Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
Katyayani Mantra In Kannada: ನವರಾತ್ರಿಯ 6ನೇ ದಿನ ಪೂಜೆಗೆ ಕಾತ್ಯಾಯನಿ ದೇವಿ ಮಂತ್ರ!
Katyayani Mantra In Kannada: ನಾಡಿನೆಲ್ಲೆಡೆ ದಸರಾ ಹಾಗೂ ನವರಾತ್ರಿ ಹಬ್ಬದ ರಂಗು ಹೆಚ್ಚಾಗುತ್ತಿದೆ. ಈ ನಡುವೆ ಶಕ್ತಿ ದೇವತೆಯ ಆರಾಧನೆಯ 6ನೇ ದಿನ ನಾವು ದುರ್ಗಾ ದೇವಿಯ ಮತ್ತೊಂದು ಅವತಾರವನ್ನು ಪೂಜಿಸುತ್ತೇವೆ. ಕಾತ್ಯಾಯಿನಿಯ ಸ್ವರೂಪವಾಗಿ ಇಂದು ಪೂಜಿಸಲಾಗುತ್ತದೆ. ಈ ಶನಿವಾರ ಶಕ್ತಿ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿಯನ್ನು ಪೂಜಿಸುತ್ತಾರೆ.
ಕಾತ್ಯಾಯಿನಿಯು ಜ್ಞಾನ, ವಿವೇಕ, ಶಾಂತಿಯ ದೇವತೆ ಎಂದು ಸಂಕೇತಿಸಲಾಗಿದೆ. ಕಾತ್ಯಾಯನನ ಪುತ್ರಿಯಾಗಿರುವ ಕಾತ್ಯಾಯಿನಿಯ ರೂಪದಲ್ಲಿ ದುರ್ಗೆಯು ಧರೆಯಲ್ಲಿ ಪ್ರತ್ಯಕ್ಷಗೊಂಡು ಭಕ್ತರಿಗೆ ದರ್ಶನ ನೀಡುತ್ತಾಳೆ ಎಂಬ ನಂಬಿಕೆ ಇದೆ. ದೇವಿಯು ಎಡಗೈಯಲ್ಲಿ ತಾವರೆ ಮತ್ತು ಕೆಳಗಿನ ಎಡಗೈಯಲ್ಲಿ ಕತ್ತಿಯನ್ನು ಬಲಗೈಯಲ್ಲಿ ಅಭಯ ಮತ್ತು ವರದ ಮುದ್ರೆಯನ್ನು ಹಿಡಿದುಕೊಂಡಿದ್ದಾರೆ.

ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಹಾಗೆ ಜ್ಞಾನ, ವಿವೇಕವನ್ನು ನೀಡುವಂತೆ ಆಕೆಯನ್ನು ಬೇಡಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹಾಗೆ ನಿಮ್ಮ ಜಾತಕದಲ್ಲಿನ ಗುರುವಿನ ದೋಷ ನಿವಾರಣೆಗೂ ಕೂಡ ಕಾತ್ಯಾಯಿನಿಯ ಪೂಜಿಸಬೇಕು ಎಂದು ಹೇಳಲಾಗಿದೆ.
ಕಾತ್ಯಾಯಿನಿ ದೇವಿಯ ಕಥೆ ಏನು ಗೊತ್ತಾ?
ಕಾತ್ಯಾಯಿನಿ ಎಂಬ ಹೆಸರು ಕಾತ್ಯಾಯನ ಎಂಬ ಪುರುಷ ನಾಮದಿಂದ ಬಂದಿದೆ. ಕಾತ್ಯಾಯನ ಎಂಬ ಋಷಿ ಒಮ್ಮೆ ಪಾರ್ವತಿ ದೇವಿಯಂತಹ ಮಗಳನ್ನು ಪಡೆಯಬೇಕು ಎಂದು ತಪಸ್ಸು ಮಾಡಿದ್ದನಂತೆ. ವರ್ಷಗಳ ಕಾಲ ಆತ ನಿರಂತರವಾಗಿ ತಪಸ್ಸು ಮಾಡಿದನಂತೆ. ಆತನ ತಪಸ್ಸು ಮೆಚ್ಚಿದ ಪಾರ್ವತಿ ಧರೆಗೆ ಇಳಿದಿದ್ದಳು. ಋಷಿಗೆ ತನ್ನಂತಹ ಮಗಳೇ ಜನಿಸಲಿ ಎಂದು ವರ ನೀಡಿದಳಂತೆ. ಹಾಗೆ ಕಾತ್ಯಾಯನನ ಪುತ್ರಿಗೆ ಆತ ಕಾತ್ಯಾಯಿನಿ ಎಂಬ ಹೆಸರು ಇಟ್ಟನಂತೆ. ಆಕೆಯ ಸಾಕ್ಷಾತ್ ದೇವಿಯಾದಳು. ದುಷ್ಟರ ಸಂಹಾರಕ್ಕಾಗಿ ಬಂದ ದುರ್ಗೆಯ ಅವತಾರ ಎಂಬುದು ತಿಳಿಯಿತು. ನಂತರ ಆಕೆಯಿಂದ ಧರ್ಮ ರಕ್ಷಣೆಯ ಕಾರ್ಯ ನಡೆದಿತ್ತು ಎಂದು ಹೇಳಲಾಗಿದೆ.
ಕಾತ್ಯಾಯಿನಿ ದೇವಿ ಮಂತ್ರ
ॐ ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರಿ ।
ನನ್ದಗೋಪಸುತಂ ದೇವಿ ಪತಿಂ ಮೇ ಕುರು ತೇ ॥
"ಓಂ ದೇವಿ ಕಾತ್ಯಾಯಿನಿ ನಮಃ
ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ
ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ.
ಕಾತ್ಯಾಯಿನಿ ದೇವಿಯ ಸ್ತುತಿ
ಯಾ ದೇವಿ ಸರ್ವಭೂತೇಶು ಮಾ ಕಾತ್ಯಾಯನಿ ರೂಪೇನ ಸಂಸ್ಥಿತಾ
ಸಮಸ್ತಸ್ತೈ ಸಮಸ್ತಸ್ತೈ ಸಮಸ್ತಸ್ತೈ ನಮೋ ನಮಃ"
ಕಾತ್ಯಾಯಿನಿ ದೇವಿಯ ಧ್ಯಾನ ಮಂತ್ರ
ವಂದೇ ವಂಚಿತ ಮನೋರಥಾರ್ಥ ಚಂದ್ರಾದ್ರಕೃತಾಶೇಖರಂ
ಸಿಂಹರುದ್ಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನಿಮ್
ಸ್ವರ್ಣವರ್ಣ ಅಜ್ನಾಚಕ್ರ ಸ್ಥಿತಂ ಶಷ್ಟಮಾ ದುರ್ಗಾ ತ್ರಿನೇತ್ರಂ
ವರಭೀತ ಕರಮ್ ಶಂಗಪದಾಧಾರಂ ಕಾತ್ಯಾಯನಸುತಂ ಭಜಾಮಿ
ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ
ಮಾಜಿರ, ಹರಾ, ಕೇಯುರಾ, ಕಿನಿಕಿನಿ, ರತ್ನಕುಂಡಲ ಮಂಡಿತಂ
ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೂಲಮ್ ತುಂಗಮ್ ಕುಂಚಮ್
ಕಾಮನಿಯಮ್ ಲಾವಣ್ಯಂ ತ್ರಿವಳಿ ವಿಭೂಷಿತ ನಿಮ್ನ ನಭೀಮ್
ಈ ಕತ್ಯಾಯಿನಿ ಮಂತ್ರವನ್ನು ಪಠಿಸುವುದರಿಂದ ಅಡೆತಡೆಗಳನ್ನು ನಿವಾರಿಸಲು, ಒಬ್ಬರ ಜೀವನದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ಮತ್ತು ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ವೈವಾಹಿಕ ಸುಖವನ್ನು ಪಡೆಲಯಲು ಕೂಡ ದೇವಿಯ ಆರಾಧನೆ ಮಾಡಲಾಗುತ್ತದೆ. ವಿಶೇಷವಾಗಿ ವಿವಾಹ ಸಂಬಂಧವಾಗಿ ತೊಡಕುಗಳು, ಅಡ್ಡಿಗಳು ಇದ್ದಾಗ ಕಾತ್ಯಾಯಿನಿ ದೇವಿಯ ಪೂಜಿಸಬೇಕು ಎಂದು ಹೇಳಲಾಗಿದೆ. ವಿವಾಹ ಯೋಗಕ್ಕಾಗಿ 'ಓಂ ಹ್ರಿಂಗ್ ಕಾತ್ಯಾಯಿನಿಯೇ ಸ್ವಾಹಾ, ಹ್ರಿಂಗ್ ಶ್ರಿಂಗ್ ಕಾತ್ಯಾಯನಿಯೇ ಸ್ವಾಹಾ'



Click it and Unblock the Notifications