Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ಪುರ್ನಜನ್ಮವೆಂಬುದು ಇದೆಯೇ? ಧರ್ಮಗ್ರಂಥಗಳು ಹೇಳುವುದೇನು?
ಮನುಷ್ಯನಿಗೆ ಒಟ್ಟು ಏಳು ಜನ್ಮಗಳು ಇರುತ್ತಂತೆ ಹೀಗಂತ ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಈ ಏಳು ಜನ್ಮದಲ್ಲೂ ನಾವು ಮನುಷ್ಯರಾಗಿಯೇ ಹುಟ್ಟಬೇಕೆಂದೇನಿಲ್ಲ ಮನುಷ್ಯ, ಪ್ರಾಣಿ, ಕೀಟ ಹೀಗೆ ಯಾವ ರೂಪದಲ್ಲಾದರೂ ಮರು ಜನ್ಮ ಪಡೆಯಬಹುದು.
ಅನೇಕ ಜನ ಈ ಬಗ್ಗೆ ಗಾಢವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಇನ್ನೂ ಕೆಲವರು ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಇದನ್ನು ತಳ್ಳಿ ಹಾಕಿದ್ದಾರೆ. ಹಾಗಾದರೆ ಪುನರ್ಜನ್ಮ ಎಂದರೇನು? ಪುನರ್ಜನ್ಮದ ಬಗ್ಗೆ ನಮ್ಮ ಧರ್ಮ ಗ್ರಂಥಗಳು ಹೇಳೋದೇನು ಅನ್ನೋದನ್ನ ತಿಳಿಯೋಣ.

ಪುನರ್ಜನ್ಮ ಎಂದರೇನು?
ಪುನರ್ಜನ್ಮದ ಕಲ್ಪನೆಯು ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಇದೆ. ಹಿಂದೂ ಧರ್ಮದ ಪ್ರಕಾರ ದೇಹಕ್ಕೆ ಸಾವಿದೆ ಆದರೆ ಆತ್ಮಕ್ಕೆ ಎಂದಿಗೂ ಸಾವಿಲ್ಲ. ಒರ್ವ ವ್ಯಕ್ತಿಯ ದೇಹವನ್ನು ಬಿಟ್ಟುಹೋದ ಆತ್ಮ ಮತ್ತೊಂದು ದೇಹವನ್ನು ಸೇರಿ ಮರುಹುಟ್ಟು ಪಡೆಯುವುದೇ ಪುನರ್ಜನ್ಮ.
ಸತ್ತ ವ್ಯಕ್ತಿಯ ದೇಹದಿಂದ ಆತ್ಮ ಹೊರ ಬರೋದು ಹೇಗೆ?
ನಂಬಿಕೆಗಳ ಪ್ರಕಾರ ಒಬ್ಬ ಸತ್ತ ವ್ಯಕ್ತಿಯ ದೇಹದಿಂದ ಆತ್ಮವು ಹೊರ ಬರುತ್ತದೆ. ಈ ಆತ್ಮ ಆತನ ಬಾಯಿ ಅಥವಾ ಮೂಗಿನ ಮೂಲಕ ಹೊರ ಬರುತ್ತಂತೆ. ಹೀಗೆ ಹೊರ ಬದ ಆತ್ಮ ಮನುಷ್ಯ, ಪ್ರಾಣಿ, ಕೀಟದ ರೂಪದಲ್ಲಿ ಮರುಹುಟ್ಟು ಪಡೆದುಕೊಳ್ಳುತ್ತದೆ.
ಆಫ್ರಿಕಾದ ಜನರ ನಂಬಿಕೆಯ ಪ್ರಕಾರ ಸತ್ತ ಮನುಷ್ಯನ ದೇಹದಿಂದ ಹೊರ ಬಂದ ಆತ್ಮವು ದೇಹದ ಹತ್ತಿರವೇ ಸುಳಿದಾಡುತ್ತಿರುತ್ತಂತೆ. ಆತ ಸತ್ತು ಆತನ ಕಾರ್ಯಗಳನ್ನು ಮಾಡಿದ ನಂತರವು ಆತನ ಸಮಾಧಿಯ ಪಕ್ಕದಲ್ಲೇ ಕೆಲ ಕಾಲಗಳವರೆಗೂ ಇರುತ್ತೆ ಎಂಬ ನಂಬಿಕೆಯಿದೆ.
ಇನ್ನೂ ಗ್ರೀಕ್ ಜನರ ನಂಬಿಕೆಯ ಪ್ರಕಾರ ಸತ್ತ ವ್ಯಕ್ತಿಯ ಆತ್ಮವು ಪುನರ್ಜನ್ಮ ಪಡೆಯುವುದು ಕೇವಲ ಮನುಷ್ಯ, ಪ್ರಾಣಿ ಹಾಗೂ ಸಸ್ತನಿಗಳ ದೇಹದಲ್ಲಿ ಮಾತ್ರವಂತೆ.
ಪುನರ್ಜನ್ಮಗಳ ಬಗ್ಗೆ ಧರ್ಮಗಳಲ್ಲಿರುವ ನಂಬಿಕೆ ಏನು ಹೇಳುತ್ತೆ?
ಹಿಂದೂ, ಜೈನ, ಬೌದ್ಧ, ಸಿಖ್ಖ್ ಹೀಗೆ ಯಾವುದೇ ಧರ್ಮವಿರಲಿ ಪ್ರತಿಯೊಂದು ಧರ್ಮವು ಕರ್ಮದ ಬಗ್ಗೆ ನಂಬಿಕೆಯನ್ನು ಇಟ್ಟುಕೊಂಡಿದೆ. ಈ ಜನ್ಮದಲ್ಲಿ ಮಾಡಿದ ಪಾಪ-ಕರ್ಮಗಳಲ್ಲಿ ಮುಂದಿನ ಜನ್ಮದಲ್ಲಿ ತಕ್ಕ ಶಾಸ್ತಿ ಆಗುತ್ತೆ ಎಂಬ ನಂಬಿಕೆ ಗಾಢವಾಗಿದೆ.
ಹಿಂದೂ ಧರ್ಮದ ಪ್ರಕಾರ ಮೋಕ್ಷ ಸಿಗುವರೆಗೂ ಮನುಷ್ಯ ಪುನರ್ಜನ್ಮವನ್ನು ಪಡೆಯುತ್ತಲೇ ಇರುತ್ತಾನೆ ಎಂಬ ನಂಬಿಕೆಯಿದೆ. ಸಿಖ್ಖ್ ಧರ್ಮದವರು ಕೂಡ ಇದೇ ನಂಬಿಕೆಯನ್ನು ಹೊಂದಿದ್ದಾರೆ.
ಪುನರ್ಜನ್ಮದ ಪ್ರಕ್ರಿಯೆ ನಿಂತು ಹೋಗುವುದು ಯಾವಾಗ ಅಂದರೆ ಆತ್ಮವು ಧರ್ಮಗಳ ಶಿಸ್ತಿನಿಂದ ಬಿಡುಗಡೆ ಹೊಂದಿ ಬ್ರಹ್ಮಾಂಡದ ತುತ್ತ ತುದಿಯನ್ನು ಏರಿದಾಗ ಮಾತ್ರ.
ಬೌದ್ಧ ಧರ್ಮವು ಆತ್ಮವು ಬೇರೆ ದೇಹಕ್ಕೆ ಸೇರೋದ್ರ ಬಗ್ಗೆ ನಂಬಿಕೆಯನ್ನು ಇಟ್ಟಿಲ್ಲ. ಆದರೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಕರ್ಮ ಅನುಭವಿಸಲೇಬೇಕು ಎಂಬುವುದರ ಬಗ್ಗೆ ಬೌದ್ಧ ಧರ್ಮದಲ್ಲೂ ಉಲ್ಲೇಖವಾಗಿದೆ.
ಹೀಗೆ ಪುನರ್ಜನ್ಮದ ಬಗ್ಗೆ ಒಬ್ಬರದ್ದು ಒಂದೊಂದು ನಂಬಿಕೆ. ಹುಟ್ಟು-ಸಾವು ಸಹಜ. ಆದರೆ ಮನುಷ್ಯ ಪರಿಪೂರ್ಣ ಅನ್ನಿಸಿಕೊಳ್ಳುವುದು ಆತ ಹೃದಯವಂತಿಕೆ ತೋರಿದಾಗ ಮಾತ್ರ.



Click it and Unblock the Notifications



