Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ 22ರ ವರೆಗೂ ವಿಪರೀತ ಚಳಿ.! ಈ ಎಚ್ಚರಿಕೆ ಸಂದೇಶ ನಿಮಗೂ ಬಂದಿದ್ಯಾ? ಸತ್ಯವೇನು?
ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದೆ. ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರದ ಕಾರಣ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹಾಗೆ ರಾಜ್ಯದ ಹಲವು ಭಾಗದಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹಾಗೆ ಈಗ ಇಡಿ ರಾಜ್ಯ ಮಳೆಯ ಜೊತೆಗೆ ಶೀತ ಗಾಳಿ ಎದುರಿಸಲಿದೆ ಎಂಬ ಸಂದೇಶವೊಂದು ಈಗ ಎಲ್ಲಡೆ ಹರಿದಾಡುತ್ತಿದೆ.
ಹೌದು ಮಳೆಗಾಲದ ನಡುವೆ ಅಪರೂಪದಲ್ಲಿ ಈ ವಿದ್ಯಮಾನ ಸಂಭವಿಸುತ್ತಿದೆ. ಆಗಸ್ಟ್ 22ರ ವರೆಗೂ ಸಾಮಾನ್ಯಕ್ಕಿಂತ ಹೆಚ್ಚು ಚಳಿಯನ್ನು ನೀವು ಅನುಭವಿಸಬಹುದು ಎಂಬೆಲ್ಲಾ ಮಾಹಿತಿ ಇರುವ ಸಂದೇಶವೊಂದು ವಾಟ್ಸಾಪ್ ಮೂಲಕ ಹರಿಬಿಡಲಾಗಿದೆ. ಹಾಗೆ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಬೆಳಗ್ಗೆಯಿಂದ ಸಂಜೆಯವರೆಗೂ ಶೀತ ಗಾಳಿ ಬೀಸುವುದು ನೋಡಬಹುದು, ಇದರಿಂದ ಚಳಿಯ ಅನುಭವ ಆಗಲಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ.

ಈ ಸಮಯದಲ್ಲಿ ವೈರಲ್ ಜ್ವರ, ಶೀತ, ಕೆಮ್ಮು, ನೆಗಡಿಯಂತಹ ಅನಾರೋಗ್ಯ ಸಮಸ್ಯೆಗಳು ಕೂಡ ಕಾಡಬಹುದು. ಇದು ನಮ್ಮ ದೇಹದ ಮೇಲೂ ಪರಿಣಾಮ ಉಂಟು ಮಾಡಲಿದೆ. ಹಿರಿಯರಲ್ಲಿ ಕೀಲು ನೋವು, ಸಂಧಿ ವಾತ, ಮೈ ಕೈ ನೋವಿನಂತಹ ಸಮಸ್ಯೆಗಳನ್ನು ಕೂಡ ತರಬಹುದು. ಈ ಪ್ರಕ್ರಿಯೆ ಆಗಸ್ಟ್ 22ರ ವರೆಗೆ ನೋಡಬಹುದು ಎಂದು ಸೂಚಿಸಲಾಗಿದೆ.
ಆದರೆ ಈ ಸಂದೇಶದಲ್ಲಿ ಯಾವುದೇ ಸತ್ಯವಿಲ್ಲ. ಸಾಮಾನ್ಯವಾಗಿ ಈ ವಿದ್ಯಮಾನ ನಡೆಯುವ ಯಾವುದೇ ಮುನ್ಸೂಚನೆ ಇಲ್ಲ, ಹಾಗೆ ಹವಾಮಾನ ಇಲಾಖೆ ಕೂಡ ಯಾವುದೇ ಮುನ್ಸೂಚನೆಗಳ ನೀಡಿಲ್ಲ.
ನಾಳೆಯಿಂದ ಆಗಸ್ಟ್ 22 ರವರೆಗೆ, ವಾತಾವರಣದಲ್ಲಿ ಕಳೆದ ವರ್ಷಕ್ಕಿಂತ ಹವಾಮಾನವು ತೀರಾ ಕಡಿಮೆಯಾಗಿರುತ್ತದೆ. ಇದನ್ನು ಆಲ್ಫೆಲಿಯನ್ ಸನ್ನಿವೇಶ ಎಂದು ಕರೆಯಲಾಗುತ್ತದೆ. ಇದು ನಾಳೆ ಬೆಳಿಗ್ಗೆ 5ರಿಂದ 7ರ ನಡುವೆ ಪ್ರಾರಂಭವಾಗುತ್ತದೆ. ಎಲ್ಲೆಡೆ ತಂಪಾದ ವಾತಾವರಣ ಆಗಸ್ಟ್ 22, 2025 ರಂದು ಕೊನೆಗೊಳ್ಳುತ್ತದೆ.....ಎಂದು ಸಂದೇಶಗಳು ಹರಿದಾಡಿವೆ. ಆದ್ರೆ ಇದರಲ್ಲಿ ಸತ್ಯವಿಲ್ಲ.
ಈ ರೀತಿಯ ವಿದ್ಯಮಾನವನ್ನು ಆಲ್ಫೆಲಿಯನ್ ಪರಿಣಾಮ ಎಂದು ಕರೆಯಲಾಗುತ್ತದೆಯಾದರೂ ಆಗಸ್ಟ್ನಲ್ಲಿ ಈ ವಿದ್ಯಮಾನ ಸಂಭವಿಸುವುದೇ ಇಲ್ಲ. ಹಾಗಾದ್ರೆ ಈ ಆಲ್ಫೆಲಿಯನ್ ಪರಿಣಾಮ ಎಂದರೇನು?
ಆಲ್ಫೆಲಿಯನ್ ವಿದ್ಯಮಾನವು ಆಗಾಗ ಸಂಭವಿಸುವುದಿಲ್ಲ ಬದಲಿಗೆ ಬಹಳ ಅಪರೂಪಕ್ಕೆ ಸಂಭವಿಸಲಿದೆ. ಇದಕ್ಕೆ ಮುಖ್ಯ ಕಾರಣ ಭೂಮಿಯ ಚಲನೆ ಆಗಿರಲಿದೆ. ಭೂಮಿ ಸೂರ್ಯನನ್ನು ಸುತ್ತುವಾಗ ಅದು ಮೊಟ್ಟೆ ಆಕಾರದ ಕಕ್ಷೆಯಲ್ಲಿ ಸುತ್ತಲಿದೆ. ಸೂರ್ಯನಿಂದ ಅತ್ಯಂತ ದೂರದಲ್ಲಿದ್ದಾಗ ಆಲ್ಫೆಲಿಯನ್ ಎಂದು ಹಾಗೆ ಸೂರ್ಯನಿಗೆ ತುಂಬಾ ಹತ್ತಿರದಲ್ಲಿದ್ದಾಗ ಪೆರಿಹೆಲಿಯನ್ ಬಿಂದು ಎಂದು ಕರೆಯಲಾಗುತ್ತದೆ.
ಹಾಗೆ ಯಾವುದೇ ಗ್ರಹವು ಆಲ್ಪೇರಿಯನ್ ಸ್ಥಿತಿಯಲ್ಲಿದ್ದಾಗ ನಿಧಾನವಾಗಿ ಚಲಿಸುತ್ತವೆ. ಹಾಗೆ ಪೆರಿಹೆಲಿಯನ್ನಲ್ಲಿದ್ದಾಗ ವೇಗವಾಗಿ ಚಲಿಸುತ್ತವೆ ಎಂದು ಕೂಡ ಹೇಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭೂಮಿಯು ಆಲ್ಪೆರಿಯನ್ ಸ್ಥಿತಿಯಲ್ಲಿದೆ. ಅಂದರೆ ಸೂರ್ಯನಿಂದ ಅತ್ಯಂತ ದೂರದ ಬಿಂದುವಿನಲ್ಲಿ ಭೂಮಿ ಚಲಿಸುತ್ತಿದೆ. ಇದರಿಂದ ಭೂಮಿಗೆ ಸೂರ್ಯನ ಕಿರಣಗಳು ಪ್ರಬಲವಾಗಿ ಬೀಳುವುದಿಲ್ಲ. ಹೀಗಾಗಿ ಸಾಮಾನ್ಯಕ್ಕಿಂತಲು ಈ ಸಮಯದಲ್ಲಿ ಚಳಿ ಹೆಚ್ಚಾಗಬಹುದು ಆದ್ರೆ ವಿಪರೀತ ಚಳಿ ಇರಲಿದೆ ಎಂಬುದೆಲ್ಲಾ ಯಾವುದೂ ಸಂಭವಿಸುವುದಿಲ್ಲ.
ಸಾಮಾನ್ಯವಾಗಿ ಪೆರಿಪೆಲಿಯನ್ ಹಾಗೂ ಆಲ್ಪೆರಿಯನ್ ವಿದ್ಯಮಾನವು 4ರಿಂದ 5 ದಿನಗಳ ಕಾಲ ಜರುಗಬಹುದು. ಬಳಿಕ ಭೂಮಿಯ ಕಕ್ಷೆಯ ಯಥಾಸ್ಥಿತಿಗೆ ಬರಲಿದೆ. ಇನ್ನು 2025ರಲ್ಲಿ ಭೂಮಿಯು ಜುಲೈ 3 ರಂದು ಸೂರ್ಯನಿಂದ ಅತ್ಯಂತ ದೂರದ ಬಿಂದುವಾದ ಆಲ್ಪೆಲಿಯನ್ ಅನ್ನು ತಲುಪಿತ್ತು. ನಿರ್ದಿಷ್ಟವಾಗಿ ಭೂಮಿಯು ಸೂರ್ಯನಿಂದ ಸರಿಸುಮಾರು 94.5 ಮಿಲಿಯನ್ ಮೈಲುಗಳು (152 ಮಿಲಿಯನ್ ಕಿಲೋಮೀಟರ್) ದೂರದಲ್ಲಿತ್ತು, ಇದು ಅತ್ಯಂತ ದೂರ ಬಿಂದು ಗುರುತಿಸಲಾಗಿದೆ.



Click it and Unblock the Notifications