Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಹೆತ್ತ ತಾಯಿಗೆ ಅನ್ನ, ನೀರು ನೀಡದೆ ಕೂಡಿ ಹಾಕಿ ಕುಂಭಮೇಳಕ್ಕೆ ಪತ್ನಿ, ಮಕ್ಕಳು, ಅತ್ತೆ-ಮಾವ ಜೊತೆ ಹೋದ ಪಾಪಿ ಮಗ!
ಮಾಡಿರುವುದೆಲ್ಲಾ ಮಹಾಪಾಪದ ಕೆಲಸ, ನಂತರ ಕುಂಭಮೇಳಕ್ಕೆ ಹೋಗಿ ಪುಣ್ಯ ಕಟ್ಟಿಕೊಳ್ಳಲು ಬಯಸಿದ ಪಾಪಿ ಮಗನ ಕತೆಯಿದು. ಇಂಥ ಮಕ್ಕಳು ಇದ್ದಾರಾ? ಅಂತ ಕೆಲವರು ಕೇಳಬಹುದು, ಆದರೆ ಇಂಥ ಅನೇಕ ಮಕ್ಕಳಿದ್ದಾರೆ, ಇಂಥವರಿಗೆ ತಕ್ಕ ಶಿಕ್ಷೆಯಾದರೆ ಮಾತ್ರ ತಂದೆ-ತಾಯಿಗಳಿಗೆ ಹಿಂಸೆ ಕೊಡುವುದನ್ನು ಕಡಿಮೆ ಮಾಡಬಹುದು.

ಈ ಘಟನೆ ನಡೆದಿರುವುದು ಜಾರ್ಖಂಡ್ನಲ್ಲಿ, ಆತ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಿ ಗಂಗೆಯಲ್ಲಿ ಮಿಂದು ಪುಣ್ಯ ಕಟ್ಟಿಕೊಳ್ಳಲು ಬಯಸುತ್ತಾನೆ, ಇಂಥವರು ಆ ಗಂಗೆಯಲ್ಲಿ ಮುಳುಗಿದರೆ ಗಂಗೆಯೂ ಮಲೀನವಾಗುತ್ತಾಳೆ ಅಂಥ ಪಾಪಿಗಳು, ಏಕೆಂದರೆ ಈತ ತಾನು ಕುಂಭಮೇಳಕ್ಕೆ ಹೋಗಲು ತನ್ನ 65 ವರ್ಷದ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ಅನ್ನ, ನೀರು ಸಿಗದೆ ಆ ತಾಯಿ ನರಳುವಂತೆ ಮಾಡಿದ್ದಾನೆ.
ಮಗ ತನ್ನ ತಾಯಿಯನ್ನು ಮಾತ್ರ ಮನೆಯಯೊಳಗೆ ಕೂಡಿ ಹಾಕಿ ಪತ್ನಿ, ಮಕ್ಕಳು ಹಾಗೂ ಪತ್ನಿಯ ಪೋಷಕರ ಜೊತೆಗೆ ಪ್ರಯಾಗ್ರಾಜ್ಗೆ ಹೋಗಿದ್ದಾನೆ. ಮನೆಯಲ್ಲಿರುವ ತಾಯಿಗೆ ಒಂದು ಊಟದ ವ್ಯವಸ್ಥೆಯನ್ನೂ ಮಾಡಿರಲಿಲ್ಲ, ಆ ತಾಯಿಗೆ ಒಂದೆರಡು ದಿನ ಉಳಿದ ಹಳಸಿದ ಅನ್ನ ತಿಂದಿದ್ದಾಳೆ ನಂತರ ಹಸಿವು ತಡೆಯಲಾರದೆ ಜೋರಾಗಿ ಕಿರುಚುತ್ತಾಳೆ, ಆ ಶಬ್ದ ಕೇಳಿಸಿದ ನೆರೆಹೊರೆಯವರು ಬಂದು ವಿಚಾರಣೆ ಮಾಡಿದಾಗ ತಾಯಿ ಆಹಾರವಿಲ್ಲದೆ ಕಷ್ಟಪಡುತ್ತಿರುವುದು ತಿಳಿಯುತ್ತದೆ.
ನಂತರ ಆ ತಾಯಿಯ ಮಗಳಿಗೆ ವಿಷಯ ತಿಳಿಸಲಾಗುವುದು, ಪೊಲೀಸರ ಸಮೇತ ಬಂದ ಆಕೆ ತಾಯಿಯನ್ನು ರಕ್ಷಣೆ ಮಾಡ್ತಾಳೆ. ಕೂಡಲೇ ತಾಯಿಗೆ ಆಹಾರ, ಔಷಧ ನೀಡಿ ನಂತರ ಸಮೀಪದ ಆಸ್ಪತ್ರೆಗೆ ಚಿಕಿತ್ಸೆ ಕರೆದೊಯ್ಯಲಾಯ್ತು.
ಈ ಘಟನೆ ಬಗ್ಗೆ ಮಗನಿಗೆ ಹೇಳಿದಾಗ CCL(Central Coalfields Limited) ಉದ್ಯೋಗಿಯಾಗಿರುವ ಆತ, ಇಲ್ಲ ನಾನು ತಾಯಿಗೆ ಆಹಾರ ವ್ಯವಸ್ಥೆ ಮಾಡಿದ್ದೆ, ಆದರೆ ತಾಯಿ ಆ ಆಹಾರ ಮುಟ್ಟಿಲ್ಲ ಎಂಬುವುದಾಗಿ ಹೇಳುತ್ತಾನೆ. ಮಗ ದೊಡ್ಡ ಹುದ್ದೆಯಲ್ಲಿದ್ದರೂ ತನ್ನ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಇರುವ ವಿಷಯ ವೈರಲ್ ಆಗಿದ್ದು ಇದರಿಂದಾಗಿ ಆತ ತೀವ್ರ ಮುಜುಗರ ಪಡುವಂತಾಗಿದೆ, ಆತನಿಗೆ ಅದು ಆಗಬೇಕಾಗಿದಿದ್ದೇ....
ತಾಯಿಯನ್ನು ಜೊತೆಗೆ ಕರೆದೊಯ್ಯಲು ಸಾಧ್ಯವಾಗದೆ ಇದ್ದರೆ ಅವರಿದ್ದ ಸ್ಥಳದಿಂದ 5 ಕಿ.ಮೀ ದೂರದಲ್ಲಿರುವ ತಂಗಿಯ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ನಂತರ ಕುಂಭಮೇಳಕ್ಕೆ ಹೋಗಬಹುದಿತ್ತು, ಸಂಬಂಧಗಳು ಅಷ್ಟಾಗಿ ಸರಿಯಿರಲ್ಲ ಕಾಣುತ್ತೆ, ಅದೇನೆ ಇರಲಿ ಆರೋಗ್ಯ ಸರಿಯಿಲ್ಲದ ತಾಯಿಯನ್ನು ಇಷ್ಟೊಂದು ಬೇಜಾವ್ದಾರಿಯಿಂದ ಬಿಟ್ಟು ಹೋಗಿದ್ದಾನೆ, ಅವರು ಹೇಗೆ ಇರ್ತಾರೆ ಎಂಬ ಚಿಕ್ಕ ಕಲ್ಪನೆಯೂ ಆತನಿಗೆ ಬರಲಿಲ್ಲ ಕಾಣುತ್ತೆ.
ಹೆತ್ತ ತಂದೆ-ತಾಯಿಗೆ ಕಷ್ಟಕೊಟ್ಟು ಯಾವ ದೇವಾಲಯದಲ್ಲಿ ಹೋಗಿ ಕೈ ಮುಗಿದರೂ ಪುಣ್ಯ ದೊರೆಯಲ್ಲ, ಇದನ್ನು ಪ್ರತಿಯೊಬ್ಬ ಮಕ್ಕಳು ಅರೆತುಕೊಂಡರೆ ಈ ಸಮಾಜದಲ್ಲಿ ವೃದ್ಧಾಶ್ರಮ ಅವಶ್ಯಕತೆ ಬರುವುದೇ ಇಲ್ಲ ಅಲ್ವಾ?



Click it and Unblock the Notifications