Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಕೃಷ್ಣ ಜನ್ಮಾಷ್ಟಮಿ: ಮಕ್ಕಳಿಗೆ ಈ 5 ಚಟುವಟಿಕೆ ಮಾಡಿದರೆ ಹಬ್ಬ ಮತ್ತಷ್ಟು ಸ್ಪೆಷಲ್ ಆಗಿರುತ್ತೆ
ಜನ್ಮಾಷ್ಮಮಿ ಅಂದರೆ ಕೃಷ್ಣ ಆರಾಧನೆ ಮಾತ್ರವಲ್ಲ ನಮ್ಮ ಮನೆಗಳಲ್ಲಿರುವ ಮುದ್ದು ಮಕ್ಕಳನ್ನು ಕೃಷ್ಣ-ರಾಧೆ ವೇಷದಲ್ಲಿ ಅಲಂಕರಿಸಿ ಸಂಭ್ರಮಿಸುವ ದಿನ. ಈ ದಿನ ವಿವಿಧ ಚಟುವಟಿಕೆಗಳನ್ನು ಮಾಡಲಾಗುವುದು. ಒಂದು ಸ್ವಲ್ಪ ಮಕ್ಕಳ ಗುಂಪು ಸೇರಿಸಿ ಕೆಲವೊಂದು ಚಟುವಟಿಕೆಗಳನ್ನು ಮಾಡಿ ಜನ್ಮಾಷ್ಟಮಿ ಆಚರಿಸಿದರೆ ಈ ಆಚರಣೆ ಮತ್ತಷ್ಟು ವಿಶೇಷ ಅನಿಸುವುದು.

ನೀವು ಕೃಷ್ಣ ಜನ್ಮಾಷ್ಟಮಿಯನ್ನುಮತ್ತಷ್ಟು ವಿಶೇಷವಾಗಿಸಲು ಮುದ್ದು ಮಕ್ಕಳಿಗೆ ಚಟುವಟಿಕೆ ಮಾಡಿ
* ಕೃಷ್ಣ-ರಾಧೆಯ ವೇಷ
ಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣ ರಾಧೆಯ ವೇಷವನ್ನು ಹಾಕಿಸಿ.
ವೇಷವನ್ನು ಹಾಕಿಸುವಾಗ ತುಂಬಾ ಭಾರವಾದ ಆಭರಣ ಹಾಕಬೇಡಿ, ಮಕ್ಕಳಿಗೆ ಕಿರಿಕಿರಿಯಾಗುವುದು. ಮಕ್ಕಳಿಗೆ ಕಂಫರ್ಟ್ ಆಗುವಂತೆ ಡ್ರೆಸ್ಸಿಂಗ್ ಮಾಡಿ
* ಮೊಸರು ಕುಡಿಕೆ
ನಿಮ್ಮ ಮನೆಯ ಅಕ್ಕ-ಪಕ್ಕದ ಮಕ್ಕಳನ್ನು ಈ ಆಟದಲ್ಲಿ ಸೇರಿಸಿಕೊಳ್ಳಿ, ಮೊಸರು ಕುಡಿಕೆ ಮಾಡಿ ಅದನ್ನು ಒಡೆಯುವ ಆಟವನ್ನು ಆಡಿಸಿ. ಮಕ್ಕಳನ್ನು ತುಂಬಾನೇ ಖುಷಿ ಪಡುತ್ತಾರೆ.
* ಕೃಷ್ಣನ ಹೆಜ್ಜೆ
ಈ ದಿನ ಮನೆಯ ರಂಗೋಲಿ ಕೃಷ್ಣನ ಹೆಜ್ಜೆಯ ಮೂಲಕ ಮತ್ತಷ್ಟು ಸ್ಪೆಷಲ್ ಆಗಿಸಿ. ಮಕ್ಕಳ ಪಾದದ ಗುರುತು ಮನೆಯೊಳಗಡೆ ಬರುವಂತೆ ಗುರುತು ಮೂಡಿಸಿ, ಮಕ್ಕಳ ಬಳಿ ಪಾದವನ್ನು ರಂಗೋಲಿ ಅಥವಾ ಕುಂಕುಮ ಕಲಿಸಿದ ತಟ್ಟೆಗೆ ಇಟ್ಟು ನಂತರ ಅವರ ಹೆಜ್ಜೆಯ ಗುರುತು ಮೂಡಿಸಿ.
* ಕೃಷ್ಣನ ಕೊಳಲು ಅಲಂಕರಿಸುವ ಸ್ಪರ್ಧೆ
ಮಕ್ಕಳ ಬಳಿ ಕೊಳಲನ್ನು ಅಲಂಕರಿಸುಂತೆ ಹೇಳಿ, ಇದನ್ನು ಸ್ಪರ್ಧೆ ರೀತಿಯಲ್ಲಿ ಆಯೋಜಿಸಿ. ಇದರ ಜೊತೆಗೆ ನೀವು ಸ್ವಲ್ಪ ಸಹಾಯ ಮಾಡಿದರೆ ಕಿರೀಟವನ್ನು ಅಲಂಕರಿಸುವ ಸ್ಪರ್ಧೆಯನ್ನು ಕೂಡ ನೀಡಬಹುದು.
ಕೃಷ್ಣನ ಗ್ರಾಮವನ್ನು ಮಾಡಿ
ಪುಟ್ಟದಾಗಿ ಕೃಷ್ಣನ ಗ್ರಾಮ ಮಾಡಿ, ಅಲ್ಲಿ ಕರುಗಳು, ಗೋಪಿಕೆಯರು, ಕೃಷ್ಣನ ಸ್ನೇಹಿತರ ಮೂರ್ತಿಗಳನ್ನು ಇಟ್ಟು ಅಲಂಕರಿಸಿ, ನಂತರ ಶ್ರೀಕೃಷ್ಣನ ಕತೆಯನ್ನು ಹೇಳಿ. ಈ ರೀತಿಯೆಲ್ಲಾ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದರೆ ಮಕ್ಕಳಿಗೆ ಈ ದಿನ ಒಂದು ಹಬ್ಬದಂತೆ ಅಲ್ಲದೆ ತುಂಬಾನೇ ವಿಶೇಷವಾಗಿರಲಿದೆ.
ಜನ್ಮಾಷ್ಟಮಿ ಟ್ರೆಷರ್ ಹಂಟ್ ಗೇಮ್ ಆಡಿಸಿ
ಇದು ಕೂಡ ಮಕ್ಕಳಿಗೆ ತುಂಬಾನೇ ಖುಷಿಯಾಗುವುದು, ಕೃಷ್ಣನಿಗೆ ಸಂಬಂಧಿಸಿದ ಕೊಳಲು, ನವಿಲುಗಿರಿ, ಕಿರೀಟ ಈ ವಸ್ತುಗಳನ್ನು ಬಚ್ಚಿಟ್ಟು ಅವರಿಗೆ ಚಿಕ್ಕ ಕ್ಲೂ ನೀಡಿ ಹುಡುಕಲು ಹೇಳಿ. ಈ ಚಟುವಟಿಕೆಯಲ್ಲೂ ದೊಡ್ಡವರೂ ಭಾಗವಹಿಸಬಹುದು.
ಜನ್ಮಾಷ್ಟಮಿ ಪ್ರಾರ್ಥನೆ ಮಾಡಿಸಿ
ಮಕ್ಕಳಿಗೆ ನಮ್ಮ ಸಂಸ್ಕೃತಿ, ನಮ್ಮ ಆಚರಣೆ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ಪೋಷಕರು ಮಾಡಿಸಬೇಕು. ಮಕ್ಕಳಿಗೆ ಪ್ರಾರ್ಥನೆ ಹೇಳಿಕೊಟ್ಟು ಪ್ರಾರ್ಥನೆ ಮಾಡಿಸಿ.
ಜನ್ಮಾಷ್ಟಮಿ ಆಚರಣೆಯ ಒಳಾರ್ಥವೇನು?
ಕೃಷ್ಣನ ತಾಯಿ ದೇವಕ್ಕಿ ದೇಹದ ಪ್ರತೀಕ, ತಂದೆ ಪ್ರಾಣದ ಸಂಕೇತ, ಶ್ರೀ ಕೃಷ್ಣ ಪ್ರೀತಿಯ ಸಂಕೇತ. ಕೃಷ್ಣನ ಮಾವ ನಮ್ಮಲ್ಲಿರುವ ಅಹಂನ ಸಂಕೇತ, ಯಾವಾಗ ಅಹಂ ಹೆಚ್ಚಾಗುವುದೋ ಆವಾಗ ಬದುಕು ಅರ್ಥವನ್ನು ಕಳೆದುಕೊಳ್ಳುತ್ತದೆ. ಆದರೆ ಅಹಂ ಮಣಿಸುವ ಶಕ್ತಿ ಪ್ರೀತಿಗಿದೆ. ಅಹಂ ಬದುಕು ನಾಶ ಮಾಡಿದರೆ ಪ್ರೀತಿ ಎಲ್ಲವನ್ನೂ ಗೆಲ್ಲಿಸುತ್ತದೆ. ಶ್ರೀಕೃಷ್ಣ ಪರಮಾತ್ಮ ನಮ್ಮಲ್ಲಿರುವ ಪ್ರೀತಿ, ಕೃಷ್ಣನಲ್ಲಿನ ಭಕ್ತಿಯೆಂದರೆ ಈ ಪ್ರೀತಿಯ ಗುಣ ಹೆಚ್ಚಾಗಬೇಕು.
ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಯಾವಾಗ ಆಚರಿಸಲಾಗುವುದು?
ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6ರಂದು ಆಚರಿಸಲಾಗುವುದು.



Click it and Unblock the Notifications