Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಪುರ್ನಜನ್ಮವೆಂಬುದು ಇದೆಯೇ? ಧರ್ಮಗ್ರಂಥಗಳು ಹೇಳುವುದೇನು?
ಮನುಷ್ಯನಿಗೆ ಒಟ್ಟು ಏಳು ಜನ್ಮಗಳು ಇರುತ್ತಂತೆ ಹೀಗಂತ ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಈ ಏಳು ಜನ್ಮದಲ್ಲೂ ನಾವು ಮನುಷ್ಯರಾಗಿಯೇ ಹುಟ್ಟಬೇಕೆಂದೇನಿಲ್ಲ ಮನುಷ್ಯ, ಪ್ರಾಣಿ, ಕೀಟ ಹೀಗೆ ಯಾವ ರೂಪದಲ್ಲಾದರೂ ಮರು ಜನ್ಮ ಪಡೆಯಬಹುದು.
ಅನೇಕ ಜನ ಈ ಬಗ್ಗೆ ಗಾಢವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಇನ್ನೂ ಕೆಲವರು ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಇದನ್ನು ತಳ್ಳಿ ಹಾಕಿದ್ದಾರೆ. ಹಾಗಾದರೆ ಪುನರ್ಜನ್ಮ ಎಂದರೇನು? ಪುನರ್ಜನ್ಮದ ಬಗ್ಗೆ ನಮ್ಮ ಧರ್ಮ ಗ್ರಂಥಗಳು ಹೇಳೋದೇನು ಅನ್ನೋದನ್ನ ತಿಳಿಯೋಣ.

ಪುನರ್ಜನ್ಮ ಎಂದರೇನು?
ಪುನರ್ಜನ್ಮದ ಕಲ್ಪನೆಯು ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಇದೆ. ಹಿಂದೂ ಧರ್ಮದ ಪ್ರಕಾರ ದೇಹಕ್ಕೆ ಸಾವಿದೆ ಆದರೆ ಆತ್ಮಕ್ಕೆ ಎಂದಿಗೂ ಸಾವಿಲ್ಲ. ಒರ್ವ ವ್ಯಕ್ತಿಯ ದೇಹವನ್ನು ಬಿಟ್ಟುಹೋದ ಆತ್ಮ ಮತ್ತೊಂದು ದೇಹವನ್ನು ಸೇರಿ ಮರುಹುಟ್ಟು ಪಡೆಯುವುದೇ ಪುನರ್ಜನ್ಮ.
ಸತ್ತ ವ್ಯಕ್ತಿಯ ದೇಹದಿಂದ ಆತ್ಮ ಹೊರ ಬರೋದು ಹೇಗೆ?
ನಂಬಿಕೆಗಳ ಪ್ರಕಾರ ಒಬ್ಬ ಸತ್ತ ವ್ಯಕ್ತಿಯ ದೇಹದಿಂದ ಆತ್ಮವು ಹೊರ ಬರುತ್ತದೆ. ಈ ಆತ್ಮ ಆತನ ಬಾಯಿ ಅಥವಾ ಮೂಗಿನ ಮೂಲಕ ಹೊರ ಬರುತ್ತಂತೆ. ಹೀಗೆ ಹೊರ ಬದ ಆತ್ಮ ಮನುಷ್ಯ, ಪ್ರಾಣಿ, ಕೀಟದ ರೂಪದಲ್ಲಿ ಮರುಹುಟ್ಟು ಪಡೆದುಕೊಳ್ಳುತ್ತದೆ.
ಆಫ್ರಿಕಾದ ಜನರ ನಂಬಿಕೆಯ ಪ್ರಕಾರ ಸತ್ತ ಮನುಷ್ಯನ ದೇಹದಿಂದ ಹೊರ ಬಂದ ಆತ್ಮವು ದೇಹದ ಹತ್ತಿರವೇ ಸುಳಿದಾಡುತ್ತಿರುತ್ತಂತೆ. ಆತ ಸತ್ತು ಆತನ ಕಾರ್ಯಗಳನ್ನು ಮಾಡಿದ ನಂತರವು ಆತನ ಸಮಾಧಿಯ ಪಕ್ಕದಲ್ಲೇ ಕೆಲ ಕಾಲಗಳವರೆಗೂ ಇರುತ್ತೆ ಎಂಬ ನಂಬಿಕೆಯಿದೆ.
ಇನ್ನೂ ಗ್ರೀಕ್ ಜನರ ನಂಬಿಕೆಯ ಪ್ರಕಾರ ಸತ್ತ ವ್ಯಕ್ತಿಯ ಆತ್ಮವು ಪುನರ್ಜನ್ಮ ಪಡೆಯುವುದು ಕೇವಲ ಮನುಷ್ಯ, ಪ್ರಾಣಿ ಹಾಗೂ ಸಸ್ತನಿಗಳ ದೇಹದಲ್ಲಿ ಮಾತ್ರವಂತೆ.
ಪುನರ್ಜನ್ಮಗಳ ಬಗ್ಗೆ ಧರ್ಮಗಳಲ್ಲಿರುವ ನಂಬಿಕೆ ಏನು ಹೇಳುತ್ತೆ?
ಹಿಂದೂ, ಜೈನ, ಬೌದ್ಧ, ಸಿಖ್ಖ್ ಹೀಗೆ ಯಾವುದೇ ಧರ್ಮವಿರಲಿ ಪ್ರತಿಯೊಂದು ಧರ್ಮವು ಕರ್ಮದ ಬಗ್ಗೆ ನಂಬಿಕೆಯನ್ನು ಇಟ್ಟುಕೊಂಡಿದೆ. ಈ ಜನ್ಮದಲ್ಲಿ ಮಾಡಿದ ಪಾಪ-ಕರ್ಮಗಳಲ್ಲಿ ಮುಂದಿನ ಜನ್ಮದಲ್ಲಿ ತಕ್ಕ ಶಾಸ್ತಿ ಆಗುತ್ತೆ ಎಂಬ ನಂಬಿಕೆ ಗಾಢವಾಗಿದೆ.
ಹಿಂದೂ ಧರ್ಮದ ಪ್ರಕಾರ ಮೋಕ್ಷ ಸಿಗುವರೆಗೂ ಮನುಷ್ಯ ಪುನರ್ಜನ್ಮವನ್ನು ಪಡೆಯುತ್ತಲೇ ಇರುತ್ತಾನೆ ಎಂಬ ನಂಬಿಕೆಯಿದೆ. ಸಿಖ್ಖ್ ಧರ್ಮದವರು ಕೂಡ ಇದೇ ನಂಬಿಕೆಯನ್ನು ಹೊಂದಿದ್ದಾರೆ.
ಪುನರ್ಜನ್ಮದ ಪ್ರಕ್ರಿಯೆ ನಿಂತು ಹೋಗುವುದು ಯಾವಾಗ ಅಂದರೆ ಆತ್ಮವು ಧರ್ಮಗಳ ಶಿಸ್ತಿನಿಂದ ಬಿಡುಗಡೆ ಹೊಂದಿ ಬ್ರಹ್ಮಾಂಡದ ತುತ್ತ ತುದಿಯನ್ನು ಏರಿದಾಗ ಮಾತ್ರ.
ಬೌದ್ಧ ಧರ್ಮವು ಆತ್ಮವು ಬೇರೆ ದೇಹಕ್ಕೆ ಸೇರೋದ್ರ ಬಗ್ಗೆ ನಂಬಿಕೆಯನ್ನು ಇಟ್ಟಿಲ್ಲ. ಆದರೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ಕರ್ಮ ಅನುಭವಿಸಲೇಬೇಕು ಎಂಬುವುದರ ಬಗ್ಗೆ ಬೌದ್ಧ ಧರ್ಮದಲ್ಲೂ ಉಲ್ಲೇಖವಾಗಿದೆ.
ಹೀಗೆ ಪುನರ್ಜನ್ಮದ ಬಗ್ಗೆ ಒಬ್ಬರದ್ದು ಒಂದೊಂದು ನಂಬಿಕೆ. ಹುಟ್ಟು-ಸಾವು ಸಹಜ. ಆದರೆ ಮನುಷ್ಯ ಪರಿಪೂರ್ಣ ಅನ್ನಿಸಿಕೊಳ್ಳುವುದು ಆತ ಹೃದಯವಂತಿಕೆ ತೋರಿದಾಗ ಮಾತ್ರ.



Click it and Unblock the Notifications


