Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಜೂನ್ 17, ಶನಿ ಅಮವಾಸ್ಯೆಯಂದೇ ಕಾಕತಾಳೀಯವಾಗಿ 3 ಘಟನೆ ಸಂಭವಿಸಲಿದೆ: ಇದರ ಪ್ರಭಾವ ಹೇಗಿರಲಿದೆ ಗೊತ್ತಾ?
ಶನಿವಾರ ಅಮವಾಸ್ಯೆ ಬಂದಿದೆ. ಈ ರೀತಿ ಶನಿವಾರ ಅಮವಾಸ್ಯೆ ಬಂದರೆ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು. ವೈದಿಕ ದೃಷ್ಟಿಯಿಂದ ಶನಿ ಅಮವಾಸ್ಯೆ ತುಂಬಾನೇ ಮಹತ್ವವಾದ ದಿನವಾಗಿದೆ. ಶನಿವಾರ ಶನಿದೇವನ ಪೂಜೆಗೆ ಮೀಸಲಾದ ದಿನ, ಆ ದಿನ ಅಮವಾಸ್ಯೆ ಬಂದರೆ ಶನಿ ದೇವನ ಪೂಜೆಗೆ ಮತ್ತಷ್ಟು ಶ್ರೇಷ್ಠವಾದ ದಿನವೆಂದು ಪರಿಗಣಿಸಲಾಗಿದೆ. ಅದರಲ್ಲೂ ಈ ಬಾರಿಯ ಅಮವಾಸ್ಯೆ ಹಲವು ವಿಶೇಷತೆಗಳಿಂದ ಕೂಡಿದ್ದು ಕಾಕತಾಳೀಯವಾಗಿ ಹಲವು ಪ್ರಮುಖ ಘಟನೆಗಳು ಒಂದೇ ದಿನ ಘಟಿಸಲಿದೆ. ಈ ಕಾರಣಕ್ಕೆ ಜೂನ್ 17ಕ್ಕೆ ತುಂಬಾನೇ ಪ್ರಮುಖವಾಗಿದೆ.

ಜೂನ್ 17ರ ಶನಿವಾರ ತುಂಬಾನೇ ಪ್ರಾಮುಖ್ಯಯಿಂದ ಕೂಡಿದೆ ಏಕೆ?
* ಶನಿ ಅಮವಾಸ್ಯೆಯಂದೇ ಶನಿದೇವ ಕುಂಭ ರಾಶಿಯಲ್ಲಿ ವಕ್ರೀಯವಾಗಿ ಚಲಿಸಲಿದೆ. 30 ವರ್ಷಗಳ ಬಳಿಕ ಶನಿಯು ವಕ್ರೀಯವಾಗಿ ಚಲಿಸಲಿದೆ.
* ಇದೇ ದಿನ ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗವು ರೂಪುಗೊಳ್ಳುತ್ತದೆ
* ಈ ದಿನ ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವೂ ರೂಪಗೊಳ್ಳಲಿದೆ.
ಕುಂಭ ರಾಶಿಯಲ್ಲಿ ಶನಿ ವಕ್ರೀಯ ಚಲನೆ: ವೈದಿಕ ದೃಷ್ಟಿಯಿಂದ ಶನಿಯ ವಕ್ರೀಯ ಚಲನೆಗೆ ತುಂಬಾನೇ ಮಹತ್ವವಿದೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಚಲಿಸಲಿದೆ. ನವೆಂಬರ್ 4ರವರೆಗೆ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಇರಲಿದ್ದು ನಂತರ ಮಾರ್ಗಿಯಾಗಲಿದೆ. ಈ ಅವಧಿಯಲ್ಲಿ ಶನಿಯು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ನಾಲ್ಕು ತಿಂಗಳು ಶನಿಯು ಹಿಮ್ಮುಖ ಚಲನೆಯಲ್ಲಿ ಇದ್ದಾಗ ದೇಶ ಹಾಗೂ ಪ್ರಪಂಚದ ಮೇಲೆ ಹಲವು ರೀತಿಯಲ್ಲಿ ಪ್ರಭಾವ ಬೀರಲಿದೆ. ಹವಾಮಾನದಲ್ಲಿ ತುಂಬಾನೇ ಬದಲಾವಣೆ ಆಗಲಿದೆ. ರಾಜಕೀಯ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳು ಕಂಡು ಬರಲಿದೆ.
ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗ: ಈ ದಿನ ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗ ಏರ್ಪಡುವುದರಿಂದ ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರು ಶನಿ ದೇವನಿಗೆ ಪರಿಹಾರ ಮಾಡುವುದರಿಂದ ಸಂಕಷ್ಟಗಳು ಕಡಿಮೆಯಾಗಲಿದೆ. ಅಲ್ಲದೆ ಈ ದಿನ ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವೂ ರೂಪಗೊಂಡಿರುವುದರಿಂದ ಈ ದಿನ ಪೂಜಾ ಕಾರ್ಯಗಳಿಗೆ ತುಂಬಾನೇ ಶುಭವಾಗಿದೆ. ಈ ದಿನದಲ್ಲಿ ಪೂಜೆ ಮಾಡುವುದರಿಂದ ಹೆಚ್ಚಿನ ಫಲ ಸಿಗಲಿದೆ.
ಪಿತೃದೋಷಕ್ಕೆ ಪರಿಹಾರ
ಈ ದಿನ ಪಿತೃದೋಷಕ್ಕೆ ಪರಿಹಾರ ಮಾಡಲು ಕೂಡ ಈ ದಿನ ತುಂಬಾನೇ ಶ್ರೇಷ್ಠವಾಗಿದೆ. ಈ ದಿನ ಪಿತೃಗಳನ್ನು ತೃಪ್ತಿ ಪಡಿಸುವುದರಿಂದ ಪಿತೃದೋಷದಿಂದ ಮುಕ್ತರಾಗಬಹುದು. ಈ ದಿನ ಬಡವರಿಗೆ ದಾನ ಮಾಡಿ. ಹಿರಿಯರನ್ನು ಗೌರವಿಸಿ.
ಈ ಪರಿಹಾರ ಮಾಡಿ
* ಶನಿ ಅಮಾವಾಸ್ಯೆಯ ದಿನದಂದು ಹನುಮಂತನಿಗೆ ತುಳಸಿ ಮಾಲೆಯನ್ನು ಅರ್ಪಿಸಬೇಕು. ಇದನ್ನು ಮಾಡುವುದರಿಂದ ಹನುಮಾನ್ನ ಕೃಪೆಗೆ ಪಾತ್ರರಾಗುವಿರಿ, ಇದರಿಂದ ಶನಿಯ ಅಶುಭ ಪರಿಣಾಮಗಳು ಕಡಿಮೆಯಾಗುವುದು.
* ಹನುಮಾನ್ ಚಾಲೀಸಾ ಪಠಿಸಿ.
* ಹನುಮಂತನಿಗೆ ಕುಂಕುಮವನ್ನು ಅರ್ಪಿಸಿ ಪೂಜೆ ಮಾಡಿ.
* ಈ ದಿನ ಕಪ್ಪು ಎಳ್ಳು ಹಾಗೂ ಉದ್ದು ದಾನ ಮಾಡಿ
* ಶನಿ ಮಂತ್ರಗಳನ್ನು ಪಠಿಸಿ.
ಶನಿಗೆ ಪರಿಹಾರ ಮಾಡುವುದರಿಂದ ಸಾಡೇಸಾತಿ ಮತ್ತು ಶನಿಧೈಯ್ಯ ಇರುವವರಿಗೆ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗಲಿದೆ.



Click it and Unblock the Notifications