Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಮಹಿಳೆಯರು ಈ ಕಾರಣಕ್ಕೆ ವಿಚ್ಛೇದನ ಪಡೆಯಲು ಬಯಸುತ್ತಾರೆ!
ಮದುವೆ ಅನ್ನೋದು ಒಂದು ಸುಂದರ ಬಂಧ. ಆದರೆ ಎಲ್ಲರ ಬಾಳಲ್ಲಿ ದಾಂಪತ್ಯ ಸಿಹಿ ನೆನೆಪುಗಳನ್ನೇ ಕೊಡುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಅನೇಕರು ದಾಂಪತ್ಯ ಜೀವನದಲ್ಲಿ ಸುಖ ಕಾಣದೆ ಅರ್ಧದಲ್ಲೇ ತಮ್ಮ ಸಂಗಾತಿಯನ್ನು ಬಿಟ್ಟು ಹೋಗುತ್ತಾರೆ.

ಇತ್ತೀಚಿಗೆ ವಿಚ್ಚೇದನ ಪ್ರಕರಣಗಳು ಹೆಚ್ಚಾಗ್ತಿದೆ. ಅದ್ರಲ್ಲೂ ಮಹಿಳೆಯರು ತಮ್ಮ ಸಂಗಾತಿಯ ಜೊತೆಗೆ ಬದುಕಲಾರದೇ ವಿಚ್ಚೇದನ ಪಡೆಯುತ್ತಿದ್ದಾರೆ. ಆದರೆ ವಿಚ್ಚೇದನ ಪಡೆದ ನಂತರ ಅವರು ತುಂಬಾನೇ ಖುಷಿಯಾಗಿರುತ್ತಾರೆ. ಅಷ್ಟಕ್ಕು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪತಿಯಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಡಿವೋರ್ಸ್ ಪಡೆಯೋದಕ್ಕೆ ಕಾರಣವೇನು? ವಿಚ್ಚೇದನದ ನಂತರ ಮಹಿಳೆಯರು ಖುಷಿಯಾಗಿರಲು ಕಾರಣ ಏನು ಅನ್ನೋದನ್ನ ಹೇಳ್ತೀವಿ.
ಮಹಿಳೆಯರು ಪತಿಯಿಂದ ಡಿವರ್ಸ್ ಪಡೆಯಲು ಕಾರಣಗಳು :

1. ಆರ್ಥಿಕ ಭದ್ರತೆ
ಶ್ರೀಮಂತನನ್ನೇ ಮದುವೆಯಾಗಿದ್ರು ಕೂಡ ಅವರಿಗೆ ಜೀವನದಲ್ಲಿ ಖುಷಿ ಅನ್ನೋದು ಇರೋದಿಲ್ಲ. ಗಂಡ ತನ್ನ ಸುಖ-ದುಃಖಗಳಿಗೆ ಸ್ಪಂದಿಸುತ್ತಿಲ್ಲ ಅನ್ನುವಾಗ ಅಂತಹ ಬದುಕು ಬಾಳೋದಕ್ಕೆ ಮಹಿಳೆಯರಿಗೆ ಇಷ್ಟವಾಗೋದಿಲ್ಲ. ಜೊತೆಗೆ ತನ್ನ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಭಯ ಕಾಡುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆ ವಿಚ್ಚೇದನಕ್ಕೆ ಬೇಡಿಕೆ ಇಡ್ತಾಳೆ. ವಿಚ್ಚೇದನ ಸಿಕ್ಕರೆ ಕನಿಷ್ಠ ಪಕ್ಷ ಆರ್ಥಿಕ ಭದ್ರತೆಯಾದ್ರು ಇರುತ್ತಲ್ಲ ಎಂಬ ದೃಷ್ಟಿಕೋನ ಆಕೆಯಲ್ಲಿ ಇರುತ್ತದೆ.

2. ದೈಹಿಕ ಕಿರುಕುಳ
ಕೆಲವೊಂದು ಪುರುಷರು ತಮ್ಮ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳೋದಿಲ್ಲ. ಆಕೆಗೆ ಚಿತ್ರಹಿಂಸೆ ಮಾಡುತ್ತಿರುತ್ತಾರೆ. ದೈಹಿಕವಾಗಿ ಆಕೆಗೆ ದಂಡಿಸೋದು, ಮಕ್ಕಳಿಗೆ ತೊಂದರೆ ಕೊಡೋದು. ಇಂತಹ ದಾಂಪತ್ಯವೆಂಬ ಜೈಲಿನಿಂದ ಹೊರಬರಲು ಮಹಿಳೆಯರು ವಿಚ್ಚೇದನ ಪಡೆಯುತ್ತಾರೆ.

3. ಪತಿಗೆ ಅನೈತಿಕ ಸಂಬಂಧವಿದ್ದಾಗ
ಕೆಲವೊಂದು ಪುರುಷರು ಮದುವೆಯಾಗಿದ್ರು ಕೂಡ ಬೇರೊಂದು ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿರುತ್ತಾನೆ. ಪತ್ನಿಯಾದವಳು ಇಂತಹ ವಿಚಾರವನ್ನು ಖಂಡಿತ ಸಹಿಸೋದಿಲ್ಲ. ಇಂತಹ ಸಂದರ್ಭದಲ್ಲಿ ಆಕೆಗೆ ವಿಚ್ಚೇದನ ಪಡೆಯೋದನ್ನ ಬಿಟ್ಟು ಬೇರೆ ಮಾರ್ಗವಿಲ್ಲ.

4. ಪತಿಯೊಂದಿಗೆ ಕಲಹ
ಪತಿ-ಪತ್ನಿಯಲ್ಲಿ ಹೊಂದಾಣಿಕೆ ಅನ್ನೋದೇ ಇರೋದಿಲ್ಲ. ಯಾವಾಗ ನೋಡಿದ್ರು ಮನೆಯಲ್ಲಿ ಜಗಳ. ಪತಿಯ ನಿರ್ಧಾರಗಳು ಪತ್ನಿಗೆ, ಪತ್ನಿಯ ನಿರ್ಧಾರಗಳು ಪತಿಗೆ ಹಿಡಿಸೋದಿಲ್ಲ. ಸಣ್ಣ-ಪುಟ್ಟ ವಿಚಾರಕ್ಕೂ ಮನೆಯಲ್ಲಿ ಗೊಂದಲ, ಮನಸ್ತಾಪ ಏರ್ಪಡುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆ ವಿಚ್ಚೇದನ ಪಡೆಯಲು ಇಚ್ಚಿಸುತ್ತಾಳೆ.
ವಿಚ್ಚೇದನ ಪಡೆದ ನಂತರ ಮಹಿಳೆಯರು ಖುಷಿಯಾಗಿರಲು ಕಾರಣವೇನು?
1. ಮಹಿಳೆಯರು ಪುರುಷರಂತಲ್ಲ ತಮಗೆ ನೋವಾದಾಗ ಆ ನೋವನ್ನು ತಮ್ಮ ಸ್ನೇಹಿತರು, ಸಂಬಂಧಿಕರು, ಆಪ್ತರ ಜೊತೆಗೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ.
2. ಮಹಿಳೆಯರಲ್ಲಿ ಎಲ್ಲರೊಂದಿಗೆ ಬೆರೆಯುವ ಗುಣ ಹೆಚ್ಚಾಗಿರುತ್ತದೆ. ನೋವಾದಾಗ ತಮ್ಮವರೊಂದಿಗೆ ಬೆರೆತು ಆ ನೋವನ್ನು ಮರೆಯುತ್ತಾರೆ.
3. ಡಿವರ್ಸ್ ಪಡೆದ ನಂತರ ಮಹಿಳೆಯರು ತಮಗಾಗಿ ಕೆಲಸ ಮಾಡೋದಕ್ಕೆ ಶುರು ಮಾಡುತ್ತಾರೆ. ತಮ್ಮ ಕೆಲಸ ಹಾಗೂ ಮಕ್ಕಳೊಂದಿಗೆ ಬ್ಯುಸಿಯಾಗುತ್ತಾರೆ. ವಿಚ್ಚೇದನದಿಂದಾದ ನೋವು ಮರೆಯುತ್ತಾರೆ.
4. ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಮಧ್ಯಪಾನ, ದೂಮಪಾನ, ಡ್ರಗ್ಸ್ನಂತಹ ಮದಕ ವಸ್ತುಗಳಿಂದ ದೂರ ಇರುತ್ತಾರೆ. ಹೀಗಾಗಿ ವಿಚ್ಚೇದನದ ನೋವು ಅವರನ್ನು ಅಷ್ಟಾಗಿ ಕಾಡೋದಿಲ್ಲ.
5. ಮಹಿಳೆಯರು ವಿಚ್ಚೇದನದ ನಂತರ ಹೊಸ ಬದುಕು ಕಟ್ಟಿಕೊಳ್ಳಲು ಇಚ್ಚಿಸುತ್ತಾರೆ. ಹೊಸತನ್ನೇನಾದರೂ ಕಲಿಯಬೇಕೆಂದು ಅವರ ಮನಸ್ಸು ತುಡಿಯುತ್ತಿರುತ್ತದೆ.
6. ವಿಚ್ಚೇದನದ ನಂತರ ಮಹಿಳೆಯರು ತಮ್ಮ ಬದುಕಿಗೆ ಪ್ರಾಮುಖ್ಯತೆ ನೀಡುತ್ತಾರೆ. ಖಿನ್ನತೆಗೆ ಒಳಗಾಗೋದು, ಊಟ-ತಿಂಡಿ ಬಿಡುವುದು ಇದ್ಯಾವುದನ್ನು ಅವರು ಮಾಡೋದಿಲ್ಲ.
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಇಂತಹ ವಿಚಾರದಲ್ಲಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿರ್ತಾರೆ. ವಿಚ್ಚೇದನದ ನಂತರ ಅವರ ಅಂದುಕೊಂಡಂತೆ ಬದುಕನ್ನು ಅವರು ಬದುಕುವುದರಿಂದ ಯಾವುದೇ ರೀತಿ ಸಮಸ್ಯೆಗಳು ಎದುರಾಗೋದಿಲ್ಲ.



Click it and Unblock the Notifications