Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ವರ್ಷದ ಶ್ರಾವಣ ಕೊನೆಯ ಶನಿವಾರ: ಶನಿ ಸಾಡೇಸಾತಿ, ಶನಿಧೈಯ್ಯ ಇರುವ 5 ರಾಶಿಯವರು ಈ ಪರಿಹಾರ ಮಾಡಿ
ಶ್ರಾವಣ ಮಾಸ ತುಂಬಾ ಶುಭವಾದ ತಿಂಗಳು, ಈ ವರ್ಷ ಅಂತೂ ಎರಡು ತಿಂಗಳು ಶ್ರಾವಣ ಬಂದಿದ್ದ ಕಾರಣ ಶಿವಭಕ್ತರಿಗೆ ಈ ವರ್ಷ ತುಂಬಾನೇ ವಿಶೇಷವಾಗಿತ್ತು. ಶ್ರಾವಣ ಮಾಸ ಮುಗೀತಾ ಬಂದಿದೆ, ಸೆಪ್ಟೆಂಬರ್ 15ಕ್ಕೆ ಶ್ರಾವಣ ಮುಗಿಯಲಿದೆ, ನಂತರ ಭಾದ್ರಪದ ಮಾಸ ಪ್ರಾರಂಭವಾಗಲಿದೆ. ಸೆಪ್ಟೆಂರ್ 9ಕ್ಕೆ ವರ್ಷದ ಕೊನೆಯ ಶ್ರಾವಣ ಶನಿವಾರ.
ಶನಿವಾರವೆಂದರೆ ಶನಿದೇವನಿಗೆ ಮೀಸಲಾದ ದಿನ, ಈ ದಿನ ಶನಿಯ ಪೂಜೆ ಮಾಡುವುದರಿಂದ ಶನಿದೋಷ ಕಡಿಮೆಯಾಗುವುದು. ಶ್ರಾವಣ ಶನಿವಾರದಲ್ಲಿ ಕೆಲವು ಪರಿಹಾರ ಮಾಡಿದರೆ ಶನಿ ಸಾಡೇಸಾತಿ ಹಾಗೂ ಶನಿ ಧೈಯ್ಯದಿಂದ ಬಳಲುತ್ತಿರುವವರಿಗೆ ಸ್ವಲ್ಪ ಪರಿಹಾರ ಸಿಗಲಿದೆ ಎಂದು ಹೇಳಲಾಗುವುದು.

ಈವಾಗ ಮಕರ ರಾಶಿ, ಕುಂಭ ರಾಶಿ ಹಾಗೂ ಮೀನ ರಾಶಿಯವರಿಗೆ ಮೊದಲನೇ ಹಂತದಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ. ಇನ್ನು ಕರ್ಕ ರಾಶಿ ಹಾಗೂ ವೃಶ್ಚಿಕ ರಾಶಿಯವರಿಗೆ ಶನಿ ಧೈಯ್ಯ ಇದೆ. ಶನಿ ಸಾಡೇಸಾತಿ ಹಾಗೂ ಶನಿಧೈಯ್ಯ ಇದ್ದರೆ ಅನೇಕ ಸಮಸ್ಯೆಗಳು ಎದುರಾಗುವುದು. ಈ ಸಮಸ್ಯೆ ಕಡಿಮೆ ಮಾಡಲು ಪರಿಹಾರ ಮಾಡಲು ಶ್ರಾವಣ ಶನಿವಾರ ತುಂಬಾನೇ ಪ್ರಮುಖವಾಗಿದೆ. ಆದ್ದರಿಂದ ಶನಿ ಸಾಡೇಸಾತಿ ಹಾಗೂ ಶನಿ ಧೈಯ್ಯ ಇರುವವರು ಶನಿ ಈ ಪರಿಹಾರ ಮಾಡಿದರೆ ಒಳ್ಳೆಯದು
* ಈ ದಿನ ಕಡು ನೀಲಿ ಬಣ್ಣದ ವಸ್ತ್ರದ ಧರಿಸಿ ಶಿವನ ಆರಾಧನೆ ಮಾಡಿ, ಶನಿ ದೇವರಿಗೂ ಪೂಜೆಯನ್ನು ಸಲ್ಲಿಸಿ.
* ರುದ್ರಾಕ್ಷಿ ಮಾಲೆಯನ್ನು ಕೈಯಲ್ಲಿ ಹಿಡಿದು ಜಪ ಮಾಡುತ್ತಾ ಶನಿ ಮಂತ್ರ ಪಠಿಸಿ
* ಶ್ರಾವಣ ಶನಿವಾರ ಆಲದ ಮರದ ಕೆಳಗಡೆ ಎಳ್ಳೆಣ್ಣೆಯಿಂದ ದೀಪ ಹಚ್ಚಿ.
* ಶಿವಲಿಂಗಕ್ಕೆ ಜಲಾಭಿಷೇಕ ಮಾಡುವಾಗ ಅದರಲ್ಲಿ ಎಳ್ಳನ್ನು ಹಾಕಿ ಅಭಿಷೇಕ ಮಾಡಿಸಿ.
ಈ ಪರಿಹಾರ ಮಾಡುವುದರಿಂದ ಶನಿ ಕೊಡುವ ಕಷ್ಟ ಸ್ವಲ್ಪ ಕಡಿಮೆಯಾಗುವುದು.
ಶನಿಯ ಮಂತ್ರಗಳನ್ನು ಪಠಿಸಿ
ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ
ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ
ಈ ಪರಿಹಾರ ಮಾಡಿ
* ಧರ್ಮಗ್ರಂಥಗಳಲ್ಲಿ, ಶನಿ ದೇವನನ್ನು ಪೂಜಿಸಲು ಉತ್ತಮ ಸಮಯವೆಂದರೆ ಸೂರ್ಯಾಸ್ತದ ನಂತರ ಎಂದು ಹೇಳಲಾಗುವುದು, ಆದ್ದರಿಮದ ಸೂರ್ಯಾಸ್ತನ ನಂತರ ಆಲದ ಮರದ ಕೆಳಗಡೆ ಎಳ್ಳೆಣ್ಣೆ ದೀಪವನ್ನು ಹಚ್ಚಿ.
* ಈ ದಿನ ನಿರ್ಗತಿಕರಿಗೆ ಸಹಾಯ ಮಾಡಿ
* ಈ ದಿನ ಎಣ್ಣೆಯಲ್ಲಿ ನಿಮ್ಮ ಮುಖ ನೋಡಿ ಆ ಎಣ್ಣೆಯನ್ನು ದಾನ ಮಾಡಿ.



Click it and Unblock the Notifications











