Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಪುರ್ನಜನ್ಮವೆಂಬುದು ಇದೆಯೇ? ಧರ್ಮಗ್ರಂಥಗಳು ಹೇಳುವುದೇನು?
ಮನುಷ್ಯನಿಗೆ ಒಟ್ಟು ಏಳು ಜನ್ಮಗಳು ಇರುತ್ತಂತೆ ಹೀಗಂತ ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಈ ಏಳು ಜನ್ಮದಲ್ಲೂ ನಾವು ಮನುಷ್ಯರಾಗಿಯೇ ಹುಟ್ಟಬೇಕೆಂದೇನಿಲ್ಲ ಮನುಷ್ಯ, ಪ್ರಾಣಿ, ಕೀಟ ಹೀಗೆ ಯಾವ ರೂಪದಲ್ಲಾದರೂ ಮರು ಜನ್ಮ ಪಡೆಯಬಹುದು.
ಅನೇಕ ಜನ ಈ ಬಗ್ಗೆ ಗಾಢವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಇನ್ನೂ ಕೆಲವರು ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಇದನ್ನು ತಳ್ಳಿ ಹಾಕಿದ್ದಾರೆ. ಹಾಗಾದರೆ ಪುನರ್ಜನ್ಮ ಎಂದರೇನು? ಪುನರ್ಜನ್ಮದ ಬಗ್ಗೆ ನಮ್ಮ ಧರ್ಮ ಗ್ರಂಥಗಳು ಹೇಳೋದೇನು ಅನ್ನೋದನ್ನ ತಿಳಿಯೋಣ.

ಪುನರ್ಜನ್ಮ ಎಂದರೇನು?
ಪುನರ್ಜನ್ಮದ ಕಲ್ಪನೆಯು ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಇದೆ. ಹಿಂದೂ ಧರ್ಮದ ಪ್ರಕಾರ ದೇಹಕ್ಕೆ ಸಾವಿದೆ ಆದರೆ ಆತ್ಮಕ್ಕೆ ಎಂದಿಗೂ ಸಾವಿಲ್ಲ. ಒರ್ವ ವ್ಯಕ್ತಿಯ ದೇಹವನ್ನು ಬಿಟ್ಟುಹೋದ ಆತ್ಮ ಮತ್ತೊಂದು ದೇಹವನ್ನು ಸೇರಿ ಮರುಹುಟ್ಟು ಪಡೆಯುವುದೇ ಪುನರ್ಜನ್ಮ.
ಸತ್ತ ವ್ಯಕ್ತಿಯ ದೇಹದಿಂದ ಆತ್ಮ ಹೊರ ಬರೋದು ಹೇಗೆ?
ನಂಬಿಕೆಗಳ ಪ್ರಕಾರ ಒಬ್ಬ ಸತ್ತ ವ್ಯಕ್ತಿಯ ದೇಹದಿಂದ ಆತ್ಮವು ಹೊರ ಬರುತ್ತದೆ. ಈ ಆತ್ಮ ಆತನ ಬಾಯಿ ಅಥವಾ ಮೂಗಿನ ಮೂಲಕ ಹೊರ ಬರುತ್ತಂತೆ. ಹೀಗೆ ಹೊರ ಬದ ಆತ್ಮ ಮನುಷ್ಯ, ಪ್ರಾಣಿ, ಕೀಟದ ರೂಪದಲ್ಲಿ ಮರುಹುಟ್ಟು ಪಡೆದುಕೊಳ್ಳುತ್ತದೆ.
ಆಫ್ರಿಕಾದ ಜನರ ನಂಬಿಕೆಯ ಪ್ರಕಾರ ಸತ್ತ ಮನುಷ್ಯನ ದೇಹದಿಂದ ಹೊರ ಬಂದ ಆತ್ಮವು ದೇಹದ ಹತ್ತಿರವೇ ಸುಳಿದಾಡುತ್ತಿರುತ್ತಂತೆ. ಆತ ಸತ್ತು ಆತನ ಕಾರ್ಯಗಳನ್ನು ಮಾಡಿದ ನಂತರವು ಆತನ ಸಮಾಧಿಯ ಪಕ್ಕದಲ್ಲೇ ಕೆಲ ಕಾಲಗಳವರೆಗೂ ಇರುತ್ತೆ ಎಂಬ ನಂಬಿಕೆಯಿದೆ.
ಇನ್ನೂ ಗ್ರೀಕ್ ಜನರ ನಂಬಿಕೆಯ ಪ್ರಕಾರ ಸತ್ತ ವ್ಯಕ್ತಿಯ ಆತ್ಮವು ಪುನರ್ಜನ್ಮ ಪಡೆಯುವುದು ಕೇವಲ ಮನುಷ್ಯ, ಪ್ರಾಣಿ ಹಾಗೂ ಸಸ್ತನಿಗಳ ದೇಹದಲ್ಲಿ ಮಾತ್ರವಂತೆ.
ಪುನರ್ಜನ್ಮಗಳ ಬಗ್ಗೆ ಧರ್ಮಗಳಲ್ಲಿರುವ ನಂಬಿಕೆ ಏನು ಹೇಳುತ್ತೆ?
ಹಿಂದೂ, ಜೈನ, ಬೌದ್ಧ, ಸಿಖ್ಖ್ ಹೀಗೆ ಯಾವುದೇ ಧರ್ಮವಿರಲಿ ಪ್ರತಿಯೊಂದು ಧರ್ಮವು ಕರ್ಮದ ಬಗ್ಗೆ ನಂಬಿಕೆಯನ್ನು ಇಟ್ಟುಕೊಂಡಿದೆ. ಈ ಜನ್ಮದಲ್ಲಿ ಮಾಡಿದ ಪಾಪ-ಕರ್ಮಗಳಲ್ಲಿ ಮುಂದಿನ ಜನ್ಮದಲ್ಲಿ ತಕ್ಕ ಶಾಸ್ತಿ ಆಗುತ್ತೆ ಎಂಬ ನಂಬಿಕೆ ಗಾಢವಾಗಿದೆ.
ಹಿಂದೂ ಧರ್ಮದ ಪ್ರಕಾರ ಮೋಕ್ಷ ಸಿಗುವರೆಗೂ ಮನುಷ್ಯ ಪುನರ್ಜನ್ಮವನ್ನು ಪಡೆಯುತ್ತಲೇ ಇರುತ್ತಾನೆ ಎಂಬ ನಂಬಿಕೆಯಿದೆ. ಸಿಖ್ಖ್ ಧರ್ಮದವರು ಕೂಡ ಇದೇ ನಂಬಿಕೆಯನ್ನು ಹೊಂದಿದ್ದಾರೆ.
ಪುನರ್ಜನ್ಮದ ಪ್ರಕ್ರಿಯೆ ನಿಂತು ಹೋಗುವುದು ಯಾವಾಗ ಅಂದರೆ ಆತ್ಮವು ಧರ್ಮಗಳ ಶಿಸ್ತಿನಿಂದ ಬಿಡುಗಡೆ ಹೊಂದಿ ಬ್ರಹ್ಮಾಂಡದ ತುತ್ತ ತುದಿಯನ್ನು ಏರಿದಾಗ ಮಾತ್ರ.
ಬೌದ್ಧ ಧರ್ಮವು ಆತ್ಮವು ಬೇರೆ ದೇಹಕ್ಕೆ ಸೇರೋದ್ರ ಬಗ್ಗೆ ನಂಬಿಕೆಯನ್ನು ಇಟ್ಟಿಲ್ಲ. ಆದರೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಕರ್ಮ ಅನುಭವಿಸಲೇಬೇಕು ಎಂಬುವುದರ ಬಗ್ಗೆ ಬೌದ್ಧ ಧರ್ಮದಲ್ಲೂ ಉಲ್ಲೇಖವಾಗಿದೆ.
ಹೀಗೆ ಪುನರ್ಜನ್ಮದ ಬಗ್ಗೆ ಒಬ್ಬರದ್ದು ಒಂದೊಂದು ನಂಬಿಕೆ. ಹುಟ್ಟು-ಸಾವು ಸಹಜ. ಆದರೆ ಮನುಷ್ಯ ಪರಿಪೂರ್ಣ ಅನ್ನಿಸಿಕೊಳ್ಳುವುದು ಆತ ಹೃದಯವಂತಿಕೆ ತೋರಿದಾಗ ಮಾತ್ರ.



Click it and Unblock the Notifications


