Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳಾ ದಿನ: ಮಾರ್ಚ್ 8ರಂದು ನೇರಳೆ ಬಣ್ಣ ಬಳಸುವುದು ಏಕೆ? ಈ ಬಣ್ಣ ಏನು ಸೂಚಿಸುತ್ತದೆ?
ಮಾರ್ಚ್ 8 ಮಹಿಳಾ ದಿನವನ್ನು ಆಚರಿಸಲಾಗುವುದು. ಮಹಿಳೆ ಸಾಮಾಜಿಕವಾಗಿ, ಆರ್ಥಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಚೆಲ್ಲಿ, ಅವರನ್ನು ಮತ್ತಷ್ಟು ಸಬಲರನ್ನಾಗಿಸಲು ಈ ದಿನವನ್ನು ಆಚರಿಸಲಾಗುವುದು. ಈ ದಿನ ಸವಾಲುಗಳನ್ನು ಎದುರಿಸಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಗುವುದು.
ಒಂದು ಮನೆಯ ಬೆಳಕು ಮಹಿಳೆ. ಆದರೆ ಎಷ್ಟೋ ಮಹಿಳೆಯರು ಇನ್ನೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ, ಅವರು ಅನುಭವಿಸುತ್ತಿರುವ ದೌರ್ಜನ್ಯದ ವಿರುದ್ಧ ದ್ವನಿ ಎತ್ತಲೂ ಸಾಧ್ಯವಾಗದೆ ನೋವು ಅನುಭವಿಸುತ್ತಿರುತ್ತಾಳೆ, ಆದರೆ ಇನ್ನು ಕೆಲವು ಮಹಿಳೆಯರು ಈ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ರೀತಿಯ ಮಹಿಳೆಯರು ಇತರ ಮಹಿಳೆಯರಿಗೆ ಸ್ಪೂರ್ತಿಯಾಗಬೇಕಾಗಿದೆ, ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು, ಅವಳು ಮಹಿಳೆ ಎಂಬ ಸ್ಥಾನವನ್ನು ಗೌರವದಿಂದ ಅಲಂಕರಿಸಲು ಈ ದಿನವನ್ನು ಆಚರಿಸಲಾಗುವುದು.

ಮಗಹಿಳೆಯರ ದಿನದಂದು ನೀಲಿ ಬಣ್ಣ ಬಳಸುತ್ತಾರೆ, ಸಾಮಾನ್ಯವಾಗಿ ಗಂಡು-ಹೆಣ್ಣು ಎಂಬುವುದನ್ನು ಪಿಂಕ್, ನೀಲಿ ಬಣ್ಣದಲ್ಲಿ ಹೇಳಲಾಗುವುದು, ಆದರೆ ಮಹಿಳಾ ದಿನದಂದು ನೇರಳ ಬಣ್ಣದ ಚಿಹ್ನೆ ಬಳಸಲಾಗುವುದು.
ಮಹಿಳಾ ದಿನಕ್ಕೆ ನೇರಳೆ ಬಣ್ಣದ ಪ್ರಾಮುಖ್ಯತೆಯೇನು?
ಮಹಿಳಾ ದಿನದಂದು ನೀಲಿ, ನೇರಳೆ, ಹಸಿರು, ಬಿಳಿ ಪ್ರಮುಖ ಬಣ್ಣಗಳಾಗಿವೆ, ನೆರಳ ಗೌರವ ಹಾಗೂ ನ್ಯಾಯಾದ ಸಂಕೇತ. ಮಹಿಳೆಯರಿಗೆ ಗೌರವ ಸಿಗಬೇಕು, ಅವಳಿಗೆ ಎಲ್ಲಿಯೂ ಅನ್ಯಾಯವಾಗಬಾರದು ಎಂಬ ಸೂಚನೆಯಾಗಿದೆ.
ಅಮೆರಿಕದ ನ್ಯಾಷನಲ್ ವುಮನ್ ಪಾರ್ಟಿ ನೇರಳೆ, ಬಿಳಿ, ಗೋಲ್ಡ್ ಬಣ್ಣವನ್ನು ಆಯ್ದುಕೊಂಡಿತು. ನೇರಳೆ ನಿಯತ್ತು, ಬಿಳಿ ಶುದ್ಧತೆಯ ಸಂಕೇತವಾಗಿದೆ.
ಬಹುತೇಕ ಮಹಿಳೆಯರ ಬದುಕು ಇನ್ನೂ ಬದಲಾಗಬೇಕಾಗಿದೆ
ನಾವಿಂದು ಮಹಿಳೆ ಇರದ ಸ್ಥಳಗಳಲ್ಲಿ, ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೆ ಬಾಹ್ಯಾಕಾಶಕ್ಕೆ ಕೂಡ ಹೋಗಿ ಬರುತ್ತಿದ್ದಾಳೆ ಎಂದು ಹೆಮ್ಮೆಯಿಂದ ಹೇಳುತ್ತೇವೆ, ಮಹಿಳೆಯರು ದೊಡ್ಡ-ದೊಡ್ಡ ಅದಿಕಾರಿಗಳಾಗಿದ್ದಾರೆ, ಉದ್ಯಮಿಗಳಾಗಿದ್ದಾರೆ , ಅರ್ಥಶಾಸ್ತ್ರಜ್ಞರು, ವಕೀಲರು, ನ್ಯಾಯಾಧೀಶರು ಹೀಗೆ ದೊಡ್ಡ ಹುದ್ದೆಗ:ನ್ನು ಅಲಂಕರಿಸುತ್ತಿದ್ದಾರೆ, ಇದು ಖುಚಿಯ ವಿಚಾರ, ಆದರೆ ಇದು ಎಷ್ಟು ಹೆಣ್ಣು ಮಕ್ಕಳು ಎಂದು ನೋಡಿದಾಗ ಆಘಾತವಾಗುವುದು ಸಹಜ.
ಇಂದಿಗೂ ಶೋಷಣೆಗೆ ಒಳಗಾಗುತ್ತಿದ್ದಾರೆ
ಅವಳನ್ನು ಭೋಗದ ವಸ್ತುವಾಗಿ ಕಾಣುವ ಕೆಟ್ಟ ಮನಸ್ಸಿನವರು ನಮ್ಮ ನಡುವೆ ಇನ್ನೂ ಇದ್ದಾರೆ, ಹಾಗಾಗಿಯೇ ಇಂದಿಗೂ ಲೈಂಗಿಕ ಅತ್ಯಾಚಾರ ತಪ್ಪಿಲ್ಲ, ಅವಳ ಮೇಲಾಗುತ್ತಿರುವ ಕೌಟುಂಬಿಕ ದೌರ್ಜನ್ಯ ತಪ್ಪಿಲ್ಲ, ಎಷ್ಟೋ ಹೆಣ್ಣು ಮಕ್ಕಳು ದಿನಾ ಕಣ್ಣೀರಿನಲ್ಲಿ ಬದುಕುತ್ತಿದ್ದಾರೆ, ಪ್ರತಿಯೊಂದು ಹೆಣ್ಣು ಮಕ್ಕಳು ಬೆಳೆಯುವಂತೆ ಆಗಬೇಕು, ಹಾಗಾಗಬೇಕಾದರೆ ಏನು ಬದಲಾವಣೆಯಾಗಬೇಕು?
ಹೆಣ್ಣು ಸಬಲಳಾಗಲು ಮೊದಲು ಮಾಡಬೇಕಾಗಿರುವುದು ಏನು?
ಇಂದು ಎಷ್ಟೋ ಹೆಣ್ಣು ಮಕ್ಕಳ ಸಮಸ್ಯೆಗೆ ಕಾರಣ ಆರ್ಥಿಕ ಸ್ವತಂತ್ರ್ಯ ಇಲ್ಲದಿರುವುದು, ಯಾವುದೇ ಹೆಣ್ಣು ಮಕ್ಕಳು ಮೊದಲು ಆರ್ಥಿಕವಾಗಿ ಸ್ವತಂತ್ರರಾಗಲು ಪ್ರಯತ್ನಿಸಬೇಕು. ಚಿಕ್ಕ ಕೆಲಸವಾಗಿರಲಿ ದೊಡ್ಡ ಕೆಲಸವಾಗಿರಲಿ ಮೊದಲು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು.
ಪೋಷಕರು ಈ ನಿಟ್ಟಿನಲ್ಲಿ ಯೋಚಿಸಬೇಕು?
ಹೆಣ್ಣು ಹೆತ್ತ ಪೋಷಕರಲ್ಲಿ ಬಹುತೇಕರು ಅವಳ ಮದುವೆ ಬಗ್ಗೆ ಯೋಚಿಸುತ್ತಾರೆ, ಆದರೆ ಅದಕ್ಕಿಂತ ಮೊದಲು ಅವಳನ್ನು ಆರ್ಥಿಕ ಸ್ವಾವಲಂಬಿಯನ್ನಾಗಿ ಯೋಚಿಸಬೇಕು, ನಂತರವಷ್ಟೇ ಮದುವೆ ಬಗ್ಗೆ ಯೋಚಿಸಬೇಕು. ಇನ್ನು ಹೆಣ್ಣು ಮಕ್ಕಳು ಅಷ್ಟೇ ಮದುವೆಗೆ ಮೊದಲು ತಾವು ತಮ್ಮ ಸ್ವಂತ ಕಾಲಿನಲ್ಲಿ ನಿಲ್ಲಲು ಅಂದರೆ ಆರ್ಥಿಕ ಸ್ವಾವಲಂಬಿಯಾಗಿರಲು ಪ್ರಯತ್ನಿಸಬೇಕು. ಮೊದಲು ನೀವು ಆರ್ಥಿಕವಾಗಿ ಸ್ವತಂತ್ರರಾದರೆ ನಿಮ್ಮ ಮೇಲಾಗುವ ಅನೇಕ ದೌರ್ಜನ್ಯ ನಿಲ್ಲುತ್ತದೆ, ಕೌಟುಂಬಿಕ ದೌರ್ಜನ್ಯವಾಗುತ್ತಿದ್ದರೆ ಅದರಿಂದ ಹೊರಬರಲು ನಿಮಗೆ ದೈರ್ಯ ಬರುವುದು. ಅವಳು ಆರ್ಥಿಕವಾಗಿ ಸಬಲಳಾದರೆ ಅವಳ ಸಾಮಾಜಿಕ ಗೌರವ ಕೂಡ ಹೆಚ್ಚಾಗುವುದು.



Click it and Unblock the Notifications