Latest Updates
-
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ
Maha Shivratri 2021: ದಿನಾಂಕ, ಪೂಜಾಸಮಯ, ಮಹತ್ವ ಹಾಗೂ ವಿಧಿವಿಧಾನದ ಸಂಪೂರ್ಣ ಮಾಹಿತಿ ನಿಮಗಾಗಿ
ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಮಹಾಶಿವರಾತ್ರಿಯೂ ಒಂದು. ಪಂಚಾಂಗದ ಪ್ರಕಾರ ಮಾಘ ಅಥವಾ ಫಲ್ಗುಣ ಮಾಸದಲ್ಲಿ ಇದನ್ನು ಆಚರಣೆ ಮಾಡುತ್ತಾರೆ. ಈ ವರ್ಷ ಮಾರ್ಚ್ ೧೧ರ ಗುರುವಾರ ಈ ಶಿವರಾತ್ರಿ ಬಂದಿದೆ. ಮಹಾ ಶಿವರಾತ್ರಿಯಂದು ಶಿವನನ್ನು ಸ್ಮರಿಸುವುದರ ಜೊತೆಗೆ ಮಂತ್ರಗಳು, ಪ್ರಾರ್ಥನೆಗಳು ಮತ್ತು ಉಪವಾಸಗಳನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವನ ಭಕ್ತರು ಮಂತ್ರಗಳು ಮತ್ತು ಪ್ರಾರ್ಥನೆಗಳನ್ನು ಜಪಿಸುತ್ತಾ ರಾತ್ರಿಯಿಡೀ ಎಚ್ಚರವಾಗಿರುತ್ತಾರೆ. ಈ ಮಹಾಶಿವರಾತ್ರಿಯ ಶುಭಘಳಿಗೆ, ಮಹತ್ವವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ ಪ್ರಧಾನ ಆಚಾರ್ಯ ಶ್ರೀನಿವಾಸ್ ರಾವ್ (ಗುರೂಜಿ)
ಉದ್ಯೋಗ ಸಮಸ್ಯೆ, ಆರೋಗ್ಯ ಸಮಸ್ಯೆ, ಪ್ರೀತಿ-ಪ್ರೇಮದಲ್ಲಿ ಮೋಸ, ಗಂಡ-ಹೆಂಡತಿ ಕಿರಿಕಿರಿ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಹೀಗೆ ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ .
ವಿಶೇಷ ಸೂಚನೆ: ತಾಂಬೂಲ ಪ್ರಶ್ನೆ, ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಜ್ಯೋತಿಷ್ಯ ತಿಳಿಸುವರು ಶ್ರೀ ಕೇರಳಿಯ ಅಥರ್ವಣ ವೇದದ ಶಾಸ್ತ್ರೀಯ ಪೂಜಾ ಪದ್ಧತಿಯಿಂದ (5) ದಿನಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ, ನಂಬಿ ಕರೆ ಮಾಡಿ ಪರಿಹಾರ ಶತಸಿದ್ಧ :ವಿಳಾಸ:#27 ,12th main 4th block Jayanagar Bangalore ☎️9986623344

ಮಹಾ ಶಿವರಾತ್ರಿ ದಿನಾಂಕ ಮತ್ತು ಸಮಯ:
೨೦೨೧ರ ಮಹಾಶಿವರಾತ್ರಿ ಮಾರ್ಚ್ 11 ಗುರುವಾರದಂದು ನಡೆಯಲಿದೆ. ಚತುರ್ದಶಿ ತಿಥಿ ಮಾರ್ಚ್ 11 ರಂದು ಮಧ್ಯಾಹ್ನ 2:39 ಕ್ಕೆ ಪ್ರಾರಂಭವಾಗಿ ಮಾರ್ಚ್ 12, 2021 ರಂದು ಮಧ್ಯಾಹ್ನ 3:02 ಕ್ಕೆ ಕೊನೆಗೊಳ್ಳುತ್ತದೆ.

ಪೂಜಾ ಸಮಯ ಅಥವಾ ಪೂಜಾ ಶುಭ ಮುಹೂರ್ತ:
ಶಿವರಾತ್ರಿಯ ಸಂದರ್ಭದಲ್ಲಿ ಭಕ್ತರು ನಿಶಿತಾ ಕಾಲ ಅಥವಾ ಯಾವುದೇ / ಎಲ್ಲಾ ನಾಲ್ಕು ಪ್ರಹಾರದ ಸಮಯದಲ್ಲಿ ಪೂಜೆ ನಡೆಸಬಹುದು.
ಶಿವರಾತ್ರಿಯ ನಿಶಿತಾ ಕಾಲ ಮಾರ್ಚ್ ೧೨ರ ಮಧ್ಯಾಹ್ನ 12:06ರಿಂದ 12:55 ರವರೆಗೆ
ಮಹಾ ಶಿವರಾತ್ರಿ ಪಾರಣ ಸಮಯ: ಮಾರ್ಚ್ ೧೨ರ ಬೆಳಿಗ್ಗೆ 06:34 AM ರಿಂದ 03:02 PMರವರೆಗೆ
- ರಾತ್ರಿ ಮೊದಲ ಪ್ರಹಾರ ಪೂಜಾ ಸಮಯ: 06:27 PM ರಿಂದ 09:29 PM
- ರಾತ್ರಿ ಎರಡನೇ ಪ್ರಹಾರ ಪೂಜಾ ಸಮಯ: 09:29 PM ರಿಂದ ಮಾರ್ಚ್ 12ರ 12:31 AM,
- ರಾತ್ರಿ ಮೂರನೇ ಪ್ರಹಾರ ಪೂಜಾ ಸಮಯ: 12:31 AM ರಿಂದ ಮಾರ್ಚ್ 12ರ 03:32 AM,
- ರಾತ್ರಿ ನಾಲ್ಕನೇ ಪ್ರಹಾರ ಪೂಜಾ ಸಮಯ: 03:32 AM ರಿಂದ ಮಾರ್ಚ್ 12ರ 06:34 AM,
- ಚತುರ್ದಶಿ ತಿಥಿ ಪ್ರಾರಂಭ: ಮಾರ್ಚ್ 21, 2021 ರಂದು 02:39 PM
- ಚತುರ್ದಶಿ ತಿಥಿ ಅಂತ್ಯ: ಮಾರ್ಚ್ 21, 2021 ರಂದು 03:02 PM
- ಮಹಾ ಶಿವರಾತ್ರಿಯಂದು ಸೂರ್ಯೋದಯ ಆಗುವ ಮುನ್ನವೇ ಎದ್ದು ಶುದ್ಧವಾಗಿ ಸ್ನಾನ ಮಾಡಿ.
- ನಂತರ ಈಶ್ವರನಿಗೆ ಷೋಡಶೋಪಚಾರದಿಂದ (ಹದಿನಾರು ಬಗೆಯಿಂದ ಶಿವನಿಗೆ ಉಪಚಾರ) ಪೂಜೆ ಮಾಡಬೇಕು.
- ಈ ದಿನದ ವಿಶೇಷ ಪೂಜಾ ಸಾಮಾಗ್ರಿ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಲು ಮರೆಯಬೇಡಿ. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದರೂ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ.
- ಉಪವಾಸ ಆಚರಣೆ
- ರಾತ್ರಿಯಿಡೀ ಜಾಗರಣೆ ಮತ್ತು ಪ್ರಾರ್ಥನೆ ಮಾಡಿ
- ಭಕ್ತರು ಶಿವನನ್ನು ಸ್ತುತಿಸಲು "ಓಂ ನಮಃ ಶಿವ" ಮಂತ್ರವನ್ನು ಪಠಿಸಿ.

ಮಹಾ ಶಿವರಾತ್ರಿಯ ಮಹತ್ವ:
ಮಹಾ ಶಿವರಾತ್ರಿಯನ್ನು ಬೇಸಿಗೆಯ ಆಗಮನದ ಮೊದಲು ಚಳಿಗಾಲದ ಕೊನೆಯಲ್ಲಿ (ಫೆಬ್ರವರಿ / ಮಾರ್ಚ್) ವರ್ಷಕ್ಕೊಮ್ಮೆ ಮಾತ್ರ ಆಚರಿಸಲಾಗುತ್ತದೆ. ಮಹಾ ಶಿವರಾತ್ರಿ ಎಂದರೆ "ಶಿವನ ಮಹಾ ರಾತ್ರಿ". ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಸ್ವರ್ಗೀಯ ನೃತ್ಯವನ್ನು ಶಿವನು ನಿರ್ವಹಿಸುವ ರಾತ್ರಿ ಮಹಾ ಶಿವರಾತ್ರಿ ಎಂದು ಹೇಳಲಾಗುತ್ತದೆ.
ಒಂದು ದಂತಕಥೆಯ ಪ್ರಕಾರ, ಶಿವನ ಲಿಂಗ ರೂಪವು ಮೊದಲ ಬಾರಿಗೆ ಕಾಣಿಸಿಕೊಂಡ ದಿನವೇ ಮಹಾಶಿವರಾತ್ರಿ. ಮತ್ತೊಂದು ನಂಬಿಕೆಯ ಪ್ರಕಾರ, ಮಹಾ ಶಿವರಾತ್ರಿ ಎಂಬುದು ಶಿವ ಮತ್ತು ದೇವಿ ಪಾರ್ವತಿಯ ಒಕ್ಕೂಟವನ್ನು ಸೂಚಿಸುವ ದಿನ.
ಆಧ್ಯಾತ್ಮಿಕವಾಗಿ, ಶಿವನು ಪುರುಷನನ್ನು (ಮನಸ್ಸು) ಪ್ರತಿನಿಧಿಸಿದರೆ ದೇವಿ ಪಾರ್ವತಿಯು ಪ್ರಕೃತಿ (ಪ್ರಕೃತಿ) ಯನ್ನು ಸಂಕೇತಿಸುತ್ತದೆ. ಬ್ರಹ್ಮಾಂಡವನ್ನು ರೂಪಿಸುವ ಎರಡು ಮೂಲಭೂತ ಘಟಕಗಳು ಇವುಗಳಾಗಿದ್ದು, ಇದರ ಸಮ್ಮಿಲನವೇ ಶಿವರಾತ್ರಿ ಎನ್ನಲಾಗುತ್ತದೆ. ಈ ದಿನದಂದು ಪೂಜೆ, ಉಪವಾಸ ಜಾಗರಣೆ ಮಾಡಿದರೆ ಭಕ್ತರು ಇಷ್ಟಾರ್ಥ ಸಿದ್ದಿಸಿಕೊಳ್ಳಬಹುದು.

ಶಿವರಾತ್ರಿ ಪೂಜಾ ವಿಧಿವಿಧಾನ:
ಉಪವಾಸ ಕ್ರಮ: ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಮಾರನೆಯ ದಿನ ಪಾರಣೆ ಮಾಡಬೇಕು. ಉಪವಾಸ ಮಾಡಲು ಆಗದಿದ್ದರೆ, ಫಲಹಾರ ತೆಗೆದುಕೊಳ್ಳಬಹುದು.
ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ ಪ್ರಧಾನ ಆಚಾರ್ಯ ಶ್ರೀನಿವಾಸ್ ರಾವ್ (ಗುರೂಜಿ)
ಉದ್ಯೋಗ ಸಮಸ್ಯೆ, ಆರೋಗ್ಯ ಸಮಸ್ಯೆ, ಪ್ರೀತಿ-ಪ್ರೇಮದಲ್ಲಿ ಮೋಸ, ಗಂಡ-ಹೆಂಡತಿ ಕಿರಿಕಿರಿ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಹೀಗೆ ನಿಮ್ಮ ಜೀವನದ ಅನೇಕ ಕಠಿಣ ಗುಪ್ತ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ .
ವಿಶೇಷ ಸೂಚನೆ: ತಾಂಬೂಲ ಪ್ರಶ್ನೆ, ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಜ್ಯೋತಿಷ್ಯ ತಿಳಿಸುವರು ಶ್ರೀ ಕೇರಳಿಯ ಅಥರ್ವಣ ವೇದದ ಶಾಸ್ತ್ರೀಯ ಪೂಜಾ ಪದ್ಧತಿಯಿಂದ (5) ದಿನಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ, ನಂಬಿ ಕರೆ ಮಾಡಿ ಪರಿಹಾರ ಶತಸಿದ್ಧ :ವಿಳಾಸ:#27 ,12th main 4th block Jayanagar Bangalore ☎️9986623344



Click it and Unblock the Notifications











