Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ವರ್ಷದ ಶ್ರಾವಣ ಕೊನೆಯ ಶನಿವಾರ: ಶನಿ ಸಾಡೇಸಾತಿ, ಶನಿಧೈಯ್ಯ ಇರುವ 5 ರಾಶಿಯವರು ಈ ಪರಿಹಾರ ಮಾಡಿ
ಶ್ರಾವಣ ಮಾಸ ತುಂಬಾ ಶುಭವಾದ ತಿಂಗಳು, ಈ ವರ್ಷ ಅಂತೂ ಎರಡು ತಿಂಗಳು ಶ್ರಾವಣ ಬಂದಿದ್ದ ಕಾರಣ ಶಿವಭಕ್ತರಿಗೆ ಈ ವರ್ಷ ತುಂಬಾನೇ ವಿಶೇಷವಾಗಿತ್ತು. ಶ್ರಾವಣ ಮಾಸ ಮುಗೀತಾ ಬಂದಿದೆ, ಸೆಪ್ಟೆಂಬರ್ 15ಕ್ಕೆ ಶ್ರಾವಣ ಮುಗಿಯಲಿದೆ, ನಂತರ ಭಾದ್ರಪದ ಮಾಸ ಪ್ರಾರಂಭವಾಗಲಿದೆ. ಸೆಪ್ಟೆಂರ್ 9ಕ್ಕೆ ವರ್ಷದ ಕೊನೆಯ ಶ್ರಾವಣ ಶನಿವಾರ.
ಶನಿವಾರವೆಂದರೆ ಶನಿದೇವನಿಗೆ ಮೀಸಲಾದ ದಿನ, ಈ ದಿನ ಶನಿಯ ಪೂಜೆ ಮಾಡುವುದರಿಂದ ಶನಿದೋಷ ಕಡಿಮೆಯಾಗುವುದು. ಶ್ರಾವಣ ಶನಿವಾರದಲ್ಲಿ ಕೆಲವು ಪರಿಹಾರ ಮಾಡಿದರೆ ಶನಿ ಸಾಡೇಸಾತಿ ಹಾಗೂ ಶನಿ ಧೈಯ್ಯದಿಂದ ಬಳಲುತ್ತಿರುವವರಿಗೆ ಸ್ವಲ್ಪ ಪರಿಹಾರ ಸಿಗಲಿದೆ ಎಂದು ಹೇಳಲಾಗುವುದು.

ಈವಾಗ ಮಕರ ರಾಶಿ, ಕುಂಭ ರಾಶಿ ಹಾಗೂ ಮೀನ ರಾಶಿಯವರಿಗೆ ಮೊದಲನೇ ಹಂತದಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ. ಇನ್ನು ಕರ್ಕ ರಾಶಿ ಹಾಗೂ ವೃಶ್ಚಿಕ ರಾಶಿಯವರಿಗೆ ಶನಿ ಧೈಯ್ಯ ಇದೆ. ಶನಿ ಸಾಡೇಸಾತಿ ಹಾಗೂ ಶನಿಧೈಯ್ಯ ಇದ್ದರೆ ಅನೇಕ ಸಮಸ್ಯೆಗಳು ಎದುರಾಗುವುದು. ಈ ಸಮಸ್ಯೆ ಕಡಿಮೆ ಮಾಡಲು ಪರಿಹಾರ ಮಾಡಲು ಶ್ರಾವಣ ಶನಿವಾರ ತುಂಬಾನೇ ಪ್ರಮುಖವಾಗಿದೆ. ಆದ್ದರಿಂದ ಶನಿ ಸಾಡೇಸಾತಿ ಹಾಗೂ ಶನಿ ಧೈಯ್ಯ ಇರುವವರು ಶನಿ ಈ ಪರಿಹಾರ ಮಾಡಿದರೆ ಒಳ್ಳೆಯದು
* ಈ ದಿನ ಕಡು ನೀಲಿ ಬಣ್ಣದ ವಸ್ತ್ರದ ಧರಿಸಿ ಶಿವನ ಆರಾಧನೆ ಮಾಡಿ, ಶನಿ ದೇವರಿಗೂ ಪೂಜೆಯನ್ನು ಸಲ್ಲಿಸಿ.
* ರುದ್ರಾಕ್ಷಿ ಮಾಲೆಯನ್ನು ಕೈಯಲ್ಲಿ ಹಿಡಿದು ಜಪ ಮಾಡುತ್ತಾ ಶನಿ ಮಂತ್ರ ಪಠಿಸಿ
* ಶ್ರಾವಣ ಶನಿವಾರ ಆಲದ ಮರದ ಕೆಳಗಡೆ ಎಳ್ಳೆಣ್ಣೆಯಿಂದ ದೀಪ ಹಚ್ಚಿ.
* ಶಿವಲಿಂಗಕ್ಕೆ ಜಲಾಭಿಷೇಕ ಮಾಡುವಾಗ ಅದರಲ್ಲಿ ಎಳ್ಳನ್ನು ಹಾಕಿ ಅಭಿಷೇಕ ಮಾಡಿಸಿ.
ಈ ಪರಿಹಾರ ಮಾಡುವುದರಿಂದ ಶನಿ ಕೊಡುವ ಕಷ್ಟ ಸ್ವಲ್ಪ ಕಡಿಮೆಯಾಗುವುದು.
ಶನಿಯ ಮಂತ್ರಗಳನ್ನು ಪಠಿಸಿ
ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ
ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ
ಈ ಪರಿಹಾರ ಮಾಡಿ
* ಧರ್ಮಗ್ರಂಥಗಳಲ್ಲಿ, ಶನಿ ದೇವನನ್ನು ಪೂಜಿಸಲು ಉತ್ತಮ ಸಮಯವೆಂದರೆ ಸೂರ್ಯಾಸ್ತದ ನಂತರ ಎಂದು ಹೇಳಲಾಗುವುದು, ಆದ್ದರಿಮದ ಸೂರ್ಯಾಸ್ತನ ನಂತರ ಆಲದ ಮರದ ಕೆಳಗಡೆ ಎಳ್ಳೆಣ್ಣೆ ದೀಪವನ್ನು ಹಚ್ಚಿ.
* ಈ ದಿನ ನಿರ್ಗತಿಕರಿಗೆ ಸಹಾಯ ಮಾಡಿ
* ಈ ದಿನ ಎಣ್ಣೆಯಲ್ಲಿ ನಿಮ್ಮ ಮುಖ ನೋಡಿ ಆ ಎಣ್ಣೆಯನ್ನು ದಾನ ಮಾಡಿ.



Click it and Unblock the Notifications
