Latest Updates
-
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ
'56 ಇಂಚಿನ ಮೋದಿಜೀ' ತಾಲಿ ತಿಂದು ಗೆದ್ದವರಿಗೆ 8.5 ಲಕ್ಷ ಬಹುಮಾನ ಘೋಷಿಸಿರುವ ರೆಸ್ಟೋರೆಂಟ್!
ಸೆಪ್ಟೆಂಬರ್ 17ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನ. ದೇಶದ ಪ್ರಧಾನಿಯ ಹುಟ್ಟುಹಬ್ಬ ಆಚರಿಸಲು ದೇಶದ ಜನತೆ ಸಂಭ್ರಮದಿಂದ ಸಜ್ಜಾಗಿದ್ದಾರೆ. ಮೋದಿಜೀಯವರ ಹುಟ್ಟುಹಬ್ಬದ ವಿಶೇಷವಾಗಿ ಹಲವಾರ ಕಡೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ, ಇವೆಲ್ಲದರ ನಡುವೆ ದೆಹಲಿಯ ಹೋಟೆಲ್ ತುಂಬಾ ವಿನೂತನವಾದ ಐಡಿಯಾ ಮೂಲಕ ಮೋದಿಜೀಯವರ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗಿದ್ದು, ಇದೀಗ ಹೋಟೆಲ್ನವರ ಆ ಐಡಿಯಾ ತುಂಬಾನೇ ವೈರಲ್ ಆಗಿದೆ.

ದೆಹಲಿಯಲ್ಲಿರುವ ಆರ್ಡರ್ 2.0 ಹೋಟೆಲ್ 56ಇಂಚು ಮೋದಿಜೀ ತಾಲಿ ಸಿದ್ಧಪಡಿಸಲಿದೆ.

ಮೋದಿಜೀ 56 ಇಂಚಿನ ಎದೆ ಇರುವ ವ್ಯಕ್ತಿ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೋದಿಜೀ 56 ಇಂಚಿನ ಎದೆ ಇರುವ ವ್ಯಕ್ತಿ ಎಂದು ಹೆಮ್ಮೆಯಿಂದ ಹೇಳಿದ್ದರು. ಆ ಹೇಳಿಕೆಯ ಬಳಿಕ ಅದರ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿ ಬರುತ್ತಲೇ ಇವೆ. ವಿರೋಧ ಪಕ್ಷದವರು ಕೂಡ ಮೋದಿಜೀಯವರನ್ನು ಈ ವಿಷಯ ಹೇಳಿ ಟೀಕೆ ಮಾಡಿದ್ದರು. ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೋದಿಗೆ 56 ಇಂಚಿನ ಎದೆಯಿದೆ ಆದರೆ ಬಡವರ ಕಣ್ಣೀರು ಒರೆಸುವ ಹೃದಯ ಇಲ್ಲ ಎಂದು ಟೀಕಿಸಿದ್ದರು.

56 ಇಂಚಿನ ಮೋದಿಜೀ ತಾಲಿ
ಭಾರತದಲ್ಲಿ ಭಯೋತ್ಪದಕರ ಹುಟ್ಟಗಿಸುತ್ತಿರುವ ಮೋದಿಯನ್ನು ಬಿಜೆಪಿಯವರು 56 ಇಂಚಿನ ಎದೆ ಇರುವ ವ್ಯಕ್ತಿಯಿಂದ ಮಾತ್ರ ಭಯೋತ್ಪಾದಕರಿಗೆ ಈ ರೀತಿ ದಿಟ್ಟತನದ ಉತ್ತರ ನೀಡಲು ಸಾಧ್ಯ ಎಂಬುವುದಾಗಿ ಆಗಾಗ ಹೇಳುತ್ತಿರುತ್ತಾರೆ. ಒಟ್ಟಿನಲ್ಲಿ 56 ಇಂಚಿನ ಎದೆ ಬಗ್ಗೆ ಬಿಜೆಪಿಯವರು-ವಿರೋಧ ಪಕ್ಷದವರೂ ಆಗಾಗ ಹೇಳುತ್ತಲೇ ಇರುತ್ತಾರೆ.
ಅದೇ ವಿಷಯವನ್ನು ಇಟ್ಟುಕೊಂಡು ದೆಹಲಿಯ ಆರ್ಡರ್ 2.0 ರೆಸ್ಟೋರೆಂಟ್ ಮೋದಿ ಹುಟ್ಟುಹಬ್ಬಕ್ಕೆ 56 ಇಂಚಿನ ಮೋದಿಜೀ ತಾಲಿ ರೆಡಿ ಮಾಡಿದ್ದು ಗ್ರಾಹಕರು ಈ ತಾಲಿಯಲ್ಲಿ 56 ಬಗೆಯ ತಿನಿಸುಗಳನ್ನು ಸವಿಯಬಹುದಾಗಿದೆ.

ತಾಲಿ ಸವಿಯುವುದು ಮಾತ್ರವಲ್ಲ ಸ್ಪರ್ಧೆಯು ಇದೆ
ಈ ಹೋಟೆಲ್ನವರು ಮೋದಿ ಅಭಿಮಾನಗಳು ಈ 56 ಇಂಚಿನ ಮೋದಿಜೀ ತಾಲಿ ಸವಿಯಲು ಆಫರ್ ನೀಡಿದ್ದು ಸ್ಪರ್ಧೆಯನ್ನೂ ಇಟ್ಟಿದೆ. ಯಾವ ಜೋಡಿ 40 ನಿಮಿಷದೊಳಗೆ ತಿಂದು ಮುಗಿಸುತ್ತಾರೋ ಅವರಿಗೆ 8.5 ಲಕ್ಷ ಬಹುಮಾನ ಘೋಷಿಸಲಾಗಿದೆ. ಅಲ್ಲದೆ ಲಕ್ಕಿ ವಿನ್ನರ್ಸ್ಗೆ ಕೇದರ್ನಾಥ್ ಟ್ರಿಪ್ ಕೂಡ. ಮೋದಿಯವರಿಗೆ ಕೇದರ್ನಾಥ್ ತುಂಬಾ ಇಷ್ಟದ ತಾಣ, ಹಾಗಾಗಿ ಅಲ್ಲಿಗೆ ಟ್ರಿಪ್ ಅರೇಂಜ್ ಮಾಡಲಾಗಿದೆ. ಈ ಸ್ಪರ್ಧೆ ಸೆಪ್ಟೆಂಬರ್ 17-26ರವರೆಗೆ ಇದೆ.
ದೆಹಲಿಯಲ್ಲಿರುವ ಕರ್ನಾಟಕದ ಮೋದಿ ಅಭಿಮಾನಿಗಳೇ ಈ ಸ್ಪರ್ಧೆ ಬಿಟ್ಟುಕೊಡಬೇಡಿ, ಬಹುಮಾನ ಕನ್ನಡಿಗರ ಪಾಲಾಗಲಿ ಏನಂತೀರಿ....



Click it and Unblock the Notifications











