Latest Updates
-
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು?
ದೀಪ ಹಚ್ಚುವಾಗ ಈ ತಪ್ಪುಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿ!
ಹಿಂದೂ ಸಂಪ್ರದಾಯದಲ್ಲಿ ನಾವು ಪ್ರತಿನಿತ್ಯ ದೇವರಿಗೆ ದೀಪಹಚ್ಚಿ ಕೈ ಮುಗಿಯುವ ಸಂಪ್ರದಾಯವಿದೆ. ಅನೇಕ ಜನರಿಗೆ ದೀಪ ಹಚ್ಚೋದ್ರ ಹಿಂದಿನ ಕಾರಣ ಏನು ಅನ್ನೋದು ಕೂಡ ಗೊತ್ತಿಲ್ಲ. ತಲಾತಲಾಂತರಗಳಿಂದ ನಡೆದುಕೊಂಡು ಬಂದ ಪದ್ಧತಿಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ ಅಷ್ಟೇ. ಆದರೆ ನಿಮಗೊತ್ತಾ? ದೀಪವನ್ನು ಹಚ್ಚುವಾಗ ನಾವು ಕೆಲವೊಂದು ನಿಯಮಗಳನ್ನು ಪಾಲಿಸೋದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕು ದೀಪ ಹಚ್ಚುವಾಗ ನಾವು ಪಾಲಿಸಲೇಬೇಕಾದ ಮುಖ್ಯ ನಿಯಮಗಳು ಯಾವುದು ಅನ್ನೋದನ್ನು ತಿಳಿಯೋಣ.
ಸನಾತನ ಧರ್ಮದ ಪ್ರಕಾರ ಮನೆಯಲ್ಲಿ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ. ಯಾವುದೇ ಪೂಜಾ ಕಾರ್ಯಕ್ರಮ ನಡೆಯ ಬೇಕಾದರೂ ಮೊದಲಿಗೆ ದೀಪ ಹಚ್ಚಿ ನಂತರ ದೇವರಲ್ಲಿ ಭಕ್ತಿಯಿಂದ ಬೇಡಿಕೊಳ್ಳಲಾಗುತ್ತದೆ. ದೀಪವನ್ನು ಹಚ್ಚುವುದರಿಂದ ಅಂಧಕಾರ ಕಳೆಯಲಿದೆ ಅನ್ನೋ ನಂಬಿಕೆಯಿದೆ. ಅದ್ರಲ್ಲೂ ಮುಖ್ಯವಾಗಿ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಮನೆಯಲ್ಲಿ ದೀಪ ಬೆಳಗೋದ್ರಿಂದ ಆ ಮನೆಗೆ ತುಂಬಾನೇ ಒಳ್ಳೆಯದಾಗುತ್ತಂತೆ.

ದೀಪ ಹಚ್ಚುವಾಗ ಪಾಲಿಸಬೇಕಾದ ವಿಧಾನಗಳು :
1. ಮುರಿದ ದೀಪದ ಬಟ್ಟಲನ್ನು ಬಳಸಬಾರದು
ದೇವರಿಗೆ ಬಳಸುವ ದೀಪದ ಸಾಮಾಗ್ರಿಗಳು ಚಿನ್ನದಿಂದಲೋ ಅಥವಾ ಬೆಳ್ಳಿಯಿಂದಲೋ ಮಾಡಿರಬೇಕಾಗಿಲ್ಲ. ದೇವರು ಇದನ್ನೆಲ್ಲಾ ಖಂಡಿತ ಬಯಸೋದಿಲ್ಲ. ಆದರೆ ನಮ್ಮಲ್ಲಿ ಭಕ್ತಿ ಇರಬೇಕು ಅಷ್ಟೇ. ಆದರೆ ನಾವು ಬಳಸುವ ದೀಪದ ಬಟ್ಟಲ ಬಗ್ಗೆ ಜಾಗರೂಕತೆ ವಹಿಸೋದು ತುಂಬಾನೇ ಮುಖ್ಯವಾಗುತ್ತದೆ. ಅದ್ರಲ್ಲೂ ಮುರಿದು ಹೋದ, ಜಜ್ಜಿದ ದೀಪದ ಬಟ್ಟಲನ್ನು ಪೂಜೆಗೆ ಎಂದಿಗೂ ಬಳಸೋದಕ್ಕೆ ಹೋಗಬೇಡಿ.
2. ಎಣ್ಣೆ ಅಥವಾ ತುಪ್ಪದ ದೀಪ ಹಚ್ಚಿ ಈ ವಿಚಾರ ಗೊತ್ತಿರಲಿ
ದೇವರಿಗೆ ದೀಪ ಹಚ್ಚುವಾಗ ಎಣ್ಣೆ ಹಾಗೂ ತುಪ್ಪದ ದೀಪ ಹಚ್ಚಿರಿ. ಒಂದು ವೇಳೆ ತುಪ್ಪದ ದೀಪ ಹಚ್ಚುವುದಾದರೆ ದೀಪವನ್ನು ದೇವರ ಎಡ ಬದಿಯಲ್ಲಿ ಇಡಬೇಕು. ಒಂದು ವೇಳೆ ನೀವು ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚುವುದಾದರೆ ದೇವರ ಬಲ ತುದಿಯಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಸಮೃದ್ಧಿ ಹೆಚ್ಚಾಗಲಿದೆಯಂತೆ.
3. ಶನಿ ದೇವನಿಗಾಗಿ ದೀಪ ಹಚ್ಚಿರಿ
ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. ಶನಿ ದೇವನಿಗೆ ದೀಪವನ್ನು ಹಚ್ಚೋದ್ರಿಂದ ಸಾಡೆ ಸಾತಿ ದೋಷ ಪರಿಹಾರವಾಗಲಿದ್ಯಂತೆ. ಅಷ್ಟೇ ಅಲ್ಲದೇ ಶನಿ ದೇವನು ನಮ್ಮೆಲ್ಲಾ ಸಂಕಷ್ಟಗಳನ್ನೆಲ್ಲಾ ಪರಿಹಾರ ಮಾಡಿ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡಲಿದ್ದಾನೆ.
4. ದೀಪ ಹಚ್ಚುವ ಸಮಯ
ದೀಪ ಹಚ್ಚುವುದಕ್ಕೆ ಇಂತಹದ್ದೇ ಸಮಯ ಅಂತಿರುತ್ತದೆ. ನಮಗೆ ಇಷ್ಟ ಬಂದ ಸಮಯದಲ್ಲಿ ದೀಪ ಹಚ್ಚೋದಕ್ಕೆ ಸಾಧ್ಯವಾಗೋದಿಲ್ಲ. ಬೆಳಗ್ಗೆ 5 ರಿಂದ 10 ರವರೆಗೆ ಹಾಗೂ ಸಂಜೆ 5 ರಿಂದ 7ರವರೆಗೆ ದೀಪ ಹಚ್ಚುವುದಕ್ಕೆ ಪ್ರಾಶ್ತ್ಯವಾದ ಸಮಯ. ಮಧ್ಯಾಹ್ನದ ಸಮಯದಲ್ಲಿ ಮನೆಯಲ್ಲಿ ದೀಪ ಹಚ್ಚಿದರೆ ಒಳಿತಾಗೋದಿಲ್ಲ ಅನ್ನೋ ನಂಬಿಕೆಯಿದೆ. ಹೀಗಾಗಿ ದೀಪ ಹಚ್ಚುವುದು ಕೂಡ ಒಂದು ರೀತಿ ಸೂಕ್ಷ್ಮವಾದ ವಿಚಾರ.
ದೀಪ ಹಚ್ಚುವುದು ಸೂಕ್ಷ್ಮವಾದ ವಿಚಾರ ಆಗಿರೋದ್ರಿಂದ ಈ ಬಗ್ಗೆ ಮುಂಜಾಗರೂಕತೆ ವಹಿಸೋದು ತುಂಬಾನೇ ಮುಖ್ಯವಾಗುತ್ತದೆ. ಕಾಟಾಚಾರಕ್ಕೆ ಅಥವಾ ದೀಪ ಹಚ್ಚಬೇಕಲ್ಲ ಅನ್ನೋ ಕಾರಣಕ್ಕೆ ಹಚ್ಚಿದರೆ ಅದರ ಪ್ರತಿಫಲ ನಮಗೆ ಖಂಡಿತ ಸಿಗುವುದಿಲ್ಲ.



Click it and Unblock the Notifications
