Latest Updates
-
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಜೂನ್ 17, ಶನಿ ಅಮವಾಸ್ಯೆಯಂದೇ ಕಾಕತಾಳೀಯವಾಗಿ 3 ಘಟನೆ ಸಂಭವಿಸಲಿದೆ: ಇದರ ಪ್ರಭಾವ ಹೇಗಿರಲಿದೆ ಗೊತ್ತಾ?
ಶನಿವಾರ ಅಮವಾಸ್ಯೆ ಬಂದಿದೆ. ಈ ರೀತಿ ಶನಿವಾರ ಅಮವಾಸ್ಯೆ ಬಂದರೆ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು. ವೈದಿಕ ದೃಷ್ಟಿಯಿಂದ ಶನಿ ಅಮವಾಸ್ಯೆ ತುಂಬಾನೇ ಮಹತ್ವವಾದ ದಿನವಾಗಿದೆ. ಶನಿವಾರ ಶನಿದೇವನ ಪೂಜೆಗೆ ಮೀಸಲಾದ ದಿನ, ಆ ದಿನ ಅಮವಾಸ್ಯೆ ಬಂದರೆ ಶನಿ ದೇವನ ಪೂಜೆಗೆ ಮತ್ತಷ್ಟು ಶ್ರೇಷ್ಠವಾದ ದಿನವೆಂದು ಪರಿಗಣಿಸಲಾಗಿದೆ. ಅದರಲ್ಲೂ ಈ ಬಾರಿಯ ಅಮವಾಸ್ಯೆ ಹಲವು ವಿಶೇಷತೆಗಳಿಂದ ಕೂಡಿದ್ದು ಕಾಕತಾಳೀಯವಾಗಿ ಹಲವು ಪ್ರಮುಖ ಘಟನೆಗಳು ಒಂದೇ ದಿನ ಘಟಿಸಲಿದೆ. ಈ ಕಾರಣಕ್ಕೆ ಜೂನ್ 17ಕ್ಕೆ ತುಂಬಾನೇ ಪ್ರಮುಖವಾಗಿದೆ.

ಜೂನ್ 17ರ ಶನಿವಾರ ತುಂಬಾನೇ ಪ್ರಾಮುಖ್ಯಯಿಂದ ಕೂಡಿದೆ ಏಕೆ?
* ಶನಿ ಅಮವಾಸ್ಯೆಯಂದೇ ಶನಿದೇವ ಕುಂಭ ರಾಶಿಯಲ್ಲಿ ವಕ್ರೀಯವಾಗಿ ಚಲಿಸಲಿದೆ. 30 ವರ್ಷಗಳ ಬಳಿಕ ಶನಿಯು ವಕ್ರೀಯವಾಗಿ ಚಲಿಸಲಿದೆ.
* ಇದೇ ದಿನ ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗವು ರೂಪುಗೊಳ್ಳುತ್ತದೆ
* ಈ ದಿನ ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವೂ ರೂಪಗೊಳ್ಳಲಿದೆ.
ಕುಂಭ ರಾಶಿಯಲ್ಲಿ ಶನಿ ವಕ್ರೀಯ ಚಲನೆ: ವೈದಿಕ ದೃಷ್ಟಿಯಿಂದ ಶನಿಯ ವಕ್ರೀಯ ಚಲನೆಗೆ ತುಂಬಾನೇ ಮಹತ್ವವಿದೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಚಲಿಸಲಿದೆ. ನವೆಂಬರ್ 4ರವರೆಗೆ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಇರಲಿದ್ದು ನಂತರ ಮಾರ್ಗಿಯಾಗಲಿದೆ. ಈ ಅವಧಿಯಲ್ಲಿ ಶನಿಯು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ನಾಲ್ಕು ತಿಂಗಳು ಶನಿಯು ಹಿಮ್ಮುಖ ಚಲನೆಯಲ್ಲಿ ಇದ್ದಾಗ ದೇಶ ಹಾಗೂ ಪ್ರಪಂಚದ ಮೇಲೆ ಹಲವು ರೀತಿಯಲ್ಲಿ ಪ್ರಭಾವ ಬೀರಲಿದೆ. ಹವಾಮಾನದಲ್ಲಿ ತುಂಬಾನೇ ಬದಲಾವಣೆ ಆಗಲಿದೆ. ರಾಜಕೀಯ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳು ಕಂಡು ಬರಲಿದೆ.
ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗ: ಈ ದಿನ ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗ ಏರ್ಪಡುವುದರಿಂದ ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರು ಶನಿ ದೇವನಿಗೆ ಪರಿಹಾರ ಮಾಡುವುದರಿಂದ ಸಂಕಷ್ಟಗಳು ಕಡಿಮೆಯಾಗಲಿದೆ. ಅಲ್ಲದೆ ಈ ದಿನ ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವೂ ರೂಪಗೊಂಡಿರುವುದರಿಂದ ಈ ದಿನ ಪೂಜಾ ಕಾರ್ಯಗಳಿಗೆ ತುಂಬಾನೇ ಶುಭವಾಗಿದೆ. ಈ ದಿನದಲ್ಲಿ ಪೂಜೆ ಮಾಡುವುದರಿಂದ ಹೆಚ್ಚಿನ ಫಲ ಸಿಗಲಿದೆ.
ಪಿತೃದೋಷಕ್ಕೆ ಪರಿಹಾರ
ಈ ದಿನ ಪಿತೃದೋಷಕ್ಕೆ ಪರಿಹಾರ ಮಾಡಲು ಕೂಡ ಈ ದಿನ ತುಂಬಾನೇ ಶ್ರೇಷ್ಠವಾಗಿದೆ. ಈ ದಿನ ಪಿತೃಗಳನ್ನು ತೃಪ್ತಿ ಪಡಿಸುವುದರಿಂದ ಪಿತೃದೋಷದಿಂದ ಮುಕ್ತರಾಗಬಹುದು. ಈ ದಿನ ಬಡವರಿಗೆ ದಾನ ಮಾಡಿ. ಹಿರಿಯರನ್ನು ಗೌರವಿಸಿ.
ಈ ಪರಿಹಾರ ಮಾಡಿ
* ಶನಿ ಅಮಾವಾಸ್ಯೆಯ ದಿನದಂದು ಹನುಮಂತನಿಗೆ ತುಳಸಿ ಮಾಲೆಯನ್ನು ಅರ್ಪಿಸಬೇಕು. ಇದನ್ನು ಮಾಡುವುದರಿಂದ ಹನುಮಾನ್ನ ಕೃಪೆಗೆ ಪಾತ್ರರಾಗುವಿರಿ, ಇದರಿಂದ ಶನಿಯ ಅಶುಭ ಪರಿಣಾಮಗಳು ಕಡಿಮೆಯಾಗುವುದು.
* ಹನುಮಾನ್ ಚಾಲೀಸಾ ಪಠಿಸಿ.
* ಹನುಮಂತನಿಗೆ ಕುಂಕುಮವನ್ನು ಅರ್ಪಿಸಿ ಪೂಜೆ ಮಾಡಿ.
* ಈ ದಿನ ಕಪ್ಪು ಎಳ್ಳು ಹಾಗೂ ಉದ್ದು ದಾನ ಮಾಡಿ
* ಶನಿ ಮಂತ್ರಗಳನ್ನು ಪಠಿಸಿ.
ಶನಿಗೆ ಪರಿಹಾರ ಮಾಡುವುದರಿಂದ ಸಾಡೇಸಾತಿ ಮತ್ತು ಶನಿಧೈಯ್ಯ ಇರುವವರಿಗೆ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗಲಿದೆ.



Click it and Unblock the Notifications