Latest Updates
-
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು!
ಕೃಷ್ಣ ಜನ್ಮಾಷ್ಟಮಿ: ಮಕ್ಕಳಿಗೆ ಈ 5 ಚಟುವಟಿಕೆ ಮಾಡಿದರೆ ಹಬ್ಬ ಮತ್ತಷ್ಟು ಸ್ಪೆಷಲ್ ಆಗಿರುತ್ತೆ
ಜನ್ಮಾಷ್ಮಮಿ ಅಂದರೆ ಕೃಷ್ಣ ಆರಾಧನೆ ಮಾತ್ರವಲ್ಲ ನಮ್ಮ ಮನೆಗಳಲ್ಲಿರುವ ಮುದ್ದು ಮಕ್ಕಳನ್ನು ಕೃಷ್ಣ-ರಾಧೆ ವೇಷದಲ್ಲಿ ಅಲಂಕರಿಸಿ ಸಂಭ್ರಮಿಸುವ ದಿನ. ಈ ದಿನ ವಿವಿಧ ಚಟುವಟಿಕೆಗಳನ್ನು ಮಾಡಲಾಗುವುದು. ಒಂದು ಸ್ವಲ್ಪ ಮಕ್ಕಳ ಗುಂಪು ಸೇರಿಸಿ ಕೆಲವೊಂದು ಚಟುವಟಿಕೆಗಳನ್ನು ಮಾಡಿ ಜನ್ಮಾಷ್ಟಮಿ ಆಚರಿಸಿದರೆ ಈ ಆಚರಣೆ ಮತ್ತಷ್ಟು ವಿಶೇಷ ಅನಿಸುವುದು.

ನೀವು ಕೃಷ್ಣ ಜನ್ಮಾಷ್ಟಮಿಯನ್ನುಮತ್ತಷ್ಟು ವಿಶೇಷವಾಗಿಸಲು ಮುದ್ದು ಮಕ್ಕಳಿಗೆ ಚಟುವಟಿಕೆ ಮಾಡಿ
* ಕೃಷ್ಣ-ರಾಧೆಯ ವೇಷ
ಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣ ರಾಧೆಯ ವೇಷವನ್ನು ಹಾಕಿಸಿ.
ವೇಷವನ್ನು ಹಾಕಿಸುವಾಗ ತುಂಬಾ ಭಾರವಾದ ಆಭರಣ ಹಾಕಬೇಡಿ, ಮಕ್ಕಳಿಗೆ ಕಿರಿಕಿರಿಯಾಗುವುದು. ಮಕ್ಕಳಿಗೆ ಕಂಫರ್ಟ್ ಆಗುವಂತೆ ಡ್ರೆಸ್ಸಿಂಗ್ ಮಾಡಿ
* ಮೊಸರು ಕುಡಿಕೆ
ನಿಮ್ಮ ಮನೆಯ ಅಕ್ಕ-ಪಕ್ಕದ ಮಕ್ಕಳನ್ನು ಈ ಆಟದಲ್ಲಿ ಸೇರಿಸಿಕೊಳ್ಳಿ, ಮೊಸರು ಕುಡಿಕೆ ಮಾಡಿ ಅದನ್ನು ಒಡೆಯುವ ಆಟವನ್ನು ಆಡಿಸಿ. ಮಕ್ಕಳನ್ನು ತುಂಬಾನೇ ಖುಷಿ ಪಡುತ್ತಾರೆ.
* ಕೃಷ್ಣನ ಹೆಜ್ಜೆ
ಈ ದಿನ ಮನೆಯ ರಂಗೋಲಿ ಕೃಷ್ಣನ ಹೆಜ್ಜೆಯ ಮೂಲಕ ಮತ್ತಷ್ಟು ಸ್ಪೆಷಲ್ ಆಗಿಸಿ. ಮಕ್ಕಳ ಪಾದದ ಗುರುತು ಮನೆಯೊಳಗಡೆ ಬರುವಂತೆ ಗುರುತು ಮೂಡಿಸಿ, ಮಕ್ಕಳ ಬಳಿ ಪಾದವನ್ನು ರಂಗೋಲಿ ಅಥವಾ ಕುಂಕುಮ ಕಲಿಸಿದ ತಟ್ಟೆಗೆ ಇಟ್ಟು ನಂತರ ಅವರ ಹೆಜ್ಜೆಯ ಗುರುತು ಮೂಡಿಸಿ.
* ಕೃಷ್ಣನ ಕೊಳಲು ಅಲಂಕರಿಸುವ ಸ್ಪರ್ಧೆ
ಮಕ್ಕಳ ಬಳಿ ಕೊಳಲನ್ನು ಅಲಂಕರಿಸುಂತೆ ಹೇಳಿ, ಇದನ್ನು ಸ್ಪರ್ಧೆ ರೀತಿಯಲ್ಲಿ ಆಯೋಜಿಸಿ. ಇದರ ಜೊತೆಗೆ ನೀವು ಸ್ವಲ್ಪ ಸಹಾಯ ಮಾಡಿದರೆ ಕಿರೀಟವನ್ನು ಅಲಂಕರಿಸುವ ಸ್ಪರ್ಧೆಯನ್ನು ಕೂಡ ನೀಡಬಹುದು.
ಕೃಷ್ಣನ ಗ್ರಾಮವನ್ನು ಮಾಡಿ
ಪುಟ್ಟದಾಗಿ ಕೃಷ್ಣನ ಗ್ರಾಮ ಮಾಡಿ, ಅಲ್ಲಿ ಕರುಗಳು, ಗೋಪಿಕೆಯರು, ಕೃಷ್ಣನ ಸ್ನೇಹಿತರ ಮೂರ್ತಿಗಳನ್ನು ಇಟ್ಟು ಅಲಂಕರಿಸಿ, ನಂತರ ಶ್ರೀಕೃಷ್ಣನ ಕತೆಯನ್ನು ಹೇಳಿ. ಈ ರೀತಿಯೆಲ್ಲಾ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದರೆ ಮಕ್ಕಳಿಗೆ ಈ ದಿನ ಒಂದು ಹಬ್ಬದಂತೆ ಅಲ್ಲದೆ ತುಂಬಾನೇ ವಿಶೇಷವಾಗಿರಲಿದೆ.
ಜನ್ಮಾಷ್ಟಮಿ ಟ್ರೆಷರ್ ಹಂಟ್ ಗೇಮ್ ಆಡಿಸಿ
ಇದು ಕೂಡ ಮಕ್ಕಳಿಗೆ ತುಂಬಾನೇ ಖುಷಿಯಾಗುವುದು, ಕೃಷ್ಣನಿಗೆ ಸಂಬಂಧಿಸಿದ ಕೊಳಲು, ನವಿಲುಗಿರಿ, ಕಿರೀಟ ಈ ವಸ್ತುಗಳನ್ನು ಬಚ್ಚಿಟ್ಟು ಅವರಿಗೆ ಚಿಕ್ಕ ಕ್ಲೂ ನೀಡಿ ಹುಡುಕಲು ಹೇಳಿ. ಈ ಚಟುವಟಿಕೆಯಲ್ಲೂ ದೊಡ್ಡವರೂ ಭಾಗವಹಿಸಬಹುದು.
ಜನ್ಮಾಷ್ಟಮಿ ಪ್ರಾರ್ಥನೆ ಮಾಡಿಸಿ
ಮಕ್ಕಳಿಗೆ ನಮ್ಮ ಸಂಸ್ಕೃತಿ, ನಮ್ಮ ಆಚರಣೆ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ಪೋಷಕರು ಮಾಡಿಸಬೇಕು. ಮಕ್ಕಳಿಗೆ ಪ್ರಾರ್ಥನೆ ಹೇಳಿಕೊಟ್ಟು ಪ್ರಾರ್ಥನೆ ಮಾಡಿಸಿ.
ಜನ್ಮಾಷ್ಟಮಿ ಆಚರಣೆಯ ಒಳಾರ್ಥವೇನು?
ಕೃಷ್ಣನ ತಾಯಿ ದೇವಕ್ಕಿ ದೇಹದ ಪ್ರತೀಕ, ತಂದೆ ಪ್ರಾಣದ ಸಂಕೇತ, ಶ್ರೀ ಕೃಷ್ಣ ಪ್ರೀತಿಯ ಸಂಕೇತ. ಕೃಷ್ಣನ ಮಾವ ನಮ್ಮಲ್ಲಿರುವ ಅಹಂನ ಸಂಕೇತ, ಯಾವಾಗ ಅಹಂ ಹೆಚ್ಚಾಗುವುದೋ ಆವಾಗ ಬದುಕು ಅರ್ಥವನ್ನು ಕಳೆದುಕೊಳ್ಳುತ್ತದೆ. ಆದರೆ ಅಹಂ ಮಣಿಸುವ ಶಕ್ತಿ ಪ್ರೀತಿಗಿದೆ. ಅಹಂ ಬದುಕು ನಾಶ ಮಾಡಿದರೆ ಪ್ರೀತಿ ಎಲ್ಲವನ್ನೂ ಗೆಲ್ಲಿಸುತ್ತದೆ. ಶ್ರೀಕೃಷ್ಣ ಪರಮಾತ್ಮ ನಮ್ಮಲ್ಲಿರುವ ಪ್ರೀತಿ, ಕೃಷ್ಣನಲ್ಲಿನ ಭಕ್ತಿಯೆಂದರೆ ಈ ಪ್ರೀತಿಯ ಗುಣ ಹೆಚ್ಚಾಗಬೇಕು.
ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಯಾವಾಗ ಆಚರಿಸಲಾಗುವುದು?
ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6ರಂದು ಆಚರಿಸಲಾಗುವುದು.



Click it and Unblock the Notifications
