Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಜ್ಯಕ್ಕೆ ಖುಷಿ ಸುದ್ದಿ ಕೊಟ್ಟವಳು, ಹನಿಟ್ರ್ಯಾಪ್ ಮಾಡಿ ಆದಳು ಬಿಸಿ ಬಿಸಿ ಸುದ್ದಿ: ನೈತಿಕ ಜವಾಬ್ದಾರಿ ಅರಿಯದವರು ಪತ್ರಕರ್ತರಾ
ಪತ್ರಿಕೋದ್ಯಮ ವೃತ್ತಿ ಎಂಬುವುದು ಅತ್ಯಂತ ಜವಾಬ್ದಾರಿ ಇರುವ ಹುದ್ದೆ, ಪತ್ರಕರ್ತರು ಅಂದರೆ ಸಮಾಜದ ಕಾವಲುಗಾರರು ಎಂದು ಹೇಳಲಾಗುವುದು.
ಆದರೆ ಈಗೀನ ಕೆಲ ಪತ್ರಕರ್ತರು ಎನ್ನುವ ಸೋಗಿನಲ್ಲಿರುವ ಕೆಲವರಿಗೆ ಪತ್ರಿಕೋದ್ಯಮದ ಮೌಲ್ಯವೇ ಗೊತ್ತಿರುವುದಿಲ್ಲ, ಅದರ ಪರಿಣಾಮ ಈಗ ಜನರು ಮಾಧ್ಯಮದವರು ಎಂದರೆ ಅಸಡ್ಡೆಯಿಂದ ನೋಡುತ್ತಾರೆ, ಆಡಿಕೊಂಡು ನಗಾಡುತ್ತಾರೆ, ಪತ್ರಿಕೋದ್ಯಮದ ಮೌಲ್ಯವೇ ಗೊತ್ತಿಲ್ಲದೆ ಚಾನಲ್ ಇಟ್ಟುಕೊಂಡರೆ ಅವರು ಸಮಾಜಕ್ಕೆ ನೀಡುವ ಸಂದೇಶವೇನು ಎಂಬುವುದನ್ನು ಹಲವಾರು ಪ್ರಕರಣದಲ್ಲಿ ನೋಡಿದ್ದೇವೆ.

ಹೆತ್ತ ಮಗ ತೋರಿ ಹೋದಾಗ ಅಳುತ್ತಿದ್ದರೆ ಆ ತಂದೆ-ತಾಯಿ ಬಳಿ ಹೋಗಿ ಈಗ ನಿಮಗೆ ಏನನಿಸುತ್ತೆ? ಎಂದು ಕೇಳುವ ಪತ್ರಕರ್ತರಿಗೆ ಜನರೇ ಬುದ್ಧಿ ಕಲಿಸಬೇಕು. ಹುಚ್ಚರಂತೆ ಪ್ರಶ್ನೆ ಕೇಳಿದರೆ ಅದಕ್ಕೆ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದರೆ ಇಂಥವರ ಬಾಯಿ ಮುಚ್ಚಿಸಬಹುದು, ಇತ್ತೀಚೆಗೆ ಒಂದು ವಿಡಿಯೋ ತುಂಬಾನೇ ವೈರಲ್ ಆಗಿತ್ತು...
ದಿ ಗ್ರೇಟ್ ಪತ್ರಕರ್ತೆ ಎಂದು ತನ್ನನ್ನು ತಾನು ಅಂದುಕೊಂಡಿರುವ ಆಕೆ ಪ್ರಕಾಶ್ ರೈ ಅವರಿಗೆ ಏನೋ ಹೇಳಲು ಹೋಗಿ ತನ್ನಲ್ಲಿಯೂ ಜ್ಞಾನ ಬಂಡಾರವಿದೆ ಎಂದು ತೋರಿಸಲು ಹೋಗಿ ನಿರ್ಗತಿಕರು ಎಂದು ಹೇಳಿ ಅವರ ಕೈಯಿಂದ ಮುಖಕ್ಕೆ ಹೊಡೆದಂತೆ ಹೇಳಿಸಿಕೊಂಡ ವೀಡಿಯೋ ವೈರಲ್ ಆಗಿತ್ತು. ಪತ್ರಕರ್ತರಾಗಲು ಕೆಲವೊಂದು ಮೌಲ್ಯ ಗೊತ್ತಿರಬೇಕು., ಅದು ಗೊತ್ತಿಲ್ಲದೆ ಹೋದರೆ ಇವರಿಂದಾಗಿ ಒಳ್ಳೆಯ ಪತ್ರಕರ್ತರನ್ನೂ ಜನರು ಸಂಶಯದಿಂದ ನೋಡುವಂತಾಗಿದೆ.
ರಾಜ್ಯಕ್ಕೆ ಖುಷಿ ಸುದ್ದಿ ಪತ್ರಕರ್ತೆ ಎನ್ನುವ ಸೋಗು ಹಾಕಿದ ವ್ಯಕ್ತಿಯಲ್ಲಿ ಹನಿಟ್ರ್ಯಾಪ್ನಲ್ಲಿ ಸುದ್ದಿ ರಾಜ್ಯಕ್ಕೆ ಹಸಿ ಬಿಸಿ ಸುದ್ದಿ ಆಗಿದ್ದಾಳೆ
ಯಾರೋ ಇಬ್ಬ ನಟಿ ಗರ್ಭಿಣಿಯಾದರೆ ಅದ್ಹೇಗೆ ಇಡೀ ರಾಜ್ಯಕ್ಕೆ ಖುಷಿ ಕೊಡುವ ಸುದ್ದಿಯೋ ದೇವರಿಗೆ ಗೊತ್ತು, ಪಾಪ ಈಕೆಯ ನ್ಯೂಸ್ ಆ ನಟಿಯ ಖುಷಿಗೆ ಪೆಟ್ಟು ತಂದಿತು ಎಂಬುವುದಷ್ಟೇ ವಾಸ್ತವ. ಇದೀಗ ಐಷಾರಾಮಿ ಜೀವನದ ಆಸೆಗೆ ಬಿದ್ದು ಕಂಬಿ ಎಣಿಸುವ ಗತಿ ಬಂದಿದೆ. ಇದು ಊಹಾಪೋಹಾವಲ್ಲ, ಪೊಲೀಸರೇ ಹೇಳುತ್ತಿದ್ದಾರೆ.
ಇವರ ಗುಂಪು ಹನಿಟ್ರ್ಯಾಪ್ ಮಾಡಿ ಅಡ್ಡ ಮಾರ್ಗದ ಮೂಲಕ ಹಣ ಗಳಿಸುತ್ತಿದ್ದರು. ಇದೀಗ ಪ್ರತಿಷ್ಠಿತ ವೈದ್ಯ ಸೇರಿದಂತೆ ಸ್ಪಾಕ್ಕೂ ಹನಿಟ್ರ್ಯಾಪ್ ಮಾಡಿ ಹಣ ಕೇಳಿ ಈಗ ಪೊಲೀಸರ ಅತಿಥಿಯಾಗುವ ಪರಿಸ್ಥಿತಿ ಬಂದಿದೆ.
ಒಂದು ಪತ್ರಕರ್ತರಿಗೆ ಎಷ್ಟು ಸಂಬಳ ಬರುತ್ತದೆ ಎಂಬುವುದು ಆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಗೊತ್ತಿರುತ್ತದೆ. ಬಡ ಕುಟುಂಬದಿಂದ ಬಂದು ಆ ಖಾಸಗಿ ಚಾನಲ್ ಮೂಲಕ ಪತ್ರಕರ್ತೆ ಎಂದು ಗುರಿತಿಸಿರುವ ದಿವ್ಯಾ ವಸಂತ ಸಕತ್ ಸುದ್ದಿಯಾಗಿದ್ದು ರಾಜ್ಯಕ್ಕೆ ಖುಷಿ ನೀಡುವ ಸುದ್ದಿಯಿಂದ, ಜನರು ಟ್ರೋಲ್ ಮಾಡುತ್ತಿದ್ದಾಗ ಆ ಟ್ರೋಲ್ ಅನ್ನೇ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸಿದಾಕೆ.
ಮತ್ತೊಂದು ಖಾಸಗಿ ವಾಹಿನಿಯಲ್ಲಿ ಮನರಂಜನಾ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಬಂದಾಗ ತನಗಿದ್ದ ನೆಗೆಟಿವ್ ಇಮೇಜ್ ಹೋಗಲಾಡಿಸಿ ಅಲ್ಲಿ ಸಿಂಪತಿ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ ಒಳ್ಳೆಯ ಕಾರ್ಯ ಮಾಡುತ್ತಿದ್ದರೆ ರಾಜ್ಯಕ್ಕೆ ಬಿಸಿ ಬಿಸಿ ಸುದ್ದಿಯಾಗುವ ಪರಿಸ್ಥಿತಿ ಬರ್ತಾ ಇರಲಿಲ್ಲ. ನಾಯಿ ಬಾಲ ಡೊಂಕೇ ಎಂಬ ಮಾತು ಇವರನ್ನು ನೋಡಿ ಹೇಳಿರಬೇಕು ಅಲ್ವಾ?



Click it and Unblock the Notifications