Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ರಾಜ್ಯಕ್ಕೆ ಖುಷಿ ಸುದ್ದಿ ಕೊಟ್ಟವಳು, ಹನಿಟ್ರ್ಯಾಪ್ ಮಾಡಿ ಆದಳು ಬಿಸಿ ಬಿಸಿ ಸುದ್ದಿ: ನೈತಿಕ ಜವಾಬ್ದಾರಿ ಅರಿಯದವರು ಪತ್ರಕರ್ತರಾ
ಪತ್ರಿಕೋದ್ಯಮ ವೃತ್ತಿ ಎಂಬುವುದು ಅತ್ಯಂತ ಜವಾಬ್ದಾರಿ ಇರುವ ಹುದ್ದೆ, ಪತ್ರಕರ್ತರು ಅಂದರೆ ಸಮಾಜದ ಕಾವಲುಗಾರರು ಎಂದು ಹೇಳಲಾಗುವುದು.
ಆದರೆ ಈಗೀನ ಕೆಲ ಪತ್ರಕರ್ತರು ಎನ್ನುವ ಸೋಗಿನಲ್ಲಿರುವ ಕೆಲವರಿಗೆ ಪತ್ರಿಕೋದ್ಯಮದ ಮೌಲ್ಯವೇ ಗೊತ್ತಿರುವುದಿಲ್ಲ, ಅದರ ಪರಿಣಾಮ ಈಗ ಜನರು ಮಾಧ್ಯಮದವರು ಎಂದರೆ ಅಸಡ್ಡೆಯಿಂದ ನೋಡುತ್ತಾರೆ, ಆಡಿಕೊಂಡು ನಗಾಡುತ್ತಾರೆ, ಪತ್ರಿಕೋದ್ಯಮದ ಮೌಲ್ಯವೇ ಗೊತ್ತಿಲ್ಲದೆ ಚಾನಲ್ ಇಟ್ಟುಕೊಂಡರೆ ಅವರು ಸಮಾಜಕ್ಕೆ ನೀಡುವ ಸಂದೇಶವೇನು ಎಂಬುವುದನ್ನು ಹಲವಾರು ಪ್ರಕರಣದಲ್ಲಿ ನೋಡಿದ್ದೇವೆ.

ಹೆತ್ತ ಮಗ ತೋರಿ ಹೋದಾಗ ಅಳುತ್ತಿದ್ದರೆ ಆ ತಂದೆ-ತಾಯಿ ಬಳಿ ಹೋಗಿ ಈಗ ನಿಮಗೆ ಏನನಿಸುತ್ತೆ? ಎಂದು ಕೇಳುವ ಪತ್ರಕರ್ತರಿಗೆ ಜನರೇ ಬುದ್ಧಿ ಕಲಿಸಬೇಕು. ಹುಚ್ಚರಂತೆ ಪ್ರಶ್ನೆ ಕೇಳಿದರೆ ಅದಕ್ಕೆ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದರೆ ಇಂಥವರ ಬಾಯಿ ಮುಚ್ಚಿಸಬಹುದು, ಇತ್ತೀಚೆಗೆ ಒಂದು ವಿಡಿಯೋ ತುಂಬಾನೇ ವೈರಲ್ ಆಗಿತ್ತು...
ದಿ ಗ್ರೇಟ್ ಪತ್ರಕರ್ತೆ ಎಂದು ತನ್ನನ್ನು ತಾನು ಅಂದುಕೊಂಡಿರುವ ಆಕೆ ಪ್ರಕಾಶ್ ರೈ ಅವರಿಗೆ ಏನೋ ಹೇಳಲು ಹೋಗಿ ತನ್ನಲ್ಲಿಯೂ ಜ್ಞಾನ ಬಂಡಾರವಿದೆ ಎಂದು ತೋರಿಸಲು ಹೋಗಿ ನಿರ್ಗತಿಕರು ಎಂದು ಹೇಳಿ ಅವರ ಕೈಯಿಂದ ಮುಖಕ್ಕೆ ಹೊಡೆದಂತೆ ಹೇಳಿಸಿಕೊಂಡ ವೀಡಿಯೋ ವೈರಲ್ ಆಗಿತ್ತು. ಪತ್ರಕರ್ತರಾಗಲು ಕೆಲವೊಂದು ಮೌಲ್ಯ ಗೊತ್ತಿರಬೇಕು., ಅದು ಗೊತ್ತಿಲ್ಲದೆ ಹೋದರೆ ಇವರಿಂದಾಗಿ ಒಳ್ಳೆಯ ಪತ್ರಕರ್ತರನ್ನೂ ಜನರು ಸಂಶಯದಿಂದ ನೋಡುವಂತಾಗಿದೆ.
ರಾಜ್ಯಕ್ಕೆ ಖುಷಿ ಸುದ್ದಿ ಪತ್ರಕರ್ತೆ ಎನ್ನುವ ಸೋಗು ಹಾಕಿದ ವ್ಯಕ್ತಿಯಲ್ಲಿ ಹನಿಟ್ರ್ಯಾಪ್ನಲ್ಲಿ ಸುದ್ದಿ ರಾಜ್ಯಕ್ಕೆ ಹಸಿ ಬಿಸಿ ಸುದ್ದಿ ಆಗಿದ್ದಾಳೆ
ಯಾರೋ ಇಬ್ಬ ನಟಿ ಗರ್ಭಿಣಿಯಾದರೆ ಅದ್ಹೇಗೆ ಇಡೀ ರಾಜ್ಯಕ್ಕೆ ಖುಷಿ ಕೊಡುವ ಸುದ್ದಿಯೋ ದೇವರಿಗೆ ಗೊತ್ತು, ಪಾಪ ಈಕೆಯ ನ್ಯೂಸ್ ಆ ನಟಿಯ ಖುಷಿಗೆ ಪೆಟ್ಟು ತಂದಿತು ಎಂಬುವುದಷ್ಟೇ ವಾಸ್ತವ. ಇದೀಗ ಐಷಾರಾಮಿ ಜೀವನದ ಆಸೆಗೆ ಬಿದ್ದು ಕಂಬಿ ಎಣಿಸುವ ಗತಿ ಬಂದಿದೆ. ಇದು ಊಹಾಪೋಹಾವಲ್ಲ, ಪೊಲೀಸರೇ ಹೇಳುತ್ತಿದ್ದಾರೆ.
ಇವರ ಗುಂಪು ಹನಿಟ್ರ್ಯಾಪ್ ಮಾಡಿ ಅಡ್ಡ ಮಾರ್ಗದ ಮೂಲಕ ಹಣ ಗಳಿಸುತ್ತಿದ್ದರು. ಇದೀಗ ಪ್ರತಿಷ್ಠಿತ ವೈದ್ಯ ಸೇರಿದಂತೆ ಸ್ಪಾಕ್ಕೂ ಹನಿಟ್ರ್ಯಾಪ್ ಮಾಡಿ ಹಣ ಕೇಳಿ ಈಗ ಪೊಲೀಸರ ಅತಿಥಿಯಾಗುವ ಪರಿಸ್ಥಿತಿ ಬಂದಿದೆ.
ಒಂದು ಪತ್ರಕರ್ತರಿಗೆ ಎಷ್ಟು ಸಂಬಳ ಬರುತ್ತದೆ ಎಂಬುವುದು ಆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಗೊತ್ತಿರುತ್ತದೆ. ಬಡ ಕುಟುಂಬದಿಂದ ಬಂದು ಆ ಖಾಸಗಿ ಚಾನಲ್ ಮೂಲಕ ಪತ್ರಕರ್ತೆ ಎಂದು ಗುರಿತಿಸಿರುವ ದಿವ್ಯಾ ವಸಂತ ಸಕತ್ ಸುದ್ದಿಯಾಗಿದ್ದು ರಾಜ್ಯಕ್ಕೆ ಖುಷಿ ನೀಡುವ ಸುದ್ದಿಯಿಂದ, ಜನರು ಟ್ರೋಲ್ ಮಾಡುತ್ತಿದ್ದಾಗ ಆ ಟ್ರೋಲ್ ಅನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸಿದಾಕೆ.
ಮತ್ತೊಂದು ಖಾಸಗಿ ವಾಹಿನಿಯಲ್ಲಿ ಮನರಂಜನಾ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಬಂದಾಗ ತನಗಿದ್ದ ನೆಗೆಟಿವ್ ಇಮೇಜ್ ಹೋಗಲಾಡಿಸಿ ಅಲ್ಲಿ ಸಿಂಪತಿ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ ಒಳ್ಳೆಯ ಕಾರ್ಯ ಮಾಡುತ್ತಿದ್ದರೆ ರಾಜ್ಯಕ್ಕೆ ಬಿಸಿ ಬಿಸಿ ಸುದ್ದಿಯಾಗುವ ಪರಿಸ್ಥಿತಿ ಬರ್ತಾ ಇರಲಿಲ್ಲ. ನಾಯಿ ಬಾಲ ಡೊಂಕೇ ಎಂಬ ಮಾತು ಇವರನ್ನು ನೋಡಿ ಹೇಳಿರಬೇಕು ಅಲ್ವಾ?



Click it and Unblock the Notifications