Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಮ್ಮ ದೇಶದ ಈ ಹಳ್ಳಿಯಲ್ಲಿ ಮಕ್ಕಳು ದೊಡ್ಡ ಕಳ್ಳರಾಗಲೆಂದೇ ಲಕ್ಷಗಟ್ಟಲೆ ಖರ್ಚು ಮಾಡಿ ಟ್ರೈನಿಂಗ್ ಕೊಡಿಸುತ್ತಾರೆ!
ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿ ಓದಿಸಬೇಕು, ಮಕ್ಕಳು ಓದಿ ದೊಡ್ಡವರಾದ ಮೇಲೆ ಒಂದು ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದು ಪೋಷಕರು ಬಯಸುತ್ತಾರೆ, ಗೊತ್ತಿದ್ದೂ ಗೊತ್ತಿದ್ದೂ ನಮ್ಮ ಮಕ್ಕಳು ಡಕಾಯಿತರಾಗಲಿ ಕೊಳ್ಳೆ ಹೊಡೆದು ಜೀವನ ಮಾಡಲಿ ಎಂದು ಯಾವ ಪೋಷಕರೂ ಬಯಸುವುದಿಲ್ಲ, ಅಂಥ ಯಾವ ಶಾಲೆಯೂ ಇಲ್ಲ ಎಂದು ನೀವು ಅಂದುಕೊಂಡಿದ್ದರೆ ನಿಮಗೊಂದು ಶಾಕಿಂಗ್ ಸುದ್ದಿ, ಏಕೆಂದರೆ ಇಂಥ ಶಾಲೆ ಇದೆ, ಮಕ್ಕಳು ದೊಡ್ಡ ಕಳ್ಳರಾಗಲಿ ಎಂದು ಕಳುಹಿಸುವ ಪೋಷಕರೂ ಇದ್ದಾರೆ.

ಇಂಥ ಶಾಲೆ ಇರುವುದು ಬೇರೆ ಯಾವುದೋ ದೇಶದಲ್ಲಿ ಅಲ್ಲ, ನಮ್ಮ ಭಾರತದಲ್ಲಿ, ಮಧ್ಯಪ್ರದೇಶದಲ್ಲಿ ಮಕ್ಕಳನ್ನು ಪರಿಣಿತ ಕಳ್ಳರನ್ನಾಗಿ ಮಾಡಲೆಂದೇ ಟ್ರೈನಿಂಗ್ ನೀಡುತ್ತಿದ್ದಾರೆ. ಇಂಥ ಅಚ್ಚರಿಯ ಸಂಗತಿಯನ್ನು NDTV ವರದಿ ಮಾಡಿದೆ.
ಮಧ್ಯಪ್ರದೇಶದ ಕಡಿಯಾ, ಗುಲ್ಖೆಡಿ, ಹುಲ್ಖೆಡಿಈ ಬಗೆಯ ಹಳ್ಳಿಗಳಲ್ಲಿ ಈ ರೀತಿ ಮಕ್ಕಳಿಗೆ ಟ್ರೀನಿಂಗ್ ನೀಡಲಾಗುತ್ತಿತ್ತಂತೆ. ಸುಮಾರು 12-13 ವರ್ಷಕ್ಕೆ ಈ ರೀತಿ ಟ್ರೈನಿಂಗ್ ನೀಡಲಾಗುತ್ತಿದೆ. ಪಿಕ್ಪಾಕೆಟ್ನಿಂದ ಹಿಡಿದು ದೊಡ್ಡ-ದೊಡ್ಡ ಕಳ್ಳತನ ಮಾಡುವುದು ಹೇಗೆ ಎಂದು ಟ್ರೈನಿಂಗ್ ನೀಡಲಾಗುತ್ತಿದೆ ಎಂದು ಆ ವರದಿಯಲ್ಲಿ ಹೇಳಿದೆ.
ಗ್ಯಾಂಗ್ ಲೀಡರ್ ಬಳಿ ಪೊಲೀಸರೇ ಮಕ್ಕಳನ್ನು ಟ್ರೈನಿಂಗ್ಗಾಗಿ ಕಳುಹಿಸುತ್ತಿದ್ದಾರೆ
ಮಕ್ಕಳಿಗೆ ಕಳ್ಳತನ, ದರೋಡೆ ಬಗ್ಗೆ ತರಬೇತಿ ನೀಡಲೆಂದೇ ಯಾವ ಗ್ಯಾಂಗ್ ಲೀಡರ್ ಬೆಸ್ಟ್ ಎಂದು ಅಯ್ಕೆ ಮಾಡಿ ನಟೋರಿಯಸ್ ಲೀಡರ್ ಬಳಿ ಕಳುಹಿಸುತ್ತಾರಂತೆ. ಎಂಥ ವಿಚಿತ್ರವಲ್ಲ, ಆದರೂ ಅದು ಸತ್ಯ ಹಾಗೂ ನಂಬಲೇಬೇಕಾದ ವಿಷಯವದು. ಹೀಗೆ ಆ ಹಳ್ಳಿಯಲ್ಲಿ 20 ಸಾವಿರಕ್ಕೂ ಅಧಿಕ ದರೊಡೆಕೋರರು ಇದ್ದಾರಂತೆ.
ಭೂಪಾಲ್ನಿಂದ 117 ಕಿ.ಮೀ ದೂರದಲ್ಲಿ ರಾಜಾಘರ್ ಎಂಬ ಜಿಲ್ಲೆಯಿದೆ. ಇಲ್ಲಿ ಪೊಲೀಸರಿಗೆ ದರೋಡೆಕೋರರನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ, ಅಲ್ಲದೆ ಕೆಲ ಪೊಲೀಸರು ಇಂಥ ದರೋಡೆಯಲ್ಲಿ ಭಾಗಿಯಾಗಿದ್ದಾರಂತೆ. ಏಕೆಂದರೆ ಇಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಆ ರೀತಿ ಮಾಡಲಾಗುವುದು ಎಂದು ಹೇಳಲಾಗಿದೆ.
ಹೊರಗಿನವರನ್ನು ಕಂಡ ತಕ್ಷನ ಜಾಗ್ರತರಾಗುತ್ತಾರೆ
ಇಲ್ಲಿ ಹೊರಗಿನವರನ್ನು ಕಂಡ ತಕ್ಷಣ ಜಾಗ್ರತರಾಗುತ್ತಾರೆ. ಕೂಡಲೇ ಇತರರಿಗೆ ಸೂಚನೆ ನೀಡಲಾಗುವುದು. ಅಲ್ಲಿಂದ ಎಲ್ಲರೂ ಕಣ್ಮೆರೆಯಾಗುತ್ತಾರೆ, ಹೀಗಾಗಿ ಪೊಲೀಸರಿಗೆ ಹಿಡಿಯುವುದು ಕಷ್ಟವಾಗಿದೆ.
17 ವರ್ಷಕ್ಕಲ್ಲಾ ಬ್ಯಾಂಕ್ ದರೋಡೆ ಮಾಡುತ್ತಾರೆ
ಇಲ್ಲಿಯ ಮಕ್ಕಳಿಗೆ 12-13 ವರ್ಷಕ್ಕಲ್ಲಾ ಕಳ್ಳತನದ ಟ್ರೈನಿಂಗ್ ನೀಡುವುದರಿಂದ 17 ವರ್ಷಕ್ಕಲ್ಲಾ ಬ್ಯಾಂಕ್ ದರೋಡೆಯಂಥ ಕಾರ್ಯಕ್ಕೆ ಮುಂದಾಗುತ್ತಾರೆ. ಇಲ್ಲಿ ತುಂಬಾನೇ ಪೊಲೀಸ್ ಸ್ಟೇಷನ್ ಹಾಕಿದರೂ ಇವರು ಮಾಡುವ ಕಾನೂನು ಬಾಹಿರ ಕೆಲಸವನ್ನು ಹತ್ತಿಕ್ಕಲು ಕಷ್ಟವಾಗುವುದು ಎಂದು ಪೊಲೀಸರೇ ಹೇಳುತ್ತಾರೆ.
2-3 ಲಕ್ಷ ಖರ್ಚು ಮಾಡಿ ಮಕ್ಕಳನ್ನು ಕಲ್ಲನಾಗಿ ಮಾಡಲು ಪೋಷಕರೇ ಕಳುಹಿಸುತ್ತಾರೆ
ಲಕ್ಷಗಟ್ಟಲೆ ಖರ್ಚು ಮಾಡಿ ಎಂಜಿನಿಯರ್ ಕಾಲೇಜಿಗೆ, ಮೆಡಿಕಲ್ ಕಾಲೇಜಿಗೆ ಅಂತ ವೃತ್ತಿಪರ ಕೋರ್ಸ್ಗಳನ್ನು ಮಾಡಲು ಕಳುಹಿಸುವುದನ್ನು ನೋಡಿದ್ದೇವೆ, ಆದರೆ ಕಳ್ಳತನ ಮಾಡಲು ಕಳುಹಿಸುವ ಪೋಷಕರು ಇದ್ದಾರೆ ಎಂದರೆ ನಿಜಕ್ಕೂ ಅಚ್ಚರಿ ಪಡುವ ವಿಷಯವೇ.
ದೇಶದ ಉದ್ದಗಲಕ್ಕೂ ಈ ಕಳ್ಳರಿದ್ದಾರೆ
ಇಲ್ಲಿಂದ ಟ್ರೈನಿಂಗ್ ಪಡೆದ ಕಳ್ಳರು ದೇಶದ ಎಲ್ಲಾ ಕಡೆ ಹೋಗಿ ಕಳ್ಳತನ, ದರೋಡೆ ಅಂತ ಮಾಡುತ್ತಿದ್ದಾರೆ, ಹೆಚ್ಚಿನವರರು ಜೈಲಿನಲ್ಲಿದ್ದಾರೆಎ. ಇಂತವರನ್ನು ಹತ್ತಿಕ್ಕಿದಿದ್ದರೆ ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ.



Click it and Unblock the Notifications