Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಜೂನ್ 17, ಶನಿ ಅಮವಾಸ್ಯೆಯಂದೇ ಕಾಕತಾಳೀಯವಾಗಿ 3 ಘಟನೆ ಸಂಭವಿಸಲಿದೆ: ಇದರ ಪ್ರಭಾವ ಹೇಗಿರಲಿದೆ ಗೊತ್ತಾ?
ಶನಿವಾರ ಅಮವಾಸ್ಯೆ ಬಂದಿದೆ. ಈ ರೀತಿ ಶನಿವಾರ ಅಮವಾಸ್ಯೆ ಬಂದರೆ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು. ವೈದಿಕ ದೃಷ್ಟಿಯಿಂದ ಶನಿ ಅಮವಾಸ್ಯೆ ತುಂಬಾನೇ ಮಹತ್ವವಾದ ದಿನವಾಗಿದೆ. ಶನಿವಾರ ಶನಿದೇವನ ಪೂಜೆಗೆ ಮೀಸಲಾದ ದಿನ, ಆ ದಿನ ಅಮವಾಸ್ಯೆ ಬಂದರೆ ಶನಿ ದೇವನ ಪೂಜೆಗೆ ಮತ್ತಷ್ಟು ಶ್ರೇಷ್ಠವಾದ ದಿನವೆಂದು ಪರಿಗಣಿಸಲಾಗಿದೆ. ಅದರಲ್ಲೂ ಈ ಬಾರಿಯ ಅಮವಾಸ್ಯೆ ಹಲವು ವಿಶೇಷತೆಗಳಿಂದ ಕೂಡಿದ್ದು ಕಾಕತಾಳೀಯವಾಗಿ ಹಲವು ಪ್ರಮುಖ ಘಟನೆಗಳು ಒಂದೇ ದಿನ ಘಟಿಸಲಿದೆ. ಈ ಕಾರಣಕ್ಕೆ ಜೂನ್ 17ಕ್ಕೆ ತುಂಬಾನೇ ಪ್ರಮುಖವಾಗಿದೆ.

ಜೂನ್ 17ರ ಶನಿವಾರ ತುಂಬಾನೇ ಪ್ರಾಮುಖ್ಯಯಿಂದ ಕೂಡಿದೆ ಏಕೆ?
* ಶನಿ ಅಮವಾಸ್ಯೆಯಂದೇ ಶನಿದೇವ ಕುಂಭ ರಾಶಿಯಲ್ಲಿ ವಕ್ರೀಯವಾಗಿ ಚಲಿಸಲಿದೆ. 30 ವರ್ಷಗಳ ಬಳಿಕ ಶನಿಯು ವಕ್ರೀಯವಾಗಿ ಚಲಿಸಲಿದೆ.
* ಇದೇ ದಿನ ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗವು ರೂಪುಗೊಳ್ಳುತ್ತದೆ
* ಈ ದಿನ ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವೂ ರೂಪಗೊಳ್ಳಲಿದೆ.
ಕುಂಭ ರಾಶಿಯಲ್ಲಿ ಶನಿ ವಕ್ರೀಯ ಚಲನೆ: ವೈದಿಕ ದೃಷ್ಟಿಯಿಂದ ಶನಿಯ ವಕ್ರೀಯ ಚಲನೆಗೆ ತುಂಬಾನೇ ಮಹತ್ವವಿದೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಚಲಿಸಲಿದೆ. ನವೆಂಬರ್ 4ರವರೆಗೆ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಇರಲಿದ್ದು ನಂತರ ಮಾರ್ಗಿಯಾಗಲಿದೆ. ಈ ಅವಧಿಯಲ್ಲಿ ಶನಿಯು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ನಾಲ್ಕು ತಿಂಗಳು ಶನಿಯು ಹಿಮ್ಮುಖ ಚಲನೆಯಲ್ಲಿ ಇದ್ದಾಗ ದೇಶ ಹಾಗೂ ಪ್ರಪಂಚದ ಮೇಲೆ ಹಲವು ರೀತಿಯಲ್ಲಿ ಪ್ರಭಾವ ಬೀರಲಿದೆ. ಹವಾಮಾನದಲ್ಲಿ ತುಂಬಾನೇ ಬದಲಾವಣೆ ಆಗಲಿದೆ. ರಾಜಕೀಯ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳು ಕಂಡು ಬರಲಿದೆ.
ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗ: ಈ ದಿನ ತ್ರಿಕೋನ ರಾಜಯೋಗ ಮತ್ತು ಶಶರಾಜಯೋಗ ಏರ್ಪಡುವುದರಿಂದ ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರು ಶನಿ ದೇವನಿಗೆ ಪರಿಹಾರ ಮಾಡುವುದರಿಂದ ಸಂಕಷ್ಟಗಳು ಕಡಿಮೆಯಾಗಲಿದೆ. ಅಲ್ಲದೆ ಈ ದಿನ ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವೂ ರೂಪಗೊಂಡಿರುವುದರಿಂದ ಈ ದಿನ ಪೂಜಾ ಕಾರ್ಯಗಳಿಗೆ ತುಂಬಾನೇ ಶುಭವಾಗಿದೆ. ಈ ದಿನದಲ್ಲಿ ಪೂಜೆ ಮಾಡುವುದರಿಂದ ಹೆಚ್ಚಿನ ಫಲ ಸಿಗಲಿದೆ.
ಪಿತೃದೋಷಕ್ಕೆ ಪರಿಹಾರ
ಈ ದಿನ ಪಿತೃದೋಷಕ್ಕೆ ಪರಿಹಾರ ಮಾಡಲು ಕೂಡ ಈ ದಿನ ತುಂಬಾನೇ ಶ್ರೇಷ್ಠವಾಗಿದೆ. ಈ ದಿನ ಪಿತೃಗಳನ್ನು ತೃಪ್ತಿ ಪಡಿಸುವುದರಿಂದ ಪಿತೃದೋಷದಿಂದ ಮುಕ್ತರಾಗಬಹುದು. ಈ ದಿನ ಬಡವರಿಗೆ ದಾನ ಮಾಡಿ. ಹಿರಿಯರನ್ನು ಗೌರವಿಸಿ.
ಈ ಪರಿಹಾರ ಮಾಡಿ
* ಶನಿ ಅಮಾವಾಸ್ಯೆಯ ದಿನದಂದು ಹನುಮಂತನಿಗೆ ತುಳಸಿ ಮಾಲೆಯನ್ನು ಅರ್ಪಿಸಬೇಕು. ಇದನ್ನು ಮಾಡುವುದರಿಂದ ಹನುಮಾನ್ನ ಕೃಪೆಗೆ ಪಾತ್ರರಾಗುವಿರಿ, ಇದರಿಂದ ಶನಿಯ ಅಶುಭ ಪರಿಣಾಮಗಳು ಕಡಿಮೆಯಾಗುವುದು.
* ಹನುಮಾನ್ ಚಾಲೀಸಾ ಪಠಿಸಿ.
* ಹನುಮಂತನಿಗೆ ಕುಂಕುಮವನ್ನು ಅರ್ಪಿಸಿ ಪೂಜೆ ಮಾಡಿ.
* ಈ ದಿನ ಕಪ್ಪು ಎಳ್ಳು ಹಾಗೂ ಉದ್ದು ದಾನ ಮಾಡಿ
* ಶನಿ ಮಂತ್ರಗಳನ್ನು ಪಠಿಸಿ.
ಶನಿಗೆ ಪರಿಹಾರ ಮಾಡುವುದರಿಂದ ಸಾಡೇಸಾತಿ ಮತ್ತು ಶನಿಧೈಯ್ಯ ಇರುವವರಿಗೆ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗಲಿದೆ.



Click it and Unblock the Notifications