For Quick Alerts
ALLOW NOTIFICATIONS  
For Daily Alerts

20-10-2018: ಶನಿವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|
20-10-2018- ಶನಿವಾರದ ದಿನ ಭವಿಷ್ಯ | Boldsky

ಶನಿವಾರದ ದಿನ ಒಬ್ಬ ವ್ಯಕ್ತಿಯ ಜಾತಕದಲ್ಲಿ ಶನಿಯ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ, ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ, ಆರೋಗ್ಯಕರ ಜೀವನವಾಗಿರುತ್ತದೆ, ಎಲ್ಲವೂ ಧನಾತ್ಮಕವಾಗಿರುತ್ತದೆ.

ವಾಸ್ತವವಾಗಿ ,ಹಿಂದೂ ಜ್ಯೋತಿಷಿಗಳು ನಂಬುವಂತೆ ,ಯಾರ ಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಅವರಿಗೆ ಬೇರೆ ಯಾವುದೇ 'ಗ್ರಹ' ಗಳು ಶನಿಯು ನೀಡುವಂತೆ ಒಳ್ಳೆಯದನ್ನು ನೀಡಲಾರರು. ಅದೇ ಶನಿಯು "ಕೆಟ್ಟಸ್ಥಾನ"ದಲ್ಲಿ ಕುಳಿತಿದ್ದರೆ, ಎಲ್ಲ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ಶನಿವಾರವು ಶನಿ ದೈವವನ್ನು ಆರಾಧಿಸುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ....ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು.9845743807

ವೃಷಭ

ವೃಷಭ

ಮನಸ್ಸು ಅತ್ಯಂತ ಚಂಚಲತೆಯಿಂದ ಕೂಡಿರುವುದರಿಂದ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸುವಿರಿ. ಗ್ರಹಸ್ಥಿತಿಗಳು ಉತ್ತಮವಾಗಿಲ್ಲ. ಹಾಗಾಗಿ ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಹರಿಯನ್ನು ಪ್ರಾರ್ಥಿಸಿ.ಯಾರದೋ ಮುಲಾಜಿಗೆ ಕಟ್ಟುಬಿದ್ದು ಹಣಕಾಸಿನ ವಿಷಯದಲ್ಲಿ ಜಾಮೀನು ಪತ್ರಕ್ಕೆ ಸಹಿ ಹಾಕದಿರಿ. ಈ ದಿನ ತುಸು ನಿರಾಳತೆ ಇರುವುದು. ದುಡಿದ ಹಣವು ನೀರಿನಂತೆ ಖರ್ಚಾಗುವ ಸಾಧ್ಯತೆ ಇರುತ್ತದೆ. ಆಂಜನೇಯನ ಸ್ಮರಣೆ ಮಾಡಿ. ಹೇಳಬೇಕಾದ್ದನ್ನು ಹೇಳಲು ಸೂಕ್ತ ಸಮಯವಾಗಿದೆ. ಬಹುದಿನಗಳಿಂದ ಹೃದಯದಲ್ಲಿ ಗೌಪ್ಯವಾಗಿಟ್ಟುಕೊಂಡ ವಿಚಾರವನ್ನು ಬಹಿರಂಗಗೊಳಿಸುವಿರಿ. ಇದರಿಂದ ನಿಮ್ಮ ಮನೆ ಮಂದಿ ಸಂತೋಷಪಡುವರು. ಅದೃಷ್ಟ ಸಂಖ್ಯೆ:2

ಮಿಥುನ

ಮಿಥುನ

ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಹಾಗಾಗಿ ಹೆಚ್ಚು ಚಿಂತಿಸದೆ ನಿಮ್ಮ ಕಾರ್ಯ ಯೋಜನೆಗಳನ್ನು ರೂಪಿಸಿ. ಅದರಲ್ಲಿ ಗೆಲ್ಲುವ ಅವಕಾಶ ಹೇರಳವಾಗಿದೆ. ಗುರುವನ್ನು ಮನಸಾ ಸ್ಮರಿಸಿ ಕಾರ್ಯ ಆರಂಭಿಸಿ.

ಕಚೇರಿಯ ವಾತಾವರಣದಲ್ಲಿ ಮೇಲಧಿಕಾರಿಗಳ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ನೀವು, ಕಚೇರಿಯಲ್ಲಿನ ಎಲ್ಲಾ ಸರ್ಕಾರಿ ಸವಲತ್ತುಗಳನ್ನು ಅನಾಯಾಸವಾಗಿ ಪಡೆಯುವಿರಿ. ನಿಮ್ಮ ಈ ಪ್ರಗತಿಯು ಇತರರಿಗೆ ಅಸೂಯೆ ತರುವುದು.ಗೌರವಾದರಗಳನ್ನು ಪಡೆಯಲು ಹೇರಳ ಅವಕಾಶಗಳಿವೆ. ಕಚೇರಿ ಕೆಲಸಗಳಿಂದ ವಿಶ್ರಾಂತಿ ಲಭಿಸಿರುವುದು ಮನಸ್ಸಿಗೆ ಹರ್ಷವನ್ನುಂಟು ಮಾಡುತ್ತದೆ. ಹಳೆ ಗೆಳೆಯರ ಭೇಟಿ ಸಾಧ್ಯತೆಯಿದೆ.

ಅದೃಷ್ಟ ಸಂಖ್ಯೆ:1

ಕಟಕ

ಕಟಕ

ಹೊಸ ರೀತಿಯ ಕಾರ್ಯ ಮಾಡುವಂತೆ ಗ್ರಹಗಳು ಪ್ರೇರೇಪಿಸುತ್ತವೆ. ಅದರಲ್ಲಿ ಯಶಸ್ಸನ್ನು ಕಾಣುವ ಸೌಭಾಗ್ಯ ನಿಮ್ಮದಾಗುವುದು. ದೈವದತ್ತವಾಗಿ ಬಂದ ಜಾಣ್ಮೆಯನ್ನು ಉಪಯೋಗಿಸಿ ಕೊಳ್ಳಿ. ಮಾತಿನಲ್ಲಿ ಮೃದುತ್ವ ರೂಢಿಸಿಕೊಳ್ಳಿ.ಸ್ಥಿರಾಸ್ಥಿ ಕೊಂಡುಕೊಳ್ಳುವ ಪ್ರಯತ್ನ ನಡೆಯುತ್ತದೆ. ಮನೆಯ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಆದರೆ ವೈಯಕ್ತಿಕವಾಗಿ ಶೀರೋವೇದನೆಯು ನಿಮ್ಮ ಮೂಡನ್ನು ಹಾಳುಮಾಡುವುದು.

ನಿಮ್ಮ ಆಂತರಿಕ ಬೇಗುದಿ ಹೊರ ಹಾಕಲು ಸಕಾಲವಾಗಿದೆ. ಸಂಜೆ ನಿಮ್ಮ ಆತ್ಮೀಯ ಗೆಳೆಯರೊಂದಿಗೆ ಸೇರಿ ಚರ್ಚೆ ಮಾಡಿ. ಇದಕ್ಕೆ ಸೂಕ್ತ ಸಲಹೆಗಳು ಸಿಗುವುದರಿಂದ ಮನಸ್ಸು ಹಗುರವಾಗುವುದು.

ಅದೃಷ್ಟ ಸಂಖ್ಯೆ:5

ಸಿಂಹ

ಸಿಂಹ

ದೃಢ ನಿರ್ಧಾರವನ್ನು ತಳೆಯುವಲ್ಲಿ ಹೆಸರು ವಾಸಿಯಾದ ನೀವು ಸಂಕಷ್ಟ ಪರಿಸ್ಥಿತಿಯನ್ನು ಸೂಕ್ಷ ್ಮವಾಗಿ ಗಮನಿಸಿ ಅದರಲ್ಲಿ ವಿಜಯವನ್ನು ತಂದುಕೊಳ್ಳಲು ನಿಮ್ಮ ಪರಿಪಕ್ವ ಮನಸ್ಸು ಸಹಾಯ ಮಾಡುವುದು. ಇದಕ್ಕೆ ಸಂಗಾತಿಯ ನೆರವು ಸಿಗುವುದು.ಹೊತ್ತು ಬಂದಂತೆ ಛತ್ರಿ ಹಿಡಿಯಬೇಕು ಎನ್ನುವಂತೆ ಸದ್ಯದ ಪರಿಸ್ಥಿತಿಯನ್ನು ನಿಮ್ಮ ಪರವಾಗಿ ಮಾಡಿಕೊಳ್ಳಲು ಸಾಕಷ್ಟು ಕಸರತ್ತನ್ನು ಮಾಡುವಿರಿ. ಮನೋವೇಗವನ್ನು ಹೊಂದಿರುವ ಆಂಜನೇಯ ಸ್ಮರಣೆಯಿಂದ ನಿಮ್ಮ ಕಾರ್ಯ ಕೈಗೂಡುವುದು.ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ನೀವು ಯಾವುದೇ ವಿಚಾರದಲ್ಲೂ ಸೋಲು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ನಿಮ್ಮ ವಿಚಾರಗಳ ಮೇಲೆ ಜನರು ತಪ್ಪು ಅಭಿಪ್ರಾಯ ತಾಳುವರು. ಹಾಗಾಗಿ ಸೋತು ಗೆಲ್ಲುವುದು ಉತ್ತಮ.

ಅದೃಷ್ಟ ಸಂಖ್ಯೆ:7

ಕನ್ಯಾ

ಕನ್ಯಾ

ವ್ಯವಹಾರಕ್ಕೆ ಸಂಬಂಧಪಟ್ಟಂತೆ ಲೆಕ್ಕಪತ್ರಗಳನ್ನು ಸರಿಯಾಗಿಟ್ಟುಕೊಂಡಿರುವ ಬಗ್ಗೆ ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ಅವಶ್ಯಕತೆಗಿಂತ ಹೆಚ್ಚು ಪ್ರಾಮಾಣಿಕತನ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವುದು. ಈ ಬಗ್ಗೆ ಹಿರಿಯರಿಂದ ಸೂಕ್ತ ಸಲಹೆ ಪಡೆಯಿರಿ. ಕಲಿತ ವಿದ್ಯೆಯು ಯಾವಾಗಲೂ ನಶಿಸುವುದಿಲ್ಲ. ಆದರೆ ಕಾಲಕಾಲಕ್ಕೆ ಅದನ್ನು ಸಾಣೆ ಹಿಡಿಯಬೇಕು. ಉಪಯೋಗಿಸದೆ ಇದ್ದ ಚೂಪಾದ ಚೂರಿಯು ಮೊಂಡು ಆಗುವ ಸಾಧ್ಯತೆ ಇರುತ್ತದೆ. ಇದರಿಂದ ನಿತ್ಯ ಬದುಕಿನ ಸತ್ಯದರ್ಶನ ವಾಗುವುದು.ವಾದ ಮಾಡಿ ಪರರ ಮನಸ್ಸು ಗೆಲ್ಲುವ ಯೋಚನೆಯಲ್ಲಿದ್ದೀರಿ. ಆದರೆ ತರ್ಕದಿಂದ ಸಿದ್ಧಾಂತ ಮಾಡಲು ಆಗುವುದಿಲ್ಲ. ಇದನ್ನು ನೀವು ಅರಿಯುವಿರಿ. ಆದಾಗ್ಯೂ ಸೋಲು ವಿರೋಚಿತವಾದುದು.

ಅದೃಷ್ಟ ಸಂಖ್ಯೆ:4

ತುಲಾ

ತುಲಾ

ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬಹುದಿನಗಳಿಂದ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವುದು. ಆಕಾಶಕ್ಕೆ ಏಣಿ ಹಾಕುವ ವ್ಯರ್ಥ ಪ್ರಯತ್ನ ಬೇಡ. ನಿಮ್ಮ ಕಾರ್ಯಕ್ಷೇತ್ರದಲ್ಲಿನ ಕೆಲಸವು ಮಂದಗತಿಯಿಂದ ಆರಂಭವಾದರೂ ಒಳಿತಾಗುವುದು.ಅವಸರವು ಅವಘಡಕ್ಕೆ ಮೂಲ ಎನ್ನುವಂತೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಅವಸರ ಬೇಡ. ತಾಳ್ಮೆಯಿಂದ ವ್ಯವಹರಿಸಿ. ಸಂಗಾತಿಯ ಸಲಹೆ ಸ್ವೀಕರಿಸಿ. ಮುದ್ದು ಮಗುವಿನ ಮಾತು ನಿಮಗೆ ಆನಂದ ನೀಡುವುದು.ಮಕ್ಕಳ ಕಲರವ ಮನಸ್ಸಿಗೆ ಮುದ ನೀಡುವುದು. ತಂದೆ ತಾಯಿಯರಿಗೆ ಮತ್ತು ಅತ್ತೆ ಮಾವಂದಿರಿಗೆ ಸಂತೋಷವುಂಟಾಗುವುದು. ಮಗುವಿನ ಮುದ್ದು ಮುಖ ಎಲ್ಲಾ ಸಮಸ್ಯೆಗಳನ್ನು ಮರೆಸುವುದು.

ಅದೃಷ್ಟ ಸಂಖ್ಯೆ:6

 ವೃಶ್ಚಿಕ

ವೃಶ್ಚಿಕ

ಸುಂಕದವನ ಮುಂದೆ ಸುಖದುಃಖ ಹೇಳಿಕೊಂಡು ಏನು ಪ್ರಯೋಜನ. ಹಾಗಾಗಿ ಕಷ್ಟ ಬಂದಿದೆ ಎಂದು ಮರುಗುವುದಕ್ಕಿಂತ ಬಂದಿರುವ ಕಷ್ಟವನ್ನು ಎದುರಿಸುವ ಶಕ್ತಿ ನೀಡು ಎಂದು ದೇವರಲ್ಲಿ ಪ್ರಾರ್ಥಿಸಿ.ಯಾವುದೇ ಕಾರ್ಯವು ರಾತ್ರಿ ಕಳೆದು ಬೆಳಗುಆಗುವುದರೊಳಗೆಪೂರ್ಣಗೊಳ್ಳುವುದಿಲ್ಲ. ಎಲ್ಲದಕ್ಕೂ ಒಂದು ಕಾಲಮಿತಿ ಇರುತ್ತದೆ. ನಿಧಾನವಾದರೂ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು. ದೇವರಲ್ಲಿ ವಿಶ್ವಾಸವಿಡಿ. ಆತನು ನಿಮಗೆ ಸೂಕ್ತ ಮಾರ್ಗದರ್ಶನ ನೀಡುವನು.ಹಲವು ದಿನಗಳಿಂದ ಯಶಸ್ಸೆಂಬ ಕುದುರೆ ಏರಿ ಸಂಭ್ರಮಿಸುತ್ತಿದ್ದೀರಿ. ಕಾಲವೂ ಪಕ್ವವಾಗಿರುವುದರಿಂದ ನಿಮ್ಮ ಗೆಲುವಿಗೆ ಹಲವಾರು ಜನರು ಶ್ರಮಿಸುವರು. ಇದರಿಂದ ನಿಮ್ಮ ಗೆಲುವಿಗೆ ಅನುಕೂಲವಾಗುವುದು.

ಅದೃಷ್ಟ ಸಂಖ್ಯೆ:3

ಧನಸ್ಸು

ಧನಸ್ಸು

ಎಲ್ಲಾ ಕೆಲಸವನ್ನು ನನ್ನಿಂದಲೇ ಆಯಿತು ಎನ್ನುವುದಕ್ಕಿಂತ ಭಗವಂತನ ಕೃಪೆಯಿಂದ ಕೆಲಸ ಆಯಿತು ಎನ್ನುವುದು ಹೆಚ್ಚು ಸೂಕ್ತ. ಹಾಗೆ ಮಾಡುವುದರಿಂದ ಕೆಲವು ಕೆಲಸಗಳು ಇನ್ನು ಹೆಚ್ಚಿನ ಪರಿಪಕ್ವತೆಯಿಂದ ಯಶಸ್ಸನ್ನು ಹೊಂದುವುದು.ತೆರೆಮರೆಯ ಕಾರ್ಯಗಳು, ಫೋಟೋಗ್ರಫಿ ರಂಗದಲ್ಲಿರುವವರಿಗೆ ಅಲ್ಪ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ದುರ್ಗಾಮಾತೆಯನ್ನು ಮನಸಾ ಭಜಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಮನೆಯ ಸದಸ್ಯರೊಟ್ಟಿಗೆ ಸೌಹಾರ್ದತೆ ಬೆಳೆಸಿಕೊಳ್ಳಿ.ಭತ್ತ ಕುಟ್ಟಿದರೆ ಅಕ್ಕಿ ಬರುವುದು. ಆದರೆ ಅದರ ಹೊಟ್ಟನ್ನು ಕುಟ್ಟುವುದರಿಂದ ಪ್ರಯೋಜನವಿಲ್ಲ. ಗುರುವಿನ ಶುಭ ಆಶೀರ್ವಾದದಿಂದ ಕೆಲಸ ಕಾರ್ಯಗಳು ಸುಗಮವಾಗಿ ಆಗುವವು.

ಅದೃಷ್ಟ ಸಂಖ್ಯೆ:9

 ಮಕರ

ಮಕರ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ದೊಡ್ಡವರ ಸಹವಾಸದಿಂದ ದೂರ ಇರುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ಮಾಡುವ ತಪ್ಪುಗಳಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಇರುತ್ತದೆ.ಯಾವ ಕೆಲಸ ಮಾಡಲು ಹೋದರೂ ಅದಕ್ಕೆ ನೂರೆಂಟು ವಿಘ್ನಗಳು. ಹಾಗಾಗಿ ನಿತ್ಯದ ಜೀವನ ನಡೆಸುವುದಾದರೂ ಹೇಗೆ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಕುಲದೇವರ ಅನುಗ್ರಹದಿಂದ ನಿಮ್ಮ ಬಾಳಲ್ಲಿ ಬೆಳಕಿನ ಕಿರಣ ಮೂಡುವುದು.ನಿಮ್ಮ ಅಂತರಂಗದ ಭಾವನೆಗಳಿಗೆ ಅಕ್ಷ ರ ರೂಪ ಕೊಡಲು ಕಾಲ ಕೂಡಿ ಬಂದಿದೆ. ನಿಮ್ಮೊಳಗಿನ ಒಬ್ಬ ಲೇಖಕ ಹೊರ ಜಗತ್ತಿಗೆ ಪ್ರಕಟನಾಗುವ ಸಾಧ್ಯತೆ ಇರುತ್ತದೆ. ಅದೃಷ್ಟ ಸಂಖ್ಯೆ:5

ಕುಂಭ

ಕುಂಭ

ದೈವಬಲವು ನಿಮ್ಮ ಎಲ್ಲಾ ಕಾರ್ಯಗಳಲ್ಲೂ ಪ್ರಭಾವ ಬೀರುತ್ತದೆ. ಹಾಗಾಗಿ ಕಠಿಣ ಕಾರ್ಯವು ಕೂಡಾ ಸುಲಲಿತವಾಗಿ ನೆರವೇರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ಕೆಲಸದ ಸ್ಥಳದಲ್ಲಿ ಒತ್ತಡ ಇದ್ದರೂ ಕೆಲ ಪರಿಣಾಮಕಾರಿ ಹಂತಕ್ಕೆ ಏರುವ ಮುನ್ಸೂಚನೆಗಳು ನಿಮಗೆ ಗೋಚರಿಸುವುದು. ನಿಮ್ಮ ಕುಟುಂಬದ ಇಷ್ಟ ದೇವತೆಯನ್ನು ಭೇಟಿ ಮಾಡಿ. ಚಿಕ್ಕ ಮಕ್ಕಳೊಂದಿಗೆ ಸಂಜೆ ಸಂತೋಷವಾಗಿ ಕಳೆಯುವಿರಿ.ನಿಮ್ಮ ಸ್ವಂತ ವ್ಯಕ್ತಿತ್ವದಲ್ಲೇ ಸೂಜಿಗಲ್ಲಿನಂತೆ ಆಕರ್ಷಿಸುವ ವಿಶೇಷವಿದೆ. ಹೀಗಿದ್ದಾಗ ಇನ್ನೊಬ್ಬರನ್ನು ಅನುಕರಣೆ ಮಾಡುವುದು ಸೂಕ್ತವಲ್ಲ. ಭಗವಂತನ ವಿಶೇಷ ಕಾರುಣ್ಯ ನಿಮ್ಮ ಮೇಲಿದೆ.

ಅದೃಷ್ಟ ಸಂಖ್ಯೆ:2

ಮೀನ

ಮೀನ

ಏಕಾಂತವು ನಿಮ್ಮ ಮನಸ್ಸನ್ನು ಹಿಂಡುತ್ತಿದೆ. ಮನುಜ ಸಂಘಜೀವಿ ಹಾಗಾಗಿ ಆದಷ್ಟು ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಗೆಳೆಯರೊಡನೆ ಬೆರೆಯಿರಿ. ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.ನಿಮ್ಮ ಮಾತುಗಳನ್ನು ಇತರರು ಕೇಳುತ್ತಿಲ್ಲ ಅಥವಾ ನಿಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಅದಕ್ಕಾಗಿ ಚಿಂತಿಸುವ ಅವಶ್ಯಕತೆಯಿಲ್ಲ. ನಿಮ್ಮನ್ನು ನೀವು ಅರಿತುಕೊಳ್ಳಲು ಶುಭ ದಿನವಾಗಿದೆ. ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಬೇಕೆಂಬ ನಿಮ್ಮ ಮನದ ಆಸೆ ಈಡೇರಿಸಿಕೊಳ್ಳಲು ಸೂಕ್ತ ಸಮಯ. ಮಡದಿ ಮಕ್ಕಳ ಸಹಿತ ಪ್ರಯಾಣ ಬೆಳೆಸಿ. ಮನಸ್ಸಿಗೆ ಪ್ರಶಾಂತತೆ ತಂದುಕೊಳ್ಳಿ. ಅದೃಷ್ಟ ಸಂಖ್ಯೆ:1

English summary

your daily horoscope-20-october-2018

Know what astrology and the planets have in store for you today. Choose your zodiac sign and read the details...
Story first published: Saturday, October 20, 2018, 10:34 [IST]
X
Desktop Bottom Promotion