Latest Updates
-
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ
ಕಾರನ್ನು ಸ್ವಿಮ್ಮಿಂಗ್ ಪೂಲ್ ಮಾಡಿ ಯೂಟ್ಯೂಬರ್ ಹುಚ್ಚಾಟ: ಪೊಲೀಸರು ನೀಡಿದ ಶಿಕ್ಷೆ ಮಾತ್ರ ಸೂಪರ್
ಕೇರಳ ಯೂಟ್ಯೂಬರ್ ಸಂಜು ಟೆಕ್ಕಿ ಹುಚ್ಚಾಟಕ್ಕೆ ಪೊಲೀಸರು ಸರಿಯಾಗಿ ಪಾಠ ಕಲಿಸಿದ್ದಾರೆ. ನನ್ನ ಕಾರು ನನ್ನ ದುಡ್ಡು, ನನಗೆ ಇಷ್ಟ ಬಂದಂತೆ ಮಾಡುತ್ತೇನೆ ಎಂದು ಕಾರನ್ನು ಸ್ವಿಮ್ಮಿಂಗ್ ಪೂಲ್ ಮಾಡಿ 100 ದಿನ ಓಡಾಡುತ್ತೇನೆ ಎಂದವ 4ನೇ ದಿನಕ್ಕೆ ಪೊಲೀಸರ ಅತಿಥಿಯಾಗಿದ್ದಾನೆ.
ಇತ್ತೀಚೆಗೆ ಬಿಡುಗಡೆಯಾದ ಫಹಾದ್ ಫಾಸಿಲ್ ಸಿನಿಮಾ ಆವೇಶಂ ಸೀನ್ ಅನ್ನು ನಕಲಿ ಮಾಡಿ ತನ್ನ ಯೂಟ್ಯೂಬ್ನ ರೀಚ್ ಹೆಚ್ಚಿಸಲು ಮಾಡಲು ಪ್ರಯತ್ನ ಮಾಡಿ ಈಗ 'ಮಾಡಿದ್ದುಣ್ಣೋ ಮಾರಾಯ' ಎಂಬ ಗಾದೆಯಂತೆ ಸರಿಯಾದ ಶಿಕ್ಷೆಯನ್ನು ಅನುಭವಿಸುವಂತಾಗಿದೆ.

ದೊಡ್ಡ ಅಪಾಯನೇ ಉಂಟಾಗುತ್ತಿತ್ತು
ಇವರೇನೂ ನನ್ನ ಕಾರು, ಇದನ್ನು ಏನು ಬೇಕಾದರೂ ಮಾಡಬಹುದು ಎಂದು ಕಾರಿನ ಹಿಂಬದಿಯ ಸೀಟ್ಗಳನ್ನು ತೆಗೆದು ಪ್ಲಾಸ್ಟಿಕ್ ಹಾಕಿ ಸ್ವಿಮ್ಮಿಂಗ್ ಪೂಲ್ ಮಾಡಿದ್ದಾರೆ. ಕಾರು ಸ್ಟಾರ್ಟ್ ಮಾಡಿದಾಗ ಕಾರಿನ ಫ್ರೆಂಟ್ ಸೀಟ್ನಿಂದ ನೀರು ಬರಲಾರಂಭಿಸಿದೆ, ಅದಾದ ಕೆಲವೇ ನಿಮಿಷಗಳಲ್ಲಿ ಏರ್ಬ್ಯಾಗ್ ಓಪನ್ ಆಗಿದೆ, ನಂತರ ಕಾರಿನ ಒಳಗಡೆ ಇರುವ ವ್ಯಕ್ತಿ ಒಳಗಡೆಯ ಡೋರ್ ತೆಗೆಯಲು ಕಷ್ಟಪಡುತ್ತಿದ್ದ.
ಕಾರಿನೊಳಗಡೆಯ ನೀರನ್ನು ಹೊರಗಡೆ ಬಿಡಲು ಶ್ರಮ ಪಡುತ್ತಿದ್ದರು, ಅವರು ಕಾರಿನಿಂದ ನೀರು ಹೊರ ಹಾಕಲು ಪ್ರಯತ್ನಿಸುತ್ತಿದ್ದ ಸ್ಥಳದ ಬಳಿ ಸ್ಕೂಲ್ ಇತ್ತ, ಇವರು ನೀರನ್ನು ಈ ರೀತಿ ಏಕಾಏಕಿ ನಿರನ್ನು ಹೊರ ಚೆಲ್ಲಿದಾಗ ಆ ಆರಿ ಸ್ಕೂಟರ್ ಬಂದರೆ ಕಷ್ಟ, ಶಾಲಾ ಮಕ್ಕಳು ನಡೆದು ಬರವವರರೆಗೂ ಕಷ್ಟ, ಅಷ್ಟೇ ಅಲ್ಲ ಇವರ ಕಾರಿಗೆ ಬೆಂಕಿ ಹತ್ತಿಕೊಳ್ಳುವ ಅಪಾಯವಿತ್ತು.
ಇದೀಗ ಆ ಕಾರನ್ನು ಸೀಜ್ ಮಾಡಲಾಗಿದೆ, ಕಾರಿನ ಡ್ರೈವರ್ ಲೈಸನ್ಸ್ ರದ್ದು ಪಡಿಸಲಾಗಿದೆ, ಅಲ್ಲದೆ ಆ ಯೂಟ್ಯೂಬರ್ಗಳಿಗೆ ಕೇರಳದ ಆಲಪುಯ್ಞಾ ಮೆಡಿಕಲ್ ಕಾಲೇಜ್ನಲ್ಲಿ ಒಂದು ವಾರ ಸೇವೆ ಮಾಡುವ ಶಿಕ್ಷೆ ನೀಡಲಾಯ್ತು.
ನೀಡಿದ ಶಿಕ್ಷೆಯಿಂದ ಪಾಠ ಕಲಿತ ಯೂಟ್ಯೂಬರ್
ಈ ಶಿಕ್ಷೆಯನ್ನು ಅನುಭವಿಸಿದ ಯೂಟ್ಯೂಬರ್ ನಾವು ಮಾಡಿದ ತಪ್ಪು ಏನೆಂದು ಅರಿತುಕೊಂಡಿದ್ದೇವೆ ಎಂದು ಹೇಳಿದ್ದಾರೆ, ಆ ಮೆಡಿಕಲ್ ಕಾಲೇಜ್ನಲ್ಲಿ ದಿನವೂ ಹತ್ತಾರು ಆಕ್ಸಿಡೆಂಟ್ ಕೇಸ್ ಬರ್ತಾ ಇತ್ತು, ಅಲ್ಲಿರುವ ರೋಗಿಗಳು ಅಪಘಾತದಿಂದ ಕಾಲು-ಕೈ ಕಳೆದು ನರಳಾಡುತ್ತಿರುವವರನ್ನು ನೋಡಿದಾಗ ಅವರಿಗೆ ಪಶ್ಚಾತಾಪ ಉಂಟಾಗಿದೆ.
ಅವರೇ ಈಗ ಆ ಒಂದು ವಾರ ಪ್ರತಿದಿನ ನನ್ನ ಕೈಗಳಿಗೆ ಅಪಘಾತದಿಂದ ಗಾಯಗೊಂಡವರ ರಕ್ತ ತಗುಲಿದೆ, ಅವರನ್ನು ಆಸ್ಪತ್ರೆ ಆಂಬ್ಯೂಲೆನ್ಸ್ಗೆ ತಂದಾಗ ನಾವು ಅವರನ್ನು ಎತ್ತಿ ಸ್ಟ್ರೆಚ್ಚರ್ನಲ್ಲಿ ತರುತ್ತಿದ್ದೇವೆ, ಇಬ್ಬರು ಅಪಘಾತದಲ್ಲಿ ಸತ್ತವರನ್ನೂ ಎತ್ತಿದ್ದೇವೆ. ಇವುಗಳನ್ನೆಲ್ಲಾ ನೋಡಿದಾಗ ನಮಗೆ ಕೈ ಕಾಲುಗಳಿವೆ, ಅದನ್ನು ಕಳೆದುಕೊಂಡರೆ ಎಷ್ಟು ಕಷ್ಟ ಪಡಬೇಕಾಗುತ್ತದೆ ಎಂದು ನೋಡಿದ್ದೇವೆ, ಇನ್ನು ಇಂಥ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ಒಳ್ಳೆಯ ಶಿಕ್ಷೆಯನ್ನೇ ನೀಡಿದ್ದಾರೆ, ಫೈನ್ ಕಟ್ಟಿ ಅಂತ ಹೇಳಿದ್ದರೆ ಅವರಿಗೆ ಅವರ ತಪ್ಪಿನ ಅರಿವು ಆಗುತ್ತಿರಲಿಲ್ಲ, ಆದರೆ ಮೆಡಿಕಲ್ ಕಾಲೇಜಿನಲ್ಲಿ ಮಾಡಿದ ಸೇವೆ ಅವರಿಗೆ ಅವರ ತಪ್ಪು ಅರಿತುಕೊಳ್ಳಲು ಸಾಧ್ಯವಾಗಿದೆ.



Click it and Unblock the Notifications











