Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಹೆತ್ತ ತಾಯಿಗೆ ಅನ್ನ, ನೀರು ನೀಡದೆ ಕೂಡಿ ಹಾಕಿ ಕುಂಭಮೇಳಕ್ಕೆ ಪತ್ನಿ, ಮಕ್ಕಳು, ಅತ್ತೆ-ಮಾವ ಜೊತೆ ಹೋದ ಪಾಪಿ ಮಗ!
ಮಾಡಿರುವುದೆಲ್ಲಾ ಮಹಾಪಾಪದ ಕೆಲಸ, ನಂತರ ಕುಂಭಮೇಳಕ್ಕೆ ಹೋಗಿ ಪುಣ್ಯ ಕಟ್ಟಿಕೊಳ್ಳಲು ಬಯಸಿದ ಪಾಪಿ ಮಗನ ಕತೆಯಿದು. ಇಂಥ ಮಕ್ಕಳು ಇದ್ದಾರಾ? ಅಂತ ಕೆಲವರು ಕೇಳಬಹುದು, ಆದರೆ ಇಂಥ ಅನೇಕ ಮಕ್ಕಳಿದ್ದಾರೆ, ಇಂಥವರಿಗೆ ತಕ್ಕ ಶಿಕ್ಷೆಯಾದರೆ ಮಾತ್ರ ತಂದೆ-ತಾಯಿಗಳಿಗೆ ಹಿಂಸೆ ಕೊಡುವುದನ್ನು ಕಡಿಮೆ ಮಾಡಬಹುದು.

ಈ ಘಟನೆ ನಡೆದಿರುವುದು ಜಾರ್ಖಂಡ್ನಲ್ಲಿ, ಆತ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಿ ಗಂಗೆಯಲ್ಲಿ ಮಿಂದು ಪುಣ್ಯ ಕಟ್ಟಿಕೊಳ್ಳಲು ಬಯಸುತ್ತಾನೆ, ಇಂಥವರು ಆ ಗಂಗೆಯಲ್ಲಿ ಮುಳುಗಿದರೆ ಗಂಗೆಯೂ ಮಲೀನವಾಗುತ್ತಾಳೆ ಅಂಥ ಪಾಪಿಗಳು, ಏಕೆಂದರೆ ಈತ ತಾನು ಕುಂಭಮೇಳಕ್ಕೆ ಹೋಗಲು ತನ್ನ 65 ವರ್ಷದ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ಅನ್ನ, ನೀರು ಸಿಗದೆ ಆ ತಾಯಿ ನರಳುವಂತೆ ಮಾಡಿದ್ದಾನೆ.
ಮಗ ತನ್ನ ತಾಯಿಯನ್ನು ಮಾತ್ರ ಮನೆಯಯೊಳಗೆ ಕೂಡಿ ಹಾಕಿ ಪತ್ನಿ, ಮಕ್ಕಳು ಹಾಗೂ ಪತ್ನಿಯ ಪೋಷಕರ ಜೊತೆಗೆ ಪ್ರಯಾಗ್ರಾಜ್ಗೆ ಹೋಗಿದ್ದಾನೆ. ಮನೆಯಲ್ಲಿರುವ ತಾಯಿಗೆ ಒಂದು ಊಟದ ವ್ಯವಸ್ಥೆಯನ್ನೂ ಮಾಡಿರಲಿಲ್ಲ, ಆ ತಾಯಿಗೆ ಒಂದೆರಡು ದಿನ ಉಳಿದ ಹಳಸಿದ ಅನ್ನ ತಿಂದಿದ್ದಾಳೆ ನಂತರ ಹಸಿವು ತಡೆಯಲಾರದೆ ಜೋರಾಗಿ ಕಿರುಚುತ್ತಾಳೆ, ಆ ಶಬ್ದ ಕೇಳಿಸಿದ ನೆರೆಹೊರೆಯವರು ಬಂದು ವಿಚಾರಣೆ ಮಾಡಿದಾಗ ತಾಯಿ ಆಹಾರವಿಲ್ಲದೆ ಕಷ್ಟಪಡುತ್ತಿರುವುದು ತಿಳಿಯುತ್ತದೆ.
ನಂತರ ಆ ತಾಯಿಯ ಮಗಳಿಗೆ ವಿಷಯ ತಿಳಿಸಲಾಗುವುದು, ಪೊಲೀಸರ ಸಮೇತ ಬಂದ ಆಕೆ ತಾಯಿಯನ್ನು ರಕ್ಷಣೆ ಮಾಡ್ತಾಳೆ. ಕೂಡಲೇ ತಾಯಿಗೆ ಆಹಾರ, ಔಷಧ ನೀಡಿ ನಂತರ ಸಮೀಪದ ಆಸ್ಪತ್ರೆಗೆ ಚಿಕಿತ್ಸೆ ಕರೆದೊಯ್ಯಲಾಯ್ತು.
ಈ ಘಟನೆ ಬಗ್ಗೆ ಮಗನಿಗೆ ಹೇಳಿದಾಗ CCL(Central Coalfields Limited) ಉದ್ಯೋಗಿಯಾಗಿರುವ ಆತ, ಇಲ್ಲ ನಾನು ತಾಯಿಗೆ ಆಹಾರ ವ್ಯವಸ್ಥೆ ಮಾಡಿದ್ದೆ, ಆದರೆ ತಾಯಿ ಆ ಆಹಾರ ಮುಟ್ಟಿಲ್ಲ ಎಂಬುವುದಾಗಿ ಹೇಳುತ್ತಾನೆ. ಮಗ ದೊಡ್ಡ ಹುದ್ದೆಯಲ್ಲಿದ್ದರೂ ತನ್ನ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಇರುವ ವಿಷಯ ವೈರಲ್ ಆಗಿದ್ದು ಇದರಿಂದಾಗಿ ಆತ ತೀವ್ರ ಮುಜುಗರ ಪಡುವಂತಾಗಿದೆ, ಆತನಿಗೆ ಅದು ಆಗಬೇಕಾಗಿದಿದ್ದೇ....
ತಾಯಿಯನ್ನು ಜೊತೆಗೆ ಕರೆದೊಯ್ಯಲು ಸಾಧ್ಯವಾಗದೆ ಇದ್ದರೆ ಅವರಿದ್ದ ಸ್ಥಳದಿಂದ 5 ಕಿ.ಮೀ ದೂರದಲ್ಲಿರುವ ತಂಗಿಯ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ನಂತರ ಕುಂಭಮೇಳಕ್ಕೆ ಹೋಗಬಹುದಿತ್ತು, ಸಂಬಂಧಗಳು ಅಷ್ಟಾಗಿ ಸರಿಯಿರಲ್ಲ ಕಾಣುತ್ತೆ, ಅದೇನೆ ಇರಲಿ ಆರೋಗ್ಯ ಸರಿಯಿಲ್ಲದ ತಾಯಿಯನ್ನು ಇಷ್ಟೊಂದು ಬೇಜಾವ್ದಾರಿಯಿಂದ ಬಿಟ್ಟು ಹೋಗಿದ್ದಾನೆ, ಅವರು ಹೇಗೆ ಇರ್ತಾರೆ ಎಂಬ ಚಿಕ್ಕ ಕಲ್ಪನೆಯೂ ಆತನಿಗೆ ಬರಲಿಲ್ಲ ಕಾಣುತ್ತೆ.
ಹೆತ್ತ ತಂದೆ-ತಾಯಿಗೆ ಕಷ್ಟಕೊಟ್ಟು ಯಾವ ದೇವಾಲಯದಲ್ಲಿ ಹೋಗಿ ಕೈ ಮುಗಿದರೂ ಪುಣ್ಯ ದೊರೆಯಲ್ಲ, ಇದನ್ನು ಪ್ರತಿಯೊಬ್ಬ ಮಕ್ಕಳು ಅರೆತುಕೊಂಡರೆ ಈ ಸಮಾಜದಲ್ಲಿ ವೃದ್ಧಾಶ್ರಮ ಅವಶ್ಯಕತೆ ಬರುವುದೇ ಇಲ್ಲ ಅಲ್ವಾ?



Click it and Unblock the Notifications











