Latest Updates
-
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ
ಫೆಬ್ರವರಿ 8ಕ್ಕೆ ಜಯ ಏಕಾದಶಿ: ಸವಾಲು, ಸಮಸ್ಯೆಗಳನ್ನು ದೂರ ಮಾಡಲು ಈ ಏಕಾದಶಿ ಹೇಗೆ ಆಚರಿಸಬೇಕು, ಪೂಜಾ ವಿಧಿಗಳೇನು?
ಏಕಾದಶಿ ಶ್ರೀ ವಿಷ್ಣುವಿನ ಪೂಜೆಗೆ ಇರುವ ವಿಶೇಷವಾದ ದಿನ. ವರ್ಷದಲ್ಲಿ 24 ಏಕಾದಶಿ ಬರುತ್ತದೆ, ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಫೆಬ್ರವರಿಯಲ್ಲಿ ಜಯ ಏಕಾದಶಿ ಇದೆ, ಈ ಏಕಾದಶಿಯ ಮಹತ್ವವೇನು, ಇದರ ಮಹತ್ವವೇನು ಎಂದು ನೋಡೋಣ ಬನ್ನಿ:

ಜಯ ಏಕಾದಶಿ ತಿಥಿ
ಜಯ ಏಕಾದಶಿ ತಿಥಿ ಬೆಳಗ್ಗೆ 08:48ರಿಂದ ರಾತ್ರಿ 08:15ರವರೆಗೆ ಇರಲಿದೆ
ಜಯ ಏಕಾದಶಿ ಪೂಜಾ ಸಮಯ
ಬ್ರಹ್ಮ ಮುಹೂರ್ತ: ಬೆಳಗ್ಗೆ 05:21ರಿಂದ ಬೆಳಗ್ಗೆ 06:13ರವರೆಗೆ
ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:13ರಿಂದ 12:57ರವರೆಗೆ
ವಿಜಯ್ ಮುಹೂರ್ತ: ಮಧ್ಯಾಹ್ನ 02:26ರಿಂದ 03:10ರವರೆಗೆ
ಅಮೃತ ಕಾಲ:ಬೆಳಗ್ಗೆ 09:31ರಿಂದ 11:05ರವರೆಗೆ
ರವಿಯೋಗ: ಬೆಳಗ್ಗೆ 07:05ರಿಂದ ಸಂಜೆ 06:07ರವರೆಗೆ
ಜಯ ಏಕಾದಶಿಯಂದು ಚೋಘಡಿಯ ಮುಹೂರ್ತ
ಶುಭ ಉತ್ತಮ: ಬೆಳಗ್ಗೆ 08:28ರಿಂದ 09:50ರವರೆಗೆ
ಪ್ರಯೋಜನಗಳು: ಮಧ್ಯಾಹ್ನ 01:58ರಿಂದ 03:21ರವರೆಗೆ
ಅಮೃತ ಮುಹೂರ್ತ ಮಧ್ಯಾಹ್ನ 03:21ರಿಂದ ಸಂಜೆ 04:44ರವರೆಗೆ
ಸಂಜೆ ಪೂಜೆಯ ಸಮಯ: ಸಂಜೆ 06:06ರವರೆಗೆ 07:43ರವರೆಗೆ
ಪಾರಣ ಸಮಯ: ಫೆಬ್ರವರಿ 09: ಬೆಳಗ್ಗೆ 07:04ರಿಂದ 09:17ರವರೆಗೆ
ಜಯ ಏಕಾದಶಿ
ಹಿಂದೂ ನಂಬಿಕೆಗಳ ಪ್ರಕಾರ ಜಯ ಏಕಾದಶಿ ಆಚರಣೆ ಮಾಡುವುದರಿಂದ ವ್ಯಕ್ತಿಯು ತನ್ನ ಪಾಪದಿಂದ ಮುಕ್ತಾನಾಗುತ್ತಾನೆ, ಮೋಕ್ಷವನ್ನು ಪಡೆಯುತ್ತಾನೆ ಅವನ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ ಎಂದು ಹೇಳಲಾಗುವುದು.
ನಿರಂತರ ಸೋಲು, ಬದುಕಿನಲ್ಲಿ ಅನೇಕ ಸವಾಲುಗಳು, ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು ಈ ಬಗೆಯ ಸಮಸ್ಯೆಯಿದ್ದರೆ ಜಯ ಏಕಾದಶಿ ಆಚರಣೆ ಮಾಡಿದರೆ ಆ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂಬುವುದು ಭಕ್ತರ ಅಚಲ ನಂಬಿಕೆ.
ಪೂಜಾ ವಿಧಿಗಳೇನು?
ಜಯಾ ಏಕಾದಶಿಯಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಕು.
ಶ್ರೀ ವಿಷ್ಣುವಿನ ಮೂರ್ತಿ ಅಥವಾ ಫೋಟೋಗಳನ್ನು ಹೂವುಗಳಿಂದ ಅಲಂಕರಿಸಿ
ಶ್ರೀ ವಿಷ್ಣುವಿಗೆ ಪ್ರಸಾದವನ್ನು ಅರ್ಪಿಸಿ
ನಂತರ ಶ್ರೀವಿಷ್ಣುವಿನ ಮಂತ್ರಗಳನ್ನು ಪಠಿಸುತ್ತಾ ಪೂಜಿಸಿ.
ಓಂ ನಮೋ ಭಗವತೇ ವಾಸುದೇವಾಯ
ಈ ಮಂತ್ರ ಪಠಣೆ ಮಾಡಿ ಶ್ರೀ ವಿಷ್ಣುವಿಗೆ ಪ್ರಣಾಮಗಳನ್ನು ಸಲ್ಲಿಸಿ
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
ಈ ಮಂತ್ರ ಪಠಣೆ ಮಾಡುವ ಮೂಲಕ ನನ್ನಲ್ಲಿರುವ ಅಜ್ಞಾನ ದೂರ ಮಾಡು, ನನ್ನ ಮನಸ್ಸು ಬದುಕನ್ನು ಮತ್ತಷ್ಟು ಉಜ್ವಲಗೊಳಿಸು ಎಂದು ಬೇಡಲಾಗುವುದು.
ಮುಕ್ತಿ ಮಂತ್ರ: ಓಂ ಭಗವತೇ ವಾಸುದೇವಾಯ ನಮಃ
ಈ ಮಂತ್ರವನ್ನು ಪೂಜೆ ಮಾಡುವಾಗ ನಿರಂತರವಾಗಿ ಪಠಿಸುತ್ತಲೇ ಇರಿ.



Click it and Unblock the Notifications