For Quick Alerts
ALLOW NOTIFICATIONS  
For Daily Alerts

18-10-2018: ಗುರುವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|
18-10-2018- ಗುರುವಾರದ ದಿನ ಭವಿಷ್ಯ | Boldsky

ಗುರುವಾರದ ದಿನ ಈ ಹೆಸರು ಗುರು ಗ್ರಹದಿಂದ ಬಂದಿದೆ. 'ಗುರು' ಅಂದರೆ ಭಾರ,ಮಹತ್ವಪೂರ್ಣ ಎಂಬರ್ಥ ಇದೆ. ಹೀಗಾಗಿ ಗುರುವಾರ ಗುರು ಅಂದರೆ ಆಚಾರ್ಯರಿಗೆ ಮೀಸಲಾದ ದಿನ ಕೂಡ ಹೌದು.ಅಂದರೆ ಹಿರಿಯರಿಗೆ ಗೌರವಿಸುವ ದಿನ. ಈ ದಿನ ಗುರುವಾರದ ರಾಶಿ ಭವಿಷ್ಯವನ್ನು ತಿಳಿಯೋಣ...

ಮೇಷ

ಮೇಷ

ನಾಲಿಗೆ ಒಳ್ಳೆಯದಿದ್ದರೆ ನಾಡೇ ಒಳ್ಳೆಯದು ಎಂಬಂತೆ ಸ್ನೇಹಜೀವಿಯಾದ ನಿಮ್ಮ ಮಾತನ್ನು ಎಲ್ಲರೂ ಗೌರವಿಸುವರು. ಇದರಿಂದ ಹೊಸತನ ಮತ್ತು ಹೊಸ ಸ್ನೇಹಿತರನ್ನು ನೀವು ಸಂಪಾದಿಸುವಿರಿ. ಸಾಮಾಜಿಕವಾಗಿ ಸರ್ವರಿಂದ ಗೌರವಿಸಲ್ಪಡುವಿರಿ. ಹಣಕಾಸು ಕೂಡಾ ಉತ್ತಮವಾಗಿರುತ್ತದೆ. ಗ್ರಹಗಳು ಉತ್ತಮ ಸ್ಥಿತಿಯಲ್ಲಿ ಸಂಚರಿಸುತ್ತಿದ್ದು ಕುಟುಂಬ ಸದಸ್ಯರ ನಡುವಿದ್ದ ಭಿನ್ನಾಭಿಪ್ರಾಯಗಳು ಕರಗಿ ಒಗ್ಗಟ್ಟು ಮೂಡುವುದು. ಮನೆಯ ಪ್ರತಿ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬೆಲೆಬಾಳುವ ವಸ್ತು, ಒಡವೆಗಳ ಪ್ರಾಪ್ತಿ ಮತ್ತು ಅಧಿಕಾರ ಪ್ರಾಪ್ತಿ ಉಂಟಾಗುವವು. ಬರಹಗಾರರಿಗೆ ಮತ್ತು ಉಪಾಧ್ಯಾಯ ವೃತ್ತಿಯವರಿಗೆ ಹೆಚ್ಚಿನ ಅನುಕೂಲ ಕಂಡು ಬರುವುದು ಮತ್ತು ಸಾಮಾಜಿಕ ಮನ್ನಣೆ ದೊರೆಯುವುದು. ಅದೃಷ್ಟ ಸಂಖ್ಯೆ: 1

ವೃಷಭ

ವೃಷಭ

ಸಂಬಂಧಿಗಳ ಬಳಿ ಹಳೆಯ ವಿಚಾರಗಳನ್ನು ಕೆದಕಲು ಪ್ರಯತ್ನಿಸದಿರಿ. ಕೆದಕಲು ಹೋದರೆ ಮುಂದಿನ ಉತ್ತಮ ಬಾಂಧವ್ಯ ಮುರಿದು ಬೀಳುವುದು. ಹಳೇ ಭಿನ್ನಾಭಿಪ್ರಾಯ ಉತ್ತಮ ಮಾತುಕತೆಯ ಸಂವಹನದಿಂದ ಕೊನೆಗೊಳ್ಳಲಿದೆ. ಜೀವನದಲ್ಲಿ ಹರ್ಷದ ವಾತಾವರಣ ಉಂಟಾಗುವುದು.ಹಣ ನೀರಿನಂತೆ ಖರ್ಚಾಗುವುದು. ಎಲ್ಲ ಖರ್ಚು ಮಾಡಿ ಬರಿಗೈಯಾಗುವ ಸಂಭವವಿದೆ. ಹಣಕಾಸಿನ ವ್ಯವಹಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಿ. ಗುರು ಸ್ತೋತ್ರ ಪಠಿಸಿ. ಸಹೋದರರಿಂದ ಸುಖವಿಲ್ಲ.ಮನೆಯಲ್ಲಿ ಸಂತಸ ನೆಲೆಸುವುದು. ಮಕ್ಕಳಿಂದ ಹರ್ಷದಾಯಕ ವಾರ್ತೆ ಕೇಳುವಿರಿ. ಕೆಲವರಿಗೆ ನೌಕರಿ ಸೇರಿಕೊಳ್ಳಲು ಆದೇಶ ಪತ್ರ ಕೈ ಸೇರುವುದು. ಸುಗ್ರಾಸ ಭೋಜನ ಸವಿಯುವಿರಿ. ಅದೃಷ್ಟ ಸಂಖ್ಯೆ:6

ಮಿಥುನ

ಮಿಥುನ

ನಿಮ್ಮ ಕಾರ್ಯವೈಖರಿಯನ್ನು ಕೊಂಡಾಡುವ ಒಂದು ದೊಡ್ಡ ಗುಂಪೆ ನಿಮ್ಮನ್ನು ಭೇಟಿ ಆಗಲಿರುವರು. ಈ ಹಿಂದೆ ನೀವು ಮಾಡಿದ ಉಪಕಾರ ಸ್ಮರಣೆ ಮಾಡಿಕೊಂಡು ನಿಮ್ಮ ಸಹಾಯಕ್ಕೆ ಟೊಂಕ ಕಟ್ಟಿ ನಿಲ್ಲುವರು. ಹಾಗಾಗಿ ಮಹತ್ತರ ಕೆಲಸ ಸಾಧಿಸುವಿರಿ.ಕೆಲವರಿಗೆ ದಿಢೀರ್‌ ಪ್ರಯಾಣ ಮಾಡುವ ಸಂದರ್ಭ ಬರುತ್ತದೆ. ಬಂಧುಗಳ ಹೊಂದಾಣಿಕೆ ನಿರಂತರವಾಗಿರುತ್ತದೆ. ಬರಬೇಕಾಗಿದ್ದ ಹಣದ ಬಗ್ಗೆ ಒಂದು ತೀರ್ಮಾನವನ್ನು ಆದಷ್ಟು ಬೇಗ ತೆಗೆದುಕೊಳ್ಳಿ. ಕುಟುಂಬದ ಇತರ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ.ಆತುರಗಾರನಿಗೆ ಬುದ್ಧಿಮಟ್ಟ ಎಂಬ ಗಾದೆ ಮಾತು ನಿಮಗೆ ಅರಿವಾಗುವುದು. ಆತುರದಿಂದ ಮಾಡಿದ ವಾದ ನಿಮಗೆ ಮುಖಭಂಗವನ್ನುಂಟು ಮಾಡುವುದು. ಹಾಗಾಗಿ ತಾಳ್ಮೆಯಿಂದ ಎದುರಾಳಿಯ ಮಾತನ್ನು ಆಲಿಸಿ ವಾದ ಮಾಡಿದಲ್ಲಿ ಜಯ ನಿಮ್ಮದಾಗುವುದು. ಅದೃಷ್ಟ ಸಂಖ್ಯೆ: 7

 ಕಟಕ

ಕಟಕ

ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವಿರಿ. ರಾಜಕೀಯ ಸಂಬಂಧವಾಗಿ ನಿಮಗೆ ಹೊಸ ಜವಾಬ್ದಾರಿ ಹೊರುವ ಅವಕಾಶ ದೊರೆಯುವುದು. ಬಂದ ಸುಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಹಣದ ಅಡಚಣೆ ಎಂದು ಅಧಿಕಾರ ತಿರಸ್ಕರಿಸದಿರಿ. ಅಂದುಕೊಂಡ ಕೆಲಸಗಳು ಸರಿಯಾದ ಸಮಯಕ್ಕೆ ಕೈಗೂಡಲಿವೆ. ಮಡದಿಗೆ ದೃಷ್ಟಿದೋಷ ಸಂಬಂಧಿ ಸಮಸ್ಯೆ ಕಾಡಲಿದ್ದು ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ. ಗುರು ಮಂತ್ರ ಪಠಿಸಿ. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಇದ್ದಕ್ಕಿದ್ದಂತೆ ಆಪ್ತ ವಲಯವೇ ನಿಮ್ಮ ವಿರುದ್ಧ ತಿರುಗಿ ಬೀಳವ ಸಾಧ್ಯತೆ ಇದೆ. ಆದರೆ ಅವರನ್ನು ಎದುರಿಸುವ ಕಲೆಗಾರಿಕೆ ನಿಮ್ಮಲ್ಲಿರುವುದರಿಂದ ಹೆದರುವ ಅವಶ್ಯಕತೆ ಇಲ್ಲ. ಈ ಬಗ್ಗೆ ಹಿರಿಯರೊಬ್ಬರ ಸಲಹೆ ನಿಮಗೆ ಸಹಕಾರಿಯಾಗುವುದು. ಅದೃಷ್ಟ ಸಂಖ್ಯೆ: 2

ಸಿಂಹ

ಸಿಂಹ

ತಿಳಿದು ತಿಳಿದು ತಲೆಗಟ್ಟಿ ಇದೆ ಎಂದು ಕಲ್ಲುಬಂಡೆಗೆ ತಲೆಯನ್ನು ಬಡಿದುಕೊಳ್ಳದಿರಿ. ಅರ್ಥಾತ್‌ ನೀವು ಮಾಡುವ ಕೆಲಸವನ್ನು ಎಲ್ಲರೂ ಮೆಚ್ಚುವರು ಎಂಬ ಹುಂಬುತನದಿಂದ ಮುನ್ನುಗ್ಗಿದಲ್ಲಿ ಸೋಲನ್ನು ಅನುಭವಿಸಬೇಕಾಗುವುದು. ಸಂಗಾತಿಯ ಸಲಹೆ ಸ್ವೀಕರಿಸಿ. ಶತ್ರುಮಿತ್ರರ ಅರಿವಿಲ್ಲದೆ ಎಲ್ಲರೊಂದಿಗೂ ಸಂಸಾರದ ಸುಖ ದುಃಖಗಳನ್ನು ಹೇಳಿಕೊಳ್ಳಬೇಡಿ. ಆದಾಯದಲ್ಲಿ ಅನಿರೀಕ್ಷಿತ ಹೆಚ್ಚಳ ಕಂಡು ಬರುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸೋದರಿಯ ಆರೋಗ್ಯದ ಕಡೆ ಗಮನವಿರಲಿ. ನಿಮ್ಮದಲ್ಲದ ಕೆಲಸವನ್ನು ಅನವಶ್ಯಕವಾಗಿ ಮಾಡಲು ಮುಂದಾಗದಿರಿ. ಇದರಿಂದ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಬಂಧುಬಾಂಧವರಿಗೆ ಸಹಾಯಹಸ್ತ ನೀಡುವ ವಿಚಾರದಲ್ಲಿ ಎರಡು ಬಾರಿ ಚಿಂತಿಸಿ ಮುಂದುವರೆಯಿರಿ. ಅದೃಷ್ಟ ಸಂಖ್ಯೆ: 9

ಕನ್ಯಾ

ಕನ್ಯಾ

ವ್ಯಾಪಕ ಬುದ್ಧಿ ಚಾತುರ್ಯದಿಂದ ನಿಮ್ಮ ಬಂಧುಬಾಂಧವರೇ ನಿಮ್ಮ ಸನಿಹಕ್ಕೆ ಬರುವರು. ಆದರೆ ಕುಟಿಲ ಯೋಜನೆಗಳಿಗೆ ಬಲಿಯಾಗದಿರಿ. ಬಹುದಿನದ ನಿಮ್ಮ ಕಾರ್ಯ ಕೈಗೂಡುವುದು. ಅದಕ್ಕಾಗಿ ಹಣವೂ ಖರ್ಚಾಗುವುದು. ವ್ಯವಹಾರದಲ್ಲಿ ಅತ್ಯಂತ ಪ್ರಾಮಾಣಿಕರಾದ ನಿಮಗೆ ಸರ್ಕಾರದಿಂದ ಸಕಲ ಸವಲತ್ತುಗಳೂ ಸಕಾಲದಲ್ಲಿ ದೊರೆಯಲಿವೆ. ನಿರುದ್ಯೋಗಿಗಳಿಗೆ ಉತ್ತಮ ವೇತನದ ನೌಕರಿ ದೊರೆತು ತುಸು ನೆಮ್ಮದಿ ದೊರೆಯಲಿದೆ. ಆರೋಗ್ಯ ಸುಧಾರಿಸುವುದು. ಹಿರಿಯರಿಂದ ತೀರ ಅವಶ್ಯಕವಾದ ಹಲವು ಮಾರ್ಗದರ್ಶನಗಳನ್ನು ಸ್ವೀಕರಿಸಿ. ಮನಸ್ಸಿಗೆ ಮುದ ನೀಡುವ ಕೆಲವು ಘಟನೆಗಳು ಜರುಗುವವು. ಹಣಕಾಸಿನ ಸಮಸ್ಯೆ ಬಗೆಹರಿಯುವುದು. ಅದೃಷ್ಟ ಸಂಖ್ಯೆ: 7

ತುಲಾ

ತುಲಾ

ಬದಲಾವಣೆ ಬಯಸಿ ಬಯಸಿ ನಿರಾಶರಾಗಿದ್ದ ನಿಮಗೆ ಹೊಸ ಬೆಳಕೊಂದು ಗೋಚರಿಸಲಿದೆ. ಇದು ನಿಮ್ಮ ಮನೋಕಾಮನೆ ಯನ್ನು ಪೂರ್ತಿಗೊಳಿಸಲು ಸಹಕಾರಿ ಯಾಗುವುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿಂದ ಇರುವುದು ಒಳ್ಳೆಯದು. ಜನಪ್ರಿಯತೆ ಹಾಗೂ ಸಂಭಾವನೆ ಹೆಚ್ಚಾಗಲಿದೆ. ಹಣಕಾಸಿನ ಸ್ಥಿತಿ ಸಾಕಷ್ಟು ಸುಧಾರಿಸಲಿದೆ. ಚಿಕ್ಕ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಸಹೋದರನ ಸಂಗಡ ವಾದ ವಿವಾದ ಬೇಡ. ಕಾರಣವಿಲ್ಲದೆ ಜನರು ನಿಮ್ಮ ಮೇಲೆ ಆರೋಪ ಮಾಡುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಮನೋಬಲವೇ ಕುಗ್ಗಿದಂತೆ ಆಗುವುದು. ವಿಷ್ಣು ಸಹಸ್ರನಾಮವನ್ನು ತಪ್ಪದೆ ಪಾರಾಯಣ ಮಾಡಿ. ಹಿತೈಷಿಗಳ ಹಿತವಚನ ಪಾಲಿಸಿ.

ಅದೃಷ್ಟ ಸಂಖ್ಯೆ: 1

 ವೃಶ್ಚಿಕ

ವೃಶ್ಚಿಕ

ಕೆಲಸ ಕಾರ್ಯಗಳನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಕೊರಗುತ್ತ ಕೂರದಿರಿ. ಗುರುವಿನ ಮಂತ್ರ ಪಠಿಸಿ. ಗುರು ಸಾಯಿ ಬಾಬಾ ದೇವಾಲಯಕ್ಕೆ ಹೋಗಿ ಬನ್ನಿ. ಮನಸ್ಸಿಗೆ ಶಾಂತಿ ದೊರಕುವುದು. ಮೌನದಿಂದ ಕಾರ್ಯ ನಿರ್ವಹಿಸಿ. ಕುಲದೇವತಾನುಗ್ರಹದಿಂದ ನೀವು ಅಂದುಕೊಂಡ ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ. ಮಡದಿ ಮಕ್ಕಳು ನಿಮಗೆ ಸಂತಸ ನೀಡುವರು. ಕಾರಣವಿಲ್ಲದೆ ಮತ್ತೊಬ್ಬರನ್ನು ಅವಮಾನಿಸಬೇಡಿ. ಆಡುವ ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕ ವಲಯದಲ್ಲಿ ಕೊಂಚ ವಿರೋಧಾಭಾಸಗಳು ಉಂಟಾಗುವ ಸಾಧ್ಯತೆ ಇದೆ. ಶಿವ ಪಾರ್ವತಿಯರನ್ನು ನೆನೆದು ಕಾರ್ಯ ಪ್ರವೃತ್ತರಾಗಿ. ಸಿನಿಮಾ ರಂಗದಲ್ಲಿರುವವರಿಗೆ ಹೆಚ್ಚಿನ ಅನುಕೂಲ ಇದೆ.

ಅದೃಷ್ಟ ಸಂಖ್ಯೆ: 3

ಧನಸ್ಸು

ಧನಸ್ಸು

ವ್ಯಾಪಾರದ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ನೀವು ಧೈರ್ಯದಿಂದ ಮುಂದೆ ಹೆಜ್ಜೆಯನ್ನು ಇಡಿ. ಕುಲದೇವರ ಆಶೀರ್ವಾದದಿಂದ ನೀವು ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ಆಗುತ್ತದೆ. ಸಾಧ್ಯವಾದಷ್ಟು ನೀವು ನಿಮ್ಮ ಪಾಡಿಗೆ ಇರುವುದು ಕ್ಷೇಮ. ಮನಸ್ಸು ಧಾರ್ಮಿಕ ವಿಚಾರಗಳ ಕಡೆ ಸೆಳೆಯಲಿದ್ದು ಅಂತಹ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ರೈತರು ರಾಜಕೀಯ ವ್ಯಕ್ತಿಗಳನ್ನು ನಂಬದಿರುವುದು ಒಳ್ಳೆಯದು. ದೂರದ ಊರಿಗೆ ಪ್ರವಾಸ ಮಾಡುವ ಸಂದರ್ಭ ದಿಢೀರನೆ ಬರುವುದು. ಅದನ್ನು ಮನಸಾ ಸ್ವೀಕರಿಸಿ ಪ್ರಯಾಣ ಬೆಳೆಸಿ. ಇದರಿಂದ ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಅದೃಷ್ಟ ಸಂಖ್ಯೆ: 9

ಮಕರ

ಮಕರ

ವ್ಯಾಜ್ಯದ ವಿಚಾರವೊಂದರಲ್ಲಿ ನಿಮ್ಮನ್ನು ಸಿಲುಕಿಸಲು ನಡೆಯುತ್ತಿರುವ ಷಡ್ಯಂತ್ರದ ಬಗೆಗೆ ಎಚ್ಚರ ಇರಲಿ. ಯಾವುದೇ ರೀತಿಯ ಹಣಕಾಸಿನ ವಿಷಯದಲ್ಲಿ ಜಾಮೀನು ಪತ್ರಕ್ಕೆ ಸಹಿ ಹಾಕದಿರಿ. ಕಂಪನಿ ಕೆಲಸದಲ್ಲಿರುವ ಕೆಲವರು ಕೆಲಸ ತ್ಯಾಗ ಮಾಡುವರು. ಕೈಗಾರಿಕೆ ಉದ್ಯಮದಲ್ಲಿರುವವರಿಗೆ ಒಳ್ಳೆಯ ದಿನವಾಗಿದ್ದು ಪ್ರತಿಯೊಂದು ಕೂಡಾ ಅವರು ಅಂದುಕೊಂಡಂತೆ ನಿಗದಿತ ಸಮಯದಲ್ಲೇ ಆಗಲಿದೆ. ಕಾರ್ಮಿಕ ಸಮಸ್ಯೆಗಳಿಗೆ ಸ್ಪಂದಿಸುವುದು ಒಳ್ಳೆಯದು. ಮಗ ಆಧ್ಯಾತ್ಮದ ಕಡೆ ವಿಶೇಷ ಒಲವು ತೋರುವನು. ಕೃಷಿಕರಿಗೆ ಉತ್ತಮ ಕಾರ್ಯ ಯೋಜನೆ ರೂಪಿಸಿಕೊಳ್ಳಲು ಅವಕಾಶ ಸಿಗುತ್ತದೆ. ಶನಿ ಮಹಾರಾಜರ ಕೃಪೆ ಹೊಂದುವುದು ಅವಶ್ಯಕ. ಆಹಾರ ದಾನ ಮಾಡಿ.ಅದೃಷ್ಟ ಸಂಖ್ಯೆ: 8

ಕುಂಭ

ಕುಂಭ

ನಿಮ್ಮನ್ನು ಪ್ರಶಂಸಿಸುವ ಪಾರದರ್ಶಕ ವ್ಯಕ್ತಿತ್ವವುಳ್ಳ ಜನರು ನಿಮ್ಮ ಇಚ್ಛಾಶಕ್ತಿ ವೃದ್ಧಿಸಿ ಸಂತೋಷಕ್ಕೆ ಕಾರಣರಾಗುವರು. ಒಂದು ಶುಭ ಸಮಾರಂಭದಲ್ಲಿ ಭಾಗವಹಿಸುವಿರಿ. ಹೆತ್ತವರ ಜೊತೆ ಸಮಯವನ್ನು ಕಳೆಯುವಿರಿ. ಮಡದಿ ಮಕ್ಕಳು ತಮ್ಮ ಕೋರಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಬಹುದು. ವಾಹನ ಮೊದಲಾದ ಆಟೋಮೊಬೈಲ್‌ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗುವುದು. ಬಂಧುಗಳ ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳು ಭಾಗವಹಿಸುವಿರಿ. ನಿಮ್ಮ ಒಳ್ಳೆಯತನದಿಂದ ಅನೇಕ ಜನರನ್ನು ನಿಮ್ಮತ್ತ ಸೆಳೆಯಲಿದ್ದೀರಿ. ಹೊಸ ಜವಾಬ್ದಾರಿ ನಿಮ್ಮ ಹೆಗಲೇರಲಿದೆ. ಉನ್ನತ ವಿದ್ಯಾಭ್ಯಾಸದ ಮೂಲಕ ನೀವು ನಿಮ್ಮ ಹಿರಿಯರಿಗೆ ಸಂತಸ ನೀಡುವಿರಿ. ಅದೃಷ್ಟ ಸಂಖ್ಯೆ: 6

ಮೀನ

ಮೀನ

ನಿಮ್ಮ ದೇಹಕ್ಕೆ ವಯಸ್ಸಾಗಿದ್ದರೂ ನಿಮ್ಮ ಮನಸ್ಸಿಗೆ ಮುಪ್ಪು ಬಂದಿಲ್ಲ. ಹಾಗಾಗಿ ಕಿರಿಯರೊಡನೆ ಸ್ನೇಹ ಬಾಂಧವ್ಯದಿಂದ ವರ್ತಿಸುವಿರಿ. ಆ ಮೂಲಕ ನಿಮ್ಮ ಅಂತರಂಗದ ತುಮುಲಗಳಿಗೆ ಸಾಂತ್ವನ ಕಂಡುಕೊಳ್ಳುವಿರಿ. ಸಮರಸವೇ ಜೀವನ ವಿರಸವೇ ಮರಣ ಎಂಬುದನ್ನು ಅರಿಯುವಿರಿ. ಸೋದರಿಯ ಮಗಳಿಗೆ ಉತ್ತಮ ಸಂಬಂಧ ಬರಲಿದ್ದು ಇಬ್ಬರಿಗೂ ಹೊಂದಾಣಿಕೆಯಾದಲ್ಲಿ ಮಾತುಕತೆ ಮುಂದುವರೆಸಿ. ಮಡದಿಯ ಆರೋಗ್ಯದ ಬಗ್ಗೆ ಉದಾಸೀನ ಬೇಡ. ಹಿರಿಯರು ತೀರ್ಥಯಾತ್ರೆ ಮಾಡಲು ಬಯಸುವರು. ಸಾಧ್ಯವಾದಷ್ಟು ಬೇಗನೆ ಅದನ್ನು ಪೂರೈಸಲು ಪ್ರಯತ್ನಿಸಿ. ಹೊರಗೆ ಊಟ ಮಾಡುವ ಸಂದರ್ಭದಲ್ಲಿ ಆಹಾರ ಮತ್ತು ನೀರಿನ ಸ್ವಚ್ಛತೆಯ ಬಗ್ಗೆ ಖಾತರಿ ಮಾಡಿಕೊಳ್ಳಿ. ಇಲ್ಲದಿದ್ದರೆ ವಿಷಯುಕ್ತ ಆಹಾರದಿಂದ ಆರೋಗ್ಯದಲ್ಲಿ ಏರುಪೇರು ಆಗಲಿದೆ. ಮನೆ ವೈದ್ಯರ ಸಲಹೆ ಪಡೆಯಿರಿ. ಅದೃಷ್ಟ ಸಂಖ್ಯೆ: 4

English summary

your daily horoscope-18-october-2018

Know what astrology and the planets have in store for you today. Choose your zodiac sign and read the details...
X
Desktop Bottom Promotion