Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೋ..! ಈ ಪ್ರಪಂಚದಲ್ಲಿ ಬದುಕಬೇಕೆ? ಕತ್ತೆಯಿಂದ ಈ ಪಾಠಗಳನ್ನು ಕಲಿಯಿರಿ
Life lessons from a Donkey: ಆಧುನಿಕ ಜಗತ್ತಿನಲ್ಲಿ ಬದುಕಲು ಬಯಸುವಿರಾ? ಹಾಗಿದ್ರೆ, ಕತ್ತೆಯಿಂದ 3 ಅಮೂಲ್ಯ ಜೀವನ ಪಾಠಗಳನ್ನು ಕಲಿಯಲೇಬೇಕು! ಹೌದು, ಒಳ್ಳೆಯ ವಿಷಯಗಳನ್ನು ಎಲ್ಲಾ ಕಡೆಯಿಂದ ಸ್ವೀಕರಿಸಬೇಕು. ಹೀಗೆ ಸ್ವೀಕರಿಸಿದ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ, ಬದುಕು ಮತ್ತಷ್ಟು ಅದ್ಭುತ ಮತ್ತು ಅರ್ಥಪೂರ್ಣವಾಗಿರುತ್ತದೆ. ಕೇವಲ ಮನುಷ್ಯನಿಂದ ಮಾತ್ರ ಅಲ್ಲ, ನಮ್ಮ ಸುತ್ತಮುತ್ತಲೂ ಇರುವ ಪ್ರಾಣಿ, ಪಕ್ಷಿಗಳಿಂದಲೂ ನಾವು ಕೆಲವು ಪಾಠವನ್ನು ಕಲಿಯಬಹುದು. ಚಾಣಕ್ಯನು ಪ್ರಾಣಿ ಪಕ್ಷಿಗಳಿಂದ ಕಲಿಯಬೇಕಾದ ಜೀವನ ಪಾಠಗಳ ಬಗ್ಗೆ ತಿಳಿಸಿದ್ದಾರೆ. ನೀವು ಜೀವನದಲ್ಲಿ ಯಶಸ್ವಿಯಾಗಲು ಕತ್ತೆಯಿಂದ ಈ ಗುಣಗಳನ್ನು ಕಲಿಯುವುದು ಉತ್ತಮ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ನೀವು (ಜನರು) ಕತ್ತೆಯನ್ನು ಮೂರ್ಖ ಪ್ರಾಣಿ ಎಂದು ಪರಿಗಣಿಸಿದರೂ, ಕೆಲವು ಗುಣಗಳನ್ನು ಕತ್ತೆಯಿಂದಲೂ ಕಲಿಯಬಹುದು. ಆಚಾರ್ಯ ಚಾಣಕ್ಯನು (Acharya Chanakya) ತನ್ನ ಚಾಣಕ್ಯ ನೀತಿಯಲ್ಲಿ ಕತ್ತೆಯಿಂದ ಕಲಿತ ಗುಣಗಳ ಬಗ್ಗೆ ಹೇಳಿದ್ದಾನೆ. ಕತ್ತೆ ಎಂಬ ಪದ ಕೇಳಿದಾಗಲೆಲ್ಲಾ ಮೂರ್ಖ ಅಥವಾ ಹೊರೆ ಹೊರುವ ಪ್ರಾಣಿಯ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಸಾಮಾನ್ಯವಾಗಿ ಜನರು ಮೂರ್ಖ ವ್ಯಕ್ತಿಯನ್ನು 'ಕತ್ತೆ' ಎಂಬ ಪದದಿಂದ ಸಂಬೋಧಿಸುತ್ತಾರೆ. ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ಗುಣವನ್ನು ಹೊಂದಿದ್ದು, ಅದರಿಂದ ಕಲಿಯಬಹುದು. ಮತ್ತು ಈ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು.

ನಮ್ಮ ಮನಸ್ಸಿನಲ್ಲಿ ಕತ್ತೆಯ ಬಗ್ಗೆ ಒಂದು ಕಲ್ಪನೆ ಇದೆ. ಅದರಂತೆ, ಆಚಾರ್ಯ ಚಾಣಕ್ಯನು ತನ್ನ ಚಾಣಕ್ಯ ನೀತಿಯಲ್ಲಿ ಕತ್ತೆಯ ಗುಣಗಳ ಬಗ್ಗೆ ಹೇಳಿದ್ದಾನೆ. ಅದನ್ನು ಪ್ರತಿಯೊಬ್ಬರೂ ತಮ್ಮ ಯಶಸ್ವಿ ಜೀವನಕ್ಕಾಗಿ ಅಳವಡಿಸಿಕೊಳ್ಳಲೇಬೇಕು. ಹಾಗಾದರೆ, ಆ ಪಾಠಗಳೇನು? ಕತ್ತೆ ಬಗ್ಗೆ ಚಾಣಕ್ಯರು ಏನು ಹೇಳಿದ್ದಾರೆ? ಈ ವಿಷಯದ ಬಗ್ಗೆ ಚಾಣಕ್ಯನ ಅಭಿಪ್ರಾಯಗಳೇನು? ಎಂಬುದನ್ನು ಇಲ್ಲಿ ನೋಡೋಣ.
ಜೀವನದ ಯಶಸ್ವಿಗೆ ಕತ್ತೆಯಿಂದ ಈ ಗುಣಗಳನ್ನು ಕಲಿಯಿರಿ
ಚಾಣಕ್ಯ ನೀತಿಯ ಒಂದು ಶ್ಲೋಕದ ಪ್ರಕಾರ, ಅವನು (ಕತ್ತೆ) ತುಂಬಾ ದಣಿದಿದ್ದರೂ ಸಹ ಅವನು ಹೊರೆಯನ್ನು ಹೊತ್ತುಕೊಳ್ಳುತ್ತಾನೆ. ಮತ್ತು ಚಳಿ ಅಥವಾ ಬಿಸಿಲನ್ನು ನೋಡುವುದಿಲ್ಲ. ಒಬ್ಬ ವ್ಯಕ್ತಿಯು ತೃಪ್ತನಾಗಿದ್ದು ಪ್ರತಿದಿನ ತಿರುಗಾಡುತ್ತಿದ್ದರೆ, ಅವನು ಕತ್ತೆಯಿಂದ ಮೂರು ವಿಷಯಗಳನ್ನು ಕಲಿಯಬೇಕಿದೆ.
ಆಚಾರ್ಯ ಚಾಣಕ್ಯನು ಈ ಶ್ಲೋಕದಲ್ಲಿ, ಕತ್ತೆಯಿಂದ ಕಲಿಯಬೇಕಾದ ವಿಷಯಗಳ ಬಗ್ಗೆ ಹೇಳುತ್ತಾನೆ. ಕತ್ತೆ ದಣಿದಿದ್ದರೂ ಕೆಲಸ ಮಾಡುತ್ತಲೇ ಇರುವಂತೆ, ಒಬ್ಬ ವ್ಯಕ್ತಿಯು ಸೋಮಾರಿತನವನ್ನು ಬಿಟ್ಟು ಕೆಲಸ ಮಾಡುತ್ತಲೇ ಇರಬೇಕು ಎಂದು ಚಾಣಕ್ಯ ತಿಳಿಸಿದ್ದಾನೆ. ನೀವು ಜೀವನದಲ್ಲಿ ಒಂದು ಗುರಿಯನ್ನು ಹೊಂದಿದ್ದರೆ ಸೋಮಾರಿತನವನ್ನು ಬಿಟ್ಟು ಕತ್ತೆಯಂತೆ ಕಷ್ಟಪಟ್ಟು ಕೆಲಸ ಮಾಡಬೇಕು. ಮತ್ತು ಯಾವುದೇ ಸಂದರ್ಭದಲ್ಲೂ ಕೆಲಸದಿಂದ ಹಿಂದೆ ಸರಿಯಬೇಡಿ ಎನ್ನುವುದು ಚಾಣಕ್ಯನ ಸಂದೇಶ.
ಕತ್ತೆಗೆ ಬಿಸಿಲು ಅಥವಾ ಚಳಿಯ ಚಿಂತೆ ಇಲ್ಲ
ಚಾಣಕ್ಯನು ಈ ಶ್ಲೋಕದಲ್ಲಿ, ದೂರು ನೀಡದ ಕತ್ತೆಯ ಗುಣವನ್ನು ಚರ್ಚಿಸಿದ್ದಾನೆ. ಕತ್ತೆಗೆ ಬಿಸಿಲು ಅಥವಾ ಚಳಿ (ಶೀತ) ಬಗ್ಗೆ ಚಿಂತೆ (ಕಾಳಜಿ) ಇಲ್ಲ. ಮತ್ತು ಅದು ಯಾವಾಗಲೂ ಕೆಲಸದ ಮೇಲೆ ಕೇಂದ್ರೀಕರಿಸುತ್ತದೆ. ಒಬ್ಬ ವ್ಯಕ್ತಿಯು ಈ ಗುಣವನ್ನು ಕತ್ತೆಯಿಂದ ಕಲಿಯಬೇಕು. ಕಷ್ಟದ ಸಮಯದಲ್ಲಿ ಜನರು ಹೆಚ್ಚಾಗಿ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತಾರೆ. ಇದು ಸೂಕ್ತವಲ್ಲ. ನೀವು ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮನ್ನು ಹೊಂದಿಕೊಳ್ಳಲು ಪ್ರಯತ್ನಿಸಿ ಎನ್ನುವುದು ಚಾಣಕ್ಯನ ತಾಕೀತು.
'ಸಂತೋಷಂ ಪರಮ ಸುಖಂ..'
'ಸಂತೋಷಂ ಪರಮ ಸುಖಂ' ಎನ್ನಲಾಗುತ್ತದೆ. ತೃಪ್ತಿ ಎಂಬುದು ವ್ಯಕ್ತಿಯ ಜೀವನದಲ್ಲಿ ಸಂತೋಷಕ್ಕೆ ಕಾರಣವಾಗುವ ಗುಣ. ಈ ಸಂತೃಪ್ತಿಯ ಗುಣವನ್ನು ಕತ್ತೆಯಿಂದ ಕಲಿಯಬಹುದು. ಕತ್ತೆ ಎಲ್ಲಿಯಾದರೂ ತೃಪ್ತಿಯಿಂದ ಮೇಯುವಂತೆಯೇ, ಒಬ್ಬ ವ್ಯಕ್ತಿಯು ಜೀವನದಲ್ಲಿ ತೃಪ್ತಿ ಹೊಂದಿದಲು ಕೆಲಸ ಮಾಡುತ್ತಲೇ ಇರಬೇಕು. ಇದು ಆಚಾರ್ಯ ಚಾಣಕ್ಯನ ಅಭಿಪ್ರಾಯಗಳಾಗಿವೆ.



Click it and Unblock the Notifications