Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮಹಿಳೆಯರು ಈ ಕಾರಣಕ್ಕೆ ವಿಚ್ಛೇದನ ಪಡೆಯಲು ಬಯಸುತ್ತಾರೆ!
ಮದುವೆ ಅನ್ನೋದು ಒಂದು ಸುಂದರ ಬಂಧ. ಆದರೆ ಎಲ್ಲರ ಬಾಳಲ್ಲಿ ದಾಂಪತ್ಯ ಸಿಹಿ ನೆನೆಪುಗಳನ್ನೇ ಕೊಡುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಅನೇಕರು ದಾಂಪತ್ಯ ಜೀವನದಲ್ಲಿ ಸುಖ ಕಾಣದೆ ಅರ್ಧದಲ್ಲೇ ತಮ್ಮ ಸಂಗಾತಿಯನ್ನು ಬಿಟ್ಟು ಹೋಗುತ್ತಾರೆ.

ಇತ್ತೀಚಿಗೆ ವಿಚ್ಚೇದನ ಪ್ರಕರಣಗಳು ಹೆಚ್ಚಾಗ್ತಿದೆ. ಅದ್ರಲ್ಲೂ ಮಹಿಳೆಯರು ತಮ್ಮ ಸಂಗಾತಿಯ ಜೊತೆಗೆ ಬದುಕಲಾರದೇ ವಿಚ್ಚೇದನ ಪಡೆಯುತ್ತಿದ್ದಾರೆ. ಆದರೆ ವಿಚ್ಚೇದನ ಪಡೆದ ನಂತರ ಅವರು ತುಂಬಾನೇ ಖುಷಿಯಾಗಿರುತ್ತಾರೆ. ಅಷ್ಟಕ್ಕು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪತಿಯಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಡಿವೋರ್ಸ್ ಪಡೆಯೋದಕ್ಕೆ ಕಾರಣವೇನು? ವಿಚ್ಚೇದನದ ನಂತರ ಮಹಿಳೆಯರು ಖುಷಿಯಾಗಿರಲು ಕಾರಣ ಏನು ಅನ್ನೋದನ್ನ ಹೇಳ್ತೀವಿ.
ಮಹಿಳೆಯರು ಪತಿಯಿಂದ ಡಿವರ್ಸ್ ಪಡೆಯಲು ಕಾರಣಗಳು :

1. ಆರ್ಥಿಕ ಭದ್ರತೆ
ಶ್ರೀಮಂತನನ್ನೇ ಮದುವೆಯಾಗಿದ್ರು ಕೂಡ ಅವರಿಗೆ ಜೀವನದಲ್ಲಿ ಖುಷಿ ಅನ್ನೋದು ಇರೋದಿಲ್ಲ. ಗಂಡ ತನ್ನ ಸುಖ-ದುಃಖಗಳಿಗೆ ಸ್ಪಂದಿಸುತ್ತಿಲ್ಲ ಅನ್ನುವಾಗ ಅಂತಹ ಬದುಕು ಬಾಳೋದಕ್ಕೆ ಮಹಿಳೆಯರಿಗೆ ಇಷ್ಟವಾಗೋದಿಲ್ಲ. ಜೊತೆಗೆ ತನ್ನ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಭಯ ಕಾಡುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆ ವಿಚ್ಚೇದನಕ್ಕೆ ಬೇಡಿಕೆ ಇಡ್ತಾಳೆ. ವಿಚ್ಚೇದನ ಸಿಕ್ಕರೆ ಕನಿಷ್ಠ ಪಕ್ಷ ಆರ್ಥಿಕ ಭದ್ರತೆಯಾದ್ರು ಇರುತ್ತಲ್ಲ ಎಂಬ ದೃಷ್ಟಿಕೋನ ಆಕೆಯಲ್ಲಿ ಇರುತ್ತದೆ.

2. ದೈಹಿಕ ಕಿರುಕುಳ
ಕೆಲವೊಂದು ಪುರುಷರು ತಮ್ಮ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳೋದಿಲ್ಲ. ಆಕೆಗೆ ಚಿತ್ರಹಿಂಸೆ ಮಾಡುತ್ತಿರುತ್ತಾರೆ. ದೈಹಿಕವಾಗಿ ಆಕೆಗೆ ದಂಡಿಸೋದು, ಮಕ್ಕಳಿಗೆ ತೊಂದರೆ ಕೊಡೋದು. ಇಂತಹ ದಾಂಪತ್ಯವೆಂಬ ಜೈಲಿನಿಂದ ಹೊರಬರಲು ಮಹಿಳೆಯರು ವಿಚ್ಚೇದನ ಪಡೆಯುತ್ತಾರೆ.

3. ಪತಿಗೆ ಅನೈತಿಕ ಸಂಬಂಧವಿದ್ದಾಗ
ಕೆಲವೊಂದು ಪುರುಷರು ಮದುವೆಯಾಗಿದ್ರು ಕೂಡ ಬೇರೊಂದು ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿರುತ್ತಾನೆ. ಪತ್ನಿಯಾದವಳು ಇಂತಹ ವಿಚಾರವನ್ನು ಖಂಡಿತ ಸಹಿಸೋದಿಲ್ಲ. ಇಂತಹ ಸಂದರ್ಭದಲ್ಲಿ ಆಕೆಗೆ ವಿಚ್ಚೇದನ ಪಡೆಯೋದನ್ನ ಬಿಟ್ಟು ಬೇರೆ ಮಾರ್ಗವಿಲ್ಲ.

4. ಪತಿಯೊಂದಿಗೆ ಕಲಹ
ಪತಿ-ಪತ್ನಿಯಲ್ಲಿ ಹೊಂದಾಣಿಕೆ ಅನ್ನೋದೇ ಇರೋದಿಲ್ಲ. ಯಾವಾಗ ನೋಡಿದ್ರು ಮನೆಯಲ್ಲಿ ಜಗಳ. ಪತಿಯ ನಿರ್ಧಾರಗಳು ಪತ್ನಿಗೆ, ಪತ್ನಿಯ ನಿರ್ಧಾರಗಳು ಪತಿಗೆ ಹಿಡಿಸೋದಿಲ್ಲ. ಸಣ್ಣ-ಪುಟ್ಟ ವಿಚಾರಕ್ಕೂ ಮನೆಯಲ್ಲಿ ಗೊಂದಲ, ಮನಸ್ತಾಪ ಏರ್ಪಡುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆ ವಿಚ್ಚೇದನ ಪಡೆಯಲು ಇಚ್ಚಿಸುತ್ತಾಳೆ.
ವಿಚ್ಚೇದನ ಪಡೆದ ನಂತರ ಮಹಿಳೆಯರು ಖುಷಿಯಾಗಿರಲು ಕಾರಣವೇನು?
1. ಮಹಿಳೆಯರು ಪುರುಷರಂತಲ್ಲ ತಮಗೆ ನೋವಾದಾಗ ಆ ನೋವನ್ನು ತಮ್ಮ ಸ್ನೇಹಿತರು, ಸಂಬಂಧಿಕರು, ಆಪ್ತರ ಜೊತೆಗೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ.
2. ಮಹಿಳೆಯರಲ್ಲಿ ಎಲ್ಲರೊಂದಿಗೆ ಬೆರೆಯುವ ಗುಣ ಹೆಚ್ಚಾಗಿರುತ್ತದೆ. ನೋವಾದಾಗ ತಮ್ಮವರೊಂದಿಗೆ ಬೆರೆತು ಆ ನೋವನ್ನು ಮರೆಯುತ್ತಾರೆ.
3. ಡಿವರ್ಸ್ ಪಡೆದ ನಂತರ ಮಹಿಳೆಯರು ತಮಗಾಗಿ ಕೆಲಸ ಮಾಡೋದಕ್ಕೆ ಶುರು ಮಾಡುತ್ತಾರೆ. ತಮ್ಮ ಕೆಲಸ ಹಾಗೂ ಮಕ್ಕಳೊಂದಿಗೆ ಬ್ಯುಸಿಯಾಗುತ್ತಾರೆ. ವಿಚ್ಚೇದನದಿಂದಾದ ನೋವು ಮರೆಯುತ್ತಾರೆ.
4. ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಮಧ್ಯಪಾನ, ದೂಮಪಾನ, ಡ್ರಗ್ಸ್ನಂತಹ ಮದಕ ವಸ್ತುಗಳಿಂದ ದೂರ ಇರುತ್ತಾರೆ. ಹೀಗಾಗಿ ವಿಚ್ಚೇದನದ ನೋವು ಅವರನ್ನು ಅಷ್ಟಾಗಿ ಕಾಡೋದಿಲ್ಲ.
5. ಮಹಿಳೆಯರು ವಿಚ್ಚೇದನದ ನಂತರ ಹೊಸ ಬದುಕು ಕಟ್ಟಿಕೊಳ್ಳಲು ಇಚ್ಚಿಸುತ್ತಾರೆ. ಹೊಸತನ್ನೇನಾದರೂ ಕಲಿಯಬೇಕೆಂದು ಅವರ ಮನಸ್ಸು ತುಡಿಯುತ್ತಿರುತ್ತದೆ.
6. ವಿಚ್ಚೇದನದ ನಂತರ ಮಹಿಳೆಯರು ತಮ್ಮ ಬದುಕಿಗೆ ಪ್ರಾಮುಖ್ಯತೆ ನೀಡುತ್ತಾರೆ. ಖಿನ್ನತೆಗೆ ಒಳಗಾಗೋದು, ಊಟ-ತಿಂಡಿ ಬಿಡುವುದು ಇದ್ಯಾವುದನ್ನು ಅವರು ಮಾಡೋದಿಲ್ಲ.
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಇಂತಹ ವಿಚಾರದಲ್ಲಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿರ್ತಾರೆ. ವಿಚ್ಚೇದನದ ನಂತರ ಅವರ ಅಂದುಕೊಂಡಂತೆ ಬದುಕನ್ನು ಅವರು ಬದುಕುವುದರಿಂದ ಯಾವುದೇ ರೀತಿ ಸಮಸ್ಯೆಗಳು ಎದುರಾಗೋದಿಲ್ಲ.



Click it and Unblock the Notifications