Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಊಟ ಮಾಡುವಾಗ ನೀರು ಸೇವಿಸಬೇಕೆ? ಎಷ್ಟು ಸೇವಿಸಬೇಕು? ಆಯುರ್ವೇದ ಹೇಳೋದೇನು?
ನಮ್ಮ ದೇಹ ಸೂಕ್ತ ರೀತಿಯಲ್ಲಿ ಕೆಲಸ ಮಾಡಬೇಕಾದರೆ ಆಹಾರ ಅಗತ್ಯವಾಗಿ ಬೇಕಾಗುತ್ತದೆ. ಹಾಗೆ ಊಟ ಮಾಡುವಾಗಲು ಹಲವು ನಿಯಮಗಳಿವೆ. ಇನ್ನು ಊಟ ಮಾಡುವಾಗ ನೀರು ಸೇವಿಸಬೇಕೆ? ಸೇವಿಸಿದರೂ ಎಷ್ಟು ಸೇವಿಸಬೇಕು? ಯಾವಾಗ ಸೇವಿಸಬೇಕು ಎಂಬುದು ಬಹಳ ಹಿಂದಿನಿಂದಲೂ ಎಲ್ಲರಿಗೂ ಕಾಡುವ ಪ್ರಶ್ನೆಯಾಗಿರಲಿದ. ಊಟದ ಮಾಡುವಾಗ ಎಷ್ಟು ನೀರು ಯಾವಾಗ ಸೇವಿಸಬೇಕು ಎಂಬುದನ್ನು ನಾವಿಲ್ಲಿ ತಿಳಿಯೋಣ.
ಅದ್ರಲ್ಲೂ ಒಬ್ಬೊಬ್ಬರು ಒಂದೊಂದು ತೀರಿಯಾಗಿ ಹೇಳುವುದು ನೋಡಬಹುದು. ಕೆಲವರು ಊಟದ ಸಮಯದಲ್ಲಿ ನೀರನ್ನು ಸೇವಿಸುವುದನ್ನು ಒಪ್ಪುವುದಿಲ್ಲ. ಹೆಚ್ಚು ನೀರು ಕುಡಿದರೆ ಊಟ ಸರಿಯಾಗಿ ಸೇರುವುದಿಲ್ಲ ಎನ್ನುತ್ತಾರೆ. ಹಾಗೆ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಅಡ್ಡಿಪಡಿಸಲಿದೆ ಎಂಬ ತಪ್ಪು ಕಲ್ಪನೆಯೂ ನಮ್ಮ ನಡುವೆ ಇದೆ.

ಹಾಗೆ ಊಟದ ನಡುವೆ ನೀರು ಸೇವನೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಎದುರಿಸಲಿದೆ ಎಂಬುದಕ್ಕೆ ಹಲವು ರೀತಿಯ ಊಹಾಪೂಹಗಳಿವೆ. ಅದರಲ್ಲೂ ಜಾನಪದ ಒಂದು ರೀತಿಯ ನಿಯಮ ಹೇಳಿದರೆ ವೈದ್ಯರು ಒಂದು ರೀತಿ ಹೇಳುತ್ತಾರೆ. ಹಾಗೆ ಆಯುರ್ವೇದ ಮತ್ತೊಂದು ರೀತಿಯಲ್ಲಿ ಹೇಳಲಿದೆ. ಹಾಗಾದ್ರೆ ನೈಜವಾಗಿ ನಾವು ಯಾವಾಗ ನೀರು ಕುಡಿಯಬೇಕು?
ಹಲವರ ಪ್ರಕಾರ ಊಟದ ಮಾಡುವಾಗ ಮಧ್ಯದಲ್ಲಿ ನೀರು ಕುಡಿಯಬಾದು. ಊಟವಾದ ಬಳಿಕ ಕುಳಿತುಕೊಂಡೆ ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಹಾಗೆ ಊಟದ ಆರಂಭದಲ್ಲಿ ನೀರು ಕುಡಿಯಬೇಕು. ಅನಂತರ ಊಟವಾದ ಬಳಿಕ ಕುಡಿಯಬೇಕು ಎಂದು ಹೇಳುತ್ತಾರೆ.
ಇನ್ನು ಊಟದ ನಡುವೆ ಆಗಾಗ ನೀರು ಕುಡಿಯಬೇಕು ಎಂದು ಕೂಡ ಹೇಳಲಾಗುತ್ತದೆ. ಆದ್ರೆ ನಾವಿಂದು ಊಟ ಹಾಗೂ ನೀರು ಸೇವಿಸುವ ಕುರಿತಾಗಿ ಆಯುರ್ವೇದದಲ್ಲಿ ಏನು ಹೇಳಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ. ಅದ್ರಲ್ಲೂ ಸಂಕೃತದಲ್ಲಿ ಒಂದು ಶ್ಲೋಕದ ಮೂಲಕ ಈ ನೀರು ಕುಡಿಯುವ ಸಂಬಂಧವಾಗಿ ಹೇಳಲಾಗಿದೆ.
अजिर्णे भेसजं वारी जिर्णे वारी बालप्रदम |
भोजने कामृतं वरि भोजनानते विषापहम् ||
(ಅಜಿರ್ನೇ ಭೇಷಜಂ ವಾರಿ ಜೀರ್ಣೇ ವಾರಿ ಬಲಪ್ರದಂ)ಇದರ ಅರ್ಥ ಆಹಾರದೊಂದಿಗೆ ನೀರು ಅಮೃತ ಮತ್ತು ಆಹಾರದ ಕೊನೆಯಲ್ಲಿ ವಿಷ ಎಂಬ ಅರ್ಥ ನೀಡಲಿದೆ.
ಅಜೀರ್ಣವಾದಾಗ ನೀರು ಕುಡಿದರೆ ಔಷಧಿಯಂತೆ ಕೆಲಸ ಮಾಡಲಿದೆ. ಹಾಗೆ ಜೀರ್ಣ ಕ್ರಿಯೆ ಚೆನ್ನಾಗಿ ಇದ್ದಾಗ ನೀರು ಕುಡಿದರೆ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಊಟ ಮಾಡುವಾಗ ಸ್ವಲ್ಪ ಸ್ವಲ್ಪ ನೀರು ಕುಡಿಯುವುದು ಅಮೃತವಾಗಲಿದೆ, ಹಾಗೆ ಊಟದ ಬಳಿಕ ಹೆಚ್ಚು ನೀರು ಕುಡಿಯುವುದು ವಿಷಕ್ಕೆ ಸಮವಾಗಬಹುದು ಎಂಬುದು ಆಯುರ್ವೇದದಲ್ಲಿನ ಒಂದು ಸಾರವಾಗಿದೆ.

ಅಂದರೆ ಆಯುರ್ವೇದದ ಪ್ರಕಾರ ಊಟದ ಮಧ್ಯದಲ್ಲಿ ನೀರು ಕುಡಿಯಬೇಕಂತೆ. ಜಠರದಲ್ಲಿ ಸ್ವಲ್ಪ ಆಹಾರ ಹಾಗೆ ನೀರು ಮತ್ತೆ ಆಹಾರ ಹಾಗೆ ನೀರು ಸೇರಿಸುತ್ತಾ ಹೋದರೆ ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ ಎಂಬುದು ಇದರ ಒಳಾರ್ಥವಾಗಿದೆ. ಮತ್ತೆ ಕೆಲವರು ಊಟದ ನಂತರ ಲೀಟರ್ನಷ್ಟು ನೀರು ಕುಡಿಯುತ್ತಾರೆ ಇದು ಅಜೀರ್ಣ ಸಮಸ್ಯೆ ಇರುವವರು ಹಾಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರಿಗೆ ಮತ್ತಷ್ಟು ಸಮಸ್ಯೆ ತರಬಹುದು.
ಹಾಗೆ ಆಯುರ್ವೇದದರಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಇಟ್ಟು ಕುಡಿಯುವ ಕುರಿತಾಗಿಯೂ ಬಹಳ ಉಪಯೋಗಕಾರಿಯಾದ ಅಂಶವನ್ನು ವಿವರಿಸಲಾಗಿದೆ. ನೀರನ್ನು ತಾಮ್ರದ ಪಾತ್ರೆಯಲ್ಲಿ ಅಥವಾ ಬಾಟಲಿಯಲ್ಲಿ ಇಟ್ಟು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗಿದೆ. ನಿತ್ಯ ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಸೇವಿಸುವುದರಿಂದ ವಾತಾ, ಪಿತ್ತ ಮತ್ತು ಕಫದಂತಹ ದೋಷಗಳನ್ನು ನಿವಾರಿಸುತ್ತದೆ ಎಂದು ಆಯುರ್ವೇದ ಈಗಾಗಲೇ ದೃಢಪಡಿಸಿದೆ. ಹಾಗೆ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಬಹುತೇಕ ವಯಸ್ಕರಲ್ಲಿ ಕಾಡುವ ಕೀಲು ನೋವಿನಿಂದ ಪರಿಹಾರ ಸಹ ಸಿಗುತ್ತದೆ.
ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ಹೊಟ್ಟೆ, ಯಕೃತ್ತು ಮತ್ತು ಮೂತ್ರಪಿಂಡಗಳನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದು ಎಲ್ಲಾ ರೀತಿಯ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವನನ್ನು ಹೊಂದಿದೆ. ಹಾಗೆ ತಾಮ್ರದ ಅಂಶ ನಮ್ಮ ದೇಹ ಸೇರುವುದು ಹಲವು ರೀತಿಯಲ್ಲಿ ಉತ್ತಮವಾಗಲಿದೆ. ರಕ್ತಹೀನತೆ ಮತ್ತು ಕಬ್ಬಿಣದ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶೀತ ವಾತಾವರಣದಲ್ಲಿ ತಾಮ್ರದ ಪಾತ್ರೆ ಬಳಕೆ ಮಾಡಿದರೆ ಉತ್ತಮ.
ಅತೀಯಾಗಿ ನೀರು ಸೇವಿಸಿದರೆ ಏನಾಗುತ್ತದೆ?
ಆಯುರ್ವೇದದಲ್ಲಿ ನೀರನ್ನು ಹೇಗೆ? ಯಾವಾಗ ಕುಡಿಯಬೇಕು ಎಂಂದು ಹೇಳಿರುವ ಜೊತೆಗೆ ಅತೀಯಾಗಿ ನೀರು ಸೇವಿಸುವುದು ಏನೆಲ್ಲಾ ಸಮಸ್ಯೆಗಳ ತರಲಿದೆ ಎಂಬುದನ್ನು ಸಹ ವಿವರಿಸಲಾಗಿದೆ. ಅದರ ಪ್ರಕಾರ, ಹೆಚ್ಚು ನೀರು ಕುಡಿದಾಗ ನೀರಿನ ವಿಷ, ಅಮಲು ಉಂಟಾಗುವ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ದೇಹದ ತೂಕದ ಅನುಗುಣವಾಗಿ ಪ್ರತಿ 20 ಕೆಜಿಗೆ 1 ಲೀಟರ್ ನೀರು ಕುಡಿಯಬೇಕು ಎಂದು ಹೇಳಲಾಗಿದೆ. ದೇಹದಲ್ಲಿನ ಹೆಚ್ಚುವರಿ ನೀರು ದೇಹದ ಉಪ್ಪಿನಂಶವನ್ನು ಕಡಿಮೆ ಮಾಡುತ್ತದೆ ಮತ್ತು ಜೀವಕೋಶಗಳು ಊದಿಕೊಳ್ಳುತ್ತದೆ. ಈ ಊತವು ದೊಡ್ಡದಾಗಿ ಬೆಳೆಯಲು ಕಾರಣವಾಗುತ್ತದೆ ಎಂದು ವಿವರಿಸಲಾಗಿದೆ.



Click it and Unblock the Notifications
