Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೆಬ್ರವರಿ 8ಕ್ಕೆ ಜಯ ಏಕಾದಶಿ: ಸವಾಲು, ಸಮಸ್ಯೆಗಳನ್ನು ದೂರ ಮಾಡಲು ಈ ಏಕಾದಶಿ ಹೇಗೆ ಆಚರಿಸಬೇಕು, ಪೂಜಾ ವಿಧಿಗಳೇನು?
ಏಕಾದಶಿ ಶ್ರೀ ವಿಷ್ಣುವಿನ ಪೂಜೆಗೆ ಇರುವ ವಿಶೇಷವಾದ ದಿನ. ವರ್ಷದಲ್ಲಿ 24 ಏಕಾದಶಿ ಬರುತ್ತದೆ, ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಫೆಬ್ರವರಿಯಲ್ಲಿ ಜಯ ಏಕಾದಶಿ ಇದೆ, ಈ ಏಕಾದಶಿಯ ಮಹತ್ವವೇನು, ಇದರ ಮಹತ್ವವೇನು ಎಂದು ನೋಡೋಣ ಬನ್ನಿ:

ಜಯ ಏಕಾದಶಿ ತಿಥಿ
ಜಯ ಏಕಾದಶಿ ತಿಥಿ ಬೆಳಗ್ಗೆ 08:48ರಿಂದ ರಾತ್ರಿ 08:15ರವರೆಗೆ ಇರಲಿದೆ
ಜಯ ಏಕಾದಶಿ ಪೂಜಾ ಸಮಯ
ಬ್ರಹ್ಮ ಮುಹೂರ್ತ: ಬೆಳಗ್ಗೆ 05:21ರಿಂದ ಬೆಳಗ್ಗೆ 06:13ರವರೆಗೆ
ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:13ರಿಂದ 12:57ರವರೆಗೆ
ವಿಜಯ್ ಮುಹೂರ್ತ: ಮಧ್ಯಾಹ್ನ 02:26ರಿಂದ 03:10ರವರೆಗೆ
ಅಮೃತ ಕಾಲ:ಬೆಳಗ್ಗೆ 09:31ರಿಂದ 11:05ರವರೆಗೆ
ರವಿಯೋಗ: ಬೆಳಗ್ಗೆ 07:05ರಿಂದ ಸಂಜೆ 06:07ರವರೆಗೆ
ಜಯ ಏಕಾದಶಿಯಂದು ಚೋಘಡಿಯ ಮುಹೂರ್ತ
ಶುಭ ಉತ್ತಮ: ಬೆಳಗ್ಗೆ 08:28ರಿಂದ 09:50ರವರೆಗೆ
ಪ್ರಯೋಜನಗಳು: ಮಧ್ಯಾಹ್ನ 01:58ರಿಂದ 03:21ರವರೆಗೆ
ಅಮೃತ ಮುಹೂರ್ತ ಮಧ್ಯಾಹ್ನ 03:21ರಿಂದ ಸಂಜೆ 04:44ರವರೆಗೆ
ಸಂಜೆ ಪೂಜೆಯ ಸಮಯ: ಸಂಜೆ 06:06ರವರೆಗೆ 07:43ರವರೆಗೆ
ಪಾರಣ ಸಮಯ: ಫೆಬ್ರವರಿ 09: ಬೆಳಗ್ಗೆ 07:04ರಿಂದ 09:17ರವರೆಗೆ
ಜಯ ಏಕಾದಶಿ
ಹಿಂದೂ ನಂಬಿಕೆಗಳ ಪ್ರಕಾರ ಜಯ ಏಕಾದಶಿ ಆಚರಣೆ ಮಾಡುವುದರಿಂದ ವ್ಯಕ್ತಿಯು ತನ್ನ ಪಾಪದಿಂದ ಮುಕ್ತಾನಾಗುತ್ತಾನೆ, ಮೋಕ್ಷವನ್ನು ಪಡೆಯುತ್ತಾನೆ ಅವನ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ ಎಂದು ಹೇಳಲಾಗುವುದು.
ನಿರಂತರ ಸೋಲು, ಬದುಕಿನಲ್ಲಿ ಅನೇಕ ಸವಾಲುಗಳು, ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು ಈ ಬಗೆಯ ಸಮಸ್ಯೆಯಿದ್ದರೆ ಜಯ ಏಕಾದಶಿ ಆಚರಣೆ ಮಾಡಿದರೆ ಆ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂಬುವುದು ಭಕ್ತರ ಅಚಲ ನಂಬಿಕೆ.
ಪೂಜಾ ವಿಧಿಗಳೇನು?
ಜಯಾ ಏಕಾದಶಿಯಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಕು.
ಶ್ರೀ ವಿಷ್ಣುವಿನ ಮೂರ್ತಿ ಅಥವಾ ಫೋಟೋಗಳನ್ನು ಹೂವುಗಳಿಂದ ಅಲಂಕರಿಸಿ
ಶ್ರೀ ವಿಷ್ಣುವಿಗೆ ಪ್ರಸಾದವನ್ನು ಅರ್ಪಿಸಿ
ನಂತರ ಶ್ರೀವಿಷ್ಣುವಿನ ಮಂತ್ರಗಳನ್ನು ಪಠಿಸುತ್ತಾ ಪೂಜಿಸಿ.
ಓಂ ನಮೋ ಭಗವತೇ ವಾಸುದೇವಾಯ
ಈ ಮಂತ್ರ ಪಠಣೆ ಮಾಡಿ ಶ್ರೀ ವಿಷ್ಣುವಿಗೆ ಪ್ರಣಾಮಗಳನ್ನು ಸಲ್ಲಿಸಿ
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
ಈ ಮಂತ್ರ ಪಠಣೆ ಮಾಡುವ ಮೂಲಕ ನನ್ನಲ್ಲಿರುವ ಅಜ್ಞಾನ ದೂರ ಮಾಡು, ನನ್ನ ಮನಸ್ಸು ಬದುಕನ್ನು ಮತ್ತಷ್ಟು ಉಜ್ವಲಗೊಳಿಸು ಎಂದು ಬೇಡಲಾಗುವುದು.
ಮುಕ್ತಿ ಮಂತ್ರ: ಓಂ ಭಗವತೇ ವಾಸುದೇವಾಯ ನಮಃ
ಈ ಮಂತ್ರವನ್ನು ಪೂಜೆ ಮಾಡುವಾಗ ನಿರಂತರವಾಗಿ ಪಠಿಸುತ್ತಲೇ ಇರಿ.



Click it and Unblock the Notifications