುಖ ಆಕರ್ಷಣೆಯಾಗಿದೆ. ಆಧ್ಯಾತ್ಮಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಇಲ್ಲಿಗೆ ಆಗಮಿಸುತ್ತಾರೆ, ಇವರಲ್ಲಿ ಕೆಲವರು ಮಾಧ್ಯಮದವರ ಜೊತೆ ಮಾತನಾಡುತ್ತಾರೆ, ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಹೀಗೆ ಪತ್ರಕರ್ತರೊಬ್ಬರ ಜೊತೆ ಮಾತನಾಡಿದ ಸಾಧುವೊಬ್ಬರು ವೈರಲ್ ಆಗಿದ್ದಾರೆ, ಅದಕ್ಕೆ ಕಾರಣ ಅವರ ಬ್ಯಾಕ್ಗ್ರೌಂಡ್.

ಆಧ್ಯಾತ್ಮದಲ್ಲಿ ತೊಡಗಿಸಿಕೊಂಡವರಿಗೆ ಅದರ ಬಗ್ಗೆ ಆತ್ರ ಗೊತ್ತಿರುತ್ತದೆ, ಅವರಿಗೆ ಈ ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ ಎಂಬ ಕಲ್ಪನೆ ಹಲವರಲ್ಲಿದೆ, ಆದರೆ ಅಂಥ ಕಲ್ಪನೆ ಸುಳ್ಳು ಮಾಡಿದವರು ಈ ಬಾಬಾ, ಇವರೀಗ ಐಐಟಿ ಬಾಬಾ ಎಂದೇ ಫೇಮಸ್ ಆಗಿದ್ದಾರೆ. ಐಐಟಿಯಲ್ಲಿ ಓದುವುದು ಎಂದರೆ ಅದು ಸಾಮಾನ್ಯವಲ್ಲ, ಅಷ್ಟೊಂದು ಬುದ್ಧಿವಂತರಾಗಿದ್ದರೆ ಮಾತ್ರ ಐಐಟಿಯಲ್ಲಿ ಸೀಟ್ ಸಿಗಲು ಸಾಧ್ಯ.ಇವರ ಹೆಸರು ಅಭಯ್ಸಿಂಗ್, ಐಟಿಟಿಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಓದುತ್ತಾರೆ, ನಂತರ ವೈಲ್ಡ್ ಲೈಫ್ ಫೋಟೋಗ್ರಫಿ ಮೇಲೆ ಆಸಕ್ತಿ ಮೂಡುತ್ತದೆ, ವಿಶ್ಯೂಯಲ್ ಕಮ್ಯೂನಿಕೇಷನ್, ಎನಿಮೇಷನ್ ಎಲ್ಲಾ ಕಲಿಯುತ್ತಾರೆ, ಆದರೆ ಅವರಿಗೆ ನಾನು ಸಾಧನೆ ಮಾಡಬೇಕಾಗಿರುವುದು ಇದಲ್ಲ, ಇದಕ್ಕೂ ಮೀರಿದ ಜ್ಞಾನ, ಸಂತೋಷ ಬೇರೆ ಕಡೆ ಇದೆ ಎಂದು ಅನಿಸರಲಾರಂಭಿಸುತ್ತದೆ, ಅದರತ್ತ ಮುಖ ಮಾಡುತ್ತಾರೆ, ಈಗ ಬಾಬಾ ಆಗಿ ಕುಂಭಮೇಳಕ್ಕೆ ಬಂದಿದ್ದಾರೆ.
ಕೋಟಿ ಸಂಬಳದ ಕೆಲಸ ಬಿಟ್ಟು ಅಧ್ಯಾತ್ಮದ ಕಡೆಗೆ ಒಲವು ತೋರಿದರು
ಕೆಲ ಮೂಲಗಳು ಅವರಿಗೆ 1.6 ಕೋಟಿಯ ಸಂಬಳದ ಕೆಲಸ ಸಿಕ್ಕಿತ್ತು ಎಂದು ಹೇಳಿವೆ, ದೊಡ್ಡ ಕಂಪನಿಯಲ್ಲಿ ಸಿಕ್ಕಿದ ದೊಡ್ಡ ಹುದ್ದೆ ಬಿಟ್ಟು ಪೋಟೋಗ್ರಫಿ ಅಂತ ಹೋಗುತ್ತಾರೆ, ನಂತರ ಅದೆಲ್ಲಾ ಬಿಟ್ಟು ನೆಮ್ಮದಿ ಅರಿಸಿ ಆಧ್ಯಾತ್ಮ ಸ್ವೀಕರಿಸುತ್ತಾರೆ. ಅವರನ್ನು ಮಾತನಾಡಿಸಿದ ಪತ್ರಕರ್ತರು ನೀವು ಐಐಟಿ ಮುಂಬೈಯಲ್ಲಿ ಓದಿ ಈ ಅವಸ್ಥೆಗೆ ಕಾರಣವೇನು ಎಂದು ಕೇಳಿದೆ, ಈ ಬಾಬಾ ಈ ಅವಸ್ಥೆ ತುಂಬಾ ಚೆನ್ನಾಗಿದೆ, ನಾನು ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಖಾಸಗಿ ವಾಹಿನಿಯ ಆ ಪತ್ರಕರ್ತ ಅವರನ್ನು ಮಾತನಾಡಿಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ಬಹುತೇಕ ಮಾಧ್ಯಮದವರು ಅವರ ಸಂದರ್ಶನ ಮಾಡುತ್ತಿದ್ದಾರೆ. ಅವರ ಮಾತಿನ ಶೈಲಿಯೇ ಅವರ ಜ್ಞಾನದ ಬಗ್ಗೆ ಹೇಳುತ್ತದೆ, ಇದೀಗ ಅವರ ಹಳೆಯ ಫೋಟೋಗಳು ತುಂಬಾನೇ ವೈರಲ್ ಆಗುತ್ತಿವೆ.
ಐಐಟಿಯಲ್ಲಿದ್ದಾಗ ಅಭಯ್ ಸಿಂಗ್ ತೆಗಿಸಿದ ಫೋಟೋಗಳು ವೈರಲ್
ಆ ಫೋಟೋಗಳನ್ನು ನೋಡಬಹುದು ಅವರ ಮಾಡರ್ನ್ ಆಗಿದ್ದರು, ನೋಡಲು ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು ತುಂಬಾನೇ ಹ್ಯಾಂಡ್ಸಮ್ ಆಗಿದ್ದರು. ಅವರು ಟ್ರಿಪ್ ಹೋಗಿದ್ದಾಗ ತೆಗೆದ ಫೋಟೋಗಳು, ಫ್ರೆಂಡ್ಸ್ ಜೊತೆ ಇದ್ದ ಫೋಟೋಗಳು ವೈರಲ್ ಆಗುತ್ತಿವೆ. ಇವರು ಎಲ್ಲರಂತೆಯೇ ಕಾಲೇಜು ದಿನಗಳಲ್ಲಿ ಇದ್ದರು, ನಂತರ ಅವರಿಗೆ ಈ ಧರ್ಮ, ಆಧ್ಯಾತ್ಮಿಕ ಲೋಕ ಇವುಗಳತ್ತ ಆಕರ್ಷಣೆ ಮೂಡಿದೆ.
ಅವರು ಅವರ ಬಾಲ್ಯದ ದಿನಗಳು, ಕುಟುಂಬ ಎಲ್ಲದರ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಕುಟುಂಬದಲ್ಲಿ ಸಂಬಂಧಗಳಲ್ಲಿನ ಭಿನ್ನಾಭಿಪ್ರಾಯ ಅವರ ಬಾಲ್ಯದ ಮೇಲೆ ತುಂಬಾನೇ ಪರಿಣಾಮ ಬೀರಿತ್ತು, ಅವರನ್ನು ಎಲ್ಲದಕ್ಕೂ ಟೀಕಿಸುತ್ತಿದ್ದರು, ಅವರು ಫೋಟೋಗ್ರಫಿ ಕಲಿಯಲು ಹೋದಾಗ ತುಂಬಾ ಜನರು ಗೇಲಿ ಮಾಡಿದ್ದಾರೆ, ಅವರು ಖಿನ್ನತೆಯಲ್ಲಿದ್ದರಂತೆ, ಅವರಿಗೆ ನಿದ್ದೆ ಬರ್ತಾ ಇರಲಿಲ್ಲ, ಒಂದೇ ವಿಷಯದ ಬಗ್ಗೆ ಆಲೋಚನೆ ಮಾಡ್ತಾ ಇದ್ದರಂತೆ, ಏನಾಗಿದೆ ನನ್ನ ಮೆದುಳಿಗೆ? ನನಗ್ಯಾಕೆ ನಿದ್ದೆ ಬರ್ತಾ ಇಲ್ಲ ಎಂದೆಲ್ಲಾ ಆಲೋಚಿಸುತ್ತಿದ್ದರಂತೆ, ನಂತರ ಮನಃಶಾಸ್ತ್ರ ಕಲಿಯುತ್ತಾರೆ ಬಳಿಕ ಅವರಿಗೆ ಈ ಆಧ್ಯಾತ್ಮಿಕ ಜ್ಞಾನ ಆಕರ್ಷಿಸುತ್ತದೆ, ಈಗ ಖುಷಿಯಾಗಿದ್ದೇನೆ ಅಂತಾರೆ.



Click it and Unblock the Notifications











