Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಭಾರತದ ಪುರಾತನ ಧರ್ಮವಾದ ಜೈನ ಧರ್ಮದ ಕುರಿತ ಈ ಆಸಕ್ತಿಕರ ಸಂಗತಿಗಳು ಗೊತ್ತಾ?
ಜೈನ ಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ಜೈನ ಧರ್ಮವು ಬೌದ್ಧ ಧರ್ಮಕ್ಕಿಂತ ಪುರಾತನವಾದ ಧರ್ಮವಾಗಿದೆ. ಜೈನ ಧರ್ಮವು ವಿಶ್ವದ ಅನಂತ ಸತ್ಯಗಳ ಮೇಲೆ ಆಧಾರಿತವಾದ ಧರ್ಮವಾಗಿದೆ.
ಜೈನ ಧರ್ಮದಲ್ಲಿ ಒಟ್ಟು 24 ತೀರ್ಥಂಕರಗಳನ್ನು ಆರಾಧಿಸಲಾಗುವುದು. ತೀರ್ಥಂಕರ ಆದಿನಾಥ ಮೊದಲ ತೀರ್ಥಂಕರ ಗುರುವಾದರೆ ಮಹಾವೀರನು 24ನೇಯ ತೀರ್ಥಂಕರ ಗುರುವಾಗಿದ್ದಾರೆ.

ಕರ್ನಾಟಕದಲ್ಲಿ ಜೈನಧರ್ಮದ ನಂಟು ಕ್ರಿ. ಪೂ 6ನೇ ಶತಮಾನದಿಂದಲೂ ಇದೆ ಎನ್ನಲಾಗುವುದು. ಕರ್ನಾಟಕದಲ್ಲಿ ಜೈನ ಧರ್ಮ ಪುರಾತನವಾದ ಧರ್ಮವೆಂಬುವುದಕ್ಕೆ ಹಲವಾರು ಸ್ಮಾರಕಗಳು ದೊರೆಯುತ್ತವೆ. ಗುಡಿ, ಬಸದಿ, ಗೊಮ್ಮಟನ ವಿಗ್ರಹಗಳು, ಸಾಸನಗಳು, ಸ್ತಂಭಗಳು ಜೈನ ಧರ್ಮದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನೀಡುವಂಥ ಸ್ಮಾರಕಗಳಾಗಿವೆ.'
ಕರ್ನಾಟಕದಲ್ಲಿ ಅನೇಕ ಬಸದಿಗಳಿವೆ, ಅವುಗಳಲ್ಲಿ ಪ್ರಮುಖ ಬಸದಿಗಳೆಂದರೆ
* ಶ್ರವಣಬೆಳಗೊಳದ ಚಂದ್ರಗಿರಿ, ಚಂದ್ರಗುಪ್ತ ಬಸದಿ ಹಾಗೂ ಚತುರ್ಮುಖ ಬಸದಿ.
* ಇಂದ್ರಗಿರಿಯ ಒದೆಗಲ್ ಬಸದಿ
* ಮೂಡಬಿದ್ರೆ ಸಾವಿರ ಕಂಬದ ಬಸದಿಯಲ್ಲದೆ ಇನ್ನೂ 18 ಬಸದಿಗಳಿವೆ.
* ಕಾರ್ಕಳ ಹಾಗೂ ಗೇರುಸೊಪ್ಪದ ಚತುರ್ಮುಖ ಬಸದಿ
* ಧರ್ಮಸ್ಥಳದ ಚಂದ್ರನಾಥ ಬಸದಿ
* ಬೆಳಗಾವಿಯ ಆದಿನಾಥ ಬಸದಿ
ಕರ್ನಾಟಕದಲ್ಲಿರುವ ಗೊಮ್ಮಟೇಶ್ವರ ವಿಗ್ರಹಗಳ ವಿಶೇಷತೆ
ಶ್ರವಣ ಬೆಳಗೊಳದ ಗೊಮ್ಮಟೇಶ್ವರ ವಿಗ್ರಹ 57.8 ಅಡಿ ಎತ್ತರವಿದೆ
ವೇಣೂರಿನ ಗೊಮ್ಮಟೇಶ್ವರ ವಿಗ್ರಹ 45 ಅಡಿ ಎತ್ತರವಿದೆ
ಕಾರ್ಕಳದ ಗೊಮ್ಮಟೇಶ್ವರ ವಿಗ್ರಹ 42 ಅಡಿ ಎತ್ತರವಿದೆ
ಧರ್ಮಸ್ಥಳದ ಗೊಮ್ಮಟೇಶ್ವರ ವಿಗ್ರಹ 39 ಅಡಿ ಎತ್ತರವಿದೆ
ಗೊಮ್ಮಟಗಿರಿಯ ಗೊಮ್ಮಟೇಶ್ವರ ವಿಗ್ರಹ 20 ಅಡಿ ಎತ್ತರದಲ್ಲಿದೆ.
ಜೈನಧರ್ಮದ ಮುನಿಗಳಲ್ಲಿ 2 ಪಂಗಡಗಳಿವೆ
ಜೈನಧರ್ಮದಲ್ಲಿ ಶ್ವೇತಾಂಬರರು ಹಾಗೂ ದಿಗಂಬರರು ಎಂಬ ಎರಡು ಪಂಗಡಗಳಿವೆ
* ಶ್ವೇತಾಂಬರರು ಬಿಳಿ ವಸ್ತ್ರ ಧರಿಸುತ್ತಾರೆ. ಇವರು ಉತ್ತರ ಭಾರತದಲ್ಲಿ ಕಂಡು ಬರುತ್ತಾರೆ. ಇವರು ಪಾರ್ಶ್ವನಾಥನ ಅನುಯಾಯಿಗಳು
ದಿಗಂಬರು
ಈ ಜೈನ ಮುನಿಗಳು ವಸ್ತ್ರಗಳನ್ನು ಧರಿಸುವುದಿಲ್ಲ, ಇವರು ದಕ್ಷಿಣ ಭಾರತದಲ್ಲಿ ಕಂಡು ಬರುತ್ತಾರೆ.
ದಿಗಂಬರರ ಕಾಶಿಯೆಂದು ಶ್ರವಣಬೆಳಗೊಳವನ್ನು ಕರೆಯಲಾಗುವುದು.
ಜೈನ ಧರ್ಮದಲ್ಲಿ ಈ ತತ್ವಗಳನ್ನು ಪಾಲಿಸಲಾಗುವುದು
ಸತ್ಯ
ಅಹಿಂಸೆ
ಅಸ್ತೇಯ (ಕಳ್ಳತನ ಮಾಡಬಾರದು)
ಅಪರಿಗ್ರಹ: ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತು ಹೊಂದಬಾರದು
ಬ್ರಹ್ಮಚರ್ಯೆ



Click it and Unblock the Notifications












