Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಹೆತ್ತ ತಾಯಿಗೆ ಅನ್ನ, ನೀರು ನೀಡದೆ ಕೂಡಿ ಹಾಕಿ ಕುಂಭಮೇಳಕ್ಕೆ ಪತ್ನಿ, ಮಕ್ಕಳು, ಅತ್ತೆ-ಮಾವ ಜೊತೆ ಹೋದ ಪಾಪಿ ಮಗ!
ಮಾಡಿರುವುದೆಲ್ಲಾ ಮಹಾಪಾಪದ ಕೆಲಸ, ನಂತರ ಕುಂಭಮೇಳಕ್ಕೆ ಹೋಗಿ ಪುಣ್ಯ ಕಟ್ಟಿಕೊಳ್ಳಲು ಬಯಸಿದ ಪಾಪಿ ಮಗನ ಕತೆಯಿದು. ಇಂಥ ಮಕ್ಕಳು ಇದ್ದಾರಾ? ಅಂತ ಕೆಲವರು ಕೇಳಬಹುದು, ಆದರೆ ಇಂಥ ಅನೇಕ ಮಕ್ಕಳಿದ್ದಾರೆ, ಇಂಥವರಿಗೆ ತಕ್ಕ ಶಿಕ್ಷೆಯಾದರೆ ಮಾತ್ರ ತಂದೆ-ತಾಯಿಗಳಿಗೆ ಹಿಂಸೆ ಕೊಡುವುದನ್ನು ಕಡಿಮೆ ಮಾಡಬಹುದು.

ಈ ಘಟನೆ ನಡೆದಿರುವುದು ಜಾರ್ಖಂಡ್ನಲ್ಲಿ, ಆತ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಿ ಗಂಗೆಯಲ್ಲಿ ಮಿಂದು ಪುಣ್ಯ ಕಟ್ಟಿಕೊಳ್ಳಲು ಬಯಸುತ್ತಾನೆ, ಇಂಥವರು ಆ ಗಂಗೆಯಲ್ಲಿ ಮುಳುಗಿದರೆ ಗಂಗೆಯೂ ಮಲೀನವಾಗುತ್ತಾಳೆ ಅಂಥ ಪಾಪಿಗಳು, ಏಕೆಂದರೆ ಈತ ತಾನು ಕುಂಭಮೇಳಕ್ಕೆ ಹೋಗಲು ತನ್ನ 65 ವರ್ಷದ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ಅನ್ನ, ನೀರು ಸಿಗದೆ ಆ ತಾಯಿ ನರಳುವಂತೆ ಮಾಡಿದ್ದಾನೆ.
ಮಗ ತನ್ನ ತಾಯಿಯನ್ನು ಮಾತ್ರ ಮನೆಯಯೊಳಗೆ ಕೂಡಿ ಹಾಕಿ ಪತ್ನಿ, ಮಕ್ಕಳು ಹಾಗೂ ಪತ್ನಿಯ ಪೋಷಕರ ಜೊತೆಗೆ ಪ್ರಯಾಗ್ರಾಜ್ಗೆ ಹೋಗಿದ್ದಾನೆ. ಮನೆಯಲ್ಲಿರುವ ತಾಯಿಗೆ ಒಂದು ಊಟದ ವ್ಯವಸ್ಥೆಯನ್ನೂ ಮಾಡಿರಲಿಲ್ಲ, ಆ ತಾಯಿಗೆ ಒಂದೆರಡು ದಿನ ಉಳಿದ ಹಳಸಿದ ಅನ್ನ ತಿಂದಿದ್ದಾಳೆ ನಂತರ ಹಸಿವು ತಡೆಯಲಾರದೆ ಜೋರಾಗಿ ಕಿರುಚುತ್ತಾಳೆ, ಆ ಶಬ್ದ ಕೇಳಿಸಿದ ನೆರೆಹೊರೆಯವರು ಬಂದು ವಿಚಾರಣೆ ಮಾಡಿದಾಗ ತಾಯಿ ಆಹಾರವಿಲ್ಲದೆ ಕಷ್ಟಪಡುತ್ತಿರುವುದು ತಿಳಿಯುತ್ತದೆ.
ನಂತರ ಆ ತಾಯಿಯ ಮಗಳಿಗೆ ವಿಷಯ ತಿಳಿಸಲಾಗುವುದು, ಪೊಲೀಸರ ಸಮೇತ ಬಂದ ಆಕೆ ತಾಯಿಯನ್ನು ರಕ್ಷಣೆ ಮಾಡ್ತಾಳೆ. ಕೂಡಲೇ ತಾಯಿಗೆ ಆಹಾರ, ಔಷಧ ನೀಡಿ ನಂತರ ಸಮೀಪದ ಆಸ್ಪತ್ರೆಗೆ ಚಿಕಿತ್ಸೆ ಕರೆದೊಯ್ಯಲಾಯ್ತು.
ಈ ಘಟನೆ ಬಗ್ಗೆ ಮಗನಿಗೆ ಹೇಳಿದಾಗ CCL(Central Coalfields Limited) ಉದ್ಯೋಗಿಯಾಗಿರುವ ಆತ, ಇಲ್ಲ ನಾನು ತಾಯಿಗೆ ಆಹಾರ ವ್ಯವಸ್ಥೆ ಮಾಡಿದ್ದೆ, ಆದರೆ ತಾಯಿ ಆ ಆಹಾರ ಮುಟ್ಟಿಲ್ಲ ಎಂಬುವುದಾಗಿ ಹೇಳುತ್ತಾನೆ. ಮಗ ದೊಡ್ಡ ಹುದ್ದೆಯಲ್ಲಿದ್ದರೂ ತನ್ನ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಇರುವ ವಿಷಯ ವೈರಲ್ ಆಗಿದ್ದು ಇದರಿಂದಾಗಿ ಆತ ತೀವ್ರ ಮುಜುಗರ ಪಡುವಂತಾಗಿದೆ, ಆತನಿಗೆ ಅದು ಆಗಬೇಕಾಗಿದಿದ್ದೇ....
ತಾಯಿಯನ್ನು ಜೊತೆಗೆ ಕರೆದೊಯ್ಯಲು ಸಾಧ್ಯವಾಗದೆ ಇದ್ದರೆ ಅವರಿದ್ದ ಸ್ಥಳದಿಂದ 5 ಕಿ.ಮೀ ದೂರದಲ್ಲಿರುವ ತಂಗಿಯ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ನಂತರ ಕುಂಭಮೇಳಕ್ಕೆ ಹೋಗಬಹುದಿತ್ತು, ಸಂಬಂಧಗಳು ಅಷ್ಟಾಗಿ ಸರಿಯಿರಲ್ಲ ಕಾಣುತ್ತೆ, ಅದೇನೆ ಇರಲಿ ಆರೋಗ್ಯ ಸರಿಯಿಲ್ಲದ ತಾಯಿಯನ್ನು ಇಷ್ಟೊಂದು ಬೇಜಾವ್ದಾರಿಯಿಂದ ಬಿಟ್ಟು ಹೋಗಿದ್ದಾನೆ, ಅವರು ಹೇಗೆ ಇರ್ತಾರೆ ಎಂಬ ಚಿಕ್ಕ ಕಲ್ಪನೆಯೂ ಆತನಿಗೆ ಬರಲಿಲ್ಲ ಕಾಣುತ್ತೆ.
ಹೆತ್ತ ತಂದೆ-ತಾಯಿಗೆ ಕಷ್ಟಕೊಟ್ಟು ಯಾವ ದೇವಾಲಯದಲ್ಲಿ ಹೋಗಿ ಕೈ ಮುಗಿದರೂ ಪುಣ್ಯ ದೊರೆಯಲ್ಲ, ಇದನ್ನು ಪ್ರತಿಯೊಬ್ಬ ಮಕ್ಕಳು ಅರೆತುಕೊಂಡರೆ ಈ ಸಮಾಜದಲ್ಲಿ ವೃದ್ಧಾಶ್ರಮ ಅವಶ್ಯಕತೆ ಬರುವುದೇ ಇಲ್ಲ ಅಲ್ವಾ?



Click it and Unblock the Notifications